ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಮ್ಮ ಹಿರಿಯರು ನಮಗೆ ಬೇಕಾದಂತಹ ಒಂದು ಅನುಭವದ ಮಾತುಗಳನ್ನ ಹೇಳಿದ್ದಾರೆ ಅದೇನೆಂದು ತಿಳಿದುಕೊಳ್ಳೋಣ. 1)ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ. 2) ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ. 3) ಇಡೀ ಕುಂಬಳಕಾಯಿಯನ್ನು ಮನೆಗೆ ತರಬೇಡ.
4) ಮನೆಯಲ್ಲಿ ಉಗುರುಗಳನ್ನು ಕತ್ತರಿಸಬೇಡ. 5) ಮಧ್ಯಾಹ್ನದ ಹೊತ್ತು ತುಳಸಿಯನ್ನು ಕೊಯ್ಯಬೇಡ.
6) ಹೊತ್ತು ಮುಳುಗಿದ ಮೇಲೆ ಕಸಗುಡಿಸಬೇಡ ತಲೆ ಬಾಚಬೇಡ. 7) ಸಾಯಂಕಾಲದ ಹೊತ್ತು ಉಪ್ಪು ಮತ್ತು ಮೊಸರು ಸಾಲ ಕೊಡುವುದು ಬೇಡ. 8) ಬಿಸಿ ಅನ್ನಕ್ಕೆ ಮೊಸರು ಹಾಕಬೇಡ. 9) ಊಟ ಮಾಡುವಾಗ ಮಧ್ಯೆ ಎದ್ದು ಹೋಗಬೇಡ.
10) ತಲೆ ಕೂದಲನ್ನು ಒಲೆಗೆ ಹಾಕಬೇಡ.
11) ಮನೆಯಿಂದ ಹೊರಡುವಾಗ ಕಸ ಗುಡಿಸಬೇಡ. 12) ಗೋಡೆ ಮತ್ತು ಬಾಗಿಲಿಗೆ ಕಾಲುಕೊಟ್ಟು ಮಲಗಬೇಡ.
13) ಸಾಯಂಕಾಲದ ನಂತರ ಬಟ್ಟೆಯನ್ನು ಒಗೆಯಬೇಡ. 14) ಒಡೆದಿರುವ ಬಳೆ ಮತ್ತು ಹರಿದಿರುವ ಬಟ್ಟೆಗಳನ್ನು ಎಂದೂ ಧರಿಸಬೇಡ. 15) ಮಲಗೆದ್ದ ಮೇಲೆ ಹಾಸಿಗೆಗಳನ್ನು ಮಡಚದೆ ಹಾಗೆ ಬಿಡಬೇಡ. 16) ಯಾವತ್ತೂ ಕೂಡ ಉಗುರುಗಳನ್ನು ಕಚ್ಚುವುದು ಬೇಡ.
17) ಸಹೋದರರು ತಂದೆ ಮಕ್ಕಳು ಒಟ್ಟಿಗೆ ಒಂದೇ ದಿನಾಂಕ ಮಾಡಿಸಬಾರದು. 18) ಒಂದೇ ಬಾಳೆ ಎಲೆಯನ್ನು ತರಬೇಡ.. 19) ಊಟ ಮಾಡಿದ ಮೇಲೆ ಕೈ ಒಣಗಲು ಬಿಡಬೇಡ ಹಾಗೂ ಕೈ ತೊಳೆದ ನಂತರ ನೀರನ್ನು ಜಾಡಿಸಬೇಡ.
20) ಮುಸ್ಸಂಜೆ ಹೊತ್ತಿನಲ್ಲಿ ಮಲಗಬೇಡ. 21) ಕಾಲು ತೊಳೆಯುವಾಗ ಹಿಮ್ಮಡಿಯನ್ನು ತೊಳೆಯುವುದು ಮರೆಯಬೇಡ. 22) ತಿಂದ ತಕ್ಷಣ ಮಲಗಬೇಡ.
23) ಹಿರಿಯರ ಮುಂದೆ ಕಾಲ ಚಾಚಿ, ಕಾಲ ಮೇಲೆ ಕಾಲು ಹಾಕಿ ಕೂರಬೇಡ. 24) ರಾತ್ರಿಯ ಊಟದ ತಟ್ಟೆಯನ್ನು ತೊಳೆಯದೆ ಹಾಗೆ ಬಿಡಬೇಡ.25) ಅನ್ನ ಸಾರು ಪಲ್ಯ ಮಾಡಿದ ಪಾತ್ರೆಗಳಲ್ಲಿಯೇ ಊಟವನ್ನು ಮಾಡಬೇಡ.
26) ಪಾತ್ರೆಗಳ ಮೇಲೆ ಎಂಜಲು ಕೈಯನ್ನು ತೊಳೆಯಬೇಡ. 27) ಹಸು ಕರಗಳಿಗೆ ಪ್ರಾಣಿಗಳಿಗೆ ಹಳಸಿತ ಅನ್ನವನ್ನು ಹಾಕಬೇಡ. 28) ಒಬ್ಬರು ಹಾಕಿಕೊಂಡ ಬಟ್ಟೆಯನ್ನು ಇನ್ನೊಬ್ಬರು ಹಾಕಿಕೊಳ್ಳುವುದು ಬೇಡ.
29) ಮನೆಗೆ ಬಂದ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಕಳಿಸುವುದನ್ನು ರೂಢಿ ಮಾಡಿಕೊಳ್ಳಿ.
30) ಹರಿದ, ತೂತಾದ ಒಳಉಡುಪು, ಚಪ್ಪಲಿ, ಶೂ ಸಾಕ್ಸ್ ಧರಿಸಬೇಡ ನಿಮಗೆ ಎಷ್ಟೇ ಹಣವಿದ್ದರೂ ಸಾಕಾಗುವುದಿಲ್ಲ ಅನಾವಶ್ಯಕವಾಗಿ ಹಣ ಖರ್ಚಾಗುತ್ತದೆ. 31) ಮನೆಯ ಒಳಗೆ ಚಪ್ಪಲಿ ಶೂ ತರಬೇಡ ಹೊರಗಡೆ ಬಿಡಿ ಅದು ಕಳೆದರೂ ನಿಮ್ಮ ಕರ್ಮವೇ ಕಳೆಯುತ್ತದೆ ದೇವಸ್ಥಾನ ಮಠ ಮಂದಿರಗಳಿಗೆ ಹೋದಾಗ ಅಕಸ್ಮಾತ್ ಚಪ್ಪಲಿ ಕಳೆದರೆ ಬದಲಾದರೆ ನಿಮ್ಮ ಕರ್ಮ ಕಳೆಯಿತು ಎಂದು ತಿಳಿಯಿರಿ ಬೇರೆಯವರ ಚಪ್ಪಲಿ ಹಾಕಿಕೊಂಡು ಬಂದರೆ ಭೇಟಿಯಲ್ಲಿ ಹೋಗುವ ಮಾರೆಯನ್ನು ಮನೆಗೆ ಕರೆತಂದಂತೆ.
32)ಹಾಲು,ಮೊಸರು, ಹಾಲು ಅಡಿಗೆ ಎಣ್ಣೆ ಒಟ್ಟಿಗೆ ತರಬೇಡ. 33) ಶನಿವಾರ ಉಪ್ಪು ಎಣ್ಣೆ ತರಬೇಡ.
34) ಮನೆಯಲ್ಲಿ ನಿಂತಿರುವ ಗಡಿಯಾರ ಹೊಲಿಗೆ ಯಂತ್ರ ಸೈಕಲ್ ಸ್ಕೂಟರ್ ಕೂಡಲೇ ರಿಪೇರಿ ಮಾಡಿದ್ದು ಇಲ್ಲವೇ ಮಾರಾಟ ಮಾಡಿ. 35) ದೇವರಲ್ಲಿ ಬೇಡಿ ನಿರಾಸರಾಗಬೇಡಿ, ನಿಮಗೆ ಸಿಗುವ ಸಮಯ ಬಂದಾಗ ಅದು ಸಿಕ್ಕೇ ಸಿಗುತ್ತದೆ.
36) ಅರ್ಹರಿಗೆ ದಾನವನ್ನು ಮಾಡಿ ನಿಮ್ಮ ದಾನ ಗುಪ್ತವಾಗಿರಲಿ ಅದನ್ನು ಯಾರ ಮುಂದೆಯೂ ಹೇಳಬೇಡಿ.
37) ಮಠ ಮಂದಿರಗಳ ಸ್ವತ್ತು ಹಣಕಾಸು ಒಡವೆ ವಿಷವೆಂದು ತಿಳಿಯಿರಿ ಅದನ್ನು ದುರುಪಯೋಗ ಮಾಡಿದರೆ ಶಿಕ್ಷೆ ನಿಮ್ಮ ಬೆನ್ನ ಹಿಂದೆ ನೆರಳಿನಂತೆ ಬರುವುದು. 38) ಯಾರನ್ನು ಆಡಿಕೊಳ್ಳಬೇಡಿ ನಿಮ್ಮನ್ನು ಹೊಗಳಿಕೊಳ್ಳಲು ಬೇಡಿ.
39) ಪ್ರಯಾಣದಲ್ಲಿ ಅಪರಿಚಿತರು ಕೊಟ್ಟ ತಿಂಡಿ ತಿನಿಸು ಪಾನೀಯಗಳನ್ನು ಸೇವಿಸಬೇಡಿ.40) ನೀವು ನನ್ ನಿಮ್ಮ ಅಧಿಕಾರ ಶಾಶ್ವತವಲ್ಲ ಬೇರೆಯವರನ್ನು ಬೆಳೆಯಲು ಬಿಡಿ ಅವರಿಗೆ ನೆರವಾಗಿ. 41) ಅನಾವಶ್ಯಕವಾಗಿ ಸಾಲವನ್ನು ಮಾಡಿ ಮೆರೆಯಬೇಡ.42) ಹಿರಿಯರ ಮತ್ತು ಗುರುಗಳ ಮಾತುಗಳನ್ನು ಎಂದೂ ಕಡೆಗಣಿಸಬೇಡ.
ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ.
ಧನ್ಯವಾದಗಳು