ಸಂಜೆ ದೀಪ ಬೆಳಗುವಾಗ ಪಾಲಿಸಲೇಬೇಕಾದ ನಿಯಮಗಳು

ನಮಸ್ಕಾರ ವೀಕ್ಷಕರೇ ಇವತ್ತಿನ ಈ ಸಂಚಿಕೆಯಲ್ಲಿ ದೇವರಿಗೆ ದೀಪವನ್ನು ಬೆಳಗದೆ ದೇವರ ಪೂಜೆಯನ್ನು ಪರಿಪೂರ್ಣ ವೆಂದು ಪರಿಗಣಿಸಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವಾಗ ಆಗಿರಬಹುದು ಅಥವಾ ಪೂಜೆಯನ್ನು ಹಾಗೂ ಹೋಮ, ಹವನ ಮಾಡುವ ಸಮಯದಲ್ಲಾಗಿರಬಹುದು ದೇವರಿಗೆ ದೀಪವನ್ನು ಕಡ್ಡಾಯವಾಗಿ ಬೆಳಗಿಸಲಾಗುತ್ತದೆ ದೀಪವನ್ನು ಬೆಳಗುವದರಿಂದ ಆ ಸ್ಥಳದಲ್ಲಿ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ ಹಾಗೂ ಧನಾತ್ಮಕ ಶಕ್ತಿಯು ತುಂಬಿ ತುಳುಕುತ್ತದೆ

ಅದರಲ್ಲೂ ಸಂಜೆ ಸಮಯದಲ್ಲೂ ದೀಪ ಬೆಳಗುವ ಸಂಪ್ರದಾಯವಿದೆ.ಧಾರ್ಮಿಕ ಗ್ರಂಥಗಳ ಪ್ರಕಾರ,, ಸಂಜೆ ಸಮಯದಲ್ಲಿ ದೇವರಿಗೆ ದೀಪವನ್ನು ಬೆಳಗುವದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಯಾಗುತ್ತದ ಆದರೆ ಸಂಜೆ ಸಮಯದಲ್ಲಿ ದೇವರಿಗೆ ದೀಪವನ್ನು ಬೆಳಗುವಾಗ ಯಾವ ಎಣ್ಣೆಯ ದೀಪವನ್ನು ಬೆಳಗಬೇಕೆಂಬುದು ನಾವು ಮೊದಲು ತಿಳಿದುಕೊಳ್ಳಬೇಕು.

ಸಂಜೆ ಮನೆಯ ಮುಖ್ಯ ದ್ವಾರದಲ್ಲಿ ಏಕೆ ದೀಪ ಬೆಳಗಬೇಕು..? ಮುಸ್ಸಂಜೆ ಅಥವಾ ಸಂಜೆ ಸಮಯದಲ್ಲಿ ಮನೆಯ ಮುಖ್ಯ ದ್ವಾರದ ಬಳಿ ದೀಪವನ್ನು ಹಚ್ಚಿಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ , ಧನಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ. ಮುಸ್ಸಂಜೆ ದೀಪವು ನಿಮ್ಮ ಮನೆಗೆ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಯಾಗುವಂತೆ ಮಾಡುತ್ತದೆ. ಕುಟುಂಬದಲ್ಲಿ ಸಂಪತ್ತು ಮತ್ತು ಸಂತೋಷ ಹೆಚ್ಚಾಗುತ್ತದೆ. ಇದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಒತ್ತಡ ದೂರವಾಗುತ್ತದೆ.

ಮುಸ್ಸಂಜೆ ಸಮಯದಲ್ಲಿ ದೇವರಿಗೆ ದೀಪವನ್ನು ಹಚ್ಚುವಾಗ ಯಾವಾಗಲೂ ದೀಪವನ್ನು ಶುದ್ಧ ಅಥವಾ ಹೊಸ ದೀಪದಲ್ಲಿ ಬೆಳಗಿಸಬೇಕು. ಈ ದೀಪವನ್ನು ಎಂದಿಗೂ ನೆಲದ ಮೇಲೆ ಇಡಬಾರದು. ಬದಲಾಗಿ ಒಂದು ಪ್ಲೇಟ್ ಅಥವಾ ಸ್ಟೂಲ್ ಮೇಲೆ ಇಡಬೇಕು. ಈ ದೀಪ ಅದಾಗೆ ಉರಿದು ಹಾರಿ ಹೋಗಬೇಕು. ನೀವೇ ಸ್ವತಃ ನಿಮ್ಮ ಬಾಯಿಂದ ಊದಿ ಆರಿಸಬೇಡಿ. ನೀವಾಗಿಯೇ ಸ್ವತಃ ದೀಪವನ್ನು ಆರಿಸುವುದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ದೀಪವು ತಾನಾಗಿಯೇ ತಾನು ಆರುವವರೆಗೂ ಅದನ್ನು ಉರಿಯಲು ಬಿಡಬೇಕು.

ಸಂಜೆ ಯಾವ ಎಣ್ಣೆಯ ದೀಪವನ್ನು ಹಚ್ಚಬೇಕು…? ಸಂಜೆ ದೇವರಿಗೆ ದೀಪವನ್ನು ಹಚ್ಚುವಾಗ ಯಾವ ಎಣ್ಣೆಯನ್ನು ದೀಪದಲ್ಲಿ ಹಾಕಿ ಬೆಳಗಬೇಕು ಎಂಬುದರ ಕುರಿತು ನಿಮಗೆ ಗೊಂದಲವಿರಬಹುದು. ಇಂತಹ ಸಂದರ್ಭದಲ್ಲಿ ನೀವು ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸಾಸಿವೆ ಎಣ್ಣೆಯು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಗೆ ಪ್ರಿಯವಾದ ಎಣ್ಣೆಯಾಗಿದೆ. ಸಂಜೆ ಈ ಎಣ್ಣೆಯಿಂದ ದೀಪವನ್ನು ಬೆಳಗುವದರಿಂದ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದ ಯಾವಾಗಲೂ ಪಡೆದುಕೊಳ್ಳಬಹುದಾಗಿದೆ.

ಸಾಸಿವೆ ಎಣ್ಣೆಯನ್ನು ಹೊರತುಪಡಿಸಿ, ನೀವು ಎಳ್ಳೆಣ್ಣೆ ದೀಪವನ್ನು, ಅಗಸೆ ಬೀಜದ ಎಣ್ಣೆಯನ್ನು ಹೊರತುಪಡಿಸಿ ಮಹುವ ಎಣ್ಣೆಯ ದೀಪವನ್ನು ಕೂಡ ಸಂಜೆಯ ಸಮಯದಲ್ಲಿ ಬೆಳಗಿಸಬಹುದಾಗಿದೆ . ಸಂಜೆ ಸಮಯದಲ್ಲಿ ಬಹುವ ಎಣ್ಣೆ ದೀಪವನ್ನು ಬೆಳಗಿಸುವುದರಿಂದ ಭಗವಾನ್ ಶಿವನು ಶೀಘ್ರದಲ್ಲೇ ಪ್ರಸನ್ನನಾಗುತ್ತಾನೆ ಎನ್ನುವ ನಂಬಿಕೆ ಇದೆ. ಏಕೆಂದರೆ ಶಾಸ್ತ್ರಗಳ ಪ್ರಕಾರ ಮಹುವ ಎಣ್ಣೆಯೂ ಇವನಿಗೆ ಬಹಳ ಪ್ರಿಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸಂಜೆ ಈ ಎಣ್ಣೆಯ ದೀಪವನ್ನು ಬೆಳಗಿಸುವುದರಿಂದ ಕುಟುಂಬದಲ್ಲಿ ಸಂತೋಷ ನೆಲೆಯಾಗುತ್ತದೆ

ಈ ದಿಕ್ಕಿನಲ್ಲಿ ದೀಪವನ್ನು ಈ ರೀತಿ ಶಾಸ್ತ್ರದ ಪ್ರಕಾರ, ಮುಂಜಾನೆ ಮಾತ್ರವಲ್ಲ, ಸಂಜೆ ದೀಪವನ್ನು ಬೆಳಗುವಾಗ ಕೂಡ ಸರಿಯಾದ ದಿಕ್ಕಿನಲ್ಲಿ ದೀಪವನ್ನು ಬೆಳಗಬೇಕು. ಸಂಜೆ ದೀಪವನ್ನು ಮನೆಯ ಮುಖ್ಯ ದ್ವಾರದ ಬಲಭಾಗದಲ್ಲಿ ಯಾವಾಗಲೂ ದೀಪವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ನೀವು ತುಪ್ಪ, ಎಣ್ಣೆ, ಸಾಸಿವೆ ಅಥವಾ ಮಹುವಾ ಎಣ್ಣೆಯ ದೀಪವನ್ನು ಹಚ್ಚಿಡಬಹುದು. ಮನೆಯ ಮುಖ್ಯ ದ್ವಾರದಲ್ಲಿ ನಿಯಮಿತವಾಗಿ ದೀಪವನ್ನು ಬೆಳಗಿಸುವುದರಿಂದ

ಮನೆಯಲ್ಲಿ ಬಡತನವು ಎಂದಿಗೂ ನೆರೆಯಾಗುವುದಿಲ್ಲ ಹಾಗೂ ಸಂತೋಷ ಮತ್ತು ಸಮೃದ್ಧಿಯು ಮನೆಯಲ್ಲಿ ಉಳಿಯುತ್ತದೆ ಎನ್ನುವ ನಂಬಿಕೆ ಇದೆ. ಸಂಜೆ ಸಮಯದಲ್ಲಿ ದೀಪವನ್ನು ಬೆಳಗಿಸುವಾಗ ಈ ಮೇಲಿನ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ದೀಪವನ್ನು ಬೆಳಗುವುದರಿಂದ ಮನೆಯಲ್ಲಿನ ಎಲ್ಲಾ ರೀತಿಯ ಸಮಸ್ಯೆಗಳು ದೂರಾಗಿ ಕೌಟುಂಬಿಕ ಶಾಂತಿ, ಸಂತೋಷ ಸಮೃದ್ಧಿ ನೆಲೆಯಾಗುತ್ತದೆ ಎನ್ನುವ ನಂಬಿಕೆ ಇದೆ .
ಸ್ನೇಹಿತರೆ ಈ ಒಂದು ಸಂಚಿಕೆಯಲ್ಲಿನ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಇದೇ ರೀತಿಯಾದ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ.
ಧನ್ಯವಾದಗಳು.

Leave a Comment