ಆಗಸ್ಟ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಏನೆಲ್ಲ ಫಲ ಸಿಗುತ್ತದೆ

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಆಗಸ್ಟ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಏನೆಲ್ಲ ಫಲ ಸಿಗುತ್ತದೆ ಎಂದು ತಿಳಿದುಕೊಳ್ಳೋಣ ಲಾಭ ಏನಿದೆ ನಾಷ್ಟ ಏನಿದೆ ಯಾವೆಲ್ಲ ವಿಚಾರದಲ್ಲಿ ಎಚ್ಚರ ವಹಿಸಬೇಕು ಈ ತಿಂಗಳಲ್ಲಿ ನಿಮಗೆ ಧನಪ್ರಾಪ್ತಿ ಯೋಗ ಇದೆಯಾ ನೀವು ಅಂದುಕೊಂಡಂತ ಕೆಲಸಗಳು ಸುಲಭವಾಗಿ ಈ ತಿಂಗಳಲ್ಲಿ ಆಗುತ್ತವೆಯಾ? ಎನ್ನುವ ಒಂದು ಮುಖ್ಯವಾದ ವಿಷಯವನ್ನು ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ. ಈ ಒಂದು ಸಂಚಿಕೆಯನ್ನು ಪೂರ್ತಿಯಾಗಿ ಓದಿದ ನಂತರ ನಿಮ್ಮ ಜೀವನದಲ್ಲಿ ಮಹತ್ವವಾದ ಬದಲಾವಣೆಯನ್ನು ನೀವು ಕಾಣುತ್ತೀರಿ.

ವೃಷಭ ರಾಶಿಯ ಮಿತ್ರ ರಾಶಿಗಳು ಯಾವೆಂದರೆ ಮಕರ ಕುಂಭ ಆದರೆ ಇನ್ನು ಶತ್ರು ರಾಶಿ ಸಿಂಹ ಮೀನ ರಾಶಿ ಆಗಿರುತ್ತದೆ ತುಂಬಾ ಕರುಣೆಯುಳ್ಳವರು ದಯಾ ಮಣಿಗಳು ಸಹಾಯ ಮಾಡುವ ಮನೋಭಾವವನ್ನು ಹೊಂದಿರುವವರು ವೃಷಭ ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ಆಗುವ ಫಲಗಳೇನೆಂದರೆ ರಾಶಿ ಅವರು ಮಾಡಬಹುದಾದ ವ್ಯಾಪಾರ ವಹಿವಾಟು ಇರಬಹುದು ಇಂತಹ ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಬಹಳಷ್ಟು ಸ್ಪರ್ಧೆಗಳಿರುತ್ತವೆ ಶತ್ರುಗಳಿಂದ ತುಂಬಿಕೊಂಡಿರುತ್ತದೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲದಂತಹ ಜನಗಳು ಜಾಸ್ತಿ ಅವರ ಜೊತೆಯಲ್ಲಿಯೇ ಇರಬೇಕಾಗುತ್ತದೆ,

ಅಂದರೆ ಕೆಲವೊಂದು ಸವಾಲು ಅಂತಾನೆ ಹೇಳಬಹುದು ಅಂದರೆ ಅವರನ್ನು ಬಿಟ್ಟಿರಲು ಆಗುವುದಿಲ್ಲ ಜೊತೆಗೆ ಇಟ್ಟುಕೊಳ್ಳುವುದಕ್ಕೂ ಆಗುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ ನೀವು ಇರುತ್ತೀರ ಇಂಥ ಸಂದರ್ಭದಲ್ಲಿ ಕೆಲವೊಂದು ಎಚ್ಚರಿಕೆಗಳನ್ನು ನೀವು ಅನುಸರಿಸಬೇಕು ಮಾತಿನ ಮೇಲೆ ಹಿಡಿತ ಇರಬೇಕು ಯಾಕೆಂದರೆ ಹಿತಶತ್ರುಗಳು ಇರುತ್ತಾರೆ ಅಲ್ಲವಾ ಅವರ ನಾವು ನಮ್ಮ ಮುಂದಿನ ಜೀವನಕ್ಕೆ ಸವಾಲಾಗಿ ಸ್ವೀಕರಿಸುವಂತಾಗಬೇಕು ಇದನ್ನು ಎಚ್ಚರಿಕೆಯಿಂದ ಮಾಡಿದಾಗ ಮಾತ್ರ ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸು ಎನ್ನುವುದು ಸಿಗುತ್ತದೆ . ಮಾನಸಿಕವಾಗಿ ಒಂದು ಚಿಂತೆ ಎನ್ನುವುದು ಕಾಡುತ್ತಿರುತ್ತದೆ

ಅಂದುಕೊಂಡಂಥ ಕೆಲಸ ಆಗುತ್ತದಾ? ಎಂದು ಆಗದಿದ್ದರೆ ಏನು ಮಾಡಲಿ? ಎನ್ನುವ ಚಿಂತೆ ಮತ್ತು ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಇರುತ್ತದೆ ಚಿಂತೆ ಬೇಡ ಚಿಂತನೆ ಇರಲಿ ಯಾಕೆಂದರೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಚಿಂತನೆಗಳು ಇರಲಿ ಈ ರೀತಿಯಾದ ಸಕಾರಾತ್ಮಕ ಪ್ರಯತ್ನಗಳನ್ನು ನೀವು ಮುಂದುವರಿಸಿ ಈ ರೀತಿಯಾಗಿ ಮಾಡಿದರೆ ನಿಮ್ಮ ಜೀವನದಲ್ಲಿ ಬಹಳ ದೊಡ್ಡದಾದ ಬದಲಾವಣೆಯನ್ನು ಕಾಣುತ್ತೀರಿ. ಜೊತೆಗೆ ಈ ತಿಂಗಳಲ್ಲಿ ನೀವು ಬುದ್ಧಿವಂತಿಕೆಯಿಂದ ಕೆಲಸವನ್ನು ಮಾಡಬೇಕು ತುಂಬಾ ವಿಷಯಗಳನ್ನು ಕಲಿಯುತ್ತೀರಾ ಜೀವನ ಅಂದರೆ ಹಾಗೆ ಪ್ರತಿಯೊಂದು ಕ್ಷಣ ಪ್ರತಿಯೊಂದು

ನಿಮಿಷ ಕೂಡ ಒಂದಲ್ಲ ಒಂದು ಹೊಸತನದ ಅನುಭವ ಆಗಿರುತ್ತದೆ ಯಾಕೆಂದರೆ, ನಾವು ಹುಟ್ಟುತ್ತಲೇ ಯಾವುದನ್ನು ಕೂಡ ಅನುಭವಿಸಿ ಬಂದಿರುವುದಿಲ್ಲ ಜೀವನ ಎನ್ನುವುದು ನಮ್ಮನ್ನು ಅನುಭವಕ್ಕೆ ದೂಡುತ್ತದೆ ಹಾಗಾಗಿ ನಾವು ಆ ಅನುಭವವನ್ನು ಸರಿಯಾಗಿ ತಿಳಿದುಕೊಂಡಾಗ ಒಮ್ಮೆ ಮಾಡಿದ ತಪ್ಪಿನಿಂದ ನಾವು ಅರಿವನ್ನು ಪಡೆದಾಗ ಮುಂದೆ ನಾವು ಜೀವನದಲ್ಲಿ ತಪ್ಪು ಮಾಡುವುದಿಲ್ಲ. ಇನ್ನು ವ್ಯಾಪಾರಿಗಳಿಗೆ, ಸ್ವಯಂ ಕೃತವಾದ ಅಪರಾಧಗಳು ಯಾವ ರೀತಿ ಎಂದರೆ ನಾವು ಮಾಡುವ ವ್ಯಾಪಾರ ಕ್ಷೇತ್ರದಲ್ಲಿ ಎಚ್ಚರಿಕೆಯನ್ನು ಅನುಭವಿಸಬೇಕಾಗುತ್ತದೆ ಯಾಕೆಂದರೆ ದುಡುಕಿನಿಂದ ಯಾರೋ ಒಬ್ಬರು ಒಂದು ಕೆಲಸನ ಮಾಡುತ್ತಿದ್ದಾರೆ

ನಾವು ಅದನ್ನು ಮಾಡಬೇಕು, ಯಾರೋ ಒಬ್ಬರು ಒಂದು ಬಂಡವಾಳವನ್ನು ಹಾಕಿದ್ದಾರೆ ನಾವು ಅದನ್ನು ಮಾಡಬೇಕು ಈ ರೀತಿಯಾದ ದುಡಿಕಿನ ಯೋಚನೆ ಬೇಡ ನೀವೇ ಸ್ವತಃ ಅರ್ಥ ಮಾಡಿಕೊಂಡು ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಗಮನಹರಿಸಿದಾಗ ಯಶಸ್ಸು ಅನ್ನುವುದು ಸಿಗುತ್ತದೆ. ಆಗಸ್ಟ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಇನ್ನಿತರ ಫಲಗಳು ಯಾವುವು ಎಂದು ನೋಡುವುದಾದರೆ ಕೆಲವೊಂದು ತಪ್ಪಿನಿಂದ ತೊಂದರೆಗಳನ್ನು ಅನುಭವಿಸುವ ಸಾಧ್ಯತೆಗಳು ಇರುತ್ತವೆ ತಪ್ಪುಗಳನ್ನು ಮಾಡಲು ಹೋಗಬೇಡಿ

ಇನ್ನು ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿ ತಂದೆ ತಾಯಿ ಆರೋಗ್ಯದ ಕಡೆ ಗಮನವನ್ನು ಹರಿಸಿ ಚಿಕ್ಕ ಪುಟ್ಟ ಸಮಸ್ಯೆ ಇದ್ದರೂ ಅದನ್ನು ಆಗಿಂದಾಗಲೇ ಬಗೆಹರಿಸಿಕೊಳ್ಳಿ ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ ಇರುತ್ತದೆ. ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೆ ಮೇಲಾಧಿಕಾರಿಗಳಿಂದ ಒತ್ತಡ ಇರುತ್ತದೆ ಸಮಾಧಾನವಾಗಿ ನಿಭಾಯಿಸಿಕೊಳ್ಳುವಂತ ಪ್ರಯತ್ನವನ್ನು ಮಾಡಬೇಕು, ಜನಗಳು ಇಲ್ಲಸಲ್ಲದ ಅಪವಾದವನ್ನು ಹೊರಿಸುವ ಸಾಧ್ಯತೆ ಇರುತ್ತದೆ ಶತ್ರುಗಳ ಅಪಪ್ರಚಾರ ಮಾಡುವಂಥದ್ದು ಜಾಸ್ತಿ ಆಗಿರುತ್ತದೆ ಅದರ ಬಗ್ಗೆ ತಲೆ ಕೆಡಿಸಲು ಹೋಗಬೇಡಿ. ಜೊತೆಗೆ ಮಾತಿನ ಮೇಲೆ ನಿಯಂತ್ರಣ ಇರಲಿ ಎಂತದ್ದೇ ನೋವು ಬಂದರೂ

ಅದನ್ನು ಸಹಿಸಿಕೊಳ್ಳುವ ಶಕ್ತಿ ನಿಮಗಿರಲಿ ನಾಲ್ಕನೇ ಮೇಲೆ ನಿಗಾ ಇರಲಿ ಏನು ಮಾತನಾಡುತ್ತಿದ್ದೀರಿ ಎಲ್ಲಿ ಮಾತನಾಡುತ್ತಿದ್ದೀರಿ ಎಂಬುದರ ಬಗ್ಗೆ ಗಮನಹರಿಸಿ ಮಾತನಾಡುತ್ತಿದ್ದರೆ ಆ ಮಾತಿಗೆ ಒಂದು ತೂಕವಿರಲಿ. ವಾಹದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ ಆರೋಗ್ಯದ ಕಡೆ ಎಚ್ಚರಿಕೆ ಇರಬೇಕು, ಒಳ್ಳೆಯ ಊಟ, ಒಳ್ಳೆಯ ಆಹಾರ, ಒಳ್ಳೆಯ ವಾತಾವರಣ, ಯೋಗಾ,ಧ್ಯಾನ ಈ ರೀತಿಯಾದಂತಹ ಕ್ರಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಈ ರೀತಿ ಮಾಡುವುದರಿಂದ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಸಿಗುತ್ತದೆ. ಮನಸ್ಸಿಗೆ ಶಾರೀರಿಕವಾದ ಚಿಂತೆ ಇರುತ್ತದೆ, ಆರೋಗ್ಯದ ಬಗ್ಗೆ ಚಿಂತೆ ಕಾಡುವ ಸಮಸ್ಯೆಗಳು ಇರುತ್ತವೆ

ಮಾತೃ ವರ್ಗದಿಂದ ನಿಮಗೆ ಧನಸಹಾಯ ಆಗುವ ಸನ್ನಿವೇಶಗಳು ಕಂಡುಬರುತ್ತವೆ ಅಂದರೆ ಹೆಣ್ಣು ಮಕ್ಕಳ ಕಡೆಯಿಂದ ಒಳ್ಳೆಯ ಅನುಕೂಲವಾದಂತಹ ವಾತಾವರಣ ಸೃಷ್ಟಿಯಾಗುತ್ತದೆ ಉದ್ಯೋಗಗಳು ಕಂಡು ಬರ್ತಕ್ಕಂತದ್ದು, ವಾಹನಗಳನ್ನು ಖರೀದಿ ಮಾಡಲು ಒಳ್ಳೆಯ ಅವಕಾಶಗಳು ಬರುತ್ತವೆ ತೊಂದ್ರೆ ತಾಪತ್ರೆಗಳ ಮಧ್ಯದಲ್ಲೂ ಕೂಡ ದೈವ ಬಲದಿಂದ ನಿಮ್ಮ ಮನಸ್ಸಿಗೆ ಸ್ವಲ್ಪ ಸಮಾಧಾನ ಇರುತ್ತದೆ. ಆತ್ಮ ಬಲ ಎನ್ನುವುದು ತುಂಬಾ ಅನುಕೂಲಕರವಾಗುತ್ತದೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಪ್ರಗತಿ ಎನ್ನುವುದು ಅವರಿಗೆ ಚಿಂತೆಯ ರೂಪದಲ್ಲಿ ಇರುತ್ತದೆ,

ವಿದ್ಯಾರ್ಥಿಗಳಾಗಿರಬಹುದು ಅಥವಾ ಉದ್ಯೋಗದಲ್ಲಿರಬಹುದು ಯಾರೇ ಆದರೂ ಕೂಡ ನಿರಂತರವಾದ ಪ್ರಯತ್ನ ಮಾಡುವುದರಿಂದ ನಿಮಗೆ ಯಶಸ್ಸು ಅನ್ನುವುದು ಸಿಗುತ್ತದೆ ಎನ್ನುವುದು ಗಮನದಲ್ಲಿರಬೇಕು. ಶ್ರಮಕ್ಕೆ ತಕ್ಕ ಫಲವು ನಿಮ್ಮದಾಗುತ್ತದೆ ಎಷ್ಟೇ ಸವಾಲುಗಳಿದ್ದರೂ ಅದರಲ್ಲೂ ಕೂಡ ನಿಮಗೆ ಒಳ್ಳೆಯ ಫಲ ಅನ್ನೋದು ಸಿಗುತ್ತದೆ, ಇವಕ್ಕೆಲ್ಲಾ ಸುಲಭವಾದ ಪರಿಹಾರಗಳು ಯಾವುವೆಂದರೆ ಆಗಸ್ಟ್ ತಿಂಗಳಿನಲ್ಲಿ ಅಹಂ ಮೃತ್ಯುಂಜಯ ಮಂತ್ರವನ್ನು ಚಪಿಸುವಂ ಪ್ರಯತ್ನವನ್ನು ಮಾಡಿದಾಗ ಒಳ್ಳೆಯ ಫಲ ಸಿಗುತ್ತದೆ.

ರುದ್ರಾಭಿಷೇಕ ಮಾಡಿಸುವುದರಿಂದ ಒಳ್ಳೆಯ ಫಲ ಅನ್ನೋದು ನಿಮಗೆ ಸಿಗುತ್ತದೆ ಎಷ್ಟೇ ನೋವು ಕಷ್ಟಗಳಿದ್ದರೂ ದೈವ ಬಲ ಎನ್ನುವುದು ಬೇಕು ಪ್ರತಿ ಗುರುವಾರ ರುದ್ರಾಭಿಷೇಕವನ್ನು ಮಾಡಿಸುವಂತಹ ಪ್ರಯತ್ನವನ್ನು ಮಾಡಿರಿ ಕಷ್ಟದಲ್ಲಿರುವವರಿಗೆ ವಿಧವೇ ಸ್ತ್ರೀಯರಿಗೆ, ಸಾಧು ಸಂತರಿಗೆ, ಬಹಳಷ್ಟು ಕಷ್ಟದಲ್ಲಿರುವವರಿಗೆ ನಿಮ್ಮ ಕೈಲಾಗಿದ್ದಂತಹ ಸಹಾಯವನ್ನು ಮಾಡುವುದರಿಂದ ನಿಮಗೆ ಅದ್ಭುತವಾದಂತಹ ಫಲ ಅನ್ನುವುದು ಸಿಗುತ್ತದೆ. ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು

Leave a Comment