ಆಷಾಢ ಶುಕ್ರವಾರ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ತುಳಸಿ ಗಿಡವನ್ನು ಅತ್ಯಂತ ಪೂಜನೀಯ ಮತ್ತು ಪವಿತ್ರ ಸಸ್ಯವೆಂದು ಹಿಂದೂ ನಂಬಿಕೆಗಳು ಹೇಳುತ್ತವೆ . ತುಳಸಿಯಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಒಂದು ರಾಮ ತುಳಸಿ ಆದರೆ, ಇನ್ನೊಂದು ಶ್ಯಾಮ ತುಳಸಿಯಾಗಿದೆ.ಕೆಲವರು ಶ್ಯಾಮ ತುಳಸಿಯನ್ನು ಪೂಜಿಸಿದರೆ, ಇನ್ನು ಕೆಲವರು ರಾಮ ತುಳಸಿಯನ್ನುಪೂಜಿಸುತ್ತಾರೆ. ರಾಮ ತುಳಸಿ ಎಲೆಗಳ ಬಣ್ಣವು ಹಚ್ಚ ಹಸಿರು ಬಣ್ಣದಾಗಿದ್ದು. ಇದನ್ನು ಗೌರಿ ಎಂದೂ ಕರೆಯುತ್ತಾರೆ. ಶ್ಯಾಮ ತುಳಸಿ ಎಲೆಗಳ ಬಣ್ಣವು ಕಪ್ಪಾಗಿರುತ್ತದೆ. ಈ ಎರಡೂ ತುಳಸಿಗಳು ತಮ್ಮದೇ ಆದ ವಿಶೇಷ ಪ್ರಾಮುಖ್ಯತೆಯನ್ನು ಒಳಗೊಂಡಿರುತ್ತದೆ.ಈ ಎರಡೂ ತುಳಸಿಗಳಲ್ಲಿ ರಾಮ ತುಳಸಿಯ ಮಹತ್ವವೇನು ಎಂಬುದನ್ನು ಇಲ್ಲಿ ತಿಳಿಯೋಣ..

1) ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದು : ಹಿಂದೂ ಧರ್ಮದಲ್ಲಿ ಗುರುವಾರದ ದಿನವನ್ನು ಭಗವಾನ್ ವಿಷ್ಣುವಿನ ದಿನವೆಂದು ಪರಿಗಣಿಸಲಾಗುತ್ತದೆ. ಮತ್ತು ಈ ದಿನ ವಿಷ್ಣು ದೇವರನ್ನು ಪೂಜಿಸಲಾಗುತ್ತದೆ.ಅದೇ ಸಮಯದಲ್ಲಿ, ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡವು ಭಗವಾನ್ ವಿಷ್ಣುವಿಗೆ ಪ್ರಿಯವಾದ ಗಿಡವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಗುರುವಾರ ರಾಮ ತುಳಸಿಗೆ ಹಸಿ ಹಾಲನ್ನು ಅರ್ಪಿಸಬೇಕು. ಇದು ನಿಮ್ಮ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ.

2) ಆಸೆಗಳೆಲ್ಲ ಈಡೇರುವುದು : ತಾಯಿ ತುಳಸಿಯ ಆಶೀರ್ವಾದಕ್ಕಾಗಿ, ನೀವು ರಾಮ ತುಳಸಿಗೆ ಏಳು ಬಾರಿ ರಕ್ಷಾ ಸೂತ್ರವನ್ನು ಅಂದರೆ ಕಲವಾ ದಾರವನ್ನು ಕಟ್ಟಬೇಕು ಅಥವಾ ರಕ್ಷಾ ಸೂತ್ರದಲ್ಲಿ ಏಳು ಗಂಟುಗಳನ್ನು ಹಾಕಿ ತುಳಸಿಗೆ ಕಟ್ಟಬಹುದು. ಇದರಿಂದ ಜೀವನದಲ್ಲಿ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ. ನಿಮ್ಮೆಲ್ಲಾ ಆಸೆಗಳು ಈಡೇರಿದ ನಂತರ, ಈ ರಕ್ಷಾ ಸೂತ್ರವನ್ನು ತುಳಸಿಯಿಂದ ತೆಗೆದು ಹಾಕಬಹುದು. ನಿಮ್ಮೆಲ್ಲಾ ಆಸೆಗಳು ಈಡೇರುವಂತೆ ಮಾಡಲು ಇದು ಸಹಕಾರಿಯಾಗಿದೆ.

3) ಸಂತೋಷ ಮತ್ತು ಶಾಂತಿಗಾಗಿ ಹೀಗೆ ಮಾಡಿರಿ : ನಿಮ್ಮ ಮನೆಯಲ್ಲಿ ಸದಾ ಕಾಲ ಕಲಹಗಳು ಸೃಷ್ಟಿಯಾಗುತ್ತಿದ್ದರೆ, ಆಗ ನೀವು ರಾಮ ತುಳಸಿಯಿಂದ ಈ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದು ತುಂಬಾನೇ ಪರಿಣಾಮಕಾರಿಯಾಗಿದೆ.. ಮನೆಯಿಂದ ಕಲಹಗಳನ್ನು ದೂರಾಗಿಸುವುದಕ್ಕಾಗಿ ನೀವು 11 ರಾಮ ತುಳಸಿ ಎಲೆಗಳನ್ನು ತೆಗೆದುಕೊಂಡು ಅದರ ಮೇಲೆ ರಾಮನ ಹೆಸರನ್ನು ಬರೆಯಿರಿ. ಬಳಿಕ ಈ ಎಲೆಗಳನ್ನು ಹನುಮಂತನಿಗೆ ಅರ್ಪಿಸಿ. ಈ ಪರಿಹಾರವು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿ ಮಾಡುತ್ತದೆ.

4) ವಾಸ್ತುದೋಷ ನಿವಾರಣೆಯಾಗುವುದು : ಪ್ರತಿದಿನ ಮುಸ್ಸಂಜೆ ಸಮಯದಲ್ಲಿ ರಾಮ ತುಳಸಿಯ ಮುಂದೆ ಹಿಟ್ಟಿನ ದೀಪವನ್ನು ಹಚ್ಚಬೇಕು. ತಾಯಿ ತುಳಸಿ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ತುಪ್ಪವನ್ನು ಬೆರೆಸಿ ಮಾಡಿದ ಹಿಟ್ಟಿನ ದೀಪವನ್ನು ಹಚ್ಚುವುದು ತುಂಬಾನೇ ಮುಖ್ಯವಾಗಿರುತ್ತದೆ. ಅಲ್ಲದೆ, ವಾಸ್ತುದೋಷಗಳನ್ನು ಹೋಗಲಾಡಿಸಲು ನೀವು ರಾಮ ತುಳಸಿ ಪರಿಹಾರವನ್ನು ಮಾಡಬಹುದಾಗಿದೆ.ಇದಕ್ಕಾಗಿ, ತೆಗೆದುಕೊಂಡು ಹಿತ್ತಾಳೆಯ ಪಾತ್ರೆಯಲ್ಲಿ ಹಾಕಿ ನಂತರ ನೀರು ತುಂಬಿಸಿ. ಈಗ ಈ ನೀರನ್ನು ಪ್ರತಿದಿನ ಬಾಗಿಲಿಗೆ ಚಿಮುಕಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ವಾಸ್ತುದೋಷವು ದೂರವಾಗುವುದು.

ತುಳಸಿ ಎಲೆಗಳಿಂದ ನೀವು ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು, ವಾಸ್ತುದೋಷ ದಂತಹ ಸಮಸ್ಯೆಗಳು ದೂರವಾಗುವುದು. ನಾವು ಮಾಡುವ ಈ ಕೆಲಸವು ನಮ್ಮೆಲ್ಲ ಆಸೆಗಳನ್ನು ಈಡೇರಿಸಿ ಕೌಟುಂಬಿಕ ಶಾಂತಿಯನ್ನು ನೀಡುವುದು…. ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಕಮೆಂಟ್ ಮಾಡಿ. ಇನ್ನಷ್ಟು ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ,
ಧನ್ಯವಾದಗಳು

Leave a Comment