ಚಿನ್ನಕ್ಕಿಂತ ದುಬಾರಿ ಈ 5 ರೂಪಾಯಿಯ ಜಾಜಿ ಕಾಯಿ

ನಾವು ಈ ಲೇಖನದಲ್ಲಿ ಚಿನ್ನಕ್ಕಿಂತ ದುಬಾರಿ ಈ 5 ರೂಪಾಯಿಯ ಜಾಜಿ ಕಾಯಿಯ ಪ್ರಯೋಜನಗಳು ಏನು ಎಂದು ತಿಳಿಯೋಣ . ಜಾಜಿ ಕಾಯಿಯ ಮೂಲಕ ಯಾವ ವ್ಯಕ್ತಿ ಬೇಕಾದರೂ ಅದೃಶ್ಯ ಆಗುವ ಸಿದ್ದಿಯನ್ನು ಪಡೆಯಬಹುದು . ಅವರ ಮೇಲೆ ಯಾವುದಾದರೂ ತಂತ್ರ ಮಂತ್ರಗಳ ಪ್ರಭಾವ ಆಗಿದ್ದರೆ , ತಕ್ಷಣವೇ ಜಾಜಿ ಕಾಯಿಯ ಸಹಾಯದ ಮೂಲಕ ಅದನ್ನು ಹೊಡೆದು ಹಾಕಬಹುದು . ಮತ್ತು ಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡಬಹುದು .

ಜಾಜಿ ಕಾಯಿಗೆ ಜಾಜಿ ಕಾಯಿ ಎಂದು ಏಕೆ ಕರೆಯುತ್ತಾರೆ ಎಂದರೆ , ಇದು ಮಸಾಲೆಯ ಪದಾರ್ಥ ಆಗಿದ್ದರೂ ಇದಕ್ಕೆ ಕಾಯಿ ಎಂದು ಕರೆಯುತ್ತಾರೆ . ಯಾಕೆಂದರೆ ಇದರಲ್ಲಿ ಅದೃಶ್ಯ ಆಗುವ ಶಕ್ತಿ ಅಡಗಿದೆ . ಹಿಂದಿನ ಕಾಲದಲ್ಲಿ ಜನರು ತಮ್ಮ ಮುಷ್ಟಿಯಲ್ಲಿ ಜಾಜಿ ಕಾಯಿ ಹಿಡಿದುಕೊಂಡು ಮಾಯವಾಗುತ್ತಿದ್ದರು . ಇದರ ಹಲವಾರು ಲಾಭಗಳನ್ನು ನೋಡಲು ಇಲ್ಲಿ ನಮಗೆ ದೊರೆಯುತ್ತದೆ .

ಇದು ಸಾಮಾನ್ಯವಾಗಿ ಹಣ್ಣು ಅಲ್ಲ . ತಂತ್ರ ಮಂತ್ರಗಳಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ . ಇದರ ಹಲವಾರು ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ . ನಿಮಗೆ ಯಾವುದಾದರೂ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ , ಅಥವಾ ನಿಮ್ಮ ಮೇಲೆ ಸಾಲದ ಭಾರ ಹೆಚ್ಚಾಗಿದ್ದರೆ , ಕುಟುಂಬದಲ್ಲಿ ಯಾವುದಾದರೂ ಸಂಕಟಗಳು ಬಂದಿದ್ದರೆ , ಸಮಸ್ಯೆ ಯಾವುದೇ ಆಗಿರಲಿ , ಜಾಜಿ ಕಾಯಿಯ ಬಳಕೆಯನ್ನು ನೀವು ಹಲವಾರು ವಿಷಯಗಳಲ್ಲಿ ಬಳಸಬಹುದು .

ಜ್ಯೋತಿಷ್ಯ ಎಂಬುದು ಆಳವಾದ ಸಮುದ್ರ ಆಗಿದೆ . ಇದರಲ್ಲಿ ಮುತ್ತು ರತ್ನಗಳು ತುಂಬಿಕೊಂಡಿದೆ . ಕೇವಲ ಇವುಗಳನ್ನು ಹುಡುಕಿ ಪಡೆಯಬೇಕು ಅಷ್ಟೇ . ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು . ಇಲ್ಲಿ ಕೇವಲ ಐದು ರೂಪಾಯಿಯಲ್ಲಿ ಒಂದು ಜಾಜಿ ಕಾಯಿ ದೊರೆಯುತ್ತದೆ . ಇದರಿಂದ ಹಲವಾರು ಉಪಾಯಗಳನ್ನು ಮಾಡಬಹುದು . ಇಲ್ಲಿ ಜಾಜಿ ಕಾಯಿ ನಾವು ತಿನ್ನುವ ಹಣ್ಣುಗಳಿಗಿಂತ ಸ್ವಲ್ಪ ಭಿನ್ನವಾಗಿ ಇರುತ್ತದೆ . ಇದು ಅಡಿಕೆಯ ರೀತಿ ಮರದಲ್ಲಿ ಬೆಳೆಯುತ್ತದೆ .

ತುಂಬಾ ಜನರಿಗೆ ಇದರಿಂದ ದೊರೆಯುವ ಲಾಭದ ಬಗ್ಗೆ ಗೊತ್ತಿರುವುದಿಲ್ಲ . ಪ್ರಾಚೀನ ಕಾಲದಲ್ಲಿ ಯಾವುದಾದರೂ ತಾಂತ್ರಿಕ ಕ್ರಿಯೆಗಳು ನಡೆದರೆ , ಪ್ರಾಣಿಗಳ ಹತ್ಯೆ ಮಾಡುತ್ತಿದ್ದರೆ , ಆಗ ಅದನ್ನು ತಡೆಯುವುದಕ್ಕೆ ಇವುಗಳ ಬದಲಿಗೆ ತೆಂಗಿನಕಾಯಿ ಕುಂಬಳಕಾಯಿ ಹೊಡೆಯುವುದನ್ನು ಶುರು ಮಾಡಿದರು . ನಂತರ ಯಾವ ಹಣ್ಣುಗಳಲ್ಲಿ ಕೆಂಪು ಬಣ್ಣ ಇರುತ್ತದೆ ಅದನ್ನು ಒಡೆಯಲು ಶುರು ಮಾಡಿದರು . ನಂತರ ನಿಂಬೆ ಹಣ್ಣನ್ನು ಹೊಡೆಯಲು ಶುರು ಮಾಡಿದರು . ನಿಂಬೆ ಹಣ್ಣನ್ನು ಬಲಿ ನೀಡಲು ಬಳಸುತ್ತಾರೆ .

ಏಕೆಂದರೆ ಅದರಲ್ಲಿ ನಕಾರಾತ್ಮಕತೆ ತುಂಬಿರುತ್ತದೆ . ಅಂತ್ಯದಲ್ಲಿ ಜಾಜಿ ಕಾಯಿ ಬರುತ್ತದೆ . ಇಂದಿಗೂ ಸಹ ಇಲ್ಲಿ ನಿಂಬೆ ಕಾಯಿಯನ್ನು ಬಳಸುತ್ತಾರೆ . ತಾಂತ್ರಿಕ ಜನರು ಸಿದ್ಧಿಯನ್ನು ಪಡೆದುಕೊಳ್ಳಲು ಮುಂದಾಗುತ್ತಾರೋ , ದೇವಾನು ದೇವತೆಗಳನ್ನು ಒಲಿಸಿಕೊಳ್ಳಲು ಜಾಜಿ ಕಾಯಿಯ ಪ್ರಯೋಗವನ್ನು ಮಾಡುತ್ತಾರೆ . ಒಂದು ವೇಳೆ ಜಾಜಿ ಕಾಯಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ , ನೀವು ನಿಮ್ಮ ಜೀವನದಲ್ಲಿ ಬರುವಂತಹ ಹಲವಾರು ರೀತಿಯ ಸಮಸ್ಯೆಗಳನ್ನು ಕಷ್ಟಗಳನ್ನು ದೂರ ಮಾಡಬಹುದು .

ಧನ ಸಂಪತ್ತಿಗಾಗಿ ಇದನ್ನು ಅತ್ಯಂತ ಉತ್ತಮ ಎಂದು ತಿಳಿಯಲಾಗಿದೆ . ಕೆಟ್ಟ ಶಕ್ತಿಗಳನ್ನು ಓಡಿಸಲು ಇದು ಅತ್ಯಂತ ಉತ್ತಮವಾಗಿ ಇರುತ್ತದೆ . ನಿಮ್ಮೊಳಗೆ ನಕಾರಾತ್ಮಕತೆ ಇದೆ ಎಂದು ಅನುಭವಕ್ಕೆ ಬರುತ್ತಿದ್ದ ರೆ , ಯಾರಾದರೂ ನಿಮಗೆ ಕೆಟ್ಟ ಕ್ರಿಯೆಗಳನ್ನು ಮಾಡಿದ್ದರೆ , ಅಥವಾ ಪದೇ ಪದೇ ಯಾರಾದರೂ ನಿಮ್ಮ ಮೇಲೆ ದೃಷ್ಟಿ ಹಾಕುತ್ತಿದ್ದರೆ , ನಿಮ್ಮ ವ್ಯವಹಾರ ಅಥವಾ ವ್ಯಾಪಾರದ ಸ್ಥಾನಕ್ಕೆ ಕಣ್ಣು ಹಾಕುತ್ತಿದ್ದರೆ , ಯಾವುದಾದರೂ ಕೆಟ್ಟ ವ್ಯಕ್ತಿಗಳ ದೃಷ್ಟಿ ನಿಮ್ಮ ವ್ಯಾಪಾರಕ್ಕೆ ಅಂಟಿ ಕೊಂಡಿದ್ದರೆ ,

ಇಂತಹ ಸ್ಥಿತಿಯಲ್ಲಿ ಒಂದು ಜಾಜಿ ಕಾಯಿಯನ್ನು ತೆಗೆದುಕೊಳ್ಳಿ , ಇದನ್ನು ನಿಮ್ಮ ಅಂಗಡಿಯ ಚೌಕಟ್ಟಿನ ಆಚೆ ಹಿಡಿದುಕೊಂಡು ನಿಂತು ಕೊಳ್ಳಬೇಕು . ಇನ್ನು ನಿಮ್ಮ ಇಷ್ಟ ದೇವರ ಹೆಸರನ್ನು ಸ್ಮರಿಸುತ್ತಾ , ದ್ವಾರದ ಆಚೆ ಒಳ ಮುಖ ಮಾಡಿ ನಿಂತುಕೊಂಡು , ಏಳು ಬಾರಿ ತಿರುಗಿಸಬೇಕು . ಇಲ್ಲಿ ಮಹಾಕಾಳಿ ಅಥವಾ ಭೈರವನ ಹೆಸರನ್ನು ತೆಗೆದುಕೊಳ್ಳಬಹುದು . ಅಥವಾ ಈ ಒಂದು ಮಂತ್ರವನ್ನು ಹೇಳಬಹುದು . “ಓಂ ಶ್ರೀ ಕಾಲ ಭೈರವಾಯ ನಮಃ ” ಏಳು ಬಾರಿ ಈ ಮಂತ್ರವನ್ನು ಹೇಳುತ್ತಾ ,

ಏಳು ಬಾರಿ ಆ ಕಾಯಿಯನ್ನು ತಿರುಗಿಸಬೇಕು . ಅಥವಾ “ಓಂ ಕ್ರೀಂ ಕಿಂ ಕಾಳಿಕಾಯ ನಮಃ” ಈ ಮಂತ್ರವನ್ನು ಬೇಕಾದರೆ ಜಪಿಸಬಹುದು . ಈ ರೀತಿ ಮಂತ್ರ ಜಪ ಮಾಡಿ ಏಳು ಬಾರಿ ಜಾಜಿ ಕಾಯಿಯನ್ನು ತಿರುಗಿಸಿದಾಗ , ಒಳಗಡೆ ಎಷ್ಟು ನಕಾರಾತ್ಮಕತೆ ಇರುತ್ತದೆಯೋ, ಅದನ್ನೆಲ್ಲಾ ಜಾಜಿ ಕಾಯಿ ಎಳೆದುಕೊಳ್ಳುತ್ತದೆ . ಆದರೆ ಈ ಉಪಾಯ ವಾರದ ಮೇಲೆ ಮಾಡುತ್ತದೆ . ಮಂಗಳವಾರ , ಗುರುವಾರ , ಶನಿವಾರದ ದಿನ ಈ ಉಪಾಯವನ್ನು ಮಾಡಬೇಕು . ಇದನ್ನು ಚಾಕುವಿನಿಂದ ಸುಲಭವಾಗಿ ಕತ್ತರಿಸಲು ಸಾಧ್ಯವಾಗುವುದಿಲ್ಲ .

ನೀವು ಬಾಗಿಲಿನ ಮುಂದೆಯೇ ಯಾವುದಾದರೂ ಗಟ್ಟಿಯಾದ ವಸ್ತುವನ್ನು ತೆಗೆದುಕೊಂಡು , ಅಂದರೆ ಒಂದು ಕಲ್ಲನ್ನು ಇಟ್ಟು ಅದರ ಮೇಲೆ ಚಾಕುವಿನಿಂದ ಕತ್ತರಿಸಬೇಕು . ಆಗ ಎರಡು ಹೋಳು ಆಗುತ್ತದೆ . ನಂತರ ಅದನ್ನು ಯಾವುದಾದರೂ ಸುಡುತ್ತಿರುವ ಬೆಂಕಿಯಲ್ಲಿ ಹಾಕಬೇಕು . ಈ ರೀತಿ ಮಾಡಿದಾಗ ನಿಮ್ಮಲ್ಲಿರುವ ನಕಾರಾತ್ಮಕತೆ ನಾಶವಾಗುತ್ತದೆ . ಈ ಉಪಾಯವನ್ನು ಅಂಗಡಿಯ ಅಥವಾ ವ್ಯಾಪಾರ ಸ್ಥಾನಕ್ಕೆ ಮಾಡಬಹುದು . ಒಂದು ವೇಳೆ ಅಂಗಡಿಯಿಂದ ಈ ಸಮಸ್ಯೆ ದೂರ ಆದರೆ ಹಣಕಾಸಿನ ಆಗಮನ ಆಗುತ್ತದೆ . ಗ್ರಾಹಕರು ಹೆಚ್ಚಾಗಿ ನಿಮ್ಮ ಬಳಿ ಬರಲು ಶುರು ಮಾಡುತ್ತಾರೆ . ಧನ ಸಂಪತ್ತಿನ ಕೊರತೆ ಆಗುವುದಿಲ್ಲ .

ಒಂದು ವೇಳೆ ನಿಮ್ಮಲ್ಲಿ ಯಾವುದಾದರು ನಕಾರಾತ್ಮಕತೆ ಇದೆ ಎಂದು ಅನಿಸುತ್ತಿದ್ದರೆ , ಮಂಗಳವಾರ , ಗುರುವಾರ ಅಥವಾ ಶನಿವಾರ ಈ ಮೂರು ದಿನಗಳಲ್ಲಿ ಸಾಯಂಕಾಲ ಸೂರ್ಯಾಸ್ತ ಆದ ನಂತರ ಜಾಜಿ ಕಾಯಿಯನ್ನು ನಿಮ್ಮ ಬಲಗೈ ಮುಷ್ಟಿಯಲ್ಲಿ ಹಿಡಿದುಕೊಂಡು , ನಿಮ್ಮ ತಲೆಯ ಮೇಲೆ ಏಳು ಬಾರಿ ಉಲ್ಟಾ ತಿರುಗಿಸಬೇಕು . ಆನಂತರ ಈ ಹಿಂದೆ ತಿಳಿಸಿದ ಹಾಗೆ ಅದನ್ನು ನೆಲದ ಮೇಲೆ ಇಟ್ಟು , ಚಾಕುವಿನಿಂದ ಜೋರಾಗಿ ಒತ್ತಬೇಕು . ಇದು ಎರಡು ಭಾಗ ಆಗುತ್ತದೆ . ನಂತರ ಅದನ್ನು ಯಾವುದಾದರೂ ಬೆಂಕಿಯಲ್ಲಿ ಹಾಕಿ ಸುಟ್ಟು ಬಿಡಬೇಕು . ಇದು ನಿಮ್ಮ ಸುರಕ್ಷತೆಗೆ ಕಾರಣವಾಗುತ್ತದೆ .

ಒಂದು ವೇಳೆ ನಿಮ್ಮ ಬಳಿ ಹಣಕಾಸು ಉಳಿಯುತ್ತಿಲ್ಲ ಎಂದರೆ , ವ್ಯರ್ಥವಾಗಿ ಹಣ ಖರ್ಚು ಆಗುತ್ತಿದ್ದರೆ , ಈ ಒಂದು ಉಪಾಯವನ್ನು ಮಾಡಬಹುದು . ಇಲ್ಲಿ ಒಂದು ಜಾಜಿ ಕಾಯಿಯನ್ನು ತೆಗೆದುಕೊಳ್ಳಬೇಕು . ಮೂರು ಬಾರಿ ಈ ಪ್ರಯೋಗವನ್ನು ಮಾಡಬೇಕು . ಮಂಗಳವಾರ , ಶನಿವಾರ ಮತ್ತು ಗುರುವಾರ .ಎಲ್ಲಿ ನೀವು ನಿಮ್ಮ ಹಣ ಒಡವೆಗಳನ್ನು ಇಡುತ್ತೀರೋ , ಅಲ್ಲಿ ಇದನ್ನು ಏಳು ಬಾರಿ ತಿರುಗಿಸಬೇಕು . ನಂತರ ಇದನ್ನು ಎರಡು ತುಂಡು ಮಾಡಬೇಕು .

ಇದನ್ನು ನೆಲದ ಮೇಲೆ ಇಟ್ಟು ಚಾಕುವಿನಿಂದ ಎರಡು ಭಾಗ ಮಾಡಿ , ನೀವು ಎರಡು ಭಾಗ ಮಾಡಲಿಲ್ಲ ಎಂದರೆ ಕೆಟ್ಟ ವಿಷಯಗಳು ಹೋಗುವುದಿಲ್ಲ . ಎರಡು ಭಾಗ ಮಾಡಿದ ನಂತರ ಅದನ್ನು ಉರಿಯುತ್ತಿರುವ ಬೆಂಕಿಯಲ್ಲಿ ಹಾಕಿ ಸುಡಬೇಕು . ಅಥವಾ ಎಲ್ಲಿ ನಾಲ್ಕು ದಾರಿಗಳು ಕೊಡುತ್ತವೆಯೋ ಅಲ್ಲಿ ಹೋಗಿ ಎಸೆದು ಬರಬೇಕು . ಅವುಗಳನ್ನು ಎಸೆದು ಮರಳಿ ಬರುವಾಗ ಹಿಂದೆ ತಿರುಗಿ ನೋಡಬಾರದು .

ಇನ್ನು ಕೊನೆಯದಾದ ಉಪಾಯ , ನಿಮಗೆ ಅಪಾರವಾದ ಧನ ಸಂಪತ್ತು ಹಣ ಬರಲಿ ಎಂದು ನೀವು ಇಷ್ಟ ಪಡುತ್ತಿದ್ದರೆ , ಯಾವತ್ತಿಗೂ ಲಕ್ಷ್ಮೀದೇವಿ ನಿಮ್ಮ ಮನೆಯನ್ನು ಬಿಟ್ಟು ಹೋಗಬಾರದು ಎಂದು ಇಷ್ಟ ಪಡುತ್ತಿದ್ದರೆ , ನೀವು ಈ ಉಪಾಯವನ್ನು ನೀವು ಮಾಡಿ ನೋಡಬಹುದು . ಒಂದು ವೇಳೆ ರಾತ್ರಿ ಹೊತ್ತಿನಲ್ಲಿ ನಿಮಗೆ ನಿದ್ರೆ ಬರುತ್ತಿಲ್ಲ ಎಂದರೆ , ಕೆಟ್ಟ ಕನಸುಗಳು ಬೀಳುತ್ತಿದ್ದರೆ ಅಥವಾ ಭಯ ಆಗುತ್ತಿದ್ದರೆ , ನೀವು ಇದನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು .

ಈ ಕಾರ್ಯವನ್ನು ನೀವು ಕಡಿಮೆ ಅಂದರೂ 11 ದಿನಗಳ ತನಕ ಮಾಡಬೇಕು . ಪ್ರತಿದಿನ ರಾತ್ರಿ ತಲೆದಿಂಬಿನ ಕೆಳಗೆ ಇದನ್ನು ಇಡಬೇಕು . ಇದರ ಜೊತೆಗೆ ಒಂದು ಅಡಿಕೆಯನ್ನು ಸಹ ಇಡಬೇಕು . ಅಡಿಕೆಯು ಗಣಪತಿಯ ಪ್ರತೀಕ ಆಗಿದೆ . ಅಡಿಕೆಯ ಜೊತೆಗೆ ಜಾಜಿ ಕಾಯಿಯನ್ನು ಇಡಬೇಕು . ಆ ನಂತರ ಆರಾಮವಾಗಿ ಮಲಗಿಕೊಳ್ಳಬೇಕು . ಇಲ್ಲಿ ಯಾವುದೇ ರೀತಿಯ ಮಂತ್ರವನ್ನು ಜಪ ಮಾಡುವ ಅವಶ್ಯಕತೆ ಇಲ್ಲ .

ಒಂದು ವೇಳೆ ಯಾವುದಾದರೂ ನಾಮ ಜಪ ಮಾಡಲು ನೀವು ಇಷ್ಟ ಪಡುತ್ತಿದ್ದರೆ , ನಿಮ್ಮ ಇಷ್ಟ ದೇವರ ಹೆಸರನ್ನು 11 ಬಾರಿ ನೆನೆಯಬೇಕು . ಮುಂಜಾನೆ ಎದ್ದ ತಕ್ಷಣ ಅಡಿಕೆ ಮತ್ತು ಜಾಜಿ ಕಾಯಿಯನ್ನು ದೇವರ ಮುಂದೆ ಇಡಬೇಕು . ಮರಳಿ ಸಾಯಂಕಾಲ ತಲೆದಿಂಬಿನ ಕೆಳಗೆ ಎರಡು ವಸ್ತುಗಳನ್ನು ಇಟ್ಟುಕೊಂಡು ಮಲಗಬೇಕು . ಇದೇ ರೀತಿ 11 ದಿನ ಮಾಡಿದರೆ , ನಿಮ್ಮ ಕಷ್ಟಗಳು ಸ್ವತಹ ತಾವಾಗಿಯೇ ದೂರವಾಗುತ್ತವೆ .

ನೀವು ಯಾವುದಾದರು ಊರಿಗೆ ಪ್ರಯಾಣ ಮಾಡುತ್ತಿದ್ದರೆ ನಿಮ್ಮ ಜೊತೆ ಜಾಜಿ ಕಾಯಿಯನ್ನು ಇಟ್ಟುಕೊಂಡು ಹೋಗಬೇಕು . ಅಥವಾ ನಿಮ್ಮ ವಾಹನದಲ್ಲಿ ಎಲ್ಲಾದರೂ ಇಡಬೇಕು . ಆ ಜಾಜಿ ಕಾಯಿಯ ಜೊತೆಗೆ ಏಳು ಲವಂಗ ಮತ್ತು ಏಳು ಏಲಕ್ಕಿ ಕಾಯಿಲೆಗಳನ್ನು ಖಂಡಿತವಾಗಿ ಜೊತೆಗೆ ತೆಗೆದುಕೊಂಡು ಹೋಗಬೇಕು . ಇದರಿಂದ ಯಾವುದೇ ಪ್ರಕಾರದ ತೊಂದರೆಗಳು ಆಗುವುದಿಲ್ಲ . ಪ್ರಯಾಣ ಸುಖಕರವಾಗಿ ಇರುತ್ತದೆ . ಯಾವುದೇ ರೀತಿಯ ರಾಹು ಕೇತುವಿನ ದೋಷಗಳು ನಿಮ್ಮನ್ನು ಆವರಿಸಿಕೊಳ್ಳುವುದಿಲ್ಲ . ಇವುಗಳನ್ನು ಬೇಕಾದರೆ ಗಾಡಿಯಲ್ಲಿ ಕಟ್ಟಬಹುದು . ಇವುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಯಾವುದಾದರೂ ಗಾಡಿ ಅಥವಾ ಬೈಕ್ ನ ಡಿಕ್ಕಿಯಲ್ಲಿ ಇಡಬಹುದು . ನೀವು ಈ ರೀತಿಯ ಉಪಾಯಗಳನ್ನು ಮಾಡುವುದರಿಂದ , ನೀವು ನಿಮ್ಮ ಸಮಸ್ಯೆಗಳಿಂದ ಆಚೆ ಬರಬಹುದು ಎಂದು ಹೇಳಲಾಗಿದೆ .

Leave a Comment