ಹಣದ ಸಮಸ್ಯೆಗೆ ಶಾಶ್ವತ ಪರಿಹಾರ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಹಣದ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಹೇಗೆ ಪಡೆಯುವುದನ್ನು ನೋಡೋಣ ಬನ್ನಿ ಸ್ನೇಹಿತರೆ ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನಿಗೆ ಮತ್ತು ಆತನ ಆರಾಧನೆಗೆ ವಿಶೇಷ ಮಹತ್ವವಿದೆ ಶ್ರೀಕೃಷ್ಣನ ಅಪಾರ ಮಹಿಮೆಯಿಂದ ಆತನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ ಪ್ರತಿದಿನ ಬೆಳಿಗ್ಗೆ ಸ್ನಾನದ ನಂತರ ಶ್ರೀ ಕೃಷ್ಣನನ್ನು ಪೂಜಿಸಬೇಕು ಬೆಣ್ಣೆ ಮತ್ತು ಸಕ್ಕರೆ ಮಿಠಾಯಿ ಸೇರಿದಂತೆ ಆತನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಬೇಕು

ಶ್ರೀಕೃಷ್ಣನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಭಗವಂತನ ಆಶೀರ್ವಾದ ನಿಮಗೆ ಸಿಗುತ್ತದೆ ಮತ್ತು ಮನುಷ್ಯ ಮರ್ತ್ಯ ಲೋಕದಲ್ಲಿ ಎಲ್ಲಾ ರೀತಿಯ ಲೌಕಿಕ ಸುಖಗಳನ್ನು ಪಡೆಯುತ್ತಾನೆ ಎಂಬ ಧಾರ್ಮಿಕ ನಂಬಿಕೆ ಇದೆ ಭಗವಾನ್ ಶ್ರೀ ಕೃಷ್ಣನು ಕೆಲವು ವಸ್ತುಗಳನ್ನು ತುಂಬಾ ಇಷ್ಟಪಡುತ್ತಾನೆ ಈ ವಸ್ತುಗಳನ್ನು ಮನೆಗೆ ತರುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ

ಶ್ರೀಕೃಷ್ಣನ ಅಲಂಕಾರವು ನವಿಲುಗರಿ ಗಳಿಲ್ಲದೆ ಅಪೂರ್ಣ ವೆಂದು ಪರಿಗಣಿಸಲಾಗಿದೆ ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣನ ಜಾತಕದಲ್ಲಿ ಕಾಲ ಸರ್ಪದೋಷವಿತ್ತು ನವಿಲುಗರಿಯನ್ನು ಧರಿಸುವುದರಿಂದ ಕಾಲ ಸರ್ಪದೋಷದಿಂದ ಪರಿಹಾರ ಸಿಗುತ್ತದೆ ಎಂಬುದು ತಿಳಿದು ಬರುತ್ತದೆ ಅದಕ್ಕಾಗಿಯೇ ಶ್ರೀ ಕೃಷ್ಣನು ನವಿಲುಗರಿಯನ್ನು ಧರಿಸುತ್ತಿದ್ದನು ಇದನ್ನು ಮನೆಯಲ್ಲಿ ಇಡುವುದು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗಿದೆ

ಇದಲ್ಲದೆ ಶ್ರೀ ಕೃಷ್ಣನಿಗೆ ಗೋವುಗಳೆಂದರೆ ತುಂಬಾ ಇಷ್ಟ ಸನಾತನ ಧರ್ಮದಲ್ಲಿ ಗೋವುಗಳನ್ನು ದಾನ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ ನೀವು ಶ್ರೀ ಕೃಷ್ಣನ ಯಾವುದೇ ವಿಗ್ರಹ ಅಥವಾ ಫೋಟೋಗಳನ್ನು ನೋಡಿದರೆ ಅದರಲ್ಲಿ ಶ್ರೀ ಕೃಷ್ಣನೊಂದಿಗೆ ಹಸುಗಳನ್ನು ಕೂಡ ನೋಡಬಹುದಾಗಿದೆ ಶಾಸ್ತ್ರದ ಪ್ರಕಾರ ಶ್ರೀ ಕೃಷ್ಣನಿಗೆ ಪ್ರಿಯವಾದ ಹಸುವನ್ನು ಮನೆಗೆ ತರುವುದರಿಂದ ಜೀವನದಲ್ಲಿ ಹಣದ ಕೊರತೆ ದೂರವಾಗುವುದು ಮತ್ತು ಆರ್ಥಿಕ ಲಾಭದ ಸಾಧ್ಯತೆಗಳು ಉಂಟಾಗುತ್ತದೆ.

ಶ್ರೀ ಕೃಷ್ಣನು ಕೊಳಲುಗಳನ್ನು ಅತ್ಯಂತ ಇಷ್ಟಪಡುತ್ತಾನೆ ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೊಳಲು ಇಡುವುದರಿಂದ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ ಭಗವಂತನ ಆರಾಧನೆಯ ಸಮಯದಲ್ಲಿ ಖಂಡಿತವಾಗಿಯೂ ಅವನಿಗೆ ಕೊಳಲುಗಳನ್ನು ಅರ್ಪಿಸಿ ಇದರಿಂದ ಭಗವಾನ್ ಶ್ರೀ ಕೃಷ್ಣನು ಶೀಘ್ರದಲ್ಲಿ ಪ್ರಸನ್ನ ನಾಗುತ್ತಾನೆ ಎನ್ನುವ ನಂಬಿಕೆ ಇದೆ.

ಕಮಲದ ಹೂವು ಕೆಸರಿನಲ್ಲಿ ಬೆಳೆಯುತ್ತದೆ ಮತ್ತು ಹೆಚ್ಚಾಗಿ ಪೂಜೆಯಲ್ಲಿ ಬಳಸಲಾಗುತ್ತದೆ ಈ ಹೂವನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಇದರ ಸುವಾಸನೆಯು ಮನುಷ್ಯನನ್ನು ಆಕರ್ಷಿಸುತ್ತದೆ ಇದು ಕೇವಲ ಶ್ರೀ ಕೃಷ್ಣನಿಗೆ ಮಾತ್ರವಲ್ಲ ಲಕ್ಷ್ಮೀದೇವಿಗೆ ಪ್ರಿಯವಾದ ಹೂವಾಗಿದೆ.

ಬೆಣ್ಣೆ ಮತ್ತು ಕಲ್ಲು ಸಕ್ಕರೆ ಎಂದರೆ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ ದೈನಂದಿನ ಪೂಜೆಯ ಸಮಯದಲ್ಲಿ ಶ್ರೀ ಕೃಷ್ಣನಿಗೆ ಈ ವಸ್ತುಗಳನ್ನು ಅರ್ಪಿಸುವುದನ್ನು ಕಡ್ಡಾಯವಾಗಿ ಮಾಡುತ್ತಾರೆ ಇದು ಭಗವಂತನನ್ನು ಮೆಚ್ಚಿಸಲು ಸಹಕಾರಿಯಾಗಿದೆ ಕಲ್ಲು ಸಕ್ಕರೆಯೂ ಮಾಧುರ್ಯದ ಸಂಕೇತವಾಗಿದೆ ಬೆಣ್ಣೆ ಮತ್ತು ಕಲ್ಲು ಸಕ್ಕರೆಯೂ ಜೀವನದಲ್ಲಿ ಪ್ರೀತಿಯನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ನೀಡುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment