ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ.?ಪ್ರತಿಯೊಬ್ಬ ಮಹಿಳೆಯರು ತಪ್ಪದೆ ತಿಳಿದುಕೊಳ್ಳಬೇಕಾದ ಮಾಹಿತಿ ಇದು ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಅಲ್ಲಿ ಕಳಸ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ.
ತಮ್ಮ ತಮ್ಮ ಮನೆ ದೇವರ ಹೆಸರನ್ನು ಹೇಳಿ ಅಥವಾ ಮಹಾಲಕ್ಷ್ಮಿಯ ಸ್ವರೂಪ ಎಂದು ಅಥವಾ ತಾಯಿ ಗೌರಿಯ ಸಂಕೇತ ಎಂದು ಮನೆಯಲ್ಲಿ ಕಳಸವನ್ನು ಪ್ರತಿಷ್ಠಾಪಿಸಲಾಗುತ್ತದೆ.

ಈ ರೀತಿ ಕಳಸವು ಮನೆಯಲ್ಲಿದ್ದರೆ ಸಾಕ್ಷಾತ್ ತಾಯಿಯೇ ಮನೆಯಲ್ಲಿ ನೆಲೆಸಿದ್ದಾಳೆ ಎನ್ನುತ್ತಾರೆ ಶಾಸ್ತ್ರ ಪಂಡಿತರು.
ದೇವರ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಈ ಕಳಸವು ಇಡೀ ಮನೆಯ ಏಳಿಗೆಯ ಸಂಕೇತ ಆಗಿರುತ್ತದೆ.
ಕಳಸ ಪ್ರತಿಷ್ಠಾಪನೆ ಮಾಡುವುದಕ್ಕೆ ಕಟ್ಟುನಿಟ್ಟಾದ ವಿಧಿ ವಿಧಾನಗಳು ಇದ್ದು ಆ ಪ್ರಕಾರವಾಗಿ ನಡೆದುಕೊಂಡಾಗ ಮಾತ್ರ ಆ ಮನೆಗೆ ಶ್ರೇಯಸ್ಸು ಲಭಿಸುತ್ತದೆ. ಕಳಸ ಪ್ರತಿಷ್ಠಾಪನೆ ಮಾಡಿದ ಮೇಲೆ ಅದನ್ನು ವಾರಕ್ಕೊಮ್ಮೆ ಅಥವಾ ಅವರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುತ್ತಾರೆ.

ಈ ರೀತಿ ಕಲಶಕ್ಕೆ ಇಡುವ ಪ್ರತಿಯೊಂದು ವಸ್ತುವೂ ಕೂಡ ಪವಿತ್ರವಾಗಿದೆಯ ಎಂದು ನೋಡಿ ಮಡಿಯಿಂದ ಅದನ್ನು ಇಡಲಾಗುತ್ತದೆ. ಕಳಸಕ್ಕೆ ಇಡುವ ನೀರಿನಿಂದ ಹಿಡಿದು ಬಳಸುವ ಎಲೆಯನ್ನು ಅದು ಹೊಡೆದಿರಬಾರದು ನೀರು ಮಡಿಯಾಗಿರಬೇಕು ಶುದ್ಧವಾಗಿರಬೇಕು ಎಂದಲ್ಲ ಮುಂಜಾಗ್ರತೆಯನ್ನು ತೆಗೆದುಕೊಳ್ಳುತ್ತದೆ
ಈ ರೀತಿ ಎಷ್ಟು ಅಚ್ಚುಕಟ್ಟಾಗಿ ಹಾಗೂ ಭಯ ಭಕ್ತಿಗಳಿಂದ ಪೂಜಿಸುತ್ತೇವೆಯೋ ಅಷ್ಟೇ ಪ್ರಕಾರವಾದ ಆಶೀರ್ವಾದ ನಮಗೆ ಸಿದ್ಧಿಯಾಗುತ್ತದೆ

ಜೊತೆಗೆ ಮನೆಯಲ್ಲಿರುವ ಕಳಸವೇ ಶಕುನಗಳನ್ನು ಹೇಳುತ್ತದೆ ಎನ್ನುವುದನ್ನು ನಾವು ನಂಬಲೇಬೇಕು. ಏಕೆಂದರೆ ಕಳಸದ ಕಾಯಿಯನ್ನು ನೋಡಿ ಅದನ್ನು ನಿರ್ಧರಿಸಬಹುದು ಸಾಮಾನ್ಯವಾಗಿ ಮನೆಗಳಲ್ಲಿ ಕಳಸದ ಕಾಯಿಯನ್ನು ಇಟ್ಟಾಗ ಕೆಲವೊಮ್ಮೆ ಅದು ಮೊಳಕೆ ಬಂದಿರುತ್ತದೆ ಈ ರೀತಿ ಆದಾಗ ಅಥವಾ ಅದರಲ್ಲಿ ಬಿರುಕು ನೋಡಿದಾಗ ಜನರು ಗೊಂದಲಕ್ಕೆ ಒಳಗಾಗುತ್ತಾರೆಅದು ಶುಭ ಸೂಚಕವೂ ಅಥವಾ ಅಶುಭವೋ ಎನ್ನುವುದನ್ನು ತಿಳಿದುಕೊಳ್ಳದೇ ಒದ್ದಾಡುತ್ತಾರೆ ಅದಕ್ಕಾಗಿ ಈ ಸಂಚಿಕೆಯಲ್ಲಿ ಅದರ ಬಗ್ಗೆ ಮಾಹಿತಿ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಮನೆಯಲ್ಲಿ ಕಳಸಕ್ಕೆ ಇಟ್ಟಿರುವ ಕಾಯಿ ಮೊಳಕೆ ಒಡೆದರೆ ನೀವು ಭಯ ಪಡಬೇಕಾಗಿಲ್ಲ ಅದರ ಬಗ್ಗೆ ಯಾವುದೇ ಆತಂಕವು ಬೇಕಿಲ್ಲ ಏಕೆಂದರೆ ಅದು ಮನೆ ಅಭಿವೃದ್ಧಿಯ ಸಂಕೇತವಾಗಿರುತ್ತದೆ
ಕಳಸದ ಕಾಯಿ ಮೊಳಕೆ ಹೊಡೆದಂತೆ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಆಯಸ್ಸು, ಆರೋಗ್ಯವೂ ಕೂಡ ಸಮೃದ್ಧಿಯಾಗುತ್ತದೆ ಎನ್ನುವುದರ ಸಂಕೇತ ಆದಾಗಿರುತ್ತದೆ

ಇದನ್ನು ತೆಗೆದ ನಂತರ ಆ ಕಾಯಿಯನ್ನು ನಿಮ್ಮ ಮನೆಯ ಹಿತ್ತಲಲ್ಲಿ ಅಥವಾ ಜಮೀನಿನಲ್ಲಿ ನೆಟ್ಟು ಬೆಳೆಸಲು ಪ್ರಯತ್ನಿಸಬೇಕು ಸಾಧ್ಯವಾಗದೇ ಇದ್ದವರು ಯಾವುದಾದರೂ ದೇವಸ್ಥಾನಕ್ಕಾದರೂ ಕೊಡಬೇಕು
ಕಾಯಿ ಬಿರುಕು ಬಿಟ್ಟಿದ್ದರೆ ಆಗಲು ಸಹ ಆತಂಕ ಪಡುವ ಅಗತ್ಯ ಇಲ್ಲ ಏಕೆಂದರೆ ಅದು ಆ ರೀತಿ ಆಗಿರುತ್ತದೆ
ಬೇರೆ ದಿನಗಳಲ್ಲಿ ತೆಂಗಿನಕಾಯಿಯನ್ನು ಬದಲಾಯಿಸಲು ತೆಗೆದಾಗ ತೆಗೆದ ಆ ತೆಂಗಿನಕಾಯಿಯಿಂದ ಸಿಹಿ ಪದಾರ್ಥಗಳನ್ನು ಮಾಡಿ ಮನೆ ಮಂದಿಗೆಲ್ಲ ಬಡಿಸಿದರೆ ಒಳ್ಳೆಯದು ಈ ಒಂದು ಸಂಚಿಕೆ ನಿಮಗೆ ಇಷ್ಟ ಆಗಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment