ಮನೆಗೆ ದಾರಿತ್ರ್ಯ ಬರಲುತಿಳಿಯದೆ ಮಾಡುವ 30 ತಪ್ಪುಗಳೇ ಕಾರಣ

ನಮಸ್ಕಾರ ಸ್ನೇಹಿತರೆ ಮನೆಗೆ ದಾರಿದ್ರ್ಯ ಬರಲು ನಾವು ತಿಳಿದು ತಿಳಿಯದೆ ಮಾಡುವ ಈ 30 ತಪ್ಪುಗಳೇ ಕಾರಣ.
1) ಊಟ ಮಾಡುವಾಗ ಅನಾವಶ್ಯಕವಾಗಿ ಯೋಚನೆಗಳನ್ನು ಮಾಡಿ ತಟ್ಟೆಯ ಮುಂದೆ ಕಣ್ಣೀರು ಹಾಕುವುದು ಒಳ್ಳೆಯದಲ್ಲ ಊಟ ಮಾಡುವಾಗ ನಿರಾಳ ಮನಸ್ಥಿತಿ ಇರಬೇಕು. 2) ಹೆಣ್ಣು ಮಕ್ಕಳು ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟ ಮಾಡದೆ ಬದಲಾಗಿ ತೊಡೆಯ ಮೇಲೆ ಇಟ್ಟುಕೊಂಡು ಊಟವನ್ನು ಮಾಡಿದರೆ ಹೀಗೆ ಮಾಡಬಾರದು ಇದನ್ನು ರೋಗಿಗಳು ದಿನದಟ್ಟರು ತೊಡೆಯ ಮೇಲೆ ಇಟ್ಟು ಊಟವನ್ನು ಮಾಡುತ್ತಾರೆ ಆದ್ದರಿಂದ ಊಟದ ತಟ್ಟೆಯನ್ನು ನೆಲದ ಮೇಲೆ ಇಟ್ಟು ಕುಳಿತುಕೊಂಡು ಊಟ ಮಾಡಬೇಕು.

3) ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ ತಾಯಿಯರಿಗೆ ಕಾಲು ಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ ಹೌದು ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು ಆದರೆ ಹೆತ್ತವರ ಆಶೀರ್ವಾದ ಮಕ್ಕಳನ್ನು ನಿರಂತರ ರಕ್ಷಿಸಲು ಅತ್ಯಂತ ಸಹಕಾರಿ 4) ಹಿರಿಯರು ನಂಬಿಕೊಂಡು ಬಂದವರೇ ದೈವಗಳಿಗೆ ಅವರದೇ ಆದ ಸಂಪ್ರದಾಯಗಳಿವೆ ಗೌರವ ತೋರಿಸುವುದು ನಮ್ಮ ಆಧ್ಯ ಕರ್ತವ್ಯ

5) ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ ಒಂದು ವೇಳೆ ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನು ಬಟ್ಟೆಯಿಂದ ಮುಚ್ಚಿ ರಾತ್ರಿ ಹೊತ್ತಿನಲ್ಲಿ ಕನ್ನಡಿ ನೋಡುವುದು ಅಷ್ಟು ಒಳ್ಳೆಯದಲ್ಲ6) ಆಹಾರ ಸೇವಿಸಿದ ನಂತರ ಎಂಜಲು ಮುಸುರೆಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೆ ಇಡಬೇಡಿ

7) ಸಾಧ್ಯವಾದಷ್ಟು ದೇವರಿಗೆ ಮನೆಯ ಹೂಗಳನ್ನೇ ಅರ್ಪಿಸಲು ಪ್ರಯತ್ನಿಸಿ ಹೊರಗಡೆಯಿಂದ ತಂದ ಹೂವಿಗೆ ಮೊದಲು ಮನೆಯಲ್ಲಿ ಸಿಂಪಡಿಸಬೇಕು ಶುದ್ಧ ಮಾಡಿದ ನಂತರ ಉಪಯೋಗಿಸಬೇಕು 8) ನಿಂತ ಗಡಿಯಾರವು ಅಶುಭದ ಲಕ್ಷಣ ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ 9) ಒಡೆದಿರುವ ಅಥವಾ ಬಿರುಕು ಬಿಟ್ಟಿರುವ ಕನ್ನಡಿ ಇಡಬೇಡಿ ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ10) ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿ ಇಟ್ಟು ತೆಗೆದುಕೊಳ್ಳಬೇಕು

11) ಹೆಣ್ಣು ಮಕ್ಕಳು ಮಹಿಳೆಯರು ನೆಟ್ಟಗೆ ಸೀರೆ ಉಡಬೇಕು ಎದೆಯ ಭಾಗ ಕಾಣುವಂತೆ ಇರಬಾರದು
12) ಸಂಜೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು 13) ದೇವರ ಕೋಣೆಯಲ್ಲಿ ಒಂಟಿ ದೀಪವನ್ನು ಉರಿಸಬಾರದು ತಣ್ಣದೀಪವಾದರೂ ಅಡ್ಡಿಲ್ಲ ಎರಡು ದೀಪಗಳನ್ನು ಇಡಿ. 14) ಕುಲದೇವರಿಗೆ ಇಷ್ಟ ದೇವರಿಗೆ ಮನೆಯ ಎಲ್ಲಾ ಶುಭ ಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದು ಇದನ್ನು ಯಾವಾಗಲೂ ರೂಡಿಯಲ್ಲಿ ಇಟ್ಟುಕೊಳ್ಳಿ
15) ಜೇಡರ ಬಲೆ ಮನೆಯಲ್ಲಿ ಕಟ್ಟಿದ್ದರೆ ತಕ್ಷಣ ತೆಗೆಯಿರಿ ಅದು ಅಶುಭ ತರುವ ಸಂಕೇತ ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ದೈವಿಕ ಕಳೆ ವೃದ್ಧಿಸುವುದು.

16) ಮನೆಯ ಯಾವುದೇ ಜಾಗದಲ್ಲಿ ಪಾರಿವಾಳ ಮನೆ ಮಾಡಿದರೆ ಅದು ಕಷ್ಟಗಳು ಎದುರಾಗುವ ಸಂಕೇತ ಅದಕ್ಕೆ ಅವುಗಳ ಪ್ರಾಣಹಾನಿ ಆಗದಂತೆ ಅಲ್ಲಿಂದ ಓಡಿಸಿಬಿಡಿ 17) ಜೇನಿನ ಗೂಡು ಮನೆಯಲ್ಲಿ ಕಟ್ಟಬಾರದು, ಸಾಧ್ಯವಾದಷ್ಟು ಮನೆಯ ಒಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ 18) ಬಾವಲಿಗಳು ಮನೆ ಸರಹದ್ದಿನಲ್ಲಿ ವಾಸ ಮಾಡದಂತೆ ಎಚ್ಚರವಹಿಸಿ 19) ಮನೆಯ ಯಾವುದೇ ಸ್ಥಳದಲ್ಲಿ ನಲ್ಲಿಯಲ್ಲಿ ನೀರು ನಿರಂತರ ಸೋರುವಿಕೆ ಇರಬಾರದು ಇದ್ದರೆ ಸರಿಪಡಿಸಿ ಇದರಿಂದ ಹಣ ಜಾಸ್ತಿ ಖರ್ಚಾಗುವ ಸಂಭವವಿದೆ.

20) ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು 21) ಬರೀ ನೆಲದಲ್ಲಿ ಮಲಗುವುದಾಗಲಿ ಹರಿದ ವಸ್ತ್ರಗಳನ್ನು ಧರಿಸುವುದು ಮಾಡಬೇಡಿ.
22) ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾ ಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿ ಮಾಡಿ ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ವೃದ್ಧಿಯಾಗುತ್ತದೆ 23) ಆಗ್ನೇಯ ದಿಕ್ಕಿನಲ್ಲಿ ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು ಅದು ಇಲ್ಲ ಎಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅದನ್ನಾದರೂ ಇಡಬೇಕು

24) ಅಡುಗೆ ಮನೆಯಲ್ಲಿ ಔಷಧಗಳನ್ನು ಇಡಬೇಡಿ ನೆಗೆಟಿವ್ ಎನರ್ಜಿ ಒಕ್ಕರಿಸುವ ಅಪಾಯವಿರುತ್ತದೆ
25) ದೇವರ ಕೋಣೆಯ ಮೇಲೆ ಅತಿಯಾದ ಭಾರವನ್ನು ಇಡಬಾರದು ಒಡೆದು ಹೋದ ದೇವರ ಮೂರ್ತಿ ಅಥವಾ ಫೋಟೋಗಳನ್ನು ಇಡಬೇಡಿ 26) ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ ಇದರಿಂದ ಮನಸ್ಸಿನಲ್ಲಿ ಖಿನ್ನತೆ ಉಂಟಾಗುವ ಸಂಭವ ಇರುತ್ತದೆ 27) ವರ್ಷಕ್ಕೆ ಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ ಉತ್ತಮ ಇದರಿಂದ ಮನೆಯಲ್ಲಿ ಯಾವುದೇ ತೊಂದರೆ ರೋಗ ಕಷ್ಟ ಹಣದ ಸಮಸ್ಯೆ ಇರುವುದಿಲ್ಲ ಮನೆಯಲ್ಲಿ ನೆಮ್ಮದಿ ಇರುತ್ತದೆ

28) ವರ್ಷಕ್ಕೆ ಒಮ್ಮೆಯಾದರೂ ಅತಿಥಿ ಸರ್ಕಾರ ಪೂಜೆ ಮಾಡಿ ಯೋಗ್ಯರಿಗೆ ದಾನ ಮಾಡಿ ಇದರಿಂದ ಸಂಪತ್ತು ದೈವಿಕ ರೂಪ ಪಡೆಯುತ್ತದೆ 29) ಸಾಧ್ಯವಿದ್ದಲ್ಲಿ ನಿತ್ಯವೂ ಮನೆಯ ಸಮೀಪದ ದೇವಾಲಯದ ದರ್ಶನವನ್ನು ಮಾಡುವುದು ಉತ್ತಮ 30) ಸ್ನಾನವಿಲ್ಲದೆ ಊಟ ಮಾಡುವುದು ಒಳ್ಳೆಯದಲ್ಲ ಏಕೆಂದರೆ ಅನ್ನವು ದೇವರಿಗೆ ಸಮಾನ
ಸ್ನೇಹಿತರೆ ನಿಮಗೆ ಸಮಯವಿಲ್ಲದಿದ್ದರೂ ನಮ್ಮ ಹಿರಿಯರು ಹೇಳಿಕೊಟ್ಟಿರುವ ಕೆಲವು ನಿಯಮಗಳನ್ನಾದರೂ ಪಾಲಿಸಿ, ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಎಲ್ಲವೂ ಕೂಡ ಸಿಗುತ್ತದೆ.

ಹಣದಿಂದ ನಾವು ಏನೆಲ್ಲಾ ಕೊಂಡುಕೊಳ್ಳಬಹುದು ಅದು ನಿಜ ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯೇ ಇಲ್ಲವಾದರೆ ಏನು ಪ್ರಯೋಜನ ಅದು ಸಿಗಬೇಕು ಎಂದರೆ ನಮ್ಮ ಈ ಒಂದು ಪೇಜ್ ಅನ್ನು ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಿ ಮತ್ತು ನಮ್ಮ ಪೂರ್ವಜರು ಹೇಳಿಕೊಟ್ಟ ಶಾಸ್ತ್ರ ಸಂಪ್ರದಾಯಗಳನ್ನು ತಪ್ಪದೇ ಪಾಲಿಸಿರಿ.
ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು

Leave a Comment