ಮನೆಗೆ ಕೆಟ್ಟ ದೃಷ್ಟಿ ಬಿದ್ದಾಗ

• ಮನೆಯಲ್ಲಿ ಸದಾ ನೆಮ್ಮದಿ, ಸುಖ ಶಾಂತಿ ಇದ್ದರೆ ಆ ಮನೆಯಲ್ಲಿ ಸಕರಾತ್ಮಕತೆ ತುಂಬಿದೆ ಎಂದರ್ಥ. ಅದೇ ಆ ಮನೆಯಲ್ಲಿ ಪದೇ ಪದೇ ಕಾರಣವಿಲ್ಲದೇ ಜಗಳ, ಅಶಾಂತಿ ಸತತವಾಗಿ ಮನೆಯವರ ಆರೋಗ್ಯ ಕೆಡುತ್ತಿದೆ ಅಂದರೆ ಆ ಮನೆಯಲ್ಲಿ ನಕಾರಾತ್ಮಕತೆ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ. ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುವ ಸೂಚನೆಗಳೇನು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಯಾರ ಮನೆಯಲ್ಲಿ ನಕಾರಾತ್ಮಕತೆ ಶಕ್ತಿಯ ಪ್ರಭಾವ ಇರುತ್ತದೆಯೋ ಅಲ್ಲಿ ಮನೆ ಸದಸ್ಯರ ನಡುವೆ ಸಣ್ಣ ಪುಟ್ಟ ವಿಷಯಕ್ಕೂ ಪದೇ ಪದೇ ಜಗಳವಾಗುತ್ತದೆ. ಆ ಮನೆಯಲ್ಲಿ ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಅನ್ನುವ ಪರಿಸ್ಥಿತಿ ಇರುತ್ತದೆ.

• ಎಲ್ಲರೂ ಸದಾ ಸಿಟ್ಟಿನಿಂದ ಬೇಸರದಿಂದಲೇ ಇರುತ್ತಾರೆ. ಪ್ರತಿದಿನ ಕಲಹ ಕಣ್ಣೀರಿಡುವ ಪರಿಸ್ಥಿತಿ ಬರುತ್ತದೆ. ಆ ಮನೆ ಜನರ ಆರೋಗ್ಯ ಪದೇ ಪದೇ ಹದಗೆಡುತ್ತದೆ. ಮನೆಯೊಡೆಯ ಯಾವಾಗಲೂ ಕೋಪದಿಂದಲೇ ಇರುತ್ತಾನೆ.

• ಆ ಮನೆಯಲ್ಲಿ ಇರಲು ಇಷ್ಟವೇ ಆಗುವುದಿಲ್ಲ. ಎಲ್ಲಾದರೂ ಹೊರಗಡೆ ಹೋದರೆ ಮತ್ತೆ ಮನೆಗೆ ಹೋಗುವುದೇ ಬೇಡ ಹೊರಗೆ ಇದ್ದು ಬಿಡೋಣ ಅನ್ನಿಸುತ್ತದೆ. ಇದೆಲ್ಲಾ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವ ಸೂಚನೆಯಾಗಿದೆ. ಏಕೆಂದರೆ ಪ್ರೇತಗಳಿಗೆ ಕಲಹವೆಂದರೆ ಬಹು ಪ್ರೀತಿಯಂತೆ.

• ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಹಣ ನೀರಿನಂತೆ ಖರ್ಚಾಗುತ್ತಿರುತ್ತದೆ. ಆದಾಯ ಬರುವುದೇ ನಿಲ್ಲುತ್ತದೆ. ಸದಾ ಕೆಟ್ಟ ಯೋಚನೆಗಳು, ಕಾರಣವಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರಗಳೆಲ್ಲ ಬರುತ್ತದೆ. ಇದು ಗಂಭೀರ ವಿಷಯವಾಗಿದೆ.

ಹಾಗಾದರೇ ಇದಕ್ಕೆ ಪರಿಹಾರವೇನು? ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ನಮ್ಮ ಪೂರ್ವಜರು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಯಾವುದೇ ಕೆಟ್ಟ ದೃಷ್ಟಿ ತಾಕದೇ ಇರುವ ಹಾಗೆ ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಅವರ ಜೀವನ ನೆಮ್ಮದಿಯಿಂದ ಕೂಡಿತ್ತು. ಅವರು ಆರೋಗ್ಯವಾಗಿರುತ್ತಿದ್ದರು. ಹಾಗಾದರೆ ನಮ್ಮ ಪೂರ್ವಜರು ಅಜ್ಜಿ ಹೇಳುವ ಪ್ರಕಾರ ಮನೆಗೆ ಕೆಟ್ಟ ದೃಷ್ಟಿ ಬಿದ್ದಿದ್ದರೆ ಈ ವಿಧಾನ ಮಾಡಿ ನೋಡಿ.

ಎರಡು ಒಣ ಮೆಣಸು, ಸ್ವಲ್ಪ ಕಲ್ಲುಪ್ಪು ಮತ್ತು ಸ್ವಲ್ಪ ಸಾಸಿವೆ ಹಿಡಿದುಕೊಂಡು ಮನೆಯ ಎಲ್ಲಾ ಕೋಣೆಯಲ್ಲಿ 3 ಸಲ ನಿವಾಳಿಸಿ ನಂತರ ಅವೆಲ್ಲವನ್ನು ಮನೆಯ ಆಚೆ ಸುಟ್ಟು ಬಿಡಿ. ದೃಷ್ಟಿ ನಿವಾರಣೆಯಾಗುತ್ತದೆ.

ಒಂದು ಹತ್ತಿ ಬತ್ತಿ ತೆಗೆದುಕೊಂಡು ಅದನ್ನು ಸಾಸಿವೆ ಎಣ್ಣೆಯಲ್ಲಿ ಚೆನ್ನಾಗಿ ಅದ್ದಿ ಅದ್ದಿದ ಬತ್ತಿಯನ್ನು ಮನೆಯ ಎಲ್ಲ ಸದಸ್ಯರ ಮೇಲೆ 3 ಸಲ ನಿವಾಳಿಸಿ ಆಮೇಲೆ ಅದನ್ನು ಸುಟ್ಟು ಬಿಡಿ ನಂತರ ಒಂದು ನಿಂಬೆಕಾಯಿ ತಂದು ಮನೆಯ ಮುಂದೆ ನಿಂತು ನಿವಾಳಿಸಿ ನಂತರ ಅದನ್ನು 4 ಭಾಗ ಕಟ್ ಮಾಡಿ 4 ದಿಕ್ಕಿಗೂ ಎಸೆಯಿರಿ.

ಅಶೋಕ ಮರದ ಎಲೆಗಳನ್ನು ಉರುಟು ರುಟಾಗಿ ಸುತ್ತಿ ಹಾರ ಮಾಡಿ ಮನೆಯ ಮುಖ್ಯದ್ವಾರಕ್ಕೆ ನೇತು ಹಾಕಿ ಇದರಿಂದ ಮನೆಯೊಳಗೆ ಪಾಸಿಟಿವ್ ಎನರ್ಜಿ ಬರುತ್ತದೆ. ಜೊತೆಗೆ ಕೆಟ್ಟ ದೃಷ್ಟಿಯ ಪ್ರಭಾವ ಸಮಾಪ್ತವಾಗುತ್ತದೆ.

ನಿಮ್ಮ ಮನೆಯ ವಾಸ್ತು ಪರಿಶೀಲಿಸಿ ಕೊನೆಯದಾಗಿ ದೇವರ ಮೇಲೆ ನಂಬಿಕೆ ಇಡಿ. ದೇವರು ಯಾವತ್ತು ನಿಮ್ಮ ಕೈ ಬಿಡುವುದಿಲ್ಲ. ವರ್ಷಕ್ಕೆ ಒಮ್ಮೆ ಆದರೂ ನಿಮ್ಮ ಮನೆ ದೇವರು ಅಥವಾ ಯಾವುದಾದರೂ ಪುಣ್ಯ ಕ್ಷೇತ್ರಕ್ಕೆ ಹೋಗಿ ಆಶೀರ್ವಾದ ಪಡೆಯಿರಿ. ನಿಮ್ಮ ಮೇಲಿರುವ ಎಲ್ಲ ನೆಗೆಟಿವ್ ಎನರ್ಜಿ ಮಾಯವಾಗುತ್ತದೆ. ಮನಸ್ಸಿಗೆ ಶಾಂತಿ, ಸಮಾಧಾನ ಮತ್ತು ನೆಮ್ಮದಿ ಸಿಗುತ್ತದೆ. ಈ ವಿಧಾನಗಳು ಖಂಡಿತವಾಗಿಯೂ ನಂಬಿಕೆಗೆ ಸಂಬಂಧಪಟ್ಟ ವಿಚಾರ.

Leave a Comment