ಶನಿದೋಷದ ನಿವಾರಣೆಗಾಗಿ ಪರಿಹಾರ

ನಮಸ್ಕಾರ ಸ್ನೇಹಿತರೆ, ಇವತ್ತಿನ ಸಂಚಿಕೆಯಲ್ಲಿ ಶನಿದೋಷ ಇದ್ದಲ್ಲಿ ಅದರ ನಿವಾರಣೆಗೆ ಏನು ಮಾಡಬೇಕೆಂಬುದನ್ನೇ ಇಲ್ಲಿ ತಿಳಿಸಿ ಕೊಡುತ್ತೇವೆ. ಸನಾತನ ಧರ್ಮದಲ್ಲಿ ನಿಸರ್ಗವನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ.ಹಾಗಾಗಿ, ಅನೇಕ ರೀತಿಯ ಮರಗಳನ್ನು ಮತ್ತು ಗಿಡಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುವ ಸಂಪ್ರದಾಯವಿದೆ. ಹೆಚ್ಚಾಗಿ ನಾವು ತುಳಸಿ ಗಿಡವನ್ನು ಮತ್ತು ಅರಳಿ ಮರವನ್ನು ಪೂಜಿಸಲಾಗುತ್ತದೆ. ನಾವಿಂದು ಅರಳಿ ಮರದ ಪೂಜೆಯ ವಿಧಾನ ಮತ್ತು ಅದರ ಪ್ರಯೋಜನದ ಕುರಿತು ತಿಳಿದುಕೊಳ್ಳೋಣ.

ಅರಳಿ ಮರದ ಪ್ರತಿಯೊಂದು ಭಾಗದಲ್ಲೂ ದೇವರುಗಳು ನೆಲೆಸಿದ್ದಾರೆ ಎನ್ನುವ ನಂಬಿಕೆ ಇದೆ. ಅರಳಿ ಮರದ ಕೊಂಬೆಯಲ್ಲಿ ಬ್ರಹ್ಮ, ಕಾಂಡದಲ್ಲಿ ಭಗವಾನ್ ವಿಷ್ಣು ಮತ್ತು ಮೇಲಿನ ಭಾಗದಲ್ಲಿ ಭಗವಾನ್ ಶಿವನು ನೆಲೆಸಿದ್ದಾನೆ ಎನ್ನುವ ಧಾರ್ಮಿಕ ನಂಬಿಕೆ ಇದೆ. ಈ ಮರವನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸುವ ವ್ಯಕ್ತಿಯು ಈ ಮೂರು ದೇವರುಗಳ ಆಶೀರ್ವಾದವನ್ನು ಪಡೆಯುತ್ತಾನೆ. ಶಾಸ್ತ್ರಗಳ ಪ್ರಕಾರ, ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸುವುದರಿಂದ ಜೀವನದಲ್ಲಿ ವ್ಯಕ್ತಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಅರಳಿ ಮರದ ಕೆಳಗೆ ದೀಪವನ್ನು ಏಕೆ ಬೆಳಗಬೇಕು? ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

ಅರಳಿ ಮರದ ಕೆಳಗೆ ದೀಪ ಬೆಳಗಲು ಕಾರಣ ಹೀಗಿದೆ :1) ಹನಿ ದೋಷದಿಂದ ಮುಕ್ತಿ : ಪೀಪಲ್ ಮರದ ಕೆಳಗೆ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸುವ ಸಂಪ್ರದಾಯ ತುಂಬಾ ಹಿಂದಿನಿಂದಲೇ ಇದೆ. ಶನಿವಾರದಂದು ಈ ಮರದ ಬಳಿ ದೀಪವನ್ನು ಹಚ್ಚುವುದರಿಂದ ಜಾತಕದಲ್ಲಿರುವುದು ಶನಿದೋಷ ನಿವಾರಣೆ ಆಗುತ್ತದೆ. ಇದರೊಂದಿಗೆ ಶನಿ ದೈಯ ಅಥವಾ ಶನಿ ಸಾಡೇಸಾತಿ ಪ್ರಭಾವ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

2) ಈ ದಿನ ದೀಪ ಹಚ್ಚದಿರಿ :ನಮ್ಮ ಶಾಸ್ತ್ರದ ಪ್ರಕಾರ, ಗುರುವಾರ ಮತ್ತು ಶನಿವಾರದ ದಿನದಂದು ಅರಳಿ ಮರದ ಬಳಿ ದೀಪವನ್ನು ಬೆಳಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದಾಗಿಯೂ,ಕೆಲವು ನಂಬಿಕೆಗಳ ಪ್ರಕಾರ, ಭಾನುವಾರದಂದು ಪೀಪಲ್ ಮರದ ಕೆಳಗೆ ಹೋಗುವುದನ್ನು ನಿಷೇಧಿಸಲಾಗಿದೆ.ಹಾಗಾಗಿ, ಭಾನುವಾರದ ದಿನದಂದು ನೀವು ಅರಳಿ ಮರದ ಕೆಳಗೆ ದೀಪ ಬೆಳಗುವುದಾಗಲಿ, ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದಾಗಲಿ ಮಾಡಬಾರದು.

3) ಈ ಕ್ರಮಗಳನ್ನು ಮಾಡಿ : ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಪಡೆದುಕೊಳ್ಳುವುದಕ್ಕಾಗಿ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡುನಂತರ ಭಗವಾನ್ ವಿಷ್ಣು ವನ್ನು ಧ್ಯಾನಿಸಿ.ಇದರ ಬಳಿಕ, ಆ ನೀರನ್ನು ಅರಳಿ ಮರಕ್ಕೆ ಅರ್ಪಿಸಬೇಕು. ನೀರನ್ನು ಅರ್ಪಿಸಿದ ನಂತರ ಅರಳಿ ಮರ ಸುತ್ತಲೂ ಐದು ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು. ಈ ಪರಿಹಾರವನ್ನು ಮಾಡುವುದರಿಂದ ಶ್ರೀಹರಿಯ ಆಶೀರ್ವಾದ ನಿಮಗೆ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆ ಇದೆ. ಇದಲ್ಲದೆ ನೀರಿನಲ್ಲಿ ಹಾಲು ಮತ್ತು ಕಪ್ಪು ಎಳ್ಳನ್ನು ಬೆರೆಸಿ ಅರಳಿ ಮರಕ್ಕೆ ಅರ್ಪಿಸುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ.

ಅರಳಿ ಮರದ ಕೆಳಗೆ ಈ ಮೇಲಿನ ವಿಧಿ – ವಿಧಾನಗಳ ಪ್ರಕಾರ ದೀಪವನ್ನು ಬೆಳಗಿಸುವುದರಿಂದ ಅಥವಾ ಅರಳಿ ಮರವನ್ನು ಪೂಜಿಸುವುದರಿಂದ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ. ಅರಳಿ ಮರವನ್ನು ಪೂಜಿಸುವುದರಿಂದ ಶನಿ ದೋಷವು ದೂರವಾಗುವುದು. ಶನಿ ದೋಷದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವವರು ಪ್ರತಿನಿತ್ಯ ಅರಳಿ ಮರಕ್ಕೆ ಪೂಜೆಯನ್ನು ಸಲ್ಲಿಸಬೇಕು.
ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ತಪ್ಪದೆ ಕಾಮೆಂಟ್ ಮಾಡಿರಿ ಧನ್ಯವಾದಗಳು.

Leave a Comment