ಶ್ರಾವಣ ಮಾಸದಲ್ಲಿ ತುಳಸಿ ನೀಡುತ್ತೆ ಈ ಸೂಚನೆ! ಲಕ್ಷ್ಮೀ ಮನೆಗೆ ಬರೋದಯ ಗ್ಯಾರಂಟಿ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಶ್ರಾವಣದಲ್ಲಿ ತುಳಸಿ ಗಿಡ ಹೇಳುತ್ತದೆ ಈ ಏಳು ಸೂಚನೆಯನ್ನು ಲಕ್ಷ್ಮಿ ನಿಮ್ಮ ಮನೆಗೆ ಬರುವ ಸೂಚನೆಯನ್ನು ಈ ಸಂಚಿಕೆಯಲ್ಲಿ ಇವತ್ತು ನಾವು ನಿಮಗೆ.
ಶ್ರಾವಣ ಮಾಸ ಬಂತು ಎಂದರೆ ಸಾಕು ಹಬ್ಬ ಹರಿದಿನಗಳು ಸಾಲಾಗಿ ಬರುತ್ತವೆ ಹಾಗಿರಲಿ ಶ್ರಾವಣದ ಶುಕ್ರವಾರದಲ್ಲಂತೂ ಮನೆ ಮನೆಯಲ್ಲಿ ಅದ್ದೂರಿಯಾಗಿ ಅಲಂಕಾರವಾಗಿರುವ ಮಹಾಲಕ್ಷ್ಮಿ ನೋಡುತ್ತಿದ್ದರೆ ಕಣ್ಣಿಗೆ ಹಬ್ಬವೇ ಆಗಿಬಿಡುತ್ತದೆ ಮಹಾಲಕ್ಷ್ಮಿ ಪ್ರಸನ್ನರಾದರೆ ಸಾಕು ಎನ್ನುವುದೇ ಎಲ್ಲರ ಆಸೆ ಆಗಿರುತ್ತದೆ ಆಕೆ ಏನಾದರೂ ಒಮ್ಮೆ ತಥಾಸ್ತು ಎಂದರೆ ಸಾಕು ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟಗಳು ದೂರವಾಗಿ ಸುಖ ಶಾಂತಿ ನೆಮ್ಮದಿ ಸಂಪತ್ತು ಎಲ್ಲವೂ ನಿಮ್ಮದಾಗುತ್ತದೆ.

ಆದರೆ ಮಹಾಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೋ ಇಲ್ಲವೋ ಈ ಪ್ರಶ್ನೆ ತುಂಬಾ ಜನರಿಗೆ ಕಾಡುತ್ತದೆ, ಅದಕ್ಕೆ ಉತ್ತರ ಬೇಕು ಎಂದರೆ ಮನೆ ಮುಂದೆ ಶಾಂತ ರೀತಿಯಲ್ಲಿರುವ ತುಳಸಿ ಗಿಡವನ್ನು ನೋಡಿ ಇದೇ ತುಳಸಿ ಗಿಡ ಈ ಶ್ರಾವಣ ಮಾಸದಲ್ಲಿ ಲಕ್ಷ್ಮಿ ನಿಮ್ಮ ಮನೆಗೆ ಬಲಗಾಲು ಇಟ್ಟು ಬರುತ್ತಾಳೋ ಇಲ್ಲವೋ ಎನ್ನುವ ಸೂಚನೆಯನ್ನು ಕೊಡುತ್ತದೆ. ತುಳಸಿ ಗಿಡ ಕೊಡುವ ಸೂಚನೆಗಳು ಏನೆಂದರೆ ಆಷಾಢ ಪೂರ್ಣಿಮೆಯ ನಂತರ ಬರುವುದೇ ಶ್ರಾವಣಮಾಸ ಹಿಂದೂ ಧರ್ಮದಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರ ಮಾಸ ಎಂದು ಹೇಳಲಾಗುತ್ತದೆ, ಈ ಪವಿತ್ರ ಶ್ರಾವಣ ಶಿವನಿಗೆ ಅತ್ಯಂತ ಪ್ರಿಯವಾದ ಮಾಸವಾಗಿದೆ

ಈ ಮಾಸದಲ್ಲಿ ಭಕ್ತರೂ ವ್ರತ ಉಪವಾಸವನ್ನು ಮಾಡಿ ಶಿವನನ್ನು ಪೂಜಿಸುತ್ತಾರೆ ಆ ಮಹಾದೇವನ ಆಶೀರ್ವಾದದಿಂದ ಸಂಪತ್ತು ಮತ್ತು ಸಂತೋಷವನ್ನು ಪಡೆಯುತ್ತಾರೆ ಇದಲ್ಲದೆ ಶಿವನ ಆರಾಧನೆಯನ್ನು ಮಾಡಿದರೆ ವಂಶ ಪ್ರಾಪ್ತಿಯಾಗುತ್ತದೆ ಬೇಡಿದ್ದನ್ನು ಕೊಡುವ ಶಿವನ ಕೃಪೆ ಸಂಪೂರ್ಣವಾಗಿ ಪ್ರಾಪ್ತಿಯಾಗುತ್ತದೆ ಅಷ್ಟೇ ಅಲ್ಲ ಶ್ರಾವಣ ಮಾಸದಲ್ಲಿ ಲಕ್ಷ್ಮಿ ಪೂಜೆ ಮಾಡಿದರೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಇದೇ ಕಾರಣಕ್ಕೆ ಶ್ರಾವಣ ಮಾಸದಲ್ಲಿ ಬರುವಂತಹ ನಾಲ್ಕು ಶುಕ್ರವಾರವನ್ನು ಅದ್ದೂರಿಯಾಗಿ ಪೂಜಿಸುತ್ತಾರೆ ಲಕ್ಷ್ಮಿ ಅನುಗ್ರಹ ಇಂದಲ್ಲ ನಾಳೆ ಪ್ರಾಪ್ತಿ ಹಾಗೆ ಆಗುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ಮನೆಯ ಮುತ್ತೈದೆಯರು ಸೇರಿ ಪೂಜೆಯನ್ನು ಮಾಡುತ್ತಾರೆ ಆದರೆ ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ ಇಲ್ಲವೋ ಎಂದು ಹೇಳುವುದು ಮಾತ್ರ ಮನೆಯ ಮುಂದೆ ಇರುವ ತುಳಸಿ ಗಿಡ.

ಮನೆಯ ಮುಂದೆ ಇರುವಂತಹ ತುಳಸಿ ಗಿಡವನ್ನು ಸಾಮಾನ್ಯ ಗಿಡ ಎಂದು ಹೇಳಲೇಬೇಡಿ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡಲಾಗಿದೆ ಅಷ್ಟೇ ಅಲ್ಲ ಇದೇ ತುಳಸಿ ಗಿಡಕ್ಕೆ ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ ಪೂಜೆಗೆ ತುಳಸಿ ಗಿಡ ಇಲ್ಲದಿದ್ದರೆ ಆ ಪೂಜೆ ಅಪೂರ್ಣ ಎಂದು ಹೇಳಲಾಗುತ್ತದೆ . ಅಲ್ಲದೆ ಇದೇ ತುಳಸಿಯನ್ನ ಶ್ರೀ ಕೃಷ್ಣನ ಪ್ರಿಯೆ ಎಂದು ಹೇಳುತ್ತಾರೆ ವೃಂದ ಎಂದು ಕರೆಯಲ್ಪಡುವಂತಹ ತುಳಸಿ ದೇವತಾ ಸ್ಥಾನದಲ್ಲಿ ಇರುವಂತಹ ಸ್ತ್ರೀರೂಪವೂ ಹೌದು ತುಳಸಿ ಗಿಡಕ್ಕೆ ಇಷ್ಟೊಂದು ಪವಿತ್ರ ಎಂದು ಹೇಳಿದರು ಸಹ ಅಪ್ಪಿ ತಪ್ಪಿಯು ಕೆಲವು ದೇವರಿಗೆ ಈ ತುಳಸಿ ಗಿಡವನ್ನು ಅರ್ಪಿಸುವುದಿಲ್ಲ ಅದಕ್ಕೂ ಕಾರಣ ಏನು ಎನ್ನುವುದನ್ನು ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ.

ಶಿವ ಪೂಜೆಯಲ್ಲಿ ಉಲ್ಲೇಖ ಆಗಿರುವ ಹಾಗೆ ಶಿವಪೂಜೆಯಲ್ಲಿ ತುಳಸಿಯನ್ನು ಉಪಯೋಗಿಸುವಂತಿಲ್ಲ ಅದಕ್ಕೆ ಕಾರಣ ಎಂದರೆ ಶಂಕ ಚಂದ್ ಎನ್ನುವ ಓರ್ವ ಅಸುರನಿಂದ ಆತನು ಬ್ರಹ್ಮನ ಕುರಿತು ತೀವ್ರವಾದ ತಪಸ್ಸನ್ನು ಮಾಡುತ್ತಾನೆ ಆತನ ತಪಸ್ಸಿಗೆ ಮೆಚ್ಚಿದ ಬ್ರಹ್ಮ ದೇವತೆಗಳನ್ನೇ ಸೋಲಿಸುವಂತಹ ಶಕ್ತಿಯನ್ನು ಪಡೆಯುತ್ತಾನೆ ಅಲ್ಲದೆ ಬ್ರಹ್ಮನು ಅತ್ಯಂತ ಪವಿತ್ರಳಾದ ತುಳಸಿಯನ್ನು ಮದುವೆಯಾಗುವಂತೆ ಆಶೀರ್ವದಿಸುತ್ತಾನೆ ಈಗ ತನ್ನ ತಪಸ್ಸಿನ ಬಲದಿಂದ ದೇವತೆಗಳಿಗೆ ಕಿರುಕುಳ ಕೊಡಲು ಶುರುಮಾಡುತ್ತಾನೆ ಈತನ ಉಪಟಳಕ್ಕೆ ಕೊನೆ ಹಾಡಲು, ನಿರ್ಧರಿಸಿದ ವಿಷ್ಣು ಶಂಕು ಚಂದ್ ರೂಪವನ್ನು ಧರಿಸಿದ ವಿಷ್ಣು ತುಳಸಿಯ ಬಳಿ ಬರುತ್ತಾನೆ ಇದರಿಂದ ತುಳಸಿಯ ಪವಿತ್ರತೆಗೆ ಧಕ್ಕಿಯಾಗುತ್ತದೆ ಶಿವ ಶಂಕುಚಂದ್ ನಡುವೆ ಯುದ್ಧ ನಡೆಯುತ್ತದೆ

ಶಂಕು ಚಂದ್ ಶಕ್ತಿ ಕುಂದುವುದು ಆತ ಯುದ್ಧದಲ್ಲಿ ಸಾವನ್ನಪ್ಪುತ್ತಾನೆ ಇದರಲ್ಲಿ ತುಳಸಿಯ ತಪ್ಪು ಏನೂ ಇಲ್ಲದ ಕಾರಣ ತುಳಸಿಗೆ ದೈವಿಕ ಶಕ್ತಿಯನ್ನು ಕರುಣಿಸುತ್ತಾನೆ ಅಲ್ಲದೆ ವಿಷ್ಣುವಿಗೆ ಪ್ರಿಯರಾಗಿ ಇರುವಂತೆ ಆಶೀರ್ವದಿಸುತ್ತಾನೆ ಹೀಗಾಗಿ ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸುವುದಿಲ್ಲ ಕೇವಲ ಶಿವನ ಪೂಜೆಯಲ್ಲಿ ಮಾತ್ರವಲ್ಲ ವಿಘ್ನಾ ವಿನಾಶಕನ ಪೂಜೆಯಲ್ಲಿ ಕೂಡ ತುಳಸಿ ಗಿಡದ ಎಲೆಯನ್ನು ಬಳಸುವಂತಿಲ್ಲ ಅದಕ್ಕೂ ಒಂದು ಕಥೆ ಇದೆ, ಗಣಪತಿಯಿಂದ ಆಕರ್ಷಿತಲಾದ ತುಳಸಿ ಆತನನ್ನು ವಿವಾಹ ಆಗುವುದಕ್ಕೆ ಬಯಸುತ್ತಾಳೆ ಆದರೆ ಗಣಪತಿ ಇದನ್ನು ವಿನಮ್ರತೆಯಿಂದ ನಿರಾಕರಿಸುತ್ತಾನೆ

ಇದರಿಂದ ಕೋಪಗೊಂಡ ತುಳಸಿ ಗಣೇಶನಿಗೆ ಎರಡೆರಡು ಬಾರಿ ಮದುವೆಯಾಗುತ್ತದೆ ಅಂತ ಶಾಪ ಹಾಕುತ್ತಾಳೆ ಇದರಿಂದ ಸಿಟ್ಟಾದ ವಿನಾಯಕ ನೀನು ರಾಕ್ಷಸನನ್ನು ಮದುವೆಯಾಗುತ್ತೀಯಾ ಅಂತ ಶಾಪ ಕೊಡುತ್ತಾನೆ ಆ ಶಾಪವನ್ನು ಕೇಳಿಸಿಕೊಂಡ ತುಳಸಿಗೆ ತಾನು ಮಾಡಿದ ತಪ್ಪು ಏನು ಎನ್ನುವುದು ಅರಿವಾಗುತ್ತದೆ ಗಣಪತಿಯ ಬಳಿ ಕ್ಷಮೆಯನ್ನು ಕೇಳುತ್ತಾಳೆ ಆಕೆಯ ಪಶ್ಚಾತಾಪದ ಕಣ್ಣೀರನ್ನು ನೋಡಿ ಗಣಪತಿಗೆ ಮನಸ್ಸು ಕರಗಿ ನಿನಗೆ ಪ್ರಪಂಚದಲ್ಲಿ ಮಹತ್ವದ ಸ್ಥಾನ ಸಿಗಲಿ ಅಂತ ವರವನ್ನು ಕೊಡುತ್ತಾನೆ ಹೀಗಾಗಿ ಗಣೇಶನ ಪೂಜೆಯಲ್ಲಿ ತುಳಸಿಯನ್ನು ಬಳಸದೆ ಹೋದರು ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆಯಲ್ಲಿ ತಪ್ಪದೇ ಬಳಸುತ್ತಾರೆ

ಭಗವಾನ್ ವಿಷ್ಣುವಿನ ಅನುಗ್ರಹದಿಂದ ತುಳಸಿಗೆ ದೈವ ಶಕ್ತಿ ಇದೆ ಈ ನಂಬಿಕೆಯಿಂದಲೇ ತುಳಸಿಗೆ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಪೂಜೆ ಸಲ್ಲಿಸಲಾಗುತ್ತದೆ ಇದೇ ತುಳಸಿ ಗಿಡ ಮನೆಯ ಮುಂದೆ ಇದ್ದರೆ ಸಾಕು ನಿಮ್ಮ ಮನೆಯ ಒಳಗೆ ಅಪ್ಪಿ ತಪ್ಪಿಯು ನಕಾರಾತ್ಮಕ ಶಕ್ತಿ ದುಷ್ಟ ಶಕ್ತಿಗಳು ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ ಅದರಲ್ಲೂ ಶ್ರಾವಣ ಮಾಸ ಬಂತು ಅಂದರೆ ಸಾಕು ಇದೇ ತುಳಸಿ ಗಿಡ ನಿಮಗೆ ಕೆಲವು ಸೂಚನೆಗಳನ್ನು ನೀಡುತ್ತದೆ ಅದು ಅಂತಿಂಥ ಸೂಚನೆಯಲ್ಲ ಲಕ್ಷ್ಮಿ ನಿಮ್ಮ ಮನೆಗೆ ಇನ್ನೇನು ಬಂದೇ ಬಿಡುತ್ತಾಳೆ ಅನ್ನುವ ಸೂಚನೆ ಆ ಸೂಚನೆ ಹೇಗಿರುತ್ತವೆ ಅನ್ನೋದನ್ನ ಈಗ ಒಂದೊಂದಾಗಿ ಹೇಳುತ್ತೇವೆ

ಶ್ರಾವಣ ಮಾಸದಲ್ಲಿ ನೆಡುವ ತುಳಸಿಯನ್ನು ಶ್ರೇಷ್ಠ ಅಂತ ಹೇಳಲಾಗುತ್ತದೆ ಆದರೆ ತುಳಸಿ ಗಿಡವನ್ನು ಯಾವತ್ತಿಗೂ ನೇರವಾಗಿ ಮಣ್ಣಿನಲ್ಲಿ ನೆಡಬಾರದು ತುಳಸಿ ಗಿಡವನ್ನು ನೆಡುವುದಕ್ಕೆ ಸಿಗುವಂತಹ ಮಣ್ಣಿನ ಕುಂಡದಲ್ಲಿ ತೆಗೆದುಕೊಂಡು ಅದನ್ನು ಶುದ್ಧ ಮಾಡಿ ಪೂಜೆ ಮಾಡಿ ಆನಂತರ ನಡೆಬೇಕು ಇದನ್ನು ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡಿ ಈ ಗಿಡ ಏನಾದರೂ ಕೆಲವೇ ಕೆಲವು ದಿನಗಳಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸಿದರೆ ಅರ್ಥ ಮಾಡಿಕೊಂಡು ಬಿಡಿ ನಿಮ್ಮ ಮನೆಗೆ ಲಕ್ಷ್ಮಿಯ ಆಗಮನ ಅತಿ ಶೀಘ್ರದಲ್ಲಿ ಆಗುತ್ತದೆ ಅನ್ನುವುದನ್ನು ತುಳಸಿ ಗಿಡಕ್ಕೆ ಎಷ್ಟೇ ಚೆನ್ನಾಗಿ ಆರೈಕೆ ಮಾಡಿದರು ಕೂಡ ಈ ಗಿಡ ಒಣಗಿ ಹೋಗುತ್ತದೆ ಹಾಗೇನಾದರೂ ನಿಮ್ಮ ಮನೆಯಲ್ಲಿ ಇರುವಂತಹ ತುಳಸಿ ಗಿಡ ಒಣಗಿಹೋಗುವುದಕ್ಕೆ ಶುರುವಾದರೆ

ಇದನ್ನು ಅರ್ಥ ಮಾಡಿಕೊಂಡು ಬಿಡಿ ನಿಮ್ಮ ಮನೆಯಲ್ಲಿ ಏನಾದರೂ ಅನಾಹುತ ಸಂಭವಿಸುತ್ತದೆ ಅಂತ ಅದಕ್ಕೆ ತಕ್ಷಣ ಬೇರೆ ತುಳಸಿ ಗಿಡವನ್ನು ತಂದು ಅದರಲ್ಲಿ ನಡಿ ತುಳಸಿ ಗಿಡದ ಎಲೆಗಳು ಉದುರುತ್ತಾ ಇದ್ದರೆ ಇದು ಒಳ್ಳೆಯ ಸೂಚನೆ ಅಲ್ಲ ಇದು ಪಿತೃ ದೋಷದ ಸೂಚನೆ ಇದನ್ನು ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಿ ಶ್ರಾವಣ ಮಾಸದಲ್ಲಿ ತುಳಸಿ ಗಿಡವು ಹಸಿರು ಹಸಿರಾಗಿರಬೇಕು ಕೆಲವು ತುಳಸಿ ಗಿಡವು ಹಾಗಿರುವುದಿಲ್ಲ ಆದರೆ ವಾತಾವರಣ ಬದಲಾಗುತ್ತಿದ್ದಂತೆ ಅದು ಹಸಿರು ಹಸಿರಾಗಿ ಬೆಳೆದುಬಿಡುತ್ತದೆ ಹೀಗೆ ಬದಲಾವಣೆ ಕಂಡರೆ ಇದು ನಿಮ್ಮ ಮನೆಗೆ ಬದಲಾವಣೆಯ ಸಂಕೇತ ಅಂತ ಅರ್ಥ ಮಾಡಿಕೊಳ್ಳಿ ಕಾರಣ ವಿಷ್ಣು ಮತ್ತು ಲಕ್ಷ್ಮಿ ನಿಮ್ಮ ಮನೆಗೆ ಈ ಇಬ್ಬರ ಆಶೀರ್ವಾದ ಇರುತ್ತದೆ

ಮನೆಯಲ್ಲಿ ಯಾವಾಗಲೂ ಸಂತೋಷ ತುಂಬಿರುತ್ತದೆ ಇದನ್ನು ಎಲ್ಲಿ ಬೇಕೆಂದರಲ್ಲಿ ನಡಬೇಡಿ ಸ್ವಚ್ಛವಾದ ಸ್ಥಳದಲ್ಲಿ ನೆಡಬೇಕು ಹಾಗೂ ಪ್ರತಿನಿತ್ಯ ತುಳಸಿ ಗಿಡಕ್ಕೆ ನೀರನ್ನು ಹಾಕುವ ಅಭ್ಯಾಸ ಮಾಡಿಕೊಳ್ಳಿ ಏಕಾದಶಿ ಹಾಗೂ ಭಾನುವಾರ ತುಳಸಿ ಗಿಡಕ್ಕೆ ನೀರನ್ನು ಹಾಕಬೇಡಿ ಕೆಲವೊಮ್ಮೆ ತುಳಸಿ ಗಿಡವನ್ನು ನೆಟ್ಟ ಜಾಗ ಬದಲಾಯಿಸುವ ಅನಿವಾರ್ಯತೆ ಬರುತ್ತದೆ ಆಗ ನೀವು ತುಳಸಿ ಗಿಡದ ಕಟ್ಟೆಯನ್ನು ಒಡಯಬೇಡಿ ಹಾಕಬೇಡಿ ದೊಡ್ಡ ಅಪಶಕುನ ಅಂತ ಭಾವಿಸಲಾಗುತ್ತದೆ ಅದರಲ್ಲೂ ಶ್ರಾವಣದ ಸಮಯದಲ್ಲಿ ತುಳಸಿ ಗಿಡವನ್ನು ನೆಡಬೇಕು ಬದಲಾಗಿ ಅದನ್ನು ಕೀಳುವುದಾಗಲಿ ಎಲೆಗಳನ್ನು ಕಿತ್ತು ಬಿಸಾಕುವುದನ್ನು ಮಾಡಬೇಡಿ ಸ್ನೇಹಿತರೆ ಈ ನಿಯಮಗಳನ್ನು ಪಾಲಿಸಿಕೊಂಡು ನಿಮ್ಮ ಮನೆಯನ್ನು ಸುಭಿಕ್ಷವಾಗಿ ನೋಡಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment