ಇವು ಕೇವಲ 5 ಗುರುತುಗಳಲ್ಲ BANK ಆಗಿವೆ 

ನಾವು ಈ ಲೇಖನದಲ್ಲಿ ಇವು ಕೇವಲ 5 ಗುರುತುಗಳಲ್ಲ ಹೇಗೆ ಬ್ಯಾಂಕ್ ಆಗಿದೆ ಎಂದು ತಿಳಿಯೋಣ . ನಿಮ್ಮ ಅಂಗೈಯಲ್ಲಿ ಇರುವ ಐದು ಧನ ಸಂಪತ್ತಿನ ಸಂಕೇತಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ . ಇದು ನಿಮ್ಮ ಜೀವನದಲ್ಲಿ ರಾಜ ಯೋಗವನ್ನು ತರಬಹುದು . ಇವುಗಳು ನಿಮ್ಮ ಮನಸ್ಸಿನ ಇಚ್ಛೆಗಳನ್ನು ಸಹ ಈಡೇರಿಸುತ್ತವೆ . ಇಲ್ಲಿ ಭಿನ್ನ ಭಿನ್ನವಾದ 5 ಅಂಗೈ ಚಿತ್ರಗಳ ಬಗ್ಗೆ ಮಾಹಿತಿ ತಿಳಿಸಲಾಗಿದೆ. ಇವುಗಳ ಮೂಲಕ ನೀವು ಸುಲಭವಾಗಿ ತಿಳಿಯಬಹುದು . ಎರಡು ಮುಖಗಳು ಇರುವ ರೇಖೆಗಳು ಹೋಗಿರುತ್ತದೆ . ತುಂಬಾ ಜನರ ಅಂಗೈಯಲ್ಲಿ ಈ ರೇಖೆ ಇರುತ್ತದೆ .

ಆದರೆ ಇಲ್ಲಿ ನೀವು ಒಂದು ವಿಷಯವನ್ನು ಗಮನಿಸಬೇಕು . ಈ ರೇಖೆಯ ಎರಡು ತುದಿಗಳು ಒಂದೇ ಸಮಾನದಲ್ಲಿ ಇರಬೇಕು . ಅಂದರೆ ಕೆಲವರ ಅಂಗೈಯಲ್ಲಿ ಒಂದು ರೇಖೆ ಚಿಕ್ಕದಾಗಿರುತ್ತದೆ .ಮೇಲೆ ಹೋಗಿರುವ ರೇಖೆ ದೊಡ್ಡದಾಗಿರುತ್ತದೆ . ಅಥವಾ ಮೇಲಿನ ರೇಖೆ ಚಿಕ್ಕದಾಗಿರುತ್ತದೆ ಕೆಳಗಿನ ರೇಖೆ ಉದ್ದವಾಗಿರುತ್ತದೆ . ಒಂದು ವೇಳೆ ಈ ರೀತಿ ಆದ ರೇಖೆ ನಿಮ್ಮ ಅಂಗೈ ಅಲ್ಲಿ ಇದ್ದರೆ , ಅವು ಸರಿಯಾದ ಕೆಲಸ ಮಾಡುವುದಿಲ್ಲ .
ಇಲ್ಲಿರುವ ಎರಡು ಗೆರೆಗಳು ಸಮಾನವಾಗಿ ಇರಬೇಕು .

ಇಂತಹ ರೇಖೆ ಇರುವ ವ್ಯಕ್ತಿಯ ಮನೆಯಲ್ಲಿ ಮೊದಲಿನಿಂದ ವ್ಯಾಪಾರ ವ್ಯವಹಾರ ನಡೆಯುತ್ತಾ ಬಂದಿರುತ್ತದೆ . ಕುಟುಂಬದವರು ಮೊದಲಿನಿಂದ ಯಾವುದಾದರೂ ವ್ಯಾಪಾರ ವ್ಯವಹಾರ ನಡೆಸಿಕೊಂಡು ಬಂದಿದ್ದರೆ
ಅದನ್ನು ಇವರು ಮುಂದುವರಿಸಿಕೊಂಡು ಹೋಗುತ್ತಾರೆ . ತಮ್ಮ ಬುದ್ಧಿವಂತಿಕೆಯಿಂದ ಆ ಕಾರ್ಯವನ್ನು ಇನ್ನಷ್ಟು ಮುಂದುವರೆಸಿಕೊಂಡು ಹೋಗುತ್ತಾರೆ . ಧನ ಪ್ರಾಪ್ತಿಯನ್ನು ಮಾಡುತ್ತಾರೆ . ಕಡಿಮೆ ವಯಸ್ಸಿನಲ್ಲಿ ದೊಡ್ಡದಾದ ಯಶಸ್ಸನ್ನು ಕಾಣುವ ಅವಕಾಶ ಇವರಿಗೆ ದೊರೆಯುತ್ತದೆ .

ತಮ್ಮ ಶಕ್ತಿಯ ಮೇಲೆ ಮುಂದೆ ಸಾಗಿ ವ್ಯಾಪಾರ ವ್ಯವಹಾರವನ್ನು ನಡೆಸುತ್ತಾರೆ . ಇವರಿಗೆ 30ನೇ ವಯಸ್ಸಿನ ಒಳಗಡೆ ಒಳ್ಳೆಯ ಯಶಸ್ಸು ದೊರೆಯುತ್ತದೆ .ಇಲ್ಲಿ ಒಂದೆರಡು ವರ್ಷದ ಏರುಪೇರು ಆಗಬಹುದು . ನೀವು ಯಾವ ಕ್ಷೇತ್ರದ ಮೇಲೆ ಹೋಗುತ್ತೀರಾ ಎಂಬುದು ಅವಲಂಬಿತವಾಗುತ್ತದೆ . ಭಗವಂತನ ಅಪಾರವಾದ ಕೃಪೆ ನಿಮ್ಮ ಮೇಲೆ ಇರುತ್ತದೆ . ಇಲ್ಲಿ ದ್ವಿ ಮುಖಿ ಇರುವಂತಹ ಚಿಹ್ನೆಯು ತ್ರಿಶೂಲಿನ ಚಿಹ್ನೆ ಎಂದು ತಿಳಿಯಲಾಗಿದೆ . ನಿಮ್ಮ ವೃತ್ತಿ ಕೂಡ ದೊಡ್ಡದಾಗಿ ಹೋಗುವ ಸಾಧ್ಯತೆ ಇರುತ್ತದೆ .. ಜೊತೆಗೆ ಧನ ಸಂಪತ್ತಿನ ಆಗಮನ ಚೆನ್ನಾಗಿರುತ್ತದೆ .

ಎರಡನೇ ಚಿಹ್ನೆ ಕೆಳಭಾಗಕ್ಕೆ ರೇಖೆಯು ಹೋಗಿ ಎರಡು ಭಾಗಗಳಾಗಿ ಆಗುತ್ತದೆ . ಮರಳಿ ಈ ಎರಡು ಭಾಗಗಳು ಸೇರುತ್ತವೆ . ಇದು ಮೀನಿನ ಗುರುತು ಆಗಿರುತ್ತದೆ . ಇದು ಯಾವ ರೀತಿಯಾದ ವಿಶೇಷವಾದ ಗುರುತು ಆಗಿದೆ ಎಂದರೆ , ಇದು ನಿಮ್ಮ ಜೀವನದಲ್ಲಿ ಆಚಾನಕವಾಗಿ ಲಾಭವನ್ನು ಕೊಡುತ್ತದೆ . ವಿಶೇಷವಾಗಿ ನೌಕರಿ ಇರುವ ಜನರಿಗೆ ಇದು ಬೇಗ ದೊರೆಯುತ್ತದೆ .ಒಂದು ವೇಳೆ ನೀವು ನೌಕರಿ ಮಾಡುತ್ತಿದ್ದರೆ ನಿಮಗೆ ಉಪಯೋಗ ಬೇಕಾಗುತ್ತದೆ . ನೀವು ವ್ಯವಹಾರ ಕ್ಷೇತ್ರದಲ್ಲಿ ಇದ್ದರೆ ಇಲ್ಲಿಯ ತನಕ ಕಾಯಬೇಕಾಗುತ್ತದೆ .

ನೀವು ಕೆಲಸ ಮಾಡುತ್ತಿದ್ದರೆ ನಿಮಗೆ ಬೇಗ ದೊರೆಯುತ್ತದೆ .ಅದು 30ನೇ ವಯಸ್ಸಿಗೂ ಮುನ್ನ ದೊರೆಯುತ್ತದೆ .ನೀವು ವ್ಯವಹಾರ ಕ್ಷೇತ್ರದಲ್ಲಿ ಇದ್ದರೆ , ನಿಮಗೆ ಅವಕಾಶ 35 ರಿಂದ 40 ವಯಸ್ಸಿನ ಒಳಗೆ ಸಿಗಬಹುದು . ವ್ಯವಹಾರ ಮಾಡುವ ಜನರು ಸ್ವಲ್ಪ ಹೆಚ್ಚಾಗಿ ಕಾಯಬೇಕಾಗುತ್ತದೆ . ಯಾವುದಾದರೂ ರೇಖೆಗಳು ಈ ಮೀನಿನ ಚಿಹ್ನೆಯ ಮೇಲೆ ಹಾದು ಹೋಗುತ್ತಿದ್ದರೆ , ನಿಮ್ಮ ಜೀವನ ರೇಖೆ ಮಧ್ಯದಲ್ಲಿ ಬಿಡುಗಡೆ ಹಾಗಿದ್ದರೆ , ಅಥವಾ ಮುರಿದು ಹೋಗಿದ್ದರೆ , ಅಥವಾ ಅಂತರಗಳು ಕಂಡು ಬಂದರೆ ಇವು ನಿಮಗೆ ಸಮಸ್ಯೆಗಳನ್ನು ಅಡ್ಡಿ ಮಾಡಬಹುದು . ಹಣ ಬಂದರೂ ಕೂಡ ಅದು ಬೇಗ ವ್ಯರ್ಥವಾಗಿ ಅಥವಾ ಖರ್ಚಾಗಿ ಹೋಗುತ್ತದೆ . ಈ ಚಿಹ್ನೆಗಳಿಂದ ಲಾಭಗಳು ಸಿಗುವುದಿಲ್ಲ . ಲಾಭಗಳು ದೊರೆಯಬೇಕು ಎಂದರೆ ಇದು ಪರಿಪೂರ್ಣವಾಗಿ ಇರಬೇಕು .

ಮೂರನೇ ಸಂಕೇತದ ಅರ್ಥ , ಇದು ಅನಾಮಿಕ ಬೆರಳಿನ ಕೆಳಗಡೆ ರಚನೆಯಾಗುತ್ತದೆ . ಇದನ್ನು ರಿಂಗ್ ಫಿಂಗರ್ ಎಂದು ಕರೆಯುತ್ತಾರೆ . ಈ ಸ್ಥಾನವನ್ನು ಸೂರ್ಯ ಪರ್ವತ ಎಂದು ಕರೆಯುತ್ತಾರೆ . ಇಲ್ಲಿ ಮೀನಿನ ಚಿಹ್ನೆ ರಚನೆಯಾಗಿ ಇದ್ದರೆ , ಇದು ನಿಮ್ಮ ಜೀವನದಲ್ಲಿ ಡಬಲ್ ಅವಕಾಶಗಳನ್ನು ಸೃಷ್ಟಿಸುತ್ತದೆ. ಅಂದರೆ ಒಂದಕ್ಕಿಂತ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ . ಹಲವಾರು ಜನರಿಗೆ ಒಂದೇ ಅವಕಾಶಗಳು ದೊರೆಯುತ್ತದೆ. ಆದಾಯದ ಮೂಲಗಳು ಭಿನ್ನ-ಭಿನ್ನವಾಗಿರುತ್ತದೆ . ಬೇರೆ ಬೇರೆ ಆದಾಯದ ಜೊತೆಗೆ ನಿಮ್ಮ ಆದಾಯದ ಹೆಚ್ಚಳ ಕೂಡ ಹೆಚ್ಚಾಗುತ್ತದೆ . ಲಾಭಗಳು ಹೆಚ್ಚಿನ ಮಟ್ಟದಲ್ಲಿ ಇರುತ್ತದೆ . ಬೇರೆ ಬೇರೆ ಸ್ಥಳಗಳಿಂದ ಹಣವನ್ನು ಗಳಿಸಬಹುದು .

ನಾಲ್ಕನೇ ಸಂಕೇತದ ಹಸ್ತವನ್ನು ನೋಡುವುದಾದರೆ , ಇದನ್ನು ಕೇತು ಪರ್ವತದ ಕಡೆಯಿಂದ ನೋಡಲು ಶುರು ಮಾಡಬೇಕು . ಇಲ್ಲಿ ನಿಮ್ಮ ಭಾಗ್ಯ ರೇಖೆಯು ಕೇತು ಪರ್ವತದ ಮೇಲೆ ಹೋಗಿ , ಇದು ನಿಮ್ಮ ಶನಿ ಪರ್ವತದತ್ತ ಹೋಗುತ್ತದೆ . ನಿಮ್ಮ ಮಧ್ಯದ ಬೆರಳಿನ ಕೆಳ ಭಾಗದಲ್ಲಿ ಇರುತ್ತದೆ. ಇದಕ್ಕೆ ಮೈಂಡ್ ಲೈನ್ ಸೇರಿಸಿದರೆ , ಕೆಳಭಾಗದಲ್ಲಿ ಒಂದು ಚಿಕ್ಕ ರೇಖೆ ಬಂದು ಮೈಂಡ್ ಲೈನ್ನನ್ನು ಸೇರಿದರೆ , ಇಲ್ಲಿ ಮನಿ ಟ್ರಯಾಂಗಲ್ ಸೈಟ್ ಕ್ರಿಯೇಟ್ ಆಗುತ್ತದೆ .

ಇದು ಯಾವ ರೀತಿಯಾದ ತ್ರಿಕೋನ ಆಕಾರದ ಶೇಪ್ ಆಗಿದೆ ಅಂದರೆ , ನಿಮ್ಮ ಜೀವನದಲ್ಲಿ ದೊಡ್ಡದಾದ ಧನ ಲಾಭದ ಯೋಗವನ್ನು ನಿರ್ಮಿಸುತ್ತದೆ . ಇಲ್ಲಿ ದೊಡ್ಡದಾದ ಹಣದ ಅದೃಷ್ಟ ಇದೆ ಎಂದು ಹೇಳಬಹುದು . ಹಲವಾರು ಜನ ನಮ್ಮ ಅಂಗೈಯಲ್ಲೂ ಕೂಡ ಇದೇ ರೀತಿಯಾದ ರೇಖೆ ಇದೆ ಆದರೂ ನಮಗೆ ಏಕೆ ಲಾಭ ದೊರೆಯುತ್ತಿಲ್ಲ ಎಂದು ಯೋಚನೆ ಮಾಡುತ್ತಾರೆ . ಇಲ್ಲಿ ನೀವು ನಿರಂತರವಾಗಿ ಒಂದೇ ಕಾರ್ಯವನ್ನು ಮಾಡದೆ ಇರಬಹುದು .

ಮೊದಲಿಗೆ ನೀವು ಕೆಲಸದಲ್ಲಿ ಇದ್ದು ನಂತರ ವ್ಯಾಪಾರ ವ್ಯವಹಾರ ಮಾಡಿರಬಹುದು . ಅಥವಾ ಕೆಲಸವನ್ನು ಬದಲಾಯಿಸಿರಬಹುದು . ಇಲ್ಲಿ ಯಾರು ತಮ್ಮ ಕೆಲಸ ಕಾರ್ಯಗಳನ್ನು ಬದಲಾಯಿಸುತ್ತಾ ಇರುತ್ತಾರೋ , ಅವರಿಗೆ ಲಾಭ ಸಿಗುವುದಿಲ್ಲ . ನೀವು ಒಂದೇ ಕೆಲಸವನ್ನು ನಿರಂತರವಾಗಿ ಐದು ಅಥವಾ ಏಳು ವರ್ಷದವರೆಗೆ ಮಾಡುತ್ತಿದ್ದರೆ , ಈ ಗುರುತಿನ ಮೂಲಕ ನಿಮಗೆ ಲಾಭಗಳು ದೊರೆಯಬಹುದು . ಯಾವಾಗ ನೀವು ಯಾವುದೇ ಕಾರ್ಯವನ್ನು ಶುರು ಮಾಡುತ್ತೀರೋ ಮುಂಬರುವ ದಿನಗಳಲ್ಲಿ ದೊಡ್ಡದಾದ ಲಾಭ ಆಗಬಹುದು . ಇಲ್ಲಿ ಭಾಗ್ಯ ರೇಖೆಯು ಕೇತು ಪರ್ವತದಿಂದ ಹಾದು ಹೋಗಿರುತ್ತದೆ .

ಇದು ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭವನ್ನು ಕೊಡುತ್ತದೆ . ಆದರೆ ಕೆಲವರ ಬಲಗೈಯಲ್ಲಿ ಭಾಗ್ಯ ರೇಖೆಯೂ ಚಂದ್ರ ಪರ್ವತದಿಂದ ಹಾದು ಹೋಗಿ ಶನಿ ಪರ್ವತದತ್ತ ಹೋಗುತ್ತದೆ . ಈ ಪರಿಸ್ಥಿತಿಯಲ್ಲಿ ತ್ರಿಕೋನ ಉಂಟಾದರೆ , ಇದು ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಕೊರತೆಯಾಗಲು ಬಿಡುವುದಿಲ್ಲ . ಆದರೆ ಉಳಿತಾಯ ಮಾಡಲು ಮನಸ್ಸಿನ ಇಚ್ಛೆಗಳನ್ನು ಪೂರ್ತಿಗೊಳಿಸಲು , ತುಂಬಾ ಸಮಯ ಹಿಡಿಯಬಹುದು . ಈ ಗುರುತು ನೌಕರಿ ಮಾಡುವವರಿಗೆ ಹೆಚ್ಚಿನ ಲಾಭವನ್ನು ಕೊಡುತ್ತದೆ .

ಪ್ರಯಾಣಗಳು ನಿಮ್ಮ ಜೀವನದಲ್ಲಿ ಹೆಚ್ಚಾಗಿ ಇರುತ್ತವೆ . ಮತ್ತು ವಿದೇಶಕ್ಕೆ ಹೋಗುವ ಅವಕಾಶಗಳು ದೊರೆಯುತ್ತವೆ . ಯಾರ ಭಾಗ್ಯವು ಚಂದ್ರ ಪರ್ವತದ ರೇಖೆಯಿಂದ ಮೇಲೆ ಹಾದು ಹೋಗಿರುತ್ತದೆಯೋ , ವಿದೇಶದಲ್ಲಿ ಇದ್ದು ಗಳಿಸುವ ಅವಕಾಶ ಮತ್ತು ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯುತ್ತದೆ . ಈ ತ್ರಿಕೋನ ರೇಖೆ ಪೂರ್ಣವಾಗಿರಬೇಕು . ತ್ರಿಕೋನ ರೇಖೆ ಮೇಲೆ ಹಲವಾರು ರೇಖೆಗಳು ಬಂದರೆ , ಇವರ ಜೀವನದಲ್ಲಿ ಸಮಸ್ಯೆಗಳು ಬರುತ್ತಿರುತ್ತವೆ . ಹಾಗಾಗಿ ಗುರುತುಗಳು ಪರಿಪೂರ್ಣವಾಗಿ ಇರುವುದು ಒಳ್ಳೆಯದು .

ಐದನೇ ಸಂಕೇತದ ಬಗ್ಗೆ ತಿಳಿಯೋಣ . ಶುಕ್ರ ಪರ್ವತವನ್ನು ನೋಡಬೇಕು . ನಿಮ್ಮ ಜೀವನದ ರೇಖೆ ಎಷ್ಟು ದೊಡ್ಡದಾಗಿ ಇರುತ್ತದೆಯೋ ಅಷ್ಟು ಲಾಭಗಳು ಇರುತ್ತದೆ . ಅಡ್ಡವಾಗಿ ಇರುವ ರೇಖೆಗಳು ನೋಡಲು ಸಿಗುತ್ತದೆ . ಇನ್ನು ಕೆಲವರಲ್ಲಿ ಕೆಳ ಭಾಗದತ್ತ ಇರುವ ರೇಖೆಗಳು ನೋಡಲು ಸಿಗುತ್ತದೆ . ನಿಂತಿರುವಂತಹ ರೇಖೆಗಳು ಹೆಚ್ಚಾಗಿದ್ದರೆ , ಇಂತಹ ಜನರಲ್ಲಿ 30ನೇ ವಯಸ್ಸಿನ ನಂತರ ಇವರ ಆರ್ಥಿಕ ವ್ಯವಸ್ಥೆ ತುಂಬ ಬಲಾಢ್ಯವಾಗುವುದು ಕಂಡುಬರುತ್ತದೆ .

ವೃತ್ತಿ ಜೀವನದ ಪ್ರಾರಂಭದಲ್ಲಿ ಏರುಪೇರುಗಳು ಕಂಡುಬರುತ್ತವೆ . ಆದರೆ ಇವರ 30ನೇ ವಯಸ್ಸಿನ ನಂತರ ಇವರ ಆರ್ಥಿಕ ಪರಿಸ್ಥಿತಿ ತುಂಬಾ ದೊಡ್ಡದಾಗಿರುತ್ತದೆ . ಹಣ ಬರುತ್ತದೆ, ಉಳಿತಾಯ ಮಾಡಬಹುದು, ಹಾಗೆಯೇ ಖರ್ಚು ಕೂಡ ಮಾಡಬಹುದು . ಅಷ್ಟೇ ಅಲ್ಲದೆ ಇವರ ಸಂಬಂಧ ಸದೃಢವಾಗಿ ಇರುತ್ತದೆ . ಶುಕ್ರ ಪರ್ವತದ ಮೇಲೆ ಅಡ್ಡವಾಗಿರುವ ರೇಖೆಗಳು ಹೆಚ್ಚಾಗಿದ್ದರೆ , ಆರ್ಥಿಕ ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ . ಹಣ ಬಂದರೂ ಅದು ಉಳಿಯುವುದಿಲ್ಲ ಬೇಗ ಖರ್ಚು ಮಾಡಬಹುದು . ಕುಟುಂಬದಲ್ಲಿ ಜಗಳಗಳು ಇರುತ್ತವೆ . ಶುಕ್ರ ಪರ್ವತದ ಮೇಲೆ ಈ ರೀತಿ ಅಡ್ಡ ರೇಖೆಗಳು ಬರುವುದರಿಂದ ಕೆಲವೊಂದು ಆರ್ಥಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ .

Leave a Comment