ಆಷಾಡ ಮಾಸದಲ್ಲಿ ಈ ರೀತಿ ಲಕ್ಷ್ಮೀ ಪೂಜೆ ಮಾಡಿ ಕೋಟ್ಯಧೀಶ್ವರರಾಗ್ತೀರ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಶಾಡ ಮಾಸದಲ್ಲಿ ಯಾವ ರೀತಿಯಾಗಿ ಲಕ್ಷ್ಮಿ ದೇವಿಗೆ ಪೂಜೆಯನ್ನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ. ಆಶಾಡ ಮಾಸದ ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಈ ರೀತಿಯಾಗಿ ಮಾಡಿ ಕೋಟ್ಯಾಧೀಶರಾಗುವುದಂತೂ ಗ್ಯಾರಂಟಿ ಅದು ಹೇಗೆ ಎಂಬ ರಹಸೆ ಮಾಹಿತಿಯನ್ನು ಈ ಒಂದು ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ, ಅದಕ್ಕಿಂತ ಮೊದಲು ನಮ್ಮ ಒಂದು ಪೇಜ್ ಗೆ ಲೈಕ್ ಕೊಡಿ, ಆಷಾಢ ಮಾಸ ಆರಂಭವಾಗಿದೆ ಈ ಮಾಸದಲ್ಲಿ ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿ ಪೂಜೆಯನ್ನು ಮಾಡುತ್ತಿದ್ದೀರಾ? ನೀವು ಅನ್ಕೋಬಹುದು ಆಷಾಢ ಪೂಜೆಯಲ್ಲಿ ಮಹಾಲಕ್ಷ್ಮಿ ಪೂಜೆಯನ್ನು ಯಾರು ಮಾಡುತ್ತಾರೆ?

ಅಂತ ಕೇಳುವುದಾದರೆ ಆಷಾಡ ಮಾಸದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಿ ಅದು ಸಾಧ್ಯವಾಗದೇ ಇದ್ದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳ ಹತ್ತಿರ ಲಕ್ಷ್ಮಿ ಪೂಜೆಯನ್ನು ಮಾಡಿಸಿ ಈ ಮಾಸದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುತ್ತಿದ್ದೆ ಆದಲ್ಲಿ ಲಕ್ಷ್ಮಿ ನಿಮಗೆ ಏನೇನು ಕೊಡುತ್ತಾಳೆ ಎಂಬುದು ನಿಮ್ಮ ಊಹೆಗೂ ಮೀರಿದ್ದು ಆಗಿರುತ್ತದೆ, ಅದರಲ್ಲೂ ಈ ಬಾರಿಯ ಆಷಾಡ ಬ್ರಹ್ಮ ಯೋಗದಲ್ಲಿ ಶುರುವಾಗಿದೆ ಆದ್ದರಿಂದ ಈ ಮಾಸದಲ್ಲಿ ನೀವು ಏನೇ ವ್ರತ, ಸಂಕಲ್ಪ ಮಾಡಿದ್ದೆ ಆದಲ್ಲಿ ನೀವು ಅಂದುಕೊಂಡಿದ್ದಲ್ಲ ದೇವರ ಖಚಿತ. ಈ ಆಷಾಡ ಮಾಸದಲ್ಲಿ ನಾಲ್ಕು ಶುಕ್ರವಾರ ಮಹಾಲಕ್ಷ್ಮಿ ಪೂಜೆಯನ್ನು ಮಾಡಿದರೆ ನಿಮಗೆ ಧನ,ಸುಖ, ಸಮೃದ್ಧಿ,ಸಂತಾನ ಮತ್ತು ಜಯ ಇವೆಲ್ಲವೂ ಕೂಡ ಪ್ರಾಪ್ತಿಯಾಗುತ್ತದೆ.

ಈ ಲಕ್ಷ್ಮಿ ಪೂಜೆಗೆ ಕೆಲವು ವಿಧಿ ವಿಧಾನಗಳಿವೆ ಅದನ್ನ ಇವಾಗ ವಿವರವಾಗಿ ತಿಳಿಸಿ ಕೊಡುತ್ತೇವೆ
ಆಶಾಡ ಮಾಸ ಬಂತು ಅಂದರೆ ಸಾಕು ಅದೇ ಮಾಸದಲ್ಲಿ ಮಳೆರಾಯ ಕೂಡ ದರ್ಶನವನ್ನು ಕೊಡುತ್ತಾನೆ ಸುಡುವ ಬಿಸಿಲಿಗೆ ತಂಪನ್ನು ನೀಡುತ್ತಾನೆ ಈ ವರುಣ. ಈ ಒಂದು ಮಾಸದಲ್ಲಿ ಮದುವೆ ಮುಂಜಿ ಅಂತ ಎಲ್ಲಾರು ಒಟ್ಟಾಗಿ ಸೇರುವಂತ ಕಾರ್ಯಕ್ರಮವನ್ನು ಮಾಡಬಾರದು ನಿಜ ಆದರೆ ನೀವು ಮನೆಯಲ್ಲೇ ಕುಟುಂಬದವರ ಜೊತೆ ಪೂಜೆ ವ್ರತಗಳನ್ನ ಮಾಡಬಹುದು ಅದರಲ್ಲೂ ಈ ಮಾಸದಲ್ಲಿ ಲಕ್ಷ್ಮಿ ದೇವಿಗೆ ವಿಶೇಷ ಮತ್ತು ಸರಳ ಪೂಜೆಯನ್ನು ಮಾಡಿ ನೋಡಿ, ಅದು ನಿಮಗೆ ಎಷ್ಟು ಶ್ರೇಯಸ್ ಆಗಿದೆ ಎಂಬುದು ಸರಿಯಾದ ಕಾಲ ಬಂದಾಗ ನಿಮಗೆ ತಿಳಿಯುತ್ತದೆ. ಆಷಾಢ ಮಾರ್ಗದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ದರಿದ್ರತನ,

ಸಾಲಬಾದೆ ಹಾಗೂ ಇತರೆ ತೊಂದರೆಗಳು ನಿವಾರಣೆ ಆಗುತ್ತವೆ ಅಂತ ಪುರಾಣಗಳಲ್ಲಿ ಉಲ್ಲೇಖವಾಗಿವೆ ಅದರಲ್ಲೂ ಸೋಮವಾರ ಮತ್ತು ಶುಕ್ರವಾರಗಳು ಈ ಪೂಜೆಯನ್ನು ಮಾಡುವುದಕ್ಕೆ ಪ್ರಶಸ್ತ. ಈ ಮಾಸದ ಶುಕ್ರವಾರವನ್ನು ಆದಿ ಮಾಸ ಎಂದು ಕರೆಯಲಾಗುತ್ತದೆ ಈ ಸಂದರ್ಭದಲ್ಲಿ ಲಕ್ಷ್ಮಿಯ ಆರಾಧನೆಯನ್ನು ಮಾಡಿದಾಗ ನಮಗೆ ಅಂಟಿಕೊಂಡಿರುವ ತೊಂದರೆ ತಾಪತ್ರೆಗಳು ದೂರವಾಗುತ್ತವೆ, ಅಷ್ಟೇ ಅಲ್ಲ ಎಲ್ಲಾ ದೇವಸ್ಥಾನದ ಹೆಬ್ಬಾಗಿಲು ಅಥವಾ ಬಾಗಿಲಲ್ಲಿ ಗಜಲಕ್ಷ್ಮಿಯನ್ನು ಪ್ರತಿಷ್ಠಾಪಿಸಲಾಗಿರುತ್ತದೆ.

ಇನ್ನು ಕೆಲವರು ಯಾವುದು ಯಾವುದು ಕಷ್ಟಗಳಿಗೆ ಸಿಲುಕಿರುತ್ತಾರೆ ಅಂತವರು ಇದೆಲ್ಲದಕ್ಕೆ ಆಷಾಢ ಶುಕ್ರವಾರದ ಪೂಜೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಕೇವಲ ಸಾಲದ ಸಮಸ್ಯೆ ಮಾತ್ರ ಅಲ್ಲ ಸಂತಾನ ಭಾಗ್ಯ ಇವೆಲ್ಲವನ್ನೂ ದೇವಿ ನಿಮಗೆ ವರದಾನ ರೂಪವಾಗಿ ಕೊಡುತ್ತಾಳೆ. ಹಾಗಾದರೆ ಈ ಮಾಸದ ನಾಲ್ಕು ಶುಕ್ರವಾರವನ್ನು ಹೇಗೆ ಹೇಗೆ ಪೂಜೆ ಮಾಡಬೇಕು ಅನ್ನೋದನ್ನು ಗಮನವಿಟ್ಟು ಕೇಳಿಕೊಳ್ಳಿರಿ.”ಯಾವ ಜೀವ ದೀರ್ಘ ಸೌಮಂಗಲ್ಯ ಪ್ರಾಪ್ತಿ ರಥಂ ಸಂಕಲ್ಪ “ಅಂದರೆ ನೀವು ಬದುಕಿರುವವರೆಗೂ ನಿಮ್ಮ ಗಂಡನಿಗೆ ಆರೋಗ್ಯ ಹಾಗೂ ಆಯುಷ್ಯ ಪ್ರಾಪ್ತಿಯಾಗಲಿ ಅನ್ನುವ ಸಂಕಲ್ಪದೊಂದಿಗೆ ಮೊದಲ ಶುಕ್ರವಾರದಂದು ಲಕ್ಷ್ಮಿ ಪೂಜೆಯನ್ನ ಮಾಡಬೇಕು ಹಾಗೆಯೇ ಎರಡನೇ ಶುಕ್ರವಾರದ ಪೂಜೆಯ ಮಹತ್ವ

“ಕನಕದೃಷ್ಟಿಂ ಸದ್ದಿಂ ಸ್ವೀಕುರು ” ಅಂದರೆ ನಿಮ್ಮ ಜೀವನದಲ್ಲಿ ಸದಾ ಬಂಗಾರದ ಮಳೆಯಾಗಲಿ ಅಂತ, ಹಾಗಂತ ಬಂಗಾರವೇ ಸುರಿದು ಬಿಡಬೇಕು ಅಂತ ಅಲ್ಲ ಬದಲಾಗಿ ಧಾನ್ಯ, ಸಂತಾನ, ಜಯ ಇವೆಲ್ಲ ಸುಖ ರೂಪದಲ್ಲಿ ಸಿಗಲಿ ಎಂದು ಬೇಡಿಕೊಳ್ಳುವುದು, ಇದರ ಜೊತೆ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸದಾ ನೆಮ್ಮದಿ ಆವರಿಸಿಕೊಂಡಿರುತ್ತದೆ ಇನ್ನು ಪ್ರತಿ ಶುಕ್ರವಾರ ಮನೆಯಲ್ಲಿ ಶುಭಕಾರ್ಯಗಳು ನಡೀತಾ ಇರಲಿ ಎನ್ನುವ ಕಾರಣಕ್ಕೆ ನಾಲ್ಕನೇ ಶುಕ್ರವಾರವನ್ನು ಪೂಜೆ ಮಾಡಬೇಕು. ಈ ಪೂಜೆಯನ್ನು ಮಾಡಿ ನೋಡಿ ಆಗ ಲಕ್ಷ್ಮಿ ವರವನ್ನು ನೀಡಿ ನೀವು ಅಂದುಕೊಂಡಿದ್ದೆಲ್ಲ ಆಗುತ್ತದೆ ಈ ನಾಲ್ಕು ಶುಕ್ರವಾರವು ಲಕ್ಷ್ಮಿ ದೇವಿಗೆ ಪ್ರಿಯವಾದ ಪದಾರ್ಥವನ್ನು ನೈವೇದ್ಯ ರೂಪದಲ್ಲಿ ಇಡಬೇಕು ಆದ್ದರಿಂದ ಗುರುವಾರ ರಾತ್ರಿಯ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಹಾಗೆ ಅಡಿಗೆ ಮನೆ ಹಾಗೂ ಗ್ಯಾಸ್ ಸ್ಟವ್ ಕೂಡ ಮರೆಯದೆ ಸ್ವಚ್ಛವಾಗಿರಿಸಿಕೊಳ್ಳಿ.

ಹಾಗೂ ಆಷಾಢ ಶುಕ್ರವಾರದ ದಿನ ನೀವು ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ ಶುಭ್ರವಾಗಿ ಶ್ವೇತ ವಸ್ತ್ರವನ್ನು ಧರಿಸಿ ಬ್ರಾಹ್ಮಿ ಲಗ್ನದಲ್ಲಿ ಅಂದರೆ ಬೆಳಗ್ಗೆ 4: 30ರಿಂದ 5: 20ರವರೆಗೆ ಮನೆಯಲ್ಲಿ ಉತ್ತರಭಿಮುಖವಾಗಿ ಅಥವಾ ಪೂರ್ವ ಅಭಿಮುಖವಾಗಿ ಕಳಸ ಸ್ಥಾಪನೆಯನ್ನು ಮಾಡಬೇಕು.. ಸ್ಥಾಪನೆಯನ್ನು ಮಾಡಿ “ಪದ್ಮ ಪ್ರಿಯೆ ಪದ್ಮಿನಿ ಪದ್ಮಹಸ್ತೆ ಪದ್ಮಾಲಯ ಪದ್ಮದಲಾಯತಾಕ್ಷೆ ವಿಶ್ವ ಪ್ರಿಯೆ ವಿಶ್ವಮನೋನುಕೂಲೆ ತದ್ವಾದ ಪದ್ಮಂ ವಹಿ “ಎಂದು ಹೇಳಬೇಕು ಈ ಮೂಲಕ ಪದ್ಮಾಸನವನ್ನು ಹಾಕಿ ಕುಳಿತಿರುವಂತಹ ಮಹಾಲಕ್ಷ್ಮಿಯನ್ನು ಆಹ್ವಾನಿಸಬೇಕು ಈ ಮಂತ್ರವನ್ನು ಹಾಗೂ ಇದನ್ನು ಪಠಿಸುವಾಗ ನೀವು ಕುಳಿತುಕೊಳ್ಳುವ ಅಂತಹ ಭಂಗಿಯನ್ನು ಮರೆಯಬೇಡಿ ಮಂತ್ರ ಪಠಿಸಿದ ನಂತರ ಅಷ್ಟದಳವನ್ನಿಟ್ಟು ಅದರ ಮೇಲೆ ಶ್ರೀ ಚಕ್ರವನ್ನು ಇಟ್ಟು ಕಳಸ ಸ್ಥಾಪನೆಯನ್ನು ಮಾಡಿ.

ವ್ಯವಸ್ಥಿತವಾಗಿ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಿ ಇದನ್ನು ಮಾಡಬೇಕಾದರೆ ಪೂಜೆ, ವ್ರತ,ಹೋಮ, ಹವನಗಳನ್ನು ಮಾಡುವ ಸಮಯದಲ್ಲಿ ವೇದಗಳನ್ನು ಹೇಳುವಂತೆ ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ಕೂಡ ಹೇಳಬೇಕು, ಪದನ್ಯಾಸ ಕರನ್ಯಾಸ ಪ್ರಾಣ ಪ್ರತಿಷ್ಠಾಪನೆಗಳನ್ನ ವ್ಯವಸ್ಥಿತವಾಗಿ ಭಕ್ತಿಯಿಂದ ಪ್ರಾರ್ಥನೆ ಮಾಡಿ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಬೇಕು. ಲಕ್ಷ್ಮಿ ಅಷ್ಟೋತ್ತರವನ್ನು ಕೂಡ ಪಠಿಸಿ ಈ ಮಂತ್ರವನ್ನು ಪಠಿಸುವಾಗ ಒಂದು ಬಗೆ ಹೂವನ್ನು ದೇವಿಗೆ ಅರ್ಪಿಸಿ ಅದು ಕೆಂಪು ಹೂವಾಗಿದ್ದರೆ ತುಂಬಾ ಉತ್ತಮ. ಸ್ನೇಹಿತರೆ ನಿಮಗೆ ಏನಾದರೂ ಲಕ್ಷ್ಮಿ ಅಷ್ಟೋತ್ತರ ಗೊತ್ತಿಲ್ಲದೆ ಹೋದಲ್ಲಿ ಅದಕ್ಕೂ ಒಂದು ಸರಳ ಉಪಾಯವಿದೆ,

ನೀವು ನಿಮ್ಮ ಮೊಬೈಲ್ ನಲ್ಲಿ ಲಕ್ಷ್ಮಿ ಅಷ್ಟೋತ್ತರ ಎಂದು ಸರ್ಚ್ ಮಾಡಿದರೆ ಸಾಕು ಅದು ಸಿಗುತ್ತದೆ ಇದೆಲ್ಲ ಮಾಡಿದ ನಂತರ ಲಕ್ಷ್ಮಿಗೆ ನೈವೇದ್ಯವನ್ನು ತಪ್ಪದೇ ನೀಡಬೇಕು ಆ ನೈವೇದ್ಯ ಯಾವುದೆಂದರೆ, ಸಿಹಿ ಪೊಂಗಲ್ -ಅಕ್ಕಿ, ಬೆಲ್ಲ , ಹೆಸರುಬೇಳೆ ಹಾಗೂ ಏಲಕ್ಕಿ ಹಾಕಿ ತಯಾರಿಸುವಂತಹ ಅಡುಗೆ ಇದರ ಜೊತೆಗೆ ಹೆಸರುಬೇಳೆ ಕೋಸಂಬರಿ ಹಾಗೂ ಸಜ್ಜಿಗೆಯನ್ನು ಮಾಡಿ ನೈವೇದ್ಯಕ್ಕೆ ಮಾಡಬೇಕು ಇಷ್ಟೆಲ್ಲ ಮಾಡಿದ ನಂತರ ಸಂಜೆ ಹಿರಿಯ ಮುತ್ತೈದೆಯರನ್ನ ಮನೆಗೆ ಕರೆದು ಅರಿಶಿನ ಕುಂಕುಮವನ್ನು ಕೊಟ್ಟು ಆಶೀರ್ವಾದವನ್ನು ಪಡೆಯಬೇಕು. ಮೊದಲನೇ ವಾರದಲ್ಲಿ ಯಾರಿಂದ ಆಶೀರ್ವಾದ ಪಡೆದಿರುತ್ತಿರೋ ಅವರನ್ನು ಹೊರತುಪಡಿಸಿ ಇನ್ನೊಬ್ಬರಿಂದ ಆಶೀರ್ವಾದವನ್ನು ಪಡೆದುಕೊಂಡರೆ ಉತ್ತಮ.

ಇನ್ನು ಮೂರನೇ ಶುಕ್ರವಾರ ಮೊಸರನ್ನ ಜೊತೆಗೆ ಹೆಸರುಬೇಳೆ ಪಾಯಸವನ್ನು ದೇವರಿಗೆ ನೈವೇದ್ಯವನ್ನು ಕೊಟ್ಟು ಮತ್ತು ಮುತ್ತೈದೆಯರಿಗೆ ಅರಿಶಿನ ಕುಂಕುಮವನ್ನು ಕೊಟ್ಟು ಆಶೀರ್ವಾದವನ್ನು ಪಡೆಯಬೇಕು.
ಹಾಗೇನೆ ಕೊನೆಯ ಶುಕ್ರವಾರ ಅವತ್ತು ನೀವು ಕೊಬ್ಬರಿ ಮಿಠಾಯಿ ಮತ್ತು ಕಲ್ಲು ಸಕ್ಕರೆ ಹಾಕಿ ಮಾಡಿರುವಂತಹ ಅನ್ನ ನೈವೇದ್ಯಕ್ಕೆ ಹೆಸರುಬೇಳೆ ಪಾಯಸವನ್ನು ಕೂಡ ಇಟ್ಟುಬಿಡಿ. ಇವಿಷ್ಟು ಮಾಡುವುದರಿಂದ ಲಕ್ಷ್ಮಿ ನಿಮ್ಮ ಮೇಲೆ ಕೃಪಾಕಟಾಕ್ಷವನ್ನು ನೀಡುವುದು ಗ್ಯಾರಂಟಿ ಈ ಪೂಜೆಯ ಜೊತೆಗೆ ಇನ್ನೊಂದು ನೀವು ಮಾಡಬೇಕಾದಂತ ಮುಖ್ಯವಾದ ಕಾರ್ಯ ಏನೆಂದರೆ ಆಷಾಢದ ಚಕ್ರವಾರದಂದು ಮನೆಯ ಮುಖ್ಯದ್ವಾರದ ಮುಂದೆ ಸೂರ್ಯ ಮುಳುಗುವ ಕೆಲವೇ ಕೆಲವು ನಿಮಿಷಗಳ ಮುಂಚೆ ಎರಡು ದೀಪಗಳನ್ನು ಹಚ್ಚಿರಿ ಮತ್ತು ಅಲ್ಲಿ ಕೂತು ಕನಕಧಾರ ಸ್ತೋತ್ರವನ್ನು ಹೇಳಿರಿ ಆಗ ಮಗದಷ್ಟು ಫಲ ಸಿಗುವುದು ಖಚಿತ.ಸ್ನೇಹಿತರೆ ಒಂದು ಮಾಹಿತಿ ಇಷ್ಟ ಆದಲ್ಲಿ ದಯವಿಟ್ಟು ಲೈಕ್ ಮಾಡಿ,ಶೇರ್ ಮಾಡಿ ಕಮೆಂಟ್ ಮಾಡಿರಿ ಧನ್ಯವಾದಗಳು.

Leave a Comment