ದೇವರ ಕೋಣೆಯಲ್ಲಿ ಒಂದು ಚೊಂಬಿನಲ್ಲಿ

ನಾವು ಈ ಲೇಖನದಲ್ಲಿ ದೇವರ ಕೋಣೆಯಲ್ಲಿ ಒಂದು ಚೊಂಬಿನಲ್ಲಿ ಅಥವಾ ಪಂಚ ಪಾತ್ರೆಯಲ್ಲಿ ನೀರು ಇಡಲೇ ಬೇಕು . ಏಕೆ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ನೋಡೊಣ.
1 .ದೇವರ ಕೋಣೆಯಲ್ಲಿ ತಾಮ್ರದ ಚೊಂಬಿ ನಲ್ಲಿ ನೀರು ಇಡುವುದರಿಂದ ದೈವಿಕ ಶಕ್ತಿ ಹೆಚ್ಚಾಗುತ್ತದೆ .

2 .ದೈನಂದಿನ ಪೂಜೆಯ ನಂತರ ನಾವು ದೇವತೆಗಳಿಗೆ ಹಣ್ಣುಗಳು , ಸಿಹಿ ತಿಂಡಿಗಳು ಮತ್ತು ಪಂಚಾಮೃತ ದಂತಹ ಪ್ರಸಾದ ಅಥವಾ ನೈವೇದ್ಯವನ್ನು ಅರ್ಪಿಸುತ್ತೇವೆ .ನೈವೇದ್ಯವನ್ನು ಅರ್ಪಿಸಿದ ನಂತರ ನೀರನ್ನು ಸಹ ದೇವರಿಗೆ ಅರ್ಪಿಸಬೇಕು .ಈ ರೀತಿ ಮಾಡಿದರೆ ಮಾತ್ರ ನೈವೇದ್ಯ ಫಲ ದೊರೆಯುವುದು .

3 . ಪೂಜಾ ಕೋಣೆಯಲ್ಲಿ ಇಡುವ ನೀರು ಮನೆಯಲ್ಲಿ ಎಲ್ಲಾ ನಕಾರಾತ್ಮಕ ಶಕ್ತಿಯನ್ನು
ಹೀರಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ . 4 . ಪೂಜೆಯ ಸ್ಥಳದಲ್ಲಿ ನೀರನ್ನು ಇಡುವುದರಿಂದ ವ್ಯಕ್ತಿಯ ಇಷ್ಟಾರ್ಥಗಳು ಸಹ ಈಡೇರುತ್ತದೆ . ಮತ್ತು ಮನೆಯಲ್ಲಿ ಸದಾ ಸಂತೋಷ ಹೊಂದಿರುತ್ತದೆ ಎಂದು ಹಿರಿಯರು ಪಾಲಿಸುತ್ತಾರೆ .

5 . ಪೂಜೆಯ ಮನೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ಇರಿಸಲಾದ ನೀರಿನಲ್ಲಿ ತುಳಸಿಯ ಕೆಲವು ಎಲೆಗಳನ್ನು ಹಾಕಿ ಇಡಲಾಗುತ್ತದೆ , ಇದರಿಂದ ನೀರು ಶುದ್ಧ ಮತ್ತು ಪವಿತ್ರ.ವಾಗುತ್ತದೆ . ಮತ್ತು ಅಚಮನ
ಯೋಗವೂ ರೂಪುಗೊಳ್ಳುತ್ತದೆ . ಮತ್ತು ಇದರಿಂದ ನಾವು ಪೂಜಾ ಸ್ಥಳವನ್ನು ಶುದ್ದೀಕರಿಸಿದಾಗ ನೀವು ಮತ್ತು ದೇವರು ಪ್ರಸನ್ನ ನಾಗುತ್ತಾರೆ .

6 . ದೇವರ ಪೂಜೆಯಲ್ಲಿ ಹೂವು , ಪತ್ರೆ , ಪೂಜಾ ಸಾಮಗ್ರಿ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯ ನೀರು . ಏಕೆಂದರೆ ತುಳಸಿ ಹಾಕಿದ ನೀರು ಅಥವಾ ನೀರಿನಲ್ಲಿ ಓಂ ಎಂದು ಬರೆದು ದೇವರ ಕೋಣೆಗೆ ಪೂಜಾ ಸಾಮಗ್ರಿಗಳು ಪತ್ರೆಗಳಿಗೆ ಸಿಂಪಡಿಸಿ ಶುದ್ಧೀಕರಿಸಿದ ನಂತರವೇ ಪೂಜೆ ಪ್ರಾರಂಭಿಸಲು ಸಾಧ್ಯ .

7 . ಜಗತ್ತನ್ನು ರಕ್ಷಿಸುವ ಮತ್ತು ಮನೆಗೆ ಸಮೃದ್ಧಿಯನ್ನು ತರುವ ಮರಣ ಭಗವಂತನು ಪೂಜೆಯನ್ನು ಮೆಚ್ಚುತ್ತಾನೆ ಎಂದು ನಂಬಲಾಗಿದೆ. 8 . ವಾಸ್ತು ಪ್ರಕಾರ ಪೂಜಾ ಸ್ಥಳದಲ್ಲಿ ನೀರಿನ ಮಡಿಕೆಯನ್ನು ಇಡುವುದರಿಂದ ಸಮೃದ್ಧಿಯನ್ನು ಖಾತ್ರಿ ಗೊಳಿಸುತ್ತದೆ .ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ .

9 .ಪೂಜಾ ಕೊನೆಯಲ್ಲಿ ನೀರು ಇಡುವಾಗ ವಾಸ್ತು ತತ್ವಗಳನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗುತ್ತದೆ ,ಮನೆಯ ಉತ್ತರ ಅಥವಾ ಈಶಾನ್ಯ ಮೂಲೆಯಲ್ಲಿ ನೀರಿನ ಪಾತ್ರೆಯನ್ನು ಇರಿಸಿ ನೀರನ್ನು ಸಂಗ್ರಹಿಸಲು ತಾಮ್ರ ಅಥವಾ ಲೋಹದ ಪಾತ್ರೆಯನ್ನು ಆರಿಸಿ, ತಾವ್ರುವು ಉತ್ತಮ ಆರೋಗ್ಯವಾಗಿದೆ. ಏಕೆಂದರೆ ಇದು ನಕಾರಾತ್ಮಕತೆ ಅನ್ನು ಹೋಗಲಾಡಿಸಲು ಬಹು ಮುಖ್ಯ ಎಂದು ಪರಿಗಣಿಸಲಾಗಿದೆ.

ಇದು ಆರೋಗ್ಯ ಪ್ರಯೋಜನವನ್ನು ಹೊಂದಿದೆ . ಈ ನೀರನ್ನು ನಿಯಮಿತವಾಗಿ ಬದಲಿಸುತ್ತಾ ಇರಿ ಮತ್ತು ಮನೆಯ ಮೂಲೆ ಮೂಲೆಗಳಲ್ಲಿ ಚಿಮುಕಿಸಿ ಮನೆಯಲ್ಲಿ ನೀರು ಚಿಮುಕಿಸುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಒಟ್ಟಾರೆಯಾಗಿ ನೀವು ದೇವರ ಕೋಣೆಯಲ್ಲಿ ನೀರು ಇಡುವುದು ಬಹಳ ಶ್ರೇಷ್ಠ . ಪ್ರತಿ ದಿನ ಬದಲಾಯಿಸುತ್ತಾ ಇರಿ . ಸಾಧ್ಯವಾಗದಿದ್ದರೆ ಎರಡು ದಿನಕ್ಕೊಮ್ಮೆ ಯಾದರೂ ಬದಲಾಯಿಸುವುದು ಬಹಳ ಒಳ್ಳೆಯದು . ಇದರಿಂದ ನಮ್ಮ ಮನೆಯಲ್ಲಿ ಸದಾ ಮಹಾಲಕ್ಷ್ಮಿಯ ತಾಯಿಯ ಅನುಗ್ರಹ ಇರುತ್ತದೆ.

Leave a Comment