ಅರ್ಜೆಂಟಾಗಿ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ ಚಮತ್ಕಾರ ನೋಡ್ತೀರಾ

ನಾವು ಈ ಲೇಖನದಲ್ಲಿ ಬೇಗ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ. ಇದರ ಚಮತ್ಕಾರ ಹೇಗೆ ಇರುತ್ತದೆ ಎಂದು ತಿಳಿಯೋಣ . ಈಗಿನ ಕಾಲದಲ್ಲಿ ಎಲ್ಲರಿಗೂ ಇರುವ ಪ್ರಧಾನ ಸಮಸ್ಯೆ ಎಂದರೆ ಎಷ್ಟೇ ದುಡಿದರೂ , ಹಣ ಸಂಪಾದನೆ ಮಾಡಿದರು ಕೈಯಲ್ಲಿ ಒಂದು ರೂಪಾಯಿ ಕೂಡ ನಿಲ್ಲುವುದಿಲ್ಲ . ಹಣ ಚೆನ್ನಾಗಿ ಕೈಯಲ್ಲಿ ಓಡಾಡಿದರು ಸಹ, ಕಷ್ಟ ಬಂದಾಗ ಸಾಲ ಮಾಡಬೇಕಾದ ಪರಿಸ್ಥಿತಿ , ಇನ್ನೊಬ್ಬರ ಬಳಿ ಕೈ ಚಾಚುವ ಪರಿಸ್ಥಿತಿ ಉಂಟಾಗುತ್ತದೆ . ನಿಮಗೆ ಬೇಗ ಹಣ ಬೇಕು ಎಂದಾಗ ,

ಹಣ ಹೊಂದಾಣಿಕೆ ಆಗಲಿಲ್ಲ ಅಂದರೆ , ಬೇರೆ ಕೆಲಸಗಳು ತಲೆ ಕೆಳಗಾಗುತ್ತದೆ . ನಿಮ್ಮ ಕಷ್ಟಕ್ಕೆ ಆತುರಕ್ಕೆ ವಿವಿಧ ರೀತಿಯ ಬದ್ಧತೆಗೆ , ಬೇಗ ಹಣ ಬೇಕು ಎಂದರೆ , ಒಂದು ಬಕೆಟ್ ನಲ್ಲಿ ನೀರನ್ನು ತೆಗೆದುಕೊಳ್ಳಿ , ಆ ನೀರಿಗೆ ಸ್ವಲ್ಪ ಹಸುವಿನ ಹಾಲು, ತುಪ್ಪ , ಮೊಸರು ಹಾಗೂ ಸಗಣಿಯನ್ನು ಹಾಕಬೇಕು . ಕೊನೆಯಲ್ಲಿ ಸ್ವಲ್ಪ ಕಲ್ಲುಪ್ಪನ್ನು ಆ ಬಕೆಟ್ ನೀರಿನಲ್ಲಿ ಹಾಕಬೇಕು . ಎಲ್ಲವನ್ನು ಬೆರೆಸಿ ಆ ನೀರನ್ನು ನಿಮ್ಮ ಮನೆಯೊಳಗೆ ಮೂಲೆ ಮೂಲೆಗೂ ಚೆಲ್ಲಬೇಕು. ಹೀಗೆ ಗೋವಿನ ಎಲ್ಲಾ ಅಂಶವನ್ನು ಮನೆಯ ಎಲ್ಲಾ ಮೂಲೆ ಮೂಲೆಗೂ ಪ್ರೋಕ್ಷಣೆ ಮಾಡಿದರೆ , ಮನೆಗೆ ಲಕ್ಷ್ಮೀದೇವಿಯ ಶಕ್ತಿ ಪ್ರವೇಶ ಆಗುತ್ತದೆ .

ಹೀಗೆ ಮನೆಗೆ ಲಕ್ಷ್ಮಿ ಕವಚ ಪ್ರವೇಶ ಮಾಡುವುದರಿಂದ , ನಿಮ್ಮ ಕಷ್ಟ ಕಾಲಕ್ಕೆ ಹಣ ಬೇಕು ಎಂದಾಗ , ಮನೆಯಲ್ಲಿನ ಹಾಗೂ ನಿಮ್ಮಲ್ಲಿನ ಸರ್ವ ದೃಷ್ಟಿ ದೋಷಗಳು ನಕಾರಾತ್ಮಕ ಶಕ್ತಿಗಳು ದೂರವಾಗಿ , ಹಣ ಯಾವುದೋ ಒಂದು ರೂಪದಲ್ಲಿ ಬಂದು ನಿಮ್ಮ ಕೈ ಸೇರುತ್ತದೆ . ಯಾರಿಗಾದರೂ ಹಣ ಕೊಟ್ಟು ವಾಪಸ್ ಬರದೇ ಪರದಾಡುತ್ತಿದ್ದರೆ, ನಿಮಗೆ ಸಿಗಬೇಕಾದ ಹಣ ಸುಲಭವಾಗಿ ವಸೂಲಿಯಾಗಲು ಮಂಗಳವಾರ ಸಂಜೆ ಸಮಯದಲ್ಲಿ ಈ ಒಂದು ಪ್ರತ್ಯೇಕವಾದ ಕೆಲಸವನ್ನು ಮಾಡಬೇಕು .

ಕೇವಲ ಬರಬೇಕಾದ ಹಣ ಕೈ ಸೇರುವುದಲ್ಲದೆ , ನಿತ್ಯ ಜೀವನದಲ್ಲಿ ಹಣದ ವಿಷಯದಲ್ಲಿ ಪಡುವಂತಹ ಕಷ್ಟ ನಷ್ಟ ದೂರವಾಗಿ ಹಣ ಸೇರುವುದರ ಜೊತೆಗೆ, ನಿಮ್ಮ ಕೈಯಲ್ಲಿ ಸ್ಥಿರವಾಗಿರುತ್ತದೆ . ಮಂಗಳವಾರ ಸಂಜೆ ಸಮಯದಲ್ಲಿ ಈ ಒಂದು ಪರಿಹಾರವನ್ನು ನೀವು ಮಾಡಿಕೊಳ್ಳಬಹುದು . ಕಷ್ಟ ಕಾಲಕ್ಕೆ ಆ ಹಣ ಉಪಯೋಗಕ್ಕೆ ಕೂಡ ಬರುತ್ತದೆ . ಹಾಗೆಯೇ ಪ್ರತಿಯೊಂದು ಮನೆಗೂ ಒಂದು ಮನೆ ದೇವರು ಎಂದು ಇದ್ದೇ ಇರುತ್ತದೆ . ಒಬ್ಬೊಬ್ಬರ ಮನೆಗೂ ಪ್ರತ್ಯೇಕವಾದ ದೇವರುಗಳು ಇರುತ್ತದೆ .

ಆ ಮನೆ ದೇವರಿಗೆ ಪ್ರತಿ ಗುರುವಾರದ ದಿನ ಕಡ್ಲೆ ಕಾಳಿನಿಂದ ಮಾಡಿದ ಪದಾರ್ಥವನ್ನು ನೈವೇದ್ಯಕ್ಕೆ ಇಟ್ಟು , ಮನೆಯ ಸದಸ್ಯರು ಪ್ರಸಾದವಾಗಿ ಸ್ವೀಕರಿಸಬೇಕು . ಹೀಗೆ ಮಾಡುವುದರಿಂದ ಅವಶ್ಯಕತೆ ಇದ್ದಾಗ ದುಡ್ಡು ಬೇಕು ಎಂದಾಗ ಮನೆದೇವರ ಅನುಗ್ರಹದಿಂದ ದುಡ್ಡು ಹೊಂದಾಣಿಕೆ ಅನ್ನೋದು ಆಗುತ್ತದೆ . ನಿಮ್ಮಲ್ಲಿರುವ ಸರ್ವ ದೋಷಗಳು ದೂರವಾಗುತ್ತದೆ . ಗುರುವಿನ ಅನುಗ್ರಹ ಕೂಡ ಪ್ರಾಪ್ತಿಯಾಗುತ್ತದೆ . ಹಾಗೆಯೇ ಅತ್ಯಂತ ಅವಸರವಾಗಿ ಹಣ ಬೇಕು ಎಂದರೆ , ಬನ್ನಿ ಮರದ ಬಳಿ ಹೋಗಿ

ಈ ಒಂದು ಚಿಕ್ಕ ಕೆಲಸವನ್ನು ಮಾಡಿ ಬರಬೇಕು . ಬನ್ನಿ ಮರದ ಬಳಿ ಹೋಗುವಾಗ ಒಂದು ಚೊಂಬಿನಲ್ಲಿ ಹಾಲನ್ನು ತೆಗೆದುಕೊಂಡು ಹೋಗಬೇಕು. ಆ ಹಾಲನ್ನು ಬನ್ನಿ ಮರದ ಬುಡಕ್ಕೆ ಅರ್ಪಿಸಿ , ವೃಕ್ಷದ ಸುತ್ತ 5 ಪ್ರದಕ್ಷಿಣೆಯನ್ನು ಮಾಡಿ ನಮಸ್ಕಾರ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ತೊಂದರೆ ಇಲ್ಲದೆ ಯಾವುದೋ ಒಂದು ರೂಪದಲ್ಲಿ ಅವಸರಕ್ಕೆ ಬೇಕಾದ ಹಣ ಹೊಂದಾಣಿಕೆ ಆಗುತ್ತದೆ . ಹಾಗೆಯೇ ಶನಿವಾರದ ದಿನ ಅರಳಿ ಮರದ ಬಳಿ ತೆರಳಿ , ಹಾಲಿಗೆ ಸಕ್ಕರೆ ಹಾಗೂ ಬೆಲ್ಲವನ್ನು ಬೆರೆಸಿ , ಆ ಒಂದು ಹಾಲನ್ನು ಅರಳಿ ಮರದ ಬುಡಕ್ಕೆ ಹಾಕಿ ಅದೇ ಜಾಗದಿಂದ ಸ್ವಲ್ಪ ಹಸಿ ಮಣ್ಣನ್ನು ತೆಗೆದುಕೊಂಡು ಹಣೆಗೆ ತಿಲಕವಾಗಿ ಇಟ್ಟುಕೊಳ್ಳಬೇಕು .

ಹೀಗೆ ಮಾಡುವುದರಿಂದ ನಿಮಗಿರುವ ಕಷ್ಟಗಳು , ಅಡೆತಡೆಗಳು , ದೋಷಗಳು, ದೂರವಾಗಿ ಹಣಕಾಸು ವೃದ್ಧಿಯಾಗುತ್ತದೆ . ಅರಳಿ ಮರಕ್ಕೆ ಹಾಲನ್ನು ಅರ್ಪಿಸಿದ ಮೇಲೆ , ಬೊಟ್ಟು ಇಟ್ಟ ಮೇಲೆ ಎಂಟು ಪ್ರದಕ್ಷಿಣೆ ಹಾಕುವುದನ್ನು ಮಾತ್ರ ಮರೆಯಬಾರದು . ಹಾಗೆಯೇ ಈ ಒಂದು ವಿಶೇಷವಾದ ಮಂತ್ರವನ್ನು ಹಣ ಬೇಕು ಅಂದಾಗ , 108 ಬಾರಿ ಹೇಳಿಕೊಂಡರು ಕೂಡ ಹಣಕಾಸಿನ ಸಮಸ್ಯೆ ಕಳೆದು ಯಾವುದೋ ಒಂದು ರೂಪದಲ್ಲಿ ಒಬ್ಬ ವ್ಯಕ್ತಿಯಿಂದ ಆಗಿರಬಹುದು ,

ಅಥವಾ ನಿಮ್ಮ ಸ್ವಂತ ಪರಿಶ್ರಮದ ಹಣ ನಿಮಗೆ ಸೇರುವುದು ಆಗಿರುತ್ತದೆ .ಈ ಒಂದು ಮಂತ್ರವನ್ನು ಮೊದಲು ಒಂದು ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳಿ .” ಓಂ ನಮೋ ಧನ ದಾಯಿಯೇ ಸ್ವಹಾ: ” ! ಈ ಒಂದು ವಿಶೇಷವಾದ ಮಂತ್ರವನ್ನು ಹಣಕಾಸಿನ ಸಂಕಷ್ಟಗಳು ಬಂದಾಗ , ಹೇಳಿಕೊಳ್ಳಬೇಕು .ಲಕ್ಷ್ಮೀದೇವಿಯ ಮುಂದೆ ಪ್ರತಿನಿತ್ಯ ದೀಪ ಬೆಳಗಿಸುವಾಗ , ತಪ್ಪದೇ ತಾವರೆ ಬತ್ತಿ ಅಥವಾ ಎಕ್ಕದ ಬತ್ತಿಯನ್ನು ಬಳಸಿ , ದೀಪಾರಾಧನೆಯನ್ನು ಮಾಡಿದರು ಸಹ ಲಕ್ಷ್ಮಿಯ ಶಕ್ತಿ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಹಾಗೆಯೇ ಅಷ್ಟ ಮೂಲೀಕ ತೈಲದಿಂದ ಮನೆಯಲ್ಲಿ ಆಗಾಗ ದೀಪಾ ಆರಾಧನೆ ಮಾಡಿದರೂ ಕೂಡ ಮನೆಯಲ್ಲಿ ವಿಶೇಷ ಬದಲಾವಣೆಗಳು ಹಣದ ವಿಷಯದಲ್ಲಿ ಆಗುತ್ತಾ ಹೋಗುತ್ತದೆ . ಮನೆ ಹಾಗೂ ನಿಮ್ಮ ಕೈಯಲ್ಲಿ ಹಣ ಚೆನ್ನಾಗಿ ಓಡಾಡುತ್ತದೆ . ಹಣಕಾಸಿನ ಸಂಕಷ್ಟಗಳು ಬಂದಾಗ ಈ ರೀತಿಯಾದ ಪರಿಹಾರಗಳನ್ನು ಮಾಡಿಕೊಳ್ಳಿ ಎಂದು ಹೇಳಲಾಗಿದೆ .

Leave a Comment