ಮಹಿಳೆಯ ಈ ಅಭ್ಯಾಸವೇ ಮನೆಗೆ ಕಂಠಕ

ಮಹಿಳೆಯ ಈ ಅಭ್ಯಾಸವೇ ಮನೆಗೆ ಕಂಠಕ. ಮಹಿಳೆಯರು ಈ ತಪ್ಪುಗಳನ್ನು ಮಾಡಲೇಬೇಡಿ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ಮಹಿಳೆಯರು ಏನು ಮಾಡಬೇಕು ಗೊತ್ತಾ?
ಮನೆಯ ಮಹಿಳೆಯು ಈ ತಪ್ಪುಗಳನ್ನು ಮಾಡಿದರೆ ಆ ಮನೆಯಲ್ಲಿ ಸಂತೋಷ, ಸಂಮೃದ್ಧಿ ನಾಶವಾಗಿ ಬಡತನ ಹೆಚ್ಚಾಗುವುದು ಖಂಡಿತ. ಓರ್ವ ವ್ಯಕ್ತಿಯ ಸಂತೋಷ ಮತ್ತು ಸಂಮೃದ್ಧಿಯು ಅವನ ಮನೆಯಲ್ಲಿರುವ ಮಹಿಳೆಯರ ಮೇಲೆ ಅವಲಂಬಿಸಿರುತ್ತದೆ.

ಮಹಿಳೆಯರನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮಹಿಳೆ ಬಯಸಿದರೆ ಯಾವ ಮನೆಯನ್ನೂ ಕೂಡ ಸ್ವರ್ಗವನ್ನಾಗಿಸಬಹುದು ಹಾಗೂ ನರಕವನ್ನಾಗಿಸಬಹುದು.
ಧರ್ಮಗ್ರಂಥಗಳ ಪ್ರಕಾರ ಮಹಿಳೆಯರು ಮನೆಯಲ್ಲಿ ಈ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಿಸಿಕೊಳ್ಳುವಳು ಎನ್ನಲಾಗಿದೆ ಹಾಗೂ ಮಹಿಳೆಯು ಈ ತಪ್ಪುಗಳನ್ನು ಮಾಡುವ ಮನೆಯಲ್ಲಿ ಬಡತನ ಹೆಚ್ಚಾಗುವುದು.

ಪೊರಕೆಯನ್ನು ಕಾಲಲ್ಲಿ ಮುಟ್ಟದಿರಿ: ಯಾವುದೇ ಮಹಿಳೆಯು ಪೊರಕೆಯನ್ನು ಕಾಲಲ್ಲಿ ಮುಟ್ಟುವ ಮನೆಯಲ್ಲಿ ಅಥವಾ ಕಾಲಿನಿಂದ ಪೊರಕೆಯನ್ನು ಒದೆಯುವ ಮನೆಯಲ್ಲಿ ಎಂದಿಗೂ ಲಕ್ಷ್ಮಿದೇವಿಯು ವಾಸವಾಗಿರಲಾರಳು.
ಪೊರಕೆಯನ್ನು ಕಾಲಿನಿಂದ ಮುಟ್ಟುವುದರಿಂದ ಲಕ್ಷ್ಮಿದೇವಿಯು ಕೋಪಿಸಿಕೊಳ್ಳುವಳು. ಮಹಿಳೆಯರ ಈ ಅಭ್ಯಾಸದಿಂದ ಲಕ್ಷ್ಮಿ ದೇವಿಯು ಮನೆಯಿಂದ ಹೊರನಡೆಯುವಳು. ಲಕ್ಷ್ಮಿದೇವಿಯು ಪೊರಕೆಯಲ್ಲಿ ವಾಸಿಸುತ್ತಾಳೆ ಎನ್ನುವ ನಂಬಿಕೆಯಿರುವುದರಿಂದ ಯಾವ ಮನೆಯಲ್ಲಿ ಪೊರಕೆಯನ್ನು ಅವಮಾನಿಸಲಾಗುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿದೇವಿಯು ವಾಸವಾಗಿರಲಾರಳು.

ರಾತ್ರಿ ಒಲೆಯ ಮೇಲೆ ಪಾತ್ರೆಗಳನ್ನು ಇಡದಿರಿ: ಸಾಮಾನ್ಯವಾಗಿ ಮಹಿಳೆಯರಿಗೆ ಒಲೆಯ ಮೇಲೆ ಏನಾದರೂ ಪಾತ್ರೆಯಿಟ್ಟು ಮಲಗುವ ಅಭ್ಯಾಸವಿರುತ್ತದೆ ಅಥವಾ ಒಲೆಯನ್ನು ಹೊತ್ತಿಸಿ ಪಾತ್ರೆಯನ್ನಿಡದೇ ಬೆಂಕಿಯನ್ನು ವ್ಯರ್ಥ ಮಾಡುತ್ತಿರುತ್ತಾರೆ. ಅಥವಾ ರಾತ್ರಿ ವೇಳೆ ಒಲೆಯ ಮೇಲೆ ಪಾತ್ರೆಯನ್ನಿಟ್ಟು ಮಲಗುತ್ತಾರೆ. ಈ ಅಭ್ಯಾಸವಿರುವ ಮಹಿಳೆಯರ ಮನೆಗೆ ಎಂದಿಗೂ ಲಕ್ಷ್ಮಿದೇವಿಯು ಬರುವುದಿಲ್ಲ.
ಲಕ್ಷ್ಮಿ ಯಾವ ಮನೆಗೆ ಬರುವುದಿಲ್ಲವೋ ಆ ಮನೆಯಲ್ಲಿ ಬಡತನ ಉಂಟಾಗುತ್ತದೆ. ಆದ್ದರಿಂದ ರಾತ್ರಿ ವೇಳೆ ಒಲೆಯ ಮೇಲೆ ಪಾತ್ರೆಯನ್ನಿಟ್ಟು ಮಲಗದಿರಿ ಅದು ಖಾಲಿ ಪಾತ್ರೆಯಾಗಿರಲಿ ಅಥವಾ ಆಹಾರವಿದ್ದ ಪಾತ್ರೆಯಾಗಿರಲಿ.

ಕಾಲಿನಿಂದ ಹೊಸ್ತಿಲು ತುಳಿಯದಿರಿ: ಲಕ್ಷ್ಮಿದೇವಿಯು ಮನೆಯ ಮುಖ್ಯ ಹೊಸ್ತಿಲಲ್ಲಿ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿದೆ. ಆದ್ದರಿಂದ ಆ ಮನೆಯ ಮಹಿಳೆಯರು ಹೊಸ್ತಿಲನ್ನು ಕಾಲಿನಿಂದ ತುಳಿದರೆ, ಹೊಸ್ತಿಲಿನ ಮೇಲೆ ಕಾಲಿಟ್ಟು ನಿಂತುಕೊಂಡರೆ, ಮುಸ್ಸಂಜೆ ವೇಳೆ ಬಾಗಿಲನ್ನು ಮುಚ್ಚಿದರೆ ಲಕ್ಷ್ಮಿದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಮನೆಯ ಬಾಗಿಲನ್ನು ಮುಸ್ಸಂಜೆ ವೇಳೆ ಮುಚ್ಚಬಾರದು ಮತ್ತು ಮನೆಯ ಹೊಸ್ತಿಲನ್ನು ಮಹಿಳೆಯರು ತುಳಿಯಬಾರದು. ಒಂದು ವೇಳೆ ನಿಮ್ಮ ಮನೆಯ ಮಹಿಳೆಯರು ಈ ತಪ್ಪುಗಳನ್ನು ಮಾಡುತ್ತಿದ್ದರೆ

ತಕ್ಷಣವೇ ನಿಲ್ಲಿಸಲು ಪ್ರಯತ್ನಿಸಿ ನಿಮ್ಮ ಮನೆಯ ಮಹಿಳೆಯರು ಹೊಸ್ತಿಲಿನ ಮೇಲೆ ಕುಳಿತು ಊಟ ಮಾಡುತ್ತಿದ್ದರೆ ಆಕೆಯನ್ನು ಮೊದಲು ಹೊಸ್ತಿಲಿನಿಂದ ಎದ್ದೇಳಿಸಿ ಬೇರೆಡೆ ಕುಳಿತು ಊಟ ಮಾಡಲು ಸಲಹೆ ನೀಡಿ. ಮನೆಯ ಮಹಿಳೆಯು ಹೊಸ್ತಿಲಿನ ಮೇಲೆ ಕುಳಿತು ಆಹಾರವನ್ನು ತಿನ್ನುತ್ತಿದ್ದರೆ, ಊಟ ಮಾಡುತ್ತಿದ್ದರೆ ಅದು ಆ ಮನೆಯ ಸಂಪೂರ್ಣ ಸದಸ್ಯರ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಇದು ಮನೆ ಹಾಳಾಗಲು ಮುಖ್ಯ ಕಾರಣ ಮಹಿಳೆಯರು ಹೊಸ್ತಿಲ ಮೇಲೆ ಕುಳಿತು ಆಹಾರ ಸೇವಿಸುವುದನ್ನು ಅತ್ಯಂತ ಅಸಹ್ಯವೆಂದು ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.

ರಾತ್ರಿ ತೊಳೆಯದ ಪಾತ್ರೆಯನ್ನು ಇಡದಿರಿ: ರಾತ್ರಿ ವೇಳೆ ತಿಂದ ಪಾತ್ರೆಗಳನ್ನು ತೊಳೆಯದೆ ಹಾಗೇ ಇಡಬಾರದು. ರಾತ್ರಿ ಊಟದ ನಂತರ ಎಲ್ಲಾ ಪಾತ್ರೆಗಳನ್ನು ತೊಳೆದು ಶುದ್ಧವಾಗಿಡಬೇಕು. ಒಂದು ವೇಳೆ ರಾತ್ರಿ ಪಾತ್ರೆಗಳನ್ನು ತೊಳೆಯದೇ ಹಾಗೇ ಮಲಗಿದರೆ ಆ ಮನೆಯಲ್ಲಿ ಬಡತನ ಮನೆ ಮಾಡುತ್ತದೆ. ಯಾವುದೇ ಮನೆಯಲ್ಲಾಗಲೀ ಇದನ್ನು ಸಂಭವಿಸಲು ಬಿಡದಿರಿ. ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ಸ್ವಚ್ಛಗೊಳಿಸಿ ನಂತರ ಮಲಗಿ, ಮನೆಯಲ್ಲಿ ಶಾಂತಿಗಾಗಿ, ಸಂಮೃದ್ಧಿಗಾಗಿ ಲಕ್ಷ್ಮಿಯ ಆಶೀರ್ವಾದಕ್ಕಾಗಿ ವಾರಕ್ಕೊಮ್ಮೆ ಸಮುದ್ರದ ಉಪ್ಪಿನಿಂದ ಪಾತ್ರೆಗಳನ್ನು ಅಥವಾ ಕಲ್ಲುಪ್ಪಿನಿಂದ ಪಾತ್ರೆಗಳನ್ನು ತೊಳೆದು ಇಡಬೇಕು. ಇದರಿಂದ ಆರ್ಥಿಕ ಸಂಪತ್ತು ದೊರೆಯುತ್ತದೆ ಮತ್ತು ಮಹಾಲಕ್ಷ್ಮಿಯ ಆಶೀರ್ವಾದ ಸಿಗುವುದು.

ರಾತ್ರಿ ಮನೆಯನ್ನು ಗುಡಿಸದಿರಿ: ಮಹಿಳೆಯರು ಮನೆಯನ್ನು ಮುಂಜಾನೆ ಅಥವಾ ಮಧ್ಯಾಹ್ನ ಗುಡಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದರ ಸೂರ್ಯಾಸ್ತದ ಸಮಯದಲ್ಲಿ ಅಂದರೆ ಸಂಜೆ ಮತ್ತು ರಾತ್ರಿ ಮನೆಯನ್ನು ಗುಡಿಸಬಾರದು. ಸಂಜೆ ಮತ್ತು ರಾತ್ರಿ ಗುಡಿಸುವ ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ. ಆದ್ದರಿಂದ ಮಹಿಳೆಯರು ಮನೆಯನ್ನು ಸಂಜೆ ಮತ್ತು ರಾತ್ರಿ ಗುಡಿಸುವುದನ್ನು ಬಿಡಬೇಕು.

ಮುಂಜಾನೆ ತಡವಾಗಿ ಏಳದಿರಿ: ಮಹಿಳೆಯರೆಂದರೆ ಮುಂಜಾನೆ ಬೇಗ ಎದ್ದು ಶುಚಿಯಾಗಿ, ರಂಗೋಲಿಯನ್ನಿಟ್ಟು ದೇವರ ಪೂಜೆಯನ್ನು ಮಾಡಬೇಕು. ಮಹಿಳೆಯರು ಮುಂಜಾನೆ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಮತ್ತು ಬೇಗ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದು ಅವರ ಆರೋಗ್ಯಕ್ಕೂ ಒಳ್ಳೆಯದು ಮತ್ತು ಮನೆಯ ಸಂಮೃದ್ಧಿಗೂ ಕೂಡ ಒಳ್ಳೆಯದು. ಮನೆಯ ಮಹಿಳೆಯರು ಮುಂಜಾನೆ ತಡವಾಗಿ ಏಳುವುದರಿಂದ ಆಕೆಯ ಗಂಡ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮುಂಜಾನೆ ಅಂಗಳವನ್ನು ಸ್ವಚ್ಛಗೊಳಿಸಿ : ಯಾರ ಮನೆಯಲ್ಲಿ ಮಹಿಳೆಯು ಮುಂಜಾನೆ ಬೇಗ ಎದ್ದು ಶುಚಿಯಾಗಿ ಅಂಗಳವನ್ನು ಸ್ವಚ್ಛಗೊಳಿಸುತ್ತಾಳೋ ಆ ಮನೆಗೆ ಮಾತ್ರ ಲಕ್ಷ್ಮಿ ದೇವಿಯು ಆಗಮಿಸುತ್ತಾಳೆ. ಇಲ್ಲವಾದರೆ ಆಕೆ ಆ ಮನೆಯ ಹೊಸ್ತಿಲ ಬಳಿ ಕೂಡ ನಿಲ್ಲುವುದಿಲ್ಲ. ಮನೆಯ ಮಹಿಳೆಯರು ಮುಂಜಾನೆ ಅಂಗಳವನ್ನು ಸ್ವಚ್ಛವಾಗಿಸಿ, ಲಕ್ಷ್ಮಿ ದೇವಿಯನ್ನು ಆಹ್ವಾನಿಸಲು ಪ್ರತಿದಿನ ರಂಗೋಲಿಯನ್ನು ಹಾಕಬೇಕು. ಇದರಿಂದ ಮಾತ್ರ ಲಕ್ಷ್ಮಿ ದೇವಿಯು ಆ ಮನೆಯನ್ನು ಪ್ರವೇಶಿಸುತ್ತಾಳೆ.

Leave a Comment