ಶುಕ್ರವಾರದ ದಿನ ಈ ಕೆಲಸಗಳನ್ನು ಮಾಡಲೇಬಾರದು

ಶುಕ್ರವಾರದ ದಿನ ಈ ಕೆಲಸಗಳನ್ನು ಮಾಡಲೇಬಾರದು. ಶುಕ್ರವಾರದಂದು ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಶುಕ್ರವಾರದಂದು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

• ನಂಬಿಕೆಗಳ ಪ್ರಕಾರ, ಶುಕ್ರವಾರ ಲಕ್ಷ್ಮಿ ಮನೆಗೆ ಬರುವ ದಿನ. ಹಾಗಾಗಿ, ಈ ದಿನ ಯಾರಿಗೂ ಕೂಡ ಹಣ ನೀಡಬಾರದು ಎಂದು ಹೇಳಲಾಗುತ್ತದೆ.• ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಾರದು. ಇದರಿಂದ ನಷ್ಟವಾಗಬಹುದು ಎಂದು ಹೇಳಲಾಗುತ್ತದೆ.

• ಶುಕ್ರವಾರವು ಶುಕ್ರ ಗ್ರಹಕ್ಕೆ ಸಂಬಂಧಿಸಿದ ದಿನವೂ ಆಗಿರುವುದರಿಂದ ಈ ದಿನ ಸಕ್ಕರೆ, ಅಕ್ಕಿ ಹೀಗೆ ಯಾವುದೇ ಬಿಳಿ ವಸ್ತುಗಳನ್ನು ದಾನ ಮಾಡುವುದನ್ನು ತಪ್ಪಿಸಬೇಕು. • ಶುಕ್ರವಾರದ ದಿನ ಒಣಮೆಣಸಿನಕಾಯಿ, ದನಿಯಾ, ಸೇರಿದಂತೆ ಯಾವುದೇ ರೀತಿಯ ಮಸಾಲೆ ಪದಾರ್ಥಗಳನ್ನು ಖರೀದಿಸುವುದನ್ನು ತಪ್ಪಿಸಿ. • ಶುಕ್ರವಾರದ ದಿನ ಮಾಂಸಾಹಾರ ಸೇವನೆಯನ್ನು ತಪ್ಪಿಸಬೇಕು. ಇಲ್ಲದಿದ್ದರೆ, ಇದು ಮನೆಯಲ್ಲಿ ಮಾನಸಿಕ ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

Leave a Comment