ದೀಪ ಪೂರ್ತಿಯಾಗಿ ಉರಿಯುವುದು ಅಥವಾ ಆರಿ ಹೋಗುವುದು 4 ಸಂಕೇತ ಕೊಡುತ್ತವೆ

ಪ್ರಾಚೀನ ಕಾಲದಿಂದಲೂ ದೀಪಕ್ಕೆ ಸಂಬಂಧಪಟ್ಟಂತೆ ಹಲವಾರು ವಿಶೇಷವಾದ ವಿಶೇಷಗಳು ಚಾಲ್ತಿಯಲ್ಲಿವೆ. ಮತ್ತು ಪುರಾಣಗಳಲ್ಲೂ ಸಹ ದೀಪಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿಸಿದ್ದಾರೆ. ದೀಪಗಳ ಮೂಲಕ ನಮಗೆ ಹಲವಾರು ಪ್ರಕಾರದ ಸಂಕೇತಗಳು ದೊರೆಯುತ್ತವೆ. ಆಕಸ್ಮಿಕವಾಗಿ ದೀಪದ ಬೆಳಕು ಹೆಚ್ಚಾಗಬಹುದು ಅಥವಾ ದೀಪ ಆರಿ ಹೋಗುವುದು, ದೀಪದಲ್ಲಿರುವ ಎಣ್ಣೆಯು ಖಾಲಿಯಾದರೂ ಸಹ ದೀಪವು ಉರಿಯುತ್ತನೇ ಇರುತ್ತದೆ. ಇಂತಹ ಹಲವಾರು ಘಟನೆಗಳ ಮೂಲಕ ಮಹತ್ತ್ವಪೂರ್ಣವಾದ ಸಂಕೇತಗಳು ಸಿಗುತ್ತವೆ. ಜೊತೆಗೆ ದೀಪವನ್ನು ವಿಶೇಷದಿಕ್ಕಿಗೆ ಹಚ್ಚಿದರೆ, ದೀಪ ಒಂದು ವೇಳೆ ಆರಿ ಹೋದರೆ ಅಥವಾ ದೀಪವನ್ನು ಯಾವುದಾದರೂ ದಿಕ್ಕಿನಲ್ಲಿ ಹಚ್ಚಿದಾಗ ಅದು ನಿರಂತರವಾಗಿ ಬೆಳಗುತ್ತಿದ್ದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇಂತಹ ಘಟನೆಗಳ ಮೂಲಕ ನಮಗೆ ಶುಭ ಮತ್ತು ಅಶುಭ ಸಂಕೇತಗಳು ದೊರೆಯುತ್ತದೆ. ಇದರ ಅರ್ಥ ನಿಮ್ಮ ಬಳಿ ಹಣ ಬರಬಹುದು ಅಥವಾ ಹಣ ವ್ಯರ್ಥವಾಗಿ ಖರ್ಚಾಗಬಹುದು. ಶುಭ ಮತ್ತು ಅಶುಭ ಸಮಾಚಾರಗಳು ಕೇಳಬಹುದು, ಆದ್ದರಿಂದ ಈ ಲೇಖನದಲ್ಲಿ ದೀಪಕ್ಕೆ ಸಂಬಂಧಿಸಿದಂತಹ ಮಹತ್ತ್ವಪೂರ್ಣವಾದ ನಿಯಮಗಳು ಮತ್ತು ಅದರಿಂದ ಸಿಗುವ ಶುಭ ಮತ್ತು ಅಶುಭ ಸೂಚನೆಗಳನ್ನು ತಿಳಿಸಲಾಗಿದೆ.
ಹಿಂದೂ ಧರ್ಮದಲ್ಲಿ ದೀಪಕ್ಕೆ ಮಹತ್ತ್ವಪೂರ್ಣವಾದ ಅರ್ಥವನ್ನು ನೀಡಿದ್ದಾರೆ. ದೀಪಗಳನ್ನು ಹೇಗೆ ಹಚ್ಚಬೇಕೆಂಬುದನ್ನು ಕೂಡ ತಿಳಿಸಿಕೊಟ್ಟಿದ್ದಾರೆ. ದೀಪವು ಅಂದಕಾರದಿಂದ ಪ್ರಕಾಶದತ್ತ ಕರೆದುಕೊಂಡು ಹೋಗುತ್ತದೆ.

ಮನೆಯಲ್ಲಿನ ದರಿದ್ರ್ಯತೆಯನ್ನು ನಾಶಮಾಡಿ ಸುಖ ಸಂಮೃದ್ಧಿಯನ್ನು ತಂದುಕೊಡುತ್ತದೆ. ಆದರೆ ದೀಪವನ್ನು ಹಚ್ಚುವಾಗ ಜನರು ಶಾಸ್ತ್ರದಲ್ಲಿ ತಿಳಿಸಿರುವ ಹಲವಾರು ನಿಯಮಗಳನ್ನು ಪಾಲಿಸುವುದಿಲ್ಲ. ಆದ್ದರಿಂದ ದೀಪವನ್ನು ಹಚ್ಚುವುದರಿಂದ ಸಿಗುವ ಲಾಭವೂ ಸಿಗುವುದಿಲ್ಲ. ನೀವು ಸರಿಯಾದ ವಿಧಾನದಿಂದ ದೀಪವನ್ನು ಹಚ್ಚಿದರೆ ಅತ್ಯಂತ ಶುಭ ಫಲಗಳು ಸಿಗುತ್ತವೆ. ದೀಪಗಳು ನಿಮ್ಮ ಜೀವನದಲ್ಲಿರುವ ನಕಾರಾತ್ಮಕತೆಯಿಂದ ದೂರವಿರಿಸುತ್ತದೆ. ಇದು ನಿಮ್ಮನ್ನು ಅಂದಕಾರದಿಂದ ಬೆಳಕಿನತ್ತ ಕರೆದುಕೊಂಡು ಹೋಗುತ್ತದೆ. ಮನೆಯಲ್ಲಿ ಈ ರೀತಿಯಾದ ದೀಪವನ್ನು ಹಚ್ಚಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗುವುದರ ಜೊತೆಗೆ ಮನೆಗೆ ನೆಮ್ಮದಿ ಸಿಗುತ್ತದೆ. ಪ್ರತಿದಿನ ತಪ್ಪದೇ ಮನೆಯಲ್ಲಿರುವ ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಬೇಕು.

ಇದರಿಂದ ಅನೇಕ ಪ್ರಕಾರದ ಲಾಭಗಳು ಸಿಗುತ್ತವೆ. ಪುರಾಣದಲ್ಲಿ ತಿಳಿಸಿರುವ ಹಾಗೆ ಸಾಯಾಂಕಾಲದ ವೇಳೆ ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಿದರೆ ದುಃಖ ದಾರಿದ್ರ್ಯತೆಯೂ ನಾಶವಾಗುತ್ತದೆ. ಸಾಯಾಂಕಾಲ ಮನೆಯಲ್ಲಿ ಮಾಡುವ ಪೂಜೆಗೆ ಅತ್ಯಂತ ಮಹತ್ತ್ವ ಕೂಡ ಇದೆ. ಸಾಯಾಂಕಾಲ ದೀಪವನ್ನು ಉರಿಸುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿಗಳು ದೂರನೇ ಇರುತ್ತವೆ. ಯಾವುದೇ ರೀತಿಯ ಕೆಟ್ಟ ಶಕ್ತಿಗಳು ನಿಮ್ಮ ಮನೆಯ ಒಳಗಡೆ ಪ್ರವೇಶ ಮಾಡುವುದಿಲ್ಲ. ಯಾರ ಮನೆಯಲ್ಲಿ ದೀಪವನ್ನು ಉರಿಸುವುದಿಲ್ಲವೋ ಅಂತಹ ಮನೆಯಲ್ಲಿರುವ ಜನರು ಹಲವಾರು ತೊಂದರೆಗಳನ್ನು ಅನುಭವಿಸುತ್ತಾರೆ.

ಆ ಮನೆಯಲ್ಲಿರುವ ಮುಖ್ಯಸ್ಥರು ತುಂಬಾನೇ ಶ್ರಮ ಪಟ್ಟರೂ ಯಶಸ್ಸು ಸಿಗುವುದಿಲ್ಲ. ಮನೆಯಲ್ಲಿ ಧನಸಂಪತ್ತಿನ ಆಗಮನವಾಗುತ್ತಿರುವುದಿಲ್ಲ, ಖರ್ಚುಗಳು ಹೆಚ್ಚು ಆಗುತ್ತಿರುತ್ತದೆ. ಈ ಕಾರಣದಿಂದ ಕುಟುಂಬದಲ್ಲಿರುವ ಜನರು ಯಾವತ್ತಿಗೂ ದುಃಖದಿಂದ ಕಷ್ಟದಿಂದ ಇರುತ್ತಾರೆ. ಇಂತಹ ಕಷ್ಟಗಳಿಂದ ದೂರವಾಗಲು ದೀಪವು ಸಹಾಯ ಮಾಡುತ್ತದೆ. ದೀಪಗಳು ಮನೆಯನ್ನು ಬೆಳೆಗುತ್ತವೆ. ಜೊತೆಗೆ ನಿಮ್ಮ ಮನಸ್ಸಿನಲ್ಲಿರುವ ಅಂದಕಾರವನ್ನು ಪೂರ್ತಿಯಾಗಿ ನಾಶಗೊಳಿಸುತ್ತದೆ. ಹಾಗಾದರೇ ಮನೆಯಲ್ಲಿ ಯಾವ ರೀತಿ ದೀಪವನ್ನು ಹಚ್ಚಬೇಕೆಂಬುದನ್ನು ನೋಡಿದಾಗ ಯಾವ ದೇವರ ಮುಂದೆ ದೀಪಗಳನ್ನು ಹಚ್ಚಬಾರದು, ದೀಪಗಳಲ್ಲೂ ಕೂಡ ಭಿನ್ನವಾದ ಪ್ರಕಾರಗಳಿವೆ ಯಾವ ರೀತಿಯ ದೀಪವನ್ನು ಯಾವಾಗ ಯಾವ ಸ್ಥಾನದಲ್ಲಿ ಹಚ್ಚಬೇಕು ದೀಪದಿಂದ ಸಿಗುವಂತಹ ಶುಭಫಲಗಳನ್ನು ಈ ಲೇಖನದ ಮೂಲಕ ತಿಳಿಸಲಾಗಿದೆ.

ಮೊದಲನೇ ವಿಷಯ ನಿಯಮಿತವಾಗಿ ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಿದರೆ ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯು ಯಾವತ್ತಿಗೂ ಸಕ್ರಿಯವಾಗಿರುತ್ತದೆ. ವಾಸ್ತುದೋಷವನ್ನು ಹೆಚ್ಚಿಸುವಂತಹ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ. ದೀಪದಿಂದ ಬರುವಂತಹ ಹೊಗೆಯಿಂದ ವಾತಾವರಣದಲ್ಲಿರುವ ಸೂಕ್ಷ್ಮಾಣು ಕೀಟಾಣುಗಳು ನಾಶಗೊಳ್ಳುತ್ತವೆ. ದೇವರ ಅಥವಾ ಮೂರ್ತಿಯ ಮುಂದೆ ದೀಪವನ್ನು ಹಚ್ಚುತ್ತೇವೋ ಆ ದೀಪದ ಕಿರಣಗಳು ದೇವರ ವಿಗ್ರಹ ಅಥವಾ ಪೋಟೋಗೆ ಸ್ಪರ್ಶಗೊಂಡು ಮನೆಯ ನಾಲ್ಕು ದಿಕ್ಕಿನತ್ತ ಹರಡಿಕೊಳ್ಳುತ್ತವೆ. ಇದರಿಂದ ಮನೆಯಲ್ಲಿರುವ ನಕಾರಾತ್ಮಕತೆ ನಾಶಗೊಳ್ಳುತ್ತದೆ. ಯಾವಾಗ ಈ ಕಿರಣಗಳು ನಮ್ಮ ಶರೀರದ ಮೇಲೆ ಬೀಳುತ್ತದೆಯೋ ಹಲವಾರು ಲಾಭಗಳು ಸಿಗುತ್ತದೆ.

ಈ ಪ್ರಕಾಶದ ಕಿರಣಗಳ ಮೂಲಕ ದೇವಾನು ದೇವತೆಗಳ ಆಶೀರ್ವಾದ ನಮಗೆ ಸಿಗುತ್ತದೆ. ಜೊತೆಗೆ ಶರೀರದಲ್ಲಿರುವ ರೋಗಗಳು ಕೂಡ ನಾಶವಾಗುತ್ತವೆ. ಯಾವಾಗ ನೀವು ಅನಾರೋಗ್ಯದಿಂದ್ದೀರ ಅನಿಸುತ್ತದೆಯೋ, ಮನಸ್ಸಿನಲ್ಲಿ ಏನಾದರೂ ಕೆಟ್ಟ ವಿಷಯಗಳು ಹುಟ್ಟಿಕೊಂಡರೆ ಅಥವಾ ನೀವು ಯಾವುದಾದರೂ ರೋಗದಿಂದ ಬಳಲುತ್ತಿದ್ದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ದೇವಾನು ದೇವತೆಗಳ ಫೋಟೋ ಮುಂದೆ ದೀಪವನ್ನು ಉರಿಸಿರಿ ಇದರ ಕಿರಣಗಳು ಯಾವಾಗ ದೇವರ ಪೋಟೋಗಳಿಗೆ ಸ್ಪರ್ಶವಾಗಿ ಮರಳಿ ನಿಮಗೆ ಸ್ಪರ್ಶವಾಗುತ್ತದೆಯೋ ಆಗ ನಿಮ್ಮೊಳಗಿರುವ ನಿರಾಶೆಯಾಗಲಿ, ಎಲ್ಲಾ ರೀತಿಯ ನಕಾರಾತ್ಮಕತೆಯು ನಾಶವಾಗುತ್ತದೆ. ದೀಪವನ್ನು ಹಚ್ಚಲು ಯಾವ ಸಮಯ ಉತ್ತಮವೆಂದರೆ ಮುಂಜಾನೆ ಸಮಯದಲ್ಲಿ 5ರಿಂದ 10 ಗಂಟೆಯ ಒಳಗಡೆ, ಸಾಯಾಂಕಾಲದ ಸಮಯದಲ್ಲಿ 5ಗಂಟೆಯಿಂದ 7ಗಂಟೆಯ ಮಧ್ಯೆ ಹಚ್ಚುವುದು ಉತ್ತಮವಾಗಿರುತ್ತದೆ.

ಸಾಯಾಂಕಾಲದ ಸಮಯದಲ್ಲಿ ತುಳಸಿ ಗಿಡದ ಬಳಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ಆದ್ದರಿಂದ ಮನೆಯ ಆಚೆ ದೀಪವನ್ನು ಉರಿಸಿರಿ. ನೀವು ತುಪ್ಪದ ದೀಪವನ್ನು ಉರಿಸುತ್ತಿದ್ದರೆ ಇನ್ನಷ್ಟು ಶುಭ ಫಲಗಳು ಸಿಗುತ್ತವೆ. ದೇವರ ಮುಂದೆ ಎರಡು ಪ್ರಕಾರದ ದೀಪವನ್ನು ಉರಿಸಬಹುದಾಗಿದೆ. ನೀವು ದೇವರ ಬಲಭಾಗದಲ್ಲಿ ನಿಂತುಕೊಂಡಿದ್ದರೆ ತುಪ್ಪದ ದೀಪವನ್ನು ಉರಿಸಿರಿ, ದೇವರ ಎಡ ಭಾಗದಲ್ಲಿ ನೀವು ನಿಂತಿದ್ದರೆ ಎಣ್ಣೆಯ ದೀಪವನ್ನು ಉರಿಸಿರಿ. ತುಪ್ಪದ ದೀಪವು ಸರ್ವಶ್ರೇಷ್ಠವಾಗಿದೆ. ಹಚ್ಚುತ್ತಿರುವ ದೀಪವು ಒಡೆದಿರಬಾರದು, ದೇವರ ಮುಂದೆ ಇಂತಹ ದೀಪಗಳನ್ನು ಉರಿಸಬಾರದು, ಯಾಕೆಂದರೆ ಇದನ್ನು ಅಶುಭವೆಂದು ತಿಳಿಯಲಾಗಿದೆ.

ತುಪ್ಪದ ದೀಪವನ್ನು ದೇವರಿಗೆ ಸಮರ್ಪಣೆ ಮಾಡಲು ಹಚ್ಚಲಾಗುತ್ತದೆ. ಎಣ್ಣೆಯ ದೀಪಗಳನ್ನು ಮನಸ್ಸಿನ ಇಚ್ಛೆಗಳನ್ನು ಪೂರ್ತಿಗೊಳ್ಳಲು ಹಚ್ಚಲಾಗುತ್ತದೆ. ಪೂಜೆ ಮಾಡುವಾಗ ಪೂಜೆಯ ಮಧ್ಯೆ ದೀಪವನ್ನು ಆರಿಸಬಾರದು. ಈ ರೀತಿ ಆದರೆ ಪೂಜೆಯ ಪೂರ್ಣ ಫಲ ಸಿಗುವುದಿಲ್ಲ. ತುಪ್ಪದ ದೀಪದಲ್ಲಿ ಶುಭ್ರವಾದ ಕಾಟನ್ ಹತ್ತಿಯನ್ನು ಬಳಸಬೇಕು. ಎಣ್ಣೆಯ ದೀಪಕ್ಕೆ ಕೆಂಪು ದಾರದ ಬತ್ತಿಯು ಶ್ರೇಷ್ಠವೆಂದು ನಂಬಲಾಗಿದೆ. ಸಾಯಾಂಕಾಲದ ಸಮಯದಲ್ಲಿ ಮನೆಯ ಮುಖ್ಯದ್ವಾರದ ಮುಂದೆ ದಿನವೂ ಒಂದು ದೀಪವನ್ನು ಉರಿಸಬೇಕು. ಇದರಿಂದ ಲಕ್ಷ್ಮಿದೇವಿಯು ಒಲಿದು ನಿಮ್ಮ ಮನೆಯನ್ನು ಪ್ರವೇಶ ಮಾಡುತ್ತಾರೆ. ದೀಪವನ್ನು ಹಾಗೇ ನೆಲದ ಮೇಲೆ ಇಡಬಾರದು ಬದಲಾಗಿ ಅಕ್ಕಿ ಕಾಳು ಅಥವಾ ಯಾವುದಾದರೂ ವಸ್ತುಗಳನ್ನು ಇಟ್ಟು ಅದರ ಮೇಲೆ ಇಡಬೇಕು.

ಇದರಿಂದ ಧನಸಂಪತ್ತು ವೃದ್ಧಿಯಾಗುತ್ತದೆ. ಕುಡಿಯುವಂತಹ ನೀರಿನ ಮಡಿಕೆಯ ಮುಂದೆ ತುಪ್ಪದ ದೀಪವನ್ನು ಉರಿಸಿದರೆ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿಯಾಗುವುದರ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಒಂದು ವಿಷಯ ನೆನಪಿರಲಿ ಒಂದು ದೀಪದಿಂದ ಮತ್ತೊಂದು ದೀಪವನ್ನು ಉರಿಸಬಾರದು. ಒಂದು ವೇಳೆ ಹಣದ ಖರ್ಚು ಹೆಚ್ಚಾಗಿದ್ದರೆ ಮನೆಯಲ್ಲಿ ಹಣ ಉಳಿಯುತ್ತಿಲ್ಲವೆಂದಾದರೇ ಮನೆಯ ಉತ್ತರ ದಿಕ್ಕಿನಲ್ಲಿ ನೀರಿನ ಪಾತ್ರೆಯಲ್ಲಿ ಒಂದು ದೀಪವನ್ನು ಉರಿಸಿರಿ ಇದರಿಂದ ಲಕ್ಷ್ಮಿ ಸ್ಥಿರವಾಗಿ ನಿಲ್ಲುತ್ತಾರೆ. ದೀಪವನ್ನು ಉರಿಸುವಾಗ ಈ ಮಂತ್ರವನ್ನು ಜಪಮಾಡಬೇಕು ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದ ಶತೃಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಸ್ತುತೆ

ಈ ಮಂತ್ರದ ಸರಳವಾದ ಅರ್ಥ ಶುಭ ಮತ್ತು ಕಲ್ಯಾಣ ಮಾಡುವಂತಹ ಆರೋಗ್ಯ ಮತ್ತು ಧನಸಂಪತ್ತನ್ನು ನೀಡುವಂತಹ ಶತೃಬುದ್ಧಿಯನ್ನು ನಾಶಮಾಡುವಂತಹ ದೀಪದ ದೇವಿಗೆ ನಮಸ್ಕಾರಗಳು. ಶಾಸ್ತ್ರಗಳಲ್ಲಿರುವ ಮಾಹಿತಿಯ ಪ್ರಕಾರ ಮಂತ್ರ ಜಪದ ಮೂಲಕ ದೀಪವನ್ನು ಉರಿಸುವುದರಿಂದ ಮನೆಯಲ್ಲಿ ಸುಖಸಂಮೃದ್ಧಿ ವಾಸ ಮಾಡುತ್ತದೆ. ಎಲ್ಲಾ ಪ್ರಕಾರದ ವಾಸ್ತುದೋಷಗಳು ಇದ್ದರೂ ದೂರವಾಗುತ್ತದೆ. ದೀಪದ ಜ್ಯೋತಿಯನ್ನು ಪೂರ್ವದಿಕ್ಕಿಗೆ ಮುಖ ಮಾಡಿ ಇಟ್ಟರೆ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ಕುಟುಂಬದಲ್ಲಿರುವ ಸದಸ್ಯರ ಆಯುಷ್ಯ ಹೆಚ್ಚಾಗುತ್ತದೆ. ಮನೆಯಿಂದ ರೋಗಗಳೆಲ್ಲ ದೂರವಾಗುತ್ತದೆ. ವಾಸ್ತುಶಾಸ್ತ್ರದ ಅನುಸಾರವಾಗಿ ಪಶ್ಚಿಮ ದಿಕ್ಕಿನತ್ತ ದೀಪವನ್ನು ಮುಖಮಾಡಿ ಇರಿಸಿದರೆ ಮಾನಸಿಕ ತೊಂದರೆಗಳಿಂದ ದೂರವಾಗಬಹುದು.

ಉತ್ತರ ದಿಕ್ಕು ಕುಬೇರ ದೇವರ ಧನಸಂಪತ್ತಿನ ದಿಕ್ಕು ಎಂದು ತಿಳಿಯಲಾಗಿದೆ. ಈ ದಿಕ್ಕಿನತ್ತ ದೀಪದ ಮುಖ ಮಾಡಿ ಉರಿಸುವುದರಿಂದ ಹಣಕಾಸಿಗೆ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗಲು ಶುರುವಾಗುತ್ತದೆ. ಆದರೆ ದಕ್ಷಿಣ ದಿಕ್ಕಿನತ್ತ ದೀಪದ ಮುಖಮಾಡಿ ಇರಿಸಬಾರದು. ಯಾಕೆಂದರೆ ಇದು ಮೃತ್ಯುವಿನ ದಿಕ್ಕಾಗಿದೆ. ನೀವು ಪೂರ್ವದ ದಿಕ್ಕಿನತ್ತ ದೀಪದ ಮುಖ ಮಾಡಿ ಇಟ್ಟರೆ ಒಂದುವೇಳೆ ಆಕಸ್ಮಿಕವಾಗಿ ದೀಪದ ಬೆಳಕು ಹೆಚ್ಚಾಗಲು ಶುರು ಮಾಡಿದರೆ ಇದನ್ನು ಅತ್ಯಂತ ಶುಭ ಸಂಕೇತವೆಂದು ತಿಳಿಯಬೇಕು. ಈ ರೀತಿಯ ದೀಪ ಹಚ್ಚುವುದರಿಂದ ಯಾವುದಾದರೂ ರೋಗವಿದ್ದರೇ ವಾಸಿಯಾಗುತ್ತದೆ.

ಒಂದು ವೇಳೆ ಈ ದಿಕ್ಕಿನಲ್ಲಿ ಹಚ್ಚಿದಂತಹ ದೀಪ ಆರಿ ಹೋದರೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮಗೆ ಬರಬಹುದು. ಅಥವಾ ಯಾವುದಾದರೂ ಕಾರ್ಯಗಳಲ್ಲಿ ವಿಫಲವಾಗಬಹುದು. ಉತ್ತರ ದಿಕ್ಕಿನತ್ತ ಮುಖ ಮಾಡಿ ದೀಪವನ್ನು ಹಚ್ಚುತ್ತಿದ್ದರೆ ದೀಪದ ಉರಿಯು ಹೆಚ್ಚಾದರೇ ಶುಭಸಂಕೇತವಾಗಿರುತ್ತದೆ. ಇದನ್ನು ಧನಪ್ರಾಪ್ತಿಯ ಸಂಕೇತವೆಂದು ತಿಳಿಯಲಾಗಿದೆ. ಈ ದಿಕ್ಕಿನತ್ತ ಉರಿಸಿದಂತಹ ದೀಪವು ಎಣ್ಣೆ ಖಾಲಿಯಾದ ನಂತರವು ಉರಿಯುತ್ತಿದ್ದರೆ ವ್ಯಾಪಾರದಲ್ಲಿ ಲಾಭವಾಗುವ ಸಂಕೇತವಾಗಿದೆ. ದಕ್ಷಿಣ ದಿಕ್ಕಿನತ್ತ ಮುಖ ಮಾಡಿ ದೀಪ ಉರಿಸಿದಾಗ ಆಕಸ್ಮಿಕವಾಗಿ ಅದು ಆರಿ ಹೋದರೆ ಇದು ಅಶುಭ ಸಂಕೇತವಾಗಿದೆ.

ಈ ದಿಕ್ಕಿನತ್ತ ದೀಪವನ್ನು ಉರಿಸಿದಾಗ ದೀಪದ ಉರಿಯು ಹೆಚ್ಚಾಗಲೂ ಶುರು ಮಾಡಿದರೆ ನಿಮ್ಮ ಪೂರ್ವಜರು ತುಂಬಾನೇ ಖುಷಿಯಾಗಿ ಆಶೀರ್ವಾದವನ್ನು ಮಾಡುತ್ತಿರುತ್ತಾರೆ. ಪಶ್ಚಿಮದ ದಿಕ್ಕಿನತ್ತ ಮುಖ ಮಾಡಿ ದೀಪವನ್ನು ಹಚ್ಚಿದರೆ ದೀಪದ ಬೆಳಕು ಹೆಚ್ಚಾಗುತ್ತಾ ಹೋದರೆ ಮಾನಸಿಕ ತೊಂದರೆಗಳೆಲ್ಲ ದೂರವಾಗುತ್ತದೆ. ಎಣ್ಣೆ ಮುಗಿದ ನಂತರವು ದೀಪವು ಉರಿಯುತ್ತಿದ್ದರೆ ಹೆಚ್ಚಿನ ಸಮಯದ ವರೆಗೆ ನಿಮ್ಮ ಜೀವನದಲ್ಲಿ ನೆಮ್ಮದಿ ಸಂತೋಷಗಳು ಉಳಿಯುತ್ತವೆ. ಶನಿದೇವರ ಪೂಜೆಯಲ್ಲಿ ಸಾಸಿವೆ ಎಣ್ಣೆಯನ್ನು ಬಳಸುವುದು ಉತ್ತಮವಾಗಿರುತ್ತದೆ. ಇದರಿಂದ ಎಲ್ಲಾ ಪ್ರಕಾರದ ದೋಷಗಳು ದೂರವಾಗುತ್ತದೆ. ಶನಿವಾರದ ದಿನ ಶನಿದೇವರ ಪೂಜೆ ಮಾಡುವಾಗ ಸಾಸಿವೆ ಕಾಳಿನ ಎಣ್ಣೆಯಿಂದ ದೀಪವನ್ನು ಉರಿಸುತ್ತಾರೆ.

ಇದರ ಜೊತೆಗೆ ದೀಪದ ಜೊತೆಗೆ ಒಂದು ಲವಂಗವನ್ನು ಹಾಕಿದರೆ ಇನ್ನಷ್ಟು ಶುಭಫಲಗಳು ಸಿಗುತ್ತವೆ. ಸೂರ್ಯದೇವನಿಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ರೋಗಗಳ ನಾಶವಾಗುತ್ತದೆ. ಸೂರ್ಯದೇವನಿಗೆ ಎಳ್ಳಿನ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಬಹುದು. ಆಂಜನೇಯಸ್ವಾಮಿಯ ಮುಂದೆ ಮಲ್ಲಿಗೆ ಹೂವಿನ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಆಂಜನೇಯಸ್ವಾಮಿ ಒಲಿಯುತ್ತಾರೆ. ಎಲ್ಲಾ ಸಂಕಟಗಳ ನಾಶ ಕೂಡ ಆಗುತ್ತದೆ. ಸಾಯಾಂಕಾಲದ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಸಕ್ರಿಯಗೊಂಡಿರುತ್ತವೆ.

ಹಾಗಾಗ್ಗಿ ಪ್ರತಿ ದಿನ ಮನೆಯ ಮುಂದೆ ಅಥವಾ ಮಾಳಿಗೆ ಮೇಲೆ ಪ್ರತಿದಿನ ಒಂದು ದೀಪವನ್ನು ಉರಿಸಬೇಕು. ಇದರಿಂದ ಕೆಟ್ಟ ಶಕ್ತಿಗಳ ಪ್ರಭಾವ ಬೀರುವುದಿಲ್ಲ. ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ, ನೌಕರಿಯಲ್ಲಿ ಸಮಸ್ಯೆ ಇದ್ದಲ್ಲಿ ಪ್ರತಿನಿತ್ಯ ಉತ್ತರ ದಿಕ್ಕಿನತ್ತ ಮುಖಮಾಡಿ ಒಂದು ತುಪ್ಪದ ದೀಪವನ್ನು ಉರಿಸಬೇಕು ಯಾವಾಗ ತುಪ್ಪದ ದೀಪ ಉರಿಯುತ್ತದೆಯೋ ಆ ದೀಪದಿಂದ ಬರುವ ಸಕಾರಾತ್ಮಕ ಕಿರಣಗಳು ನಿಮ್ಮ ಮನೆಯ ವಾತಾವರಣವನ್ನು ಶುದ್ಧವಾಗಿಸುತ್ತದೆ. ನಿಮ್ಮ ಜೀವನದಲ್ಲಿರುವ ಎಲ್ಲಾ ತೊಂದರೆಗಳನ್ನು ನಾಶಮಾಡುತ್ತದೆ. ಮಣ್ಣಿನ ದೀಪವನ್ನು ಬಳಸುತ್ತಿದ್ದರೆ ಒಡೆದಿರಬಾರದು ಜೊತೆಗೆ ದೀಪ ಉರಿಯುವಾಗ ಅದು ಆರದಂತೆ ನೋಡಿಕೊಳ್ಳಿರಿ ಆಕಸ್ಮಿಕವಾಗಿ ದೀಪ ಆರಿ ಹೋದರೆ ಭಗವಂತನ ಬಳಿ ಕ್ಷಮೆಯನ್ನು ಕೇಳಿ ಮತ್ತೆ ಆ ದೀಪವನ್ನು ಉರಿಸಿರಿ. ಈ ವಿಧಾನದಲ್ಲಿ ದೀಪವನ್ನು ಉರಿಸುವುದರಿಂದ ನಿಮ್ಮ ಜೀವನವನ್ನು ಸುಖಮಯವಾಗಿರಿಸಿಕೊಳ್ಳಬಹುದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment