ಮನೆಯಲ್ಲಿ ಹೆಂಗಸರು ಹೀಗಿದ್ದರೆ ಮನೆಯೇ ಸ್ವರ್ಗ

ಮನೆಯಲ್ಲಿ ಹೆಂಗಸರು ಹೀಗಿದ್ದರೆ ಮನೆಯೇ ಸ್ವರ್ಗ ಇವು ಹಿರಿಯರು ಹೇಳಿದ ಮಾತುಗಳು
ಈಗಿನ ಆಧುನಿಕ ಜೀವನ ಶೈಲಿ ಮತ್ತು ಕೂಡು ಕುಟುಂಬಗಳು ಇಲ್ಲದಿರುವುದರಿಂದ ಮನೆಯಲ್ಲಿ ಹಿರಿಯರು ಇರುವುದಿಲ್ಲ. ಹೀಗಾಗಿ ನಾವು ಹೇಗೆ ನಡೆದುಕೊಳ್ಳಬೇಕು? ಹೇಗೆ ನಡೆದುಕೊಳ್ಳಬಾರದು? ಏಕೆ ಮಾಡಬಾರದು ಎಂದು ಹೇಳುವವರು ಯಾರು ಇಲ್ಲದ ಕಾರಣ ಈಗ ಜನರಿಗೆ ಫೋನಿನಿಂದಲೇ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬಹುದು.
ಹಿರಿಯರು ಹೇಳಿರುವ, ಶಾಸ್ತ್ರಗಳು ಹೇಳಿದ ಕೆಲವು ಮಾತುಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

• ಹಿರಿಯರು ಹೇಳುತ್ತಾರೆ ಗಂಡಸರು ಊಟ ಅಥವಾ ತಿಂಡಿ ತಿನ್ನುತ್ತಿರುವಾಗ ಮಹಿಳೆಯರು ಹಾಲನ್ನು ಮೊಸರು ಮಾಡಬಾರದು. ಅಂದರೆ ಹಾಲಿಗೆ ಹೆಪ್ಪು ಹಾಕಬಾರದು. ಇದರಿಂದ ಗಂಡ ಹೆಂಡತಿಯರ ಮಧ್ಯೆಯೂ ಹುಳಿ ಹಾಕಿದ ಹಾಗೆ ಎನ್ನುತ್ತಾರೆ. • ಹೆಣ್ಣು ಮಕ್ಕಳು ಯಾವಾಗಲು ನಡೆಯುವಾಗ ನೆಲಕ್ಕೆ ಶಬ್ಧ ಮಾಡುತ್ತಾ ಅಥವಾ ನೆಲವನ್ನು ಹೊಸೆಯುತ್ತಾ ನಡೆಯಬಾರದು. ಅಲ್ಲದೇ ಕಾಲನ್ನು ಅಲುಗಾಡಿಸುತ್ತಾ ಕುಳಿತುಕೊಳ್ಳಬಾರದು. ಇದರಿಂದ ದಾರಿದ್ರ್ಯ ಬರುತ್ತದೆ.

• ಊಟದ ತಟ್ಟೆಯಲ್ಲಿ ಉಪ್ಪನ್ನು ತಪ್ಪದೇ ಬಡಿಸಬೇಕು. ಇದರಿಂದ ಊಟ ಮಾಡಿದವರಿಗೆ ಕೆಟ್ಟ ದೃಷ್ಟಿ ತಾಗುವುದಿಲ್ಲ. ಕೆಲವೊಬ್ಬರು ಎಷ್ಟೊಂದು ಊಟ ಮಾಡುತ್ತಾರೆ ಎಂದು ಹೇಳಿದರೂ ಕೂಡ ಆ ಕೆಟ್ಟ ದೃಷ್ಟಿ ಉಪ್ಪಿನ ಮೇಲೆ ಹೋಗುತ್ತದೆ. • ಮಹಿಳೆಯರು ಮುಟ್ಟಾದಾಗ ಹೂವನ್ನು ಮುಡಿಯಬಾರದು ಮತ್ತು ಅರಿಶಿಣ ಕುಂಕುಮವನ್ನು ತೆಗೆದುಕೊಳ್ಳಬಾರದು. • ಹೂವನ್ನು ಮತ್ತು ಅವಲಕ್ಕಿಯನ್ನು ಎಂದಿಗೂ ಬೇಡ ಎನ್ನಬಾರದು. ನಾಳೆ ತೆಗೆದುಕೊಳ್ಳುತ್ತೇನೆ ಅಥವಾ ನನ್ನ ಹತ್ತಿರ ಇದೆ ಎನ್ನಬೇಕು.

• ಮನೆಯಲ್ಲಿ ಯಾರಾದರೂ ಊಟ ಅಥವಾ ತಿಂಡಿ ಮಾಡಿದ ನಂತರ ಹಾಗೆ ಹೊರಗೆ ಹೋಗುವಂತಿದ್ದರೆ ಅವರು ಹೊರಕ್ಕೆ ಹೊರಡುವ ಮೊದಲು ತಿಂಡಿಯ ಪ್ಲೇಟನ್ನಾಗಲೀ ಬಾಳೆ ಎಲೆಯಾಗಲಿ ತೆಗೆಯಿರಿ. ಊಟವಾದ ನಂತರ ಬಾಳೆ ಅಥವಾ ಬಟ್ಟಲು ಅದೇ ಜಾಗದಲ್ಲಿ ಇರುವಾಗ ಅಲ್ಲಿಂದ ಹೊರಗೆ ಹೋಗಬಾರದು. • ಮಹಿಳೆಯರು ಯಾವುದೇ ದೇವರ ಕಾರ್ಯ ಮಾಡುವಾಗ ಕೂದಲು ಹರಡಿಕೊಂಡು ಮಾಡಬಾರದು. ಮುಡಿ ಕಟ್ಟಿ ಮಾಡಬೇಕು. ಕೂದಲು ಹರಡಿಕೊಂಡಿರುವುದು ದರಿದ್ರ ಲಕ್ಷ್ಮಿಯ ಸೂಚಕವಾಗಿದೆ.

• ಮಹಿಳೆಯರು ಎಂದು ಎರಡು ಕೈಗಳಿಂದ ತಲೆಯನ್ನು ಕೆರೆಯಬಾರದು. ಹೀಗೆ ಮಾಡಿದ್ದಲ್ಲಿ ಶನಿಯು ಆ ಜಾಗಕ್ಕೆ ಪ್ರವೇಶ ಮಾಡುತ್ತಾನೆ. ಇದರಿಂದ ಮಹಿಳೆಯರಿಗೆ ತೊಂದರೆಯಾಗುತ್ತದೆ. • ಮಹಿಳೆಯರ ಬೈತಲೆಯಲ್ಲಿ ಲಕ್ಷ್ಮಿಯು ನೆಲೆಸಿರುತ್ತಾಳೆ ಆದ್ದರಿಂದ ಕುಂಕುಮ ಇರದೆ ಮಹಿಳೆಯರು ಇರಬಾರದು. • ಮನೆಗೆ ಬಂದ ಮುತ್ತೈದೆಯರಿಗೆ ಅರಿಶಿಣ ಮತ್ತು ಕುಂಕುಮವನ್ನು ಕೊಟ್ಟು ಕಳುಹಿಸಿ. ನಾವು ಏನನ್ನು ಕೊಡುತ್ತೇವೋ ಅದೇ ನಮಗೆ ಸಿಗುವುದು. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂದು ಹಿರಿಯರು ಹೇಳಿರುವುದು.

• ಕೈಯಲ್ಲಿ ಯಾವಾಗಲೂ ಉಪ್ಪು ಮತ್ತು ಪಲ್ಯವನ್ನು ಬಡಿಸಲೇಬಾರದು. ಬಡಿಸುವಾಗ ಯಾವುದೇ ಪದಾರ್ಥವನ್ನು ಕೈಯಿಂದ ಬಡಿಸದಿದ್ದರೆ ಒಳ್ಳೆಯದು. • ಊಟವನ್ನು ಮಾಡುವಾಗ ಅಥವಾ ಪಾಯಸವನ್ನು ಅಥವಾ ತೆಳುವಿನ ಪದಾರ್ಥವನ್ನು ಸ್ವರ ಎಂದು ಶಬ್ಧ ಮಾಡುತ್ತಾ ಊಟ ಮಾಡಬಾರದು. • ಒಬ್ಬರು ಮುಡಿದ ಹೂವನ್ನು ಇನ್ನೊಬ್ಬರು ಮುಡಿಯಬಾರದು. ಅವರ ಪಾಪ ಕರ್ಮಗಳು ಮತ್ತೊಬ್ಬರಿಗೆ ಬರುವುದು.

• ಹೆಣ್ಣು ಯಾವುದೇ ಕಾರಣಕ್ಕೂ ಮನೆಯಲ್ಲಿ ಕಣ್ಣೀರು ಹಾಕಬಾರದು. ಯಾರ ಮನೆಯಲ್ಲಿ ಹೆಣ್ಣು ಸದಾ ಸಂತೋಷದಿಂದ ಇರುತ್ತಾಳೋ ಆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಮನೆಯಲ್ಲಿ ಸಂಮೃದ್ಧಿ ಮನೆ ಮಾಡಿರುತ್ತದೆ. ಮಹಿಳೆಯರು ಸಂಜೆಯ ಸಮಯದಲ್ಲಿ ಹಬ್ಬ ಹರಿದಿನಗಳಲ್ಲಿ ಎಂದಿಗೂ ಕಣ್ಣಲ್ಲಿ ನೀರು ಹಾಕಬೇಡಿ ಇದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ.

• ಹೆಂಗಸರು ಮನೆಯಲ್ಲಿ ಏನೇ ಇಲ್ಲದಿದ್ದರೂ ಇಲ್ಲ ಅಥವಾ ಖಾಲಿಯಾಗಿದೆ ಎನ್ನಬಾರದು. ಸ್ವಲ್ಪ ಇದೆ ತೆಗೆದುಕೊಂಡು ಬನ್ನಿ ಎನ್ನಬೇಕು. ಅಶ್ವಿನಿ ದೇವತೆಗಳು ಅಸ್ತು ಎನ್ನುತ್ತಿರುತ್ತಾರೆ ಆದ್ದರಿಂದ ಯಾವಾಗಲೂ ಒಳ್ಳೆಯದನ್ನೇ ನುಡಿಯಬೇಕು. • ಮಹಿಳೆಯರು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು. ಇದರಿಂದ ಗರ್ಭಕೋಶದ ಸಮಸ್ಯೆ ಉಂಟಾಗಬಹುದು. ಹೀಗೆ ಗಾಜಿನ ಬಳೆಯನ್ನು ಕೈ ತುಂಬಾ ಇಟ್ಟರೆ ಗರ್ಭಕೋಶದ ಆರೋಗ್ಯ ಚೆನ್ನಾಗಿರುತ್ತದೆ. ಈಗಿನ ಕಾಲದಲ್ಲಿ ಮಹಿಳೆಯರು ಫ್ಯಾಷನ್ ಎಂದು ಕೈಗೆ ಬಳೆ ಹಾಕುವುದಿಲ್ಲ. ಇದರಿಂದ ಮುಂದೆ ಗರ್ಭಕೋಶಕ್ಕೆ ತೊಂದರೆಯಾಗಿ ಬಂಜೆತನ ಬರುವ ಸಾಧ್ಯತೆ ಹೆಚ್ಚು.

Leave a Comment