ಸಾಲಗಲು ಬೆಟ್ಟದಷ್ಟಿರಲಿ ಈ ಒಂದು ವಸ್ತು ನಿಮ್ಮ ಜೊತೆಗಿದ್ದರೆ ಬುಧನ ಅನುಗ್ರಹ ಹಣದ ಏಳಿಗೆ

ನಾವು ಈ ಲೇಖನದಲ್ಲಿ ಸಾಲಗಳು ಬೆಟ್ಟದಷ್ಟು ಇರಲಿ , ಈ ಒಂದು ವಸ್ತು ನಿಮ್ಮ ಜೊತೆಗೆ ಇದ್ದರೆ, ಬುಧನ ಅನುಗ್ರಹ , ಹಣದ ಏಳಿಗೆ ಹೇಗೆ ಆಗುತ್ತದೆ. ಎಂದು ತಿಳಿಯೋಣ . ನಿಮಗೆ ಲಕ್ಷ ಕೋಟಿ ಸಾಲ ಇದ್ದರೂ ಇಂದಿನಿಂದ ಈ ಕೆಲಸ ಮಾಡಿದರೆ, ಬುಧನ ಕೃಪೆಯಿಂದ ನಿಮ್ಮ ಸಾಲಗಳನ್ನು ತೀರಿಸಲು ಅನೇಕ ರೀತಿಯಾದ ಶಕ್ತಿ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ತಿಳಿದು , ತಿಳಿಯದೆಯೋ, ತೀರಿಸಲಾಗದ ಸಾಲವನ್ನು ಮಾಡಿ ನರಳುತ್ತಿದ್ದರೆ, ಮೊದಲು ಈ ವಿಶೇಷ ತಂತ್ರ ಅಥವಾ ಪರಿಹಾರವನ್ನು ಮಾಡಿ ಆಗುವ ಬದಲಾವಣೆಗಳನ್ನು ನೀವು ನೋಡಬಹುದು .

ಜ್ಯೋತಿಷ್ಯ ಶಾಸ್ತ್ರದಲ್ಲಿ ನವ ಗ್ರಹಗಳಲ್ಲಿ ಬುಧನಿಗೆ ಅತ್ಯಂತ ಪ್ರಿಯವಾದದ್ದು ಎಂದರೆ, ಅದು ಹಿಂಗು . ಬುಧನ ಅನುಗ್ರಹ ಇದ್ದರೆ, ಉದ್ಯೋಗದ ವಿಷಯದಲ್ಲಿ ಅಭಿವೃದ್ಧಿಯನ್ನು ಸದಾ ಕಾಣಬಹುದು . ವ್ಯಾಪಾರದಲ್ಲೂ ವಿವಿಧ ರೀತಿಯಾದ ಅಭಿವೃದ್ಧಿಯನ್ನು ಹೊಂದಬಹುದು . ಇದರಿಂದ ಹಣ ಕೈಯಲ್ಲಿ ಚೆನ್ನಾಗಿ ಓಡಾಡುತ್ತದೆ . ಸಾಲದ ಸುಳಿಯಿಂದ ಬೇಗ ಹೊರ ಬರಬಹುದು . ಹಣದ ಸಮಸ್ಯೆಯಿಂದ ಹೇಗೆ ಮುಕ್ತರಾಗಬೇಕು . ಸಾಲದಿಂದ ಹೇಗೆ ಮುಕ್ತಿಯನ್ನು ಹೊಂದಬೇಕು .

ತಿಳಿಯದೆ ನಾನಾ ಪ್ರಯತ್ನಗಳನ್ನು ಮಾಡಿ ಸಾಕಾಗಿದ್ದರೆ , ಹಣಕ್ಕಾಗಿ ಧರ್ಮ ಮಾರ್ಗದಲ್ಲಿ ಸಂಪಾದನೆಯನ್ನು ಮಾಡುತ್ತಾ , ಈ ವಿಶೇಷ ಪರಿಹಾರವನ್ನು ಪಾಲಿಸಿದರೆ , ಸಾಲದ ಸುಳಿ , ಹಣದ ಸಮಸ್ಯೆಯಿಂದ ಸುಲಭವಾಗಿ ಹೊರ ಬರಬಹುದು . ನಿಮಗಿರುವ ಸಾಲದ ಸುಳಿಯಿಂದ ಹೊರಬರಲು ಬುಧ ಗ್ರಹದ ಅನುಗ್ರಹ ಇರಲೇಬೇಕು . ಬುಧನಿಗೆ ಇಷ್ಟವಾದ ದಿಕ್ಕು ಎಂದರೆ, ಅದು ಉತ್ತರ ದಿಕ್ಕು . ಆದ್ದರಿಂದ ಮೈತುಂಬ ಸಾಲ ಇದ್ದವರು , ಸಾಲಗಳು ತೀರಲು , ಹಣಕಾಸು ಉದ್ಯೋಗದ ರೀತಿಯಲ್ಲಿ ,

ವ್ಯಾಪಾರದ ರೀತಿಯಲ್ಲಿ ಚೆನ್ನಾಗಿ ಬರಬೇಕು ಎಂದರೆ , ಮನೆಯಿಂದ ಹೊರಗಡೆ ಹೋಗಬೇಕಾದರೆ ಮರೆಯದೆ ,ಸ್ವಲ್ಪ ಹಿಂಗನ್ನು ಉತ್ತರ ದಿಕ್ಕಿಗೆ ಎಸೆದು ಹೋಗಬೇಕು . ಉತ್ತರ ದಿಕ್ಕಿಗೆ ಹಿಂಗನ್ನು ಏಕೆ ಎಸೆಯಬೇಕು ಎಂದರೆ , ಉತ್ತರ ದಿಕ್ಕು ನವಗ್ರಹಗಳಲ್ಲಿ ಬುಧನಿಗೆ ಪ್ರಿಯವಾದ ದಿಕ್ಕು . ಇಷ್ಟವಾದ ವಸ್ತು ಎಂದರೆ ಅದು ಹಿಂಗು . ಆದ್ದರಿಂದ ಹಿಂಗನ್ನು ಉತ್ತರ ದಿಕ್ಕಿಗೆ ಎಸೆದು ಬುಧನ ಸ್ಮರಣೆಯನ್ನು ಮಾಡಿ , ಮನೆಯಿಂದ ಪ್ರತಿನಿತ್ಯ ಹೊರ ಹೋಗಬೇಕು . ಇದರಿಂದ ಹಣಕಾಸಿನ ಸಮಸ್ಯೆಗಳು ಬೇಗ ಕಳೆಯುತ್ತದೆ . ಸಾಲಗಳನ್ನು ತೀರಿಸಲು ದಾರಿ ಕಾಣಿಸುತ್ತದೆ .

ಇನ್ನೂ ಎರಡನೆಯದಾಗಿ ಹಿಂಗಿನಿಂದ ಯಾವ ಕೆಲಸವನ್ನು ಮಾಡಿದರೆ, ಹಣಕಾಸಿನ ಸಮಸ್ಯೆಗಳು ಮತ್ತು ಸಾಲದ ಸಮಸ್ಯೆಗಳು ಬೇಗ ಹೇಗೆ ತೀರಿ ಹೋಗುತ್ತದೆ ಎಂದರೆ , ಒಂದು ಬಿಳಿ ವಸ್ತ್ರದಲ್ಲಿ ಗಟ್ಟಿ ಹಿಂಗನ್ನು ಕಟ್ಟಬೇಕು . ಈ ಒಂದು ಕೆಲಸವನ್ನು ಬುಧವಾರದ ದಿನ ಮಾಡಿದರೆ , ತುಂಬಾ ಒಳ್ಳೆಯದು . ಈ ರೀತಿಯಾಗಿ ಬಿಳಿ ವಸ್ತ್ರದಲ್ಲಿ ಗಟ್ಟಿ ಹಿಂಗನ್ನು ಮೂಟೆಯ ರೀತಿ ಕಟ್ಟಿ , ಈ ಒಂದು ಮೂಟೆಯನ್ನು ನೀವು ಎಲ್ಲಿ ಹೋದರೂ ಕೂಡ ತೆಗೆದುಕೊಂಡು ಹೋಗಬೇಕು .

ಈ ಒಂದು ಮೂಟೆಯನ್ನು 11 ವಾರಗಳ ಕಾಲ ನಿಮ್ಮ ಜೊತೆಯಲ್ಲಿ ಇಟ್ಟುಕೊಂಡು, 11 ವಾರ ಆದ ಮೇಲೆ ಆ ಮೂಟೆಯನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು . ಹೀಗೆ ಮಾಡಿದರೆ ವಿಪರೀತವಾಗಿ ಬುಧನ ಅನುಗ್ರಹ ಪ್ರಾಪ್ತಿಯಾಗುತ್ತದೆ . ನಿಮ್ಮ ಸಾಲವನ್ನು ತೀರಿಸಲು ಹಣದ ಬಲ ಬರುತ್ತದೆ . ನಿಮ್ಮ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನೇಕ ರೀತಿಯ ಏಳಿಗೆ ಆಗಿ ಆರ್ಥಿಕ ಮುಗ್ಗಟ್ಟಿನಿಂದ ಹೊರ ಬರಬಹುದು .

ಹಾಗೆಯೇ ಭಾನುವಾರದ ದಿನ ಹಿಂಗನ್ನು ಹರಿಯುವ ನೀರಿನಲ್ಲಿ ಬಿಟ್ಟು ಬಂದರು ತುಂಬಾ ಒಳ್ಳೆಯದು . ವಿಪರೀತವಾಗಿ ಸಾಲ ಮಾಡಿದವರು 11 ಭಾನುವಾರದ ದಿನ ಮರೆಯದೆ ಗಟ್ಟಿ ಹಿಂಗನ್ನು ಹರಿಯುವ ನೀರಿನಲ್ಲಿ ಬಿಟ್ಟು ಬುಧನಿಗೆ ನಮಸ್ಕಾರವನ್ನು ಮಾಡುತ್ತಾ , ಮನೆಗೆ ಬರಬೇಕು . ಹೀಗೆ ಮಾಡುವುದರಿಂದ ನಿಮಗೆ ಇರುವ ಸಾಲದ ಸಮಸ್ಯೆಗಳು ಬೇಗ ದೂರವಾಗುತ್ತದೆ .

ಇನ್ನು ಯಾವುದಾದರೂ ಮಂಗಳವಾರದ ದಿನ ಎರಡು ತೆಂಗಿನಕಾಯಿ ಸ್ವಲ್ಪ ಗಟ್ಟಿ ಹಿಂಗನ್ನು ತೆಗೆದುಕೊಂಡು , ಮೊದಲು ನದಿ ತೀರಕ್ಕೆ ಹೋಗಬೇಕು . ಅಲ್ಲಿ ಮೊದಲು ಬುಧನ ಸ್ಮರಣೆಯನ್ನು ಮಾಡುತ್ತಾ , ನವಗ್ರಹಗಳ ಸ್ಮರಣೆಯನ್ನು ಮಾಡುತ್ತಾ , ಒಂದು ವಿಶೇಷವಾದ ವಿಧಿ ವಿಧಾನವನ್ನು ಪಾಲಿಸಬೇಕು . ನಿಮ್ಮ ಎಡಗೈಯಲ್ಲಿ ಮೊದಲು ಒಂದು ತೆಂಗಿನಕಾಯಿಯನ್ನು ಹಿಡಿದುಕೊಂಡು , ಅದರ ಮೇಲೆ ಸ್ವಲ್ಪ ಗಟ್ಟಿ ಹಿಂಗನ್ನು ಇರಿಸಿ , 19 ಬಾರಿ ಎಡ ಭಾಗದಿಂದ ಬಲಭಾಗಕ್ಕೆ ಸುತ್ತಬೇಕು .

ನದಿಗೆ 19 ಸಲ ಇಳಿಯನ್ನು ತೆಗೆದು , ಅಥವಾ ಎಡದಿಂದ ಬಲಕ್ಕೆ ಸುತ್ತಿ ಆ ತೆಂಗಿನಕಾಯಿ ಮತ್ತು ಹಿಂಗನ್ನು ನದಿ ತೀರದಲ್ಲಿ ದೂರದಲ್ಲಿ ಎಲ್ಲಾದರೂ ಎಸೆಯಬೇಕು . ಆದರೆ ನೀರಿಗೆ ಮಾತ್ರ ಎಸೆಯಬಾರದು . ನಂತರ ಇನ್ನೊಂದು ತೆಂಗಿನಕಾಯಿಯನ್ನು ತೆಗೆದುಕೊಂಡು , ಆ ಒಂದು ಕಾಯಿಯನ್ನು ಅಲ್ಲಿಯೇ ಒಡೆದು ನದಿಗೆ ಎಸೆಯಬೇಕು. ನಂತರ ಅದೇ ನದಿಯಲ್ಲಿ ಸ್ನಾನ ಮಾಡಿ ಬರಬೇಕು. ಈ ವಿಧಾನವನ್ನು ಮಾಡುವಾಗ ಎಲ್ಲಾ ಸಾಲಗಳ ಮೊತ್ತ , ಸಾಲ ಯಾರ ಬಳಿ ಮಾಡಿತ್ತಿರೋ ,

ಅವರ ಹೆಸರುಗಳು ಮತ್ತು ನಿಮ್ಮ ಇಷ್ಟ ದೇವರ ಹೆಸರು , ನವಗ್ರಹಗಳ ಹೆಸರಗಳನ್ನು ಹೇಳುತ್ತಾ ಪಾಲಿಸಬೇಕು. ಈ ಒಂದು ಶಕ್ತಿಯುತ ಪರಿಹಾರವನ್ನು ಯಾವುದಾದರೂ ಒಂದು ಮಂಗಳವಾರ ಮಾಡಿ ನೋಡಿ , ಫಲ ಕೊಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮನುಷ್ಯ ಮಾಡಿದ ಕರ್ಮಗಳು ಫಲಗಳು , ಅವನಿಗೆ ಇರುವ ಜನ್ಮ ಜನ್ಮಗಳ ದೋಷ , ಜಾತಕ ದೋಷಗಳು , ಗ್ರಹಗಳ ಚಲನವಲನಗಳು ಕೂಡ ಅವಲಂಭಿಸಿರುತ್ತದೆ. ಆದ್ದರಿಂದ ನಂಬಿಕೆಗೆಳನ್ನು ನಂಬಿ ಈ ಪರಿಹಾರವನ್ನು ತಾಳ್ಮೆಯಿಂದ ಮಾಡಿ ಸಾಲದಿಂದ ಮುಕ್ತರಾಗಿ ಎ೦ದು ಹೇಳಲಾಗಿದೆ.

Leave a Comment