ಉಪ್ಪಿನಿಂದ ಯಾವ ರೀತಿ ಜನರು ಬೇಗ ಶ್ರೀಮಂತರಾಗುತ್ತಾರೆ

ನಾವು ಈ ಲೇಖನದಲ್ಲಿ ಉಪ್ಪಿನಿಂದ ಯಾವ ರೀತಿ ಜನರು ಬೇಗ ಶ್ರೀಮಂತರು ಆಗುತ್ತಾರೆ , ಎಂಬ ವಿಷಯದ ಬಗ್ಗೆ ನೋಡೋಣ .ಉಪ್ಪನ್ನು ಬಳಸಿಕೊಂಡು ಯಾವ ರೀತಿ ಜನರು ಬಹಳ ಬೇಗ ಶ್ರೀಮಂತರು ಆಗುತ್ತಾರೆ. ಹಾಗೂ ಉಪ್ಪಿನಿಂದ ಯಾವ ರೀತಿ ಹಣವು ಚುಂಬಕದ ರೀತಿ ವೃದ್ಧಿಯಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ .

ಉಪ್ಪಿನಲ್ಲಿ ನಕಾರಾತ್ಮಕ ಗುಣವನ್ನು ದೂರ ಮಾಡುವ ಶಕ್ತಿ ಇದೆ. ವಾಸ್ತು ವಿಜ್ಞಾನದ ಪ್ರಕಾರ ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ವೇಗವಾಗಿ ಚಲಿಸುವಂತೆ ಮಾಡುತ್ತದೆ . ಎಲ್ಲಿ ಉಪ್ಪು ಇರುವುದಿಲ್ಲವೋ ಅಲ್ಲಿ ಭೂತ ಪ್ರೇತಗಳು ವಾಸವನ್ನು ಮಾಡುತ್ತವೆ ಎಂದು ಹೇಳಲಾಗುತ್ತದೆ . ಹಾಗೂ ಇಂಥ ಮನೆಗಳಲ್ಲಿ ಯಾವುದೇ ಕಾರಣಕ್ಕೂ ಸುಖ , ಶಾಂತಿ , ನೆಮ್ಮದಿ ಇರುವುದಿಲ್ಲ .

ಉಪ್ಪು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸುವ ಪ್ರಮುಖ ಅಂಶವಾಗಿದೆ . ಉಪ್ಪಿಲ್ಲದೆ ಯಾವ ಊಟವೂ ಪೂರ್ಣವಾಗುವುದಿಲ್ಲ .

ಉಪ್ಪಿನ ನಂತರ ಲವಂಗವು ವಾಸ್ತು ಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಮತ್ತೊಂದು ಅಂಶವಾಗಿದೆ . ಈ ಲವಂಗವು ಪರಿಮಳಯುಕ್ತವಾದ ಪದಾರ್ಥ ಲಕ್ಷ್ಮಿ ದೇವಿಯು ಈ ಸಿಹಿ ವಾಸನೆಯ ವಸ್ತುಗಳಲ್ಲಿ ನೆಲೆಸುತ್ತಾಳೆ ಎ೦ದು ಹೇಳಲಾಗುತ್ತದೆ.

ಈ ಎರಡೂ ವಸ್ತುಗಳು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ . ಮತ್ತು ಮನೆಯಲ್ಲಿನ ಹಣದ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ .ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಹಾಗಾದರೆ ಉಪ್ಪು ಮತ್ತು ಲವಂಗವನ್ನು ಬಳಸಿ ಹಣದ ಸಮಸ್ಯೆಗಳಿಗೆ ಅಂತ್ಯಗೊಳಿಸುವುದು ಹೇಗೆ ಎಂದು ತಿಳಿಯೋಣ .

ಉಪ್ಪು – ಲವಂಗ ಪರಿಹಾರ : – ವಾಸ್ತು ಶಾಸ್ತ್ರದ ಪ್ರಕಾರ ಗಾಜಿನ ಬಟ್ಟಲಿಗೆ ಕಲ್ಲು ಉಪ್ಪನ್ನು ತುಂಬಿ ಅದರಲ್ಲಿ ನಾಲ್ಕೈದು ಲವಂಗ ಹಾಕಿ ಮನೆಯ ಯಾವುದೋ ಮೂಲೆಯಲ್ಲಿ ಇಡಿ.

ಹೀಗೆ ಇಟ್ಟರೆ ಮನೆಯಲ್ಲಿ ಹೆಚ್ಚು ಹಣ ಸಂಗ್ರಹ ಆಗಲು ಶುರುವಾಗುತ್ತದೆ. ಮತ್ತು ಮನೆಯೂ ಸುಭಿಕ್ಷವಾಗಿರುತ್ತದೆ. ಮನೆಯಲ್ಲಿ ಹಣದ ಕೊರತೆಯಾದರೆ, ಅದು ಕೂಡ ದೂರವಾಗುತ್ತದೆ , ಮಾತ್ರವಲ್ಲದೇ ಇದು . ಉತ್ತಮ ವಾಸನೆಯನ್ನು ನೀಡುತ್ತವೆ. ಇದರಿಂದ ಮನೆ ಶಾಂತ ಮತ್ತು ಸಂತೋಷದಿಂದ ಕೂಡಿರುತ್ತದೆ.

ಇದಲ್ಲದೆ ನೀರಿಗೆ ಸ್ವಲ್ಪ ಉಪ್ಪು ಮತ್ತು ಲವಂಗವನ್ನು ಸೇರಿಸಿ ಆ ನೀರನ್ನು ಮನೆಯಾದ್ಯಂತ ಸಿಂಪಡಿಸಿ ಹೀಗೆ ಮಾಡಿದರೆ, ಮನೆಯಲ್ಲಿ ಅದು ಸುವಾಸನೆ ಹರಡುತ್ತದೆ. ಹಾಗೆಯೇ ಮನೆಯ ಶೌಚಾಲಯದಲ್ಲಿ ವಾಸ್ತು ದೋಷ ಇದ್ದಲ್ಲಿ ಗಾಜಿನ ಲೋಟದಲ್ಲಿ ಕಲ್ಲು ಉಪ್ಪನ್ನು ತುಂಬಿ ಅದನ್ನು ಯಾರೂ ಮುಟ್ಟದ ಜಾಗದಲ್ಲಿ ಇಟ್ಟು ಕೆಲವು ದಿನಗಳಿಗೊಮ್ಮೆ ಉಪ್ಪನ್ನು ಬದಲಾಯಿಸಬೇಕು.

ಮನೆಯಲ್ಲಿ ಹಣದ ಸಮಸ್ಯೆ ಗಂಭೀರವಾಗಿ ಇದ್ದರೆ ಗಾಜಿನ ಬಟ್ಟಲಿಗೆ ಎರಡು ಚಮಚ ಕಲ್ಲು ಉಪ್ಪನ್ನು ಹಾಕಿ ನಾಲ್ಕು ಲವಂಗಗಳನ್ನು ಹಾಕಿ ಮನೆಯ ಮೂಲೆಯಲ್ಲಿ ಯಾರಿಗೂ ಕಾಣದಂತೆ ಹಿಡಿ. ಹೀಗೆ ಮಾಡಿದರೆ , ಮನೆಯಲ್ಲಿನ ಹಣದ ಸಮಸ್ಯೆಗಳು ಮುಗಿದು ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ .

ಕಲ್ಲು ಉಪ್ಪಿನಿಂದ ನಿಮ್ಮ ಮನೆಯ ಸ್ವಚ್ಛತೆ : – ಮನೆಯನ್ನು ಸ್ವಚ್ಛಗೊಳಿಸುವಾಗ ಒಂದು ಚಮಚ ಕಲ್ಲು ಉಪ್ಪನ್ನು ನೀರಿಗೆ ಸೇರಿಸಿ ಆ ನೀರನ್ನು ಬಳಸಿ ಮನೆಯನ್ನು ಸ್ವಚ್ಛಗೊಳಿಸುವುದು ತುಂಬಾ ಒಳ್ಳೆಯದು .

ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ . ವಾರಕ್ಕೊಮ್ಮೆ ಉಪ್ಪು ನೀರಿನಿಂದ ಮನೆಯನ್ನು ಶುಚಿಗೊಳಿಸಿದರೆ , ಮನೆಯಲ್ಲಿ ಎದುರಾಗುವ ವಿವಿಧ ಸಮಸ್ಯೆಗಳು ದೂರವಾಗುತ್ತದೆ .

ಉಪ್ಪು ನೀರಿನ ಸ್ನಾನ : – ನಿಮ್ಮ ಸುತ್ತ ನಕಾರಾತ್ಮಕ ಶಕ್ತಿಯ ಭಾವನೆ ಇದ್ದರೆ, ನಿಮ್ಮ ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲು ಉಪ್ಪನ್ನು ಸೇರಿಸಿ, ಪ್ರತಿದಿನ ಸ್ನಾನ ಮಾಡಬೇಕು . ಹೀಗೆ ಮಾಡುವುದರಿಂದ ಎಲ್ಲಾ ಋಣಾತ್ಮಕ ಶಕ್ತಿಗಳು ಹೊರ ಹೋಗುತ್ತವೆ. ನೀವು ಉಲ್ಲಾಸವನ್ನು ಅನುಭವಿಸುವಿರಿ . ಮತ್ತು ಮನಸ್ಸಿನಲ್ಲಿ ಯಾವುದೇ ನಕಾರಾತ್ಮಕ ಭಾವನೆ ಉಂಟಾಗುವುದಿಲ್ಲ .

Leave a Comment