ದರಿದ್ರ ಕಾಡಲು

ನಾವು ಈ ಲೇಖನದಲ್ಲಿ ಮನೆಗೆ ದಾರಿದ್ರ್ಯ ಬರಲು ನಾವು ತಿಳಿದು ತಿಳಿಯದೆ ಮಾಡುವ ಈ 30 ತಪ್ಪುಗಳೇ ಕಾರಣ…!ಊಟ ಮಾಡುವ ವೇಳೆಗೆ ಅನಾವಶ್ಯಕವಾಗಿ ಯೋಚನೆಗಳನ್ನು ಮಾಡುತ್ತಾ , ತಟ್ಟೆಯ ಮುಂದೆ ಕಣ್ಣೀರು ಹಾಕಬಾರದು ಹೆಣ್ಣು ಮಕ್ಕಳು ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡುವುದಿಲ್ಲ . ಬದಲಾಗಿ ತೊಡೆಯ ಮೇಲೆ ಇಟ್ಟುಕೊಂಡು ಊಟವನ್ನು ಮಾಡುತ್ತಾರೆ. ಹೀಗೆ ಮಾಡಬಾರದು. ಇದನ್ನು ರೋಗಿಗಳು, ನಿಶ್ಯಕ್ತಿಯಾಗಿದ್ದವರು ತೊಡೆಯ ಮೇಲೆ ಇಟ್ಟು ಊಟವನ್ನು ಮಾಡುತ್ತಾರೆ . ಆದ್ದರಿಂದ ಊಟದ ತಟ್ಟೆಯನ್ನು ನೆಲದ ಮೇಲೆ ಇಟ್ಟು ಊಟವನ್ನು ಮಾಡಿ ….

ಮನೆಯ ಅವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ ಇದರಿಂದ ಮನಸ್ಸಿನಲ್ಲಿ ಖಿನ್ನತೆ ಉಂಟಾಗುವ ಸಂಭವ ಹೆಚ್ಚು …. ಮನೆಯ ಗೃಹಿಣಿಯ ಹಿಮ್ಮಡಿ ಒಡೆದಿದ್ದರೆ ಅಂತಹ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಕುಲದೇವರಿಗೆ ವರ್ಷಕೊಮ್ಮೆ ಆದರೂ ಕಾಣಿಕೆ ಹಾಕದೇ ಇದ್ದರೆ , ಖಂಡಿತವಾಗಿ ಮನೆಗೆ ಏಳಿಗೆ ಇರುವುದಿಲ್ಲ….

ಸಾಧ್ಯವಾದಷ್ಟು ದೇವರಿಗೆ ಮನೆಯ ಹೂಗಳನ್ನೇ ಅರ್ಪಿಸಲು ಪ್ರಯತ್ನ ಮಾಡಿ. ಹೊರಗಡೆಯಿಂದ ತಂದ ಹೂವಿಗೆ ಮನೆಯ ನೀರನ್ನು ಸಿಂಪಡಿಸಬೇಕು, ಶುದ್ಧ ಮಾಡಿ ನಂತರ ಉಪಯೋಗಿಸಬೇಕು…

ನಿಂತ ಗಡಿಯಾರವು ಅಶುಭ ಲಕ್ಷಣ . ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ….. ಮುಖ್ಯದ್ವಾರದ ಮುಂದೆ ಇರುವ ಮೆಟ್ಟಿಲುಗಳು ಬೆಸ ಸಂಖ್ಯೆಯಲ್ಲಿರಬೇಕು ಇದು ರಸ್ತೆಗಿಂತ ಸ್ವಲ್ಪ ಎತ್ತರವಾಗಿರಬೇಕು …..

ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ ತಾಯಿಗೆ ಕಾಲು ಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳಸಿ. ಆ ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು . ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ….

ದೇವರ ಕೋಣೆಯಲ್ಲಿ ಒಂಟಿ ದೀಪ ಹುರಿಸಬಾರದು . ಸಣ್ಣ ದೀಪವಾದರೂ ಅಡ್ಡಿಯಿಲ್ಲ . ಎರಡು ದೀಪಗಳನ್ನು ಇಡಿ… ಚಾಪೆ ಬಳಸುತ್ತಿದ್ದರೆ ಮಗುಚಿ ಹಾಕಬಾರದು…ಸಂಜೆ ಗುಡಿಸಿದ ಕಸವನ್ನು ಹೊರಗೆ ಹಾಕಬಾರದು ….

ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿ ಇಟ್ಟು ನಂತರ ತೆಗೆದುಕೊಳ್ಳಬೇಕು…ಕುಲದೇವರಿಗೆ, ಇಷ್ಟ ದೇವರಿಗೆ ಮನೆಯ ಎಲ್ಲಾ ಶುಭಕಾರ್ಯಗಳಲ್ಲಿ ಕಾಣಿಕೆಯನ್ನು ತೆಗೆದು ಇಡುವುದನ್ನು ರೂಢಿ ಮಾಡಿ.

ಜೇಡರ ಬಲೆ ಮನೆಯಲ್ಲಿ ಕಟ್ಟಿದ್ದರೆ ತಕ್ಷಣ ನಿವಾರಿಸಿ ಅದು ಅಶುಭ ತರುವ ಸಂಕೇತ ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತೇವೆಯೋ ಅಷ್ಟು ದೈವಿಕ ಕಳೆ ವೃದ್ಧಿಸುವುದು. ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆ ಮಾಡಿದರೆ ಅದು ಕಷ್ಟಗಳು ಎದುರಾಗುವ ಸಂಕೇತ ಅವುಗಳ ಪ್ರಾಣ ಹಾನಿ ಆಗದಂತೆ ಅಲ್ಲಿಂದ ಓಡಿಸಬೇಕು…

ಜೇನಿನ ಗೂಡು ಮನೆಯಲ್ಲಿ ಕಟ್ಟಬಾರದು, ಸಾಧ್ಯವಾದಷ್ಟು ಮನೆಯೊಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ. ಬಾವಲಿಗಳು ಮನೆಯ ಸರಹದ್ದಿನಲ್ಲಿ ವಾಸ ಮಾಡದಂತೆ ಎಚ್ಚರವಹಿಸಿ ..ಹಿರಿಯರು ನಂಬಿಕೊಂಡು ಬಂದ ದೈವಿಗಳಿಗೆ ಅವರದ್ದೇ ಆದ ಸಂಪ್ರದಾಯಗಳಿಗೆ ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ….

ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು, ದಕ್ಷಿಣ ದಿಕ್ಕಿಗೆ ಮುಖ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು ಬರೀ ನೆಲದಲ್ಲಿ ಮಲಗುವುದಾಗಲಿ ಹರಿದ ವಸ್ತ್ರಗಳನ್ನು ಧರಿಸುವುದಾಗಲಿ ಮಾಡಬಾರದು ..ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿ ಮಾಡಿ ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ವೃದ್ಧಿಯಾಗುತ್ತದೆ….

ಆಗ್ನೇಯ ದಿಕ್ಕಿನಲ್ಲಿ ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಆದರೂ ಇಡಬೇಕು ..ಅಡುಗೆ ಮನೆಯಲ್ಲಿ ಔಷಧಿಗಳನ್ನು ಇಡಬೇಡಿ. ಋಣಾತ್ಮಕ ಶಕ್ತಿ ಆವರಿಸುವ ಅಪಾಯವಿರುತ್ತದೆ…

ಆಹಾರ ಸೇವಿಸಿದ ನಂತರ ಎಂಜಲು ಮುಸುರೆಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೇ ಇಡಬೇಡಿ…ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ. ಒಂದು ವೇಳೆ ಕನ್ನಡಿ ತೆಗೆದು ಹಾಕಲು ಸಾಧ್ಯವಿಲ್ಲವೆಂದಾದರೆ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನೆ ಬಟ್ಟೆಯಿಂದ ಮುಚ್ಚಿ ರಾತ್ರಿ ಹೊತ್ತಲ್ಲಿ ಕನ್ನಡಿ ನೋಡುವುದು ಅಷ್ಟು ಒಳ್ಳೆಯದಲ್ಲ…

ವರ್ಷಕ್ಕೆ ಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ ಉತ್ತಮ . ಇದರಿಂದ ವಾಸ್ತು ಸಧೃಡವಾಗಿರುತ್ತದೆ.. ವರ್ಷಕ್ಕೆ ಒಮ್ಮೆಯಾದರೂ (ಅತಿಥಿ ಸತ್ಕಾರ) ಪೂಜೆ ಮಾಡಿ . ಯೋಗ್ಯರಿಗೆ ದಾನ ಮಾಡಿ ಇದರಿಂದ ಸಂಪತ್ತು ದೈವಿಕ ರೂಪ ಪಡೆಯುತ್ತದೆ. ಸಾಧ್ಯವಿದ್ದಲ್ಲಿ ನಿತ್ಯವೂ ಮನೆಯ ಸಮೀಪದ ದೇವಾಲಯದ ದರ್ಶನ ಉತ್ತಮ…

ಸ್ನಾನವಿಲ್ಲದೇ ಊಟ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಅನ್ನುವು ದೇವರಿಗೆ ಸಮಾನ ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ ತಾನಾಗಿಯೇ ಮನೆಯಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ ಹಣದಿಂದ ನಾವು ಏನೆಲ್ಲಾ ಕೊಂಡುಕೊಳ್ಳಬಹುದು ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನಾವು ಪೂರ್ವಜರು ಹೇಳಿಕೊಟ್ಟ ಸಂಪ್ರದಾಯಗಳನ್ನು ಪಾಲಿಸಿದಾಗ ಮಾತ್ರ ಸಾಧ್ಯ……

Leave a Comment