ಸತ್ತವರು ಕನಸಲ್ಲಿ ಬಂದರೆ ಅರ್ಥವೇನು ಗೊತ್ತಾ?

ನಾವು ಈ ಲೇಖನದಲ್ಲಿ, ಸತ್ತವರು ಕನಸಿನಲ್ಲಿ ಬಂದರೆ, ಅರ್ಥವೇನು, ಎಂಬುದನ್ನು ತಿಳಿದುಕೊಳ್ಳೋಣ . ಸತ್ತವರು ಕನಸಿನಲ್ಲಿ , ಬಂದರೆ ಬಹಳ ಮಂದಿ ಭಯ ಬೀಳುತ್ತಾರೆ. ಈ ರೀತಿ ಭಯಪಡುವುದು ಸರಿಯೇ ಎಂದು , ತಿಳಿದುಕೊಳ್ಳೋಣ. ಸತ್ತವರು ಕನಸಿನಲ್ಲಿ ಬಂದರೆ ಯಾವ ರೀತಿಯ ಸೂಚನೆಗಳು ಸಿಗುತ್ತದೆ. ಅವರು ನಿಮಗೆ ಏನನ್ನು ಹೇಳಬೇಕು ಎಂದು ಬಯಸುತ್ತಾರೆ. ಬಹಳಷ್ಟು ಸೂಚನೆಗಳನ್ನು ,ನೀಡುತ್ತದೆ . ಎಂದು ಬಹಳ ಮಂದಿ ಭಾವಿಸುತ್ತಾರೆ. ಹಾಗೆಯೇ ಸ್ವಪ್ನ ಶಾಸ್ತ್ರದಲ್ಲಿ ಒಂದೊಂದು ವಿಷಯಗಳಿಗೆ ಒಂದೊಂದು ಅರ್ಥವಿದೆ.

ಹಾಗೆಯೇ, ಭಗವಂತನು ಕೆಲವು ಭವಿಷ್ಯತ್ತಿನ ವಿಷಯಗಳನ್ನು , ಕನಸಿನ ಸಂಕೇತದಲ್ಲಿ ನೀಡುತ್ತಾನೆ ಎಂದು ಕೂಡ ನಂಬುತ್ತೇವೆ. ಮತ್ತು ಕನಸಿನಲ್ಲಿ ಯಾವ ಯಾವ ವಿಷಯಗಳು ಕಾಣಿಸಿದರೆ ಏನೇನು ಅರ್ಥ ಎಂಬುದನ್ನು ಈಗ ತಿಳಿದುಕೊಳ್ಳೋಣ. ಕನಸುಗಳನ್ನು ಕಾಣುವುದು, ಸಾಮಾನ್ಯ ಪ್ರಕ್ರಿಯೆ. ಪ್ರತಿಯೊಬ್ಬರೂ ಕೂಡ ನಿದ್ದೆ ಮಾಡುವ ಸಮಯದಲ್ಲಿ, ಕನಸುಗಳನ್ನು ಕಾಣುತ್ತಿರುತ್ತಾರೆ. ಈಜಿಪ್ಟ್ ,ಮತ್ತು ಗ್ರೀಕ್ , ದೇಶದ ನಾಗರಿಕತೆಗಳಲ್ಲಿ ,ಕನಸುಗಳನ್ನು ದೈವಿಕ ಚಿನ್ಹೆ ಅಥವಾ ನೂತನ ಶಕ್ತಿಯ ಆಹ್ವಾನ ವೆಂದು, ಪರಿಗಣಿಸುತ್ತಾರೆ.

ಇಲ್ಲಿ ಕನಸುಗಳನ್ನು ಕಾಣುವುದೆಂದರೆ, ದೇವರು ನಿಮಗೆ ಇಷ್ಟವಾದಂತಹ ಅಥವಾ ಯಾವುದೋ ಒಂದು ಸೂಚನೆಯನ್ನು ನೀಡುತ್ತಿದ್ದಾನೆ. ಆ ಭಗವಂತನು ಮುಂಬರುವ ನಿಮ್ಮ ಜೀವನದಲ್ಲಿ ಏನು ನಡೆಯುತ್ತದೆ ಎಂಬುದನ್ನು ಸೂಚಿಸುತ್ತಿದ್ದಾನೆ, ಎಂದು ನಂಬುತ್ತಾರೆ. ಆ ಭಗವಂತನು ನಿಮ್ಮ ಭವಿಷ್ಯತ್ತಿನಲ್ಲಿ ಆಗುವ, ಬದಲಾವಣೆಗಳ ಬಗ್ಗೆಯೂ ಕೂಡ ಸಂಕೇತಗಳನ್ನು , ಕೊಡುತ್ತಿದ್ದಾರೆ. ಎಂದು ಭಾವಿಸುತ್ತಾರೆ. ಮತ್ತೆ ಹಾಗಾದರೆ ಕನಸಿನಲ್ಲಿ , ಯಾವ ಯಾವ ವಿಷಯಗಳು ,

ಬಂದರೆ ಏನು ಫಲ ಎಂಬುದನ್ನು ತಿಳಿದುಕೊಳ್ಳೋಣ ಕನಸಿನಲ್ಲಿ ನಮ್ಮ ಪೂರ್ವಿಕರು ಬಂದರೆ, ಶುಭ ,ಮತ್ತು ಅಶುಭ, ಎರಡು ಸಂಕೇತಗಳನ್ನು, ನೀಡುತ್ತದೆ. ಕನಸಿನಲ್ಲಿ ,ನಮ್ಮ ಹಿರಿಯರು ಬಂದು ನಮ್ಮನ್ನು ಆಶೀರ್ವದಿಸುತ್ತಾರೆ . ಎಂದು ನಂಬುತ್ತಾರೆ. ನಮ್ಮ ಕನಸಿನಲ್ಲಿ ಹಿರಿಯರು ಬಂದು ನಮಗೆ ಏನಾದರೂ ಆಹಾರ ಅಥವಾ ಹಣ್ಣುಗಳನ್ನು ಕೊಟ್ಟರೆ ಅದು ಶುಭ , ಎಂದು ಪರಿಗಣಿಸಲಾಗುತ್ತದೆ. ಜೀವನದಲ್ಲಿ ಕೈಗೊಂಡಂತಹ ಕಾರ್ಯಗಳಲ್ಲಿ ವಿಜಯ ಲಬಿಸುತ್ತದೆ . ಎಂದು ಅರ್ಥ ಅದೇ ರೀತಿ, ನಿಮ್ಮ ಪೂರ್ವಿಕರು ಅಳುತ್ತಿರುವ ರೀತಿ ಅಥವಾ ನಾವು ನಮ್ಮ ಪೂರ್ವಿಕರನ್ನು ನೆನೆದು ಅಳುತ್ತಿರುವ ರೀತಿಯಲ್ಲಿ,

ಕಂಡರೆ ಅದು ಅಷ್ಟೊಂದು ಒಳ್ಳೆಯ ಕನಸಲ್ಲ . ಮುಂಬರುವ ದಿನಗಳಲ್ಲಿ ನಿಮಗೆ ವ್ಯಾಪಾರದಲ್ಲಿ ನಷ್ಟವಾಗುವ ಸಂಭವವಿದೆ . ಎಂದು ಅರ್ಥೈಸಿಕೊಳ್ಳಬೇಕು. ಹಾಗೆಯೇ ಕನಸಿನಲ್ಲಿ ಕೆಂಪು ಬಣ್ಣದ, ವಸ್ತ್ರವನ್ನು ಧರಿಸಿದ ವಧುವನ್ನು ಕಂಡರೆ ಬಹಳ ಒಳ್ಳೆಯದು . ನಿಮ್ಮ ಮನೆಗೆ ಯಾವುದೋ, ಒಂದು ರೀತಿಯಲ್ಲಿ ಲಕ್ಷ್ಮೀದೇವಿಯ ಆಗಮನವಾಗುತ್ತದೆ .ಎಂದು ಅರ್ಥ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಅರ್ಥ. ಕನಸು ಶುಕ್ರವಾರದ ದಿನ ಬಿದ್ದರೆ ನೀವು ಲಕ್ಷ್ಮೀದೇವಿಯನ್ನು ಆರಾಧಿಸಬೇಕು .

ಕೆಲವು ಮಂದಿಗೆ ಕನಸಿನಲ್ಲಿ ,ಮಕ್ಕಳು ಕಾಣಿಸುತ್ತಿರುತ್ತಾರೆ . ಇದು ಬಹಳ ಪ್ರತ್ಯೇಕವಾದ ,ಕನಸು ಎಂದು ಹೇಳಬಹುದು ಒಂದು ಹಸುಗುಸು ಕನಸಿನಲ್ಲಿ ಹಾಲು ಕುಡಿಯುವ ರೀತಿಯಲ್ಲಿ ಕಂಡರೆ ನಿಮ್ಮ ಕೋರಿಕೆ , ಅತಿ ಬೇಗನೆ ನೆರವೇರುತ್ತದೆ . ಎಂದು ಅರ್ಥ. ಒಂದು ವೇಳೆ ಮಕ್ಕಳು ಆಟ ಆಡುವ ರೀತಿಯಲ್ಲಿ ಕನಸು ಬಿದ್ದರೆ ಆ ಭಗವಂತನ ಕೃಪೆಗೆ, ಪಾತ್ರರಾಗಿದ್ದೀರಿ. ಎಂದು ಅರ್ಥ ಗೋವುಗಳು ಕಾಣಿಸಿದರೆ ನಿಮಗೆ ಜಯ ಯಶಸ್ಸು ಸಿಗುತ್ತದೆ, ನೀವು ಗೋಮಾತೆಗೆ ನೀರು, ಮತ್ತು ಆಹಾರಗಳನ್ನು ನೀಡಬೇಕು.

ಮತ್ತು ಗೋಮಾತೆಯನ್ನು ಪೂಜಿಸಬೇಕು. ಹಾಗೆ ಮಾಡಿದರೆ ,ಪುಣ್ಯ ಬರುತ್ತದೆ. ಹಾಗೆಯೇ ಮರಣದ ನಂತರ ನಿಮಗೆ ಸ್ವರ್ಗವು, ಪ್ರಾಪ್ತಿಯಾಗುತ್ತದೆ . ನಮ್ಮ ಹಿರಿಯರು ಹೇಳುತ್ತಾರೆ .ಎಂದು ಹಾಗೆ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿದ್ದೀರಿ . ಹಾಗೆಯೇ ಕನಸಿನಲ್ಲಿ ಮಂಗಳಮುಖಿಯರು ಕಾಣಿಸಿದರೆ , ಶುಭ ಮತ್ತು ಅಶುಭ ಎರಡೂ ಫಲಗಳನ್ನು ನೀಡುತ್ತದೆ ಸ್ವಪ್ನ ಶಾಸ್ತ್ರದ ಪ್ರಕಾರ ಮಂಗಳಮುಖಿಯರಿಗೆ ದುಡ್ಡು ಕೊಡುವುದು, ಶುಭ ಎಂದು ಹೇಳಲಾಗುತ್ತದೆ. ಇದು ಜಾತಕದಲ್ಲಿ ಬುಧನನ್ನು ಭದ್ರಪಡಿಸುತ್ತದೆ. ಹಿರಿಯರ ನಂಬಿಕೆಯ ಪ್ರಕಾರ ನಿಮ್ಮ ಕನಸಿನಲ್ಲಿ ಅವರು ಬಂದರೆ ನಿಜ ಜೀವನದಲ್ಲಿ ಅವರಿಗೆ ಹಣ ನೀಡಬೇಕು.

ಇದರಿಂದ ನಿಮಗೆ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ. ಆದರೆ ಅವರಿಗೆ ನೋಟಿನ ರೂಪದಲ್ಲಿ, ಕೊಡದೆ ನಾಣ್ಯದ ರೂಪದಲ್ಲಿ, ಕೊಡಬೇಕು. ಹೀಗೆ ಮಾಡಿದಾಗ ಬುಧನು ಬಲ ಕೊಡುತ್ತಾನೆ. ಹೀಗೆ ಮಾಡಿದಾಗ ಶನಿಯ ದೋಷವು ಕಳೆಯುತ್ತದೆ . ಎಂದು ಹಿರಿಯರು ಹೇಳುತ್ತಾರೆ . ಹಾಗೆಯೇ ಮಂಗಳಮುಖಿಯರು ಮನೆಗೆ ಬಂದು ಬರಿ ಕೈಯಲ್ಲಿ ಹೋದರೆ, ಅದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಕನಸು ಬಿದ್ದರೆ , ನಿಜ ಜೀವನದಲ್ಲಿ ಅವರಿಗೆ ದಾನ ಮಾಡಬೇಕು. ಕೆಲವು ಕನಸುಗಳೆಂಬುದು ,ಬಹಳ ವಿಶಿಷ್ಟವಾಗಿರುತ್ತದೆ.

ಒಬ್ಬ ವ್ಯಕ್ತಿಯ ಆಸೆಗಳು ಆಕಾಂಕ್ಷೆಗಳು ಆಲೋಚನೆಗಳು ಹಾಗೆಯೇ ನಿರಾಸೆಗಳು ಆ ವ್ಯಕ್ತಿಯ ಕನಸಿನ ರೂಪದಲ್ಲಿ ,ವ್ಯಕ್ತವಾಗುತ್ತದೆ. ಇವರ ಪ್ರಕಾರ ಸಂಪತ್ತು ಮತ್ತು ವಿಜಯಕ್ಕೆ ಸಂಬಂಧಿಸಿದ, ವಸ್ತುಗಳು ಬರುತ್ತವೆ. ಎಂದು ಅರ್ಥ ಮಾಡಿಕೊಳ್ಳಬೇಕು. ಈ ಆರು ವಿಷಯಗಳು , ನಿಮ್ಮ ಕನಸಿನಲ್ಲಿ ಬಂದರೆ, ಅವುಗಳ ಅರ್ಥವೇನು , ಎಂದು ತಿಳಿದುಕೊಳ್ಳೋಣ .ಬಂಗಾರ ನಿಮ್ಮ ಕನಸಲ್ಲಿ ಬಂದರೆ ,ಅದು ನಿಮಗೆ ಸಂಪತ್ತು ,ಬರುವ ಸೂಚನೆ ಆಗಿರುತ್ತದೆ . ಆಭರಣ ಧರಿಸಿದ ಹಾಗೆ ಕನಸು ಬಂದರೆ, ಆಭರಣಗಳು ,ಮತ್ತು ಅಪಾರ ಧನ ಸಂಪತ್ತು ,ನಿಮಗೆ ಬರುತ್ತದೆ .

ಎಂದು ಸೂಚಿಸುತ್ತದೆ. ಹಾಗೆಯೇ ಬಂಗಾರದ ಬಹುಮಾನವನ್ನು, ಪಡೆಯುವ ಕನಸು ಬಂದರೆ , ಜೀವನದಲ್ಲಿ ತುಂಬಾ ಯಶಸ್ಸು ಪಡೆಯುತ್ತೀರಾ. ಅದೇ ರೀತಿ ಕನಸಿನಲ್ಲಿ, ಬಂಗಾರದ ಮಡಿಕೆಯನ್ನು ನೋಡಿದರೆ ,ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಎಂದು ಸೂಚಿಸುತ್ತದೆ. ಕನಸಿನಲ್ಲಿ ಧಾನ್ಯಗಳು ಬಂದರೆ, ಎಲ್ಲವೂ ಕೂಡಿಬರುತ್ತದೆ. ಎಂದು ಹೇಳುತ್ತಾರೆ. ದಾನ್ಯಗಳು ಭೂಮಿಯ ಪುಷ್ಕಲವಾದ, ವರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ . ಧಾನ್ಯಗಳ ಬಗ್ಗೆ ಕನಸು ಬಂದರೆ ,ಅದೃಷ್ಟವು ನಮ್ಮನ್ನು ಹುಡುಕಿಕೊಂಡು, ಬರುತ್ತದೆ ಎಂದು ನಂಬಲಾಗಿದೆ. ಹಾಗೆಯೇ, ನಮ್ಮ ಕನಸಿನಲ್ಲಿ 8 ರ ಸಂಖ್ಯೆಯನ್ನು, ನೋಡಿದರೆ ನಾವೇ ಅದೃಷ್ಟವಂತರು .

ಒಂದು ವೇಳೆ ಹಾಗೆ ಕನಸು ಬಂದರೆ ಸಿರಿಸಂಪತ್ತು ಭೌತಿಕ ಲಾಭಗಳು ನಿಮ್ಮ ಕೈ ಸೇರುತ್ತದೆ .ಎಂದು ಅರ್ಥ. ಚೈನೀಸ್ ಮತ್ತು ಇತರ ಆಸ್ಟ್ರೇಲಿಯಾ ಸಂಸ್ಕೃತಿಗಳಲ್ಲಿ, 8 ಎಂಬ ಸಂಖ್ಯೆಯನ್ನು ,ಅದೃಷ್ಟದ ಸಂಖ್ಯೆ ಎಂದು ಭಾವಿಸುತ್ತಾರೆ. ಆದ್ದರಿಂದಲೇ ,ಕನಸಿನಲ್ಲಿ 8ರ ಸಂಖ್ಯೆ ಬಂದರೆ, ಅದೃಷ್ಟವೆಂದು, ಪರಿಗಣಿಸುತ್ತಾರೆ .ಆದರೆ ಈ ರೀತಿಯ ಕನಸು ಬೀಳುವುದು ತುಂಬಾ ಅಪರೂಪ ಎಂದು ಹೇಳುತ್ತಾರೆ. ಕನಸಿನಲ್ಲಿ ಹದ್ದುಗಳು ಕಂಡರೆ, ಧೈರ್ಯಕ್ಕೆ ಪ್ರತಿರೂಪ ಎಂದು ಭಾವಿಸಬೇಕು .ಹದ್ದುಗಳು ಕನಸಿನಲ್ಲಿ ಕಾಣಿಸಿದರೆ , ಅವರ ಸಂಕಲ್ಪವು ಬಹುಬೇಗನೆ ನೆರವೇರುತ್ತದೆ .ಎಂದು ಹೇಳಲಾಗುತ್ತದೆ .ಪಕ್ಷಿಗಳ ಬಗ್ಗೆ ಕನಸು ಬಂದರೆ,

ನಿಮ್ಮ ದೃಢಸಂಕಲ್ಪವನ್ನು ಸೂಚಿಸುತ್ತದೆ. ಹಾಗೆ ನೀವು ಕೈಗೊಂಡಂತಹ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತದೆ .ನೀವು ಯಾವುದಾದರು ವಿಷಯದಲ್ಲಿ ಹೋರಾಡುತ್ತಿದ್ದರೆ ,ನಿಮ್ಮ ಗುರಿ ತಲುಪುತ್ತೀರಾ ಎಂದು ಹೇಳುತ್ತದೆ. ಸ್ವಪ್ನ ಶಾಸ್ತ್ರ . ಮಾಂಸಹಾರವನ್ನು ಸೇವಿಸುವ ಹಾಗೆ , ಕಂಡರೆ ಅದು ಕೂಡ ನಿಮ್ಮ ಏಳಿಗೆಯನ್ನು ಸೂಚಿಸುತ್ತದೆ. ಆದರೆ ಹಸಿ ಮಾಂಸವನ್ನು ತಿನ್ನುವ ಹಾಗೆ ,ಕನಸು ಬಂದರೆ ಪ್ರತಿಕೂಲ. ಪ್ರಭಾವವನ್ನು ಸೂಚಿಸುತ್ತದೆ .

ನಿಮ್ಮ ಕನಸಿನಲ್ಲಿ ಹಣ ಕಂಡರೆ ಭೌತಿಕವಾಗಿ ಮತ್ತು ಆರ್ಥಿಕವಾಗಿ ವಿಜಯದ ಲಾಭವನ್ನು ಸೂಚಿಸುತ್ತದೆ. ಎಷ್ಟು ಕಷ್ಟಗಳಿದ್ದರೂ ಕೂಡ ವಿಜಯ ಮತ್ತು ಆನಂದ ನಿಮ್ಮದಾಗುತ್ತದೆ. ಎಂದು ಅರ್ಥ. ವಿಜಯವು ನಿಮ್ಮ ಕಡೆ ಇದೆ. ಎಂದು ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತೀರಾ. ಈ ಕನಸಿಗೆ ಎಂದು ಅರ್ಥ . ಹಾಗೆ ಕನಸಿನಲ್ಲಿ ಸಗಣಿಯನ್ನು ಕಂಡರೆ , ಅಥವಾ ನಿಮ್ಮ ಕೈಯಲ್ಲಿ ಮುಟ್ಟುವ ಕನಸು ಬಂದರೆ ,ಇದು ಕೂಡ ಬಹಳ ಒಳ್ಳೆಯ ಕನಸು.

ಸಂಪತ್ತು ಮತ್ತು ಆರ್ಥಿಕ ಲಾಭದ ಪ್ರತೀಕವೆಂದು ಭಾವಿಸಬೇಕು. ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ನೀವು ಸಗಣಿಯನ್ನು ತುಳಿದರೆ, ನೀವು ನಿಮ್ಮ ನಿಜ ಜೀವನದಲ್ಲಿ ಊಹಿಸಲಾಗದಂತಹ , ಲಾಭವನ್ನು ಪಡೆಯುತ್ತೀರಾ ಎಂದು ಅರ್ಥ. ಇಂತಹ ಕನಸುಗಳು ನಿಮ್ಮ ಕುಟುಂಬಕ್ಕೆ ಲಾಭವನ್ನು ಸೂಚಿಸುತ್ತದೆ . ಎಂದು ಹೇಳಬಹುದು . ಹಾಗೆಯೆ ಕನಸಿನಲ್ಲಿ ಯಾರಾದರೂ ನಿಮ್ಮನ್ನು ಅಟ್ಟಿಸಿಕೊಂಡು, ಬರುವಂತೆ ಬಿದ್ದರೆ ನೀವು ಯಾವುದೋ ಒಂದು ವಿಷಯದ ಬಗ್ಗೆ ತಪ್ಪಿಸಿಕೊಂಡು, ಓಡಾಡುತ್ತೀರಾ ಎಂದು ಅರ್ಥ. ನಿಮಗೆ ಇರುವ ಭಯದ ಪ್ರತಿರೂಪವಾಗಿ ಈ ರೀತಿ ಕನಸು ಬರುತ್ತಿದೆ ಎಂದು ಅರ್ಥ.

ಆದರೆ ನಿಮ್ಮನ್ನು ಇಲ್ಲಿ ಯಾರು ಹಿಂಬಾಲಿಸುತ್ತಿದ್ದಾರೆ. ಎಂಬುದು ಮುಖ್ಯವಾದದ್ದು .ಅಂದರೆ ಕನಸಿನಲ್ಲಿ ಒಂದು ಪ್ರಾಣಿಯು, ನಮ್ಮನ್ನು ಅಟ್ಟಾಡಿಸಿಕೊಂಡು ಬಂದರೆ , ನಮ್ಮ ಕೋಪ ತಾಪ ಗಳನ್ನು , ಮರೆಮಾಚುತ್ತಾ ಇದ್ದೀರಾ, ಎಂದು ಅರ್ಥ. ಒಂದು ವೇಳೆ ನೀವು ಹುಡುಗ ರಾಗಿದ್ದು, ಹುಡುಗಿಯರು ಹಿಂಬಾಲಿಸಿದರೆ, ಅಥವಾ ಹುಡುಗಿಯರಾಗಿದ್ದು, ಹುಡುಗರು ನಿಮ್ಮನ್ನು ಹಿಂಬಾಲಿಸಿದರೆ ಎಂದು ನಿಮ್ಮ ಗತ ಜೀವನದ ನೆನಪುಗಳಿಂದಾಗಿ, ಮತ್ತೊಮ್ಮೆ,

ನೀವು ಪ್ರೀತಿಯಲ್ಲಿ ಬೀಳಲು ಹಿಂಜರಿಯುತ್ತಿದ್ದೀರಾ, ಎಂದು ಅರ್ಥ. ಕನಸಿನಲ್ಲಿ ಅಸ್ಪಷ್ಟವಾದ ಅಂತಹ ರೂಪ ಕಾಣಿಸಿದರೆ , ನಿಮ್ಮ ಬಾಲ್ಯದಲ್ಲಿ ಮರೆ ಮಾಚುತ್ತಿದ್ದೀರಾ, ಎಂದು ಅರ್ಥ . ಮತ್ತು ಬಹಳ ಎತ್ತರದಿಂದ ಬೀಳುವ ಹಾಗೆ ಕನಸು ಕಂಡರೆ ಇದು ಅಷ್ಟು, ಒಳ್ಳೆಯ ಸೂಚನೆಯಲ್ಲ .ಇದು ನಿಜ ಜೀವನದಲ್ಲಿ ,ಏನೋ ಒಂದು ಕೆಡುಕನ್ನು ಸೂಚಿಸುತ್ತದೆ .ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದರೆ ಮಾನಸಿಕ ಶಾಸ್ತ್ರಜ್ಞರು ಇದನ್ನು ಒಪ್ಪುವುದಿಲ್ಲ. ಅವರ ಪ್ರಕಾರ ನೀವು ಮಾಡಬೇಕು. ಎಂದ ಕೆಲಸಗಳನ್ನು ನೀವು ಮಾಡಲಾಗುತ್ತಿಲ್ಲ .ಎಂದು ಅರ್ಥ. ಅಥವಾ ಯಾವುದೋ, ಗೊಂದಲದಲ್ಲಿ ಇದ್ದೀರಾ, ಎಂದು ಈ ಕನಸು ಸೂಚಿಸುತ್ತದೆ.

ಆ ಸಮಯದಲ್ಲಿ , ನಿಮ್ಮ ಯೋಜನೆಗಳ ಬಗ್ಗೆ ಸರಿಯಾಗಿ ಯೋಚಿಸಿ, ಮುನ್ನಡೆಯಬೇಕು .ಎಂದು ಹೇಳುತ್ತಾರೆ. ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಗ್ನವಾಗಿರುವ, ಕನಸು ಬಂದರೆ , ನೀವು ಯಾವುದೋ ಒಂದು ರಹಸ್ಯವಾದ ವಿಷಯವನ್ನು, ಮರೆಮಾಚುತ್ತಿದ್ದೀರಾ ,ಮತ್ತು ಅದು ಶೀಘ್ರದಲ್ಲಿ ಇತರರಿಗೆ ತಿಳಿಯುವ ಸಂದರ್ಭ ಬಂದಿದೆ . ಎಂದು ಅರ್ಥ. ಕನಸಿನಲ್ಲಿ ಹಲ್ಲುಗಳು ಬೀಳುವುದು , ಕಂಡರೆ ನೀವು ನಿಮ್ಮ ರೂಪದ ಬಗ್ಗೆ ತುಂಬಾ ಯೋಚನೆ ಮಾಡುತ್ತಿದ್ದೀರಾ , ಎಂದು ಅರ್ಥ. ನಿಮ್ಮ ಕುಟುಂಬದಲ್ಲಿ, ಯಾರಾದರೂ, ಸತ್ತ ಹಾಗೆ ಕನಸು ಬಂದರೆ, ನಿಮ್ಮ ಜೀವನದಲ್ಲಿ

ದೊಡ್ಡ ಬದಲಾವಣೆಯ ಸಮಯ, ಬಂದಿದೆ ,ಎಂದು ಅರ್ಥ. ನೀವು ಬಹಳ ಚಿಂತೆಯಲ್ಲಿದ್ದೀರಾ ಎಂದು ಈ ಕನಸು ಸೂಚಿಸುತ್ತದೆ. ನೀವು ನಿಮ್ಮ ಭವಿಷ್ಯತ್ತಿನ ಬಗ್ಗೆ ತುಂಬಾ ಚಿಂತಿಸುತ್ತಿದ್ದೀರಾ , ಮತ್ತು ಗತಜೀವನದ ಬಗ್ಗೆ ನೆನೆದು ಬಹಳ ದುಃಖಿಸುತ್ತಿದ್ದೀರಾ ,ಎಂದು ಅರ್ಥ. ನಿಮ್ಮ ಕನಸಿನಲ್ಲಿ ಹಿರಿಯರು, ಬಂದರೆ ನಿಮ್ಮ ಜೀವನದಲ್ಲಿ ಕೆಲವು ಸೂಚನೆಗಳನ್ನು ಕೊಡುತ್ತಿದ್ದಾರೆ. ಎಂದು ತಿಳಿದುಕೊಳ್ಳಬೇಕು. ಅದರಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಎಂದು ಜಾಗೃತವಾಗಿ, ನೆನಪಿನಲ್ಲಿಟ್ಟುಕೊಳ್ಳಬೇಕು. ಭಯಪಡದೆ , ಬಹಳ ಜಾಗರೂಕರಾಗಿ , ನಿಮ್ಮ ಜೀವನದಲ್ಲಿ ಮುನ್ನಡೆಯಿರಿ.

Leave a Comment