ಯಾರಾದರೂ ಈ 5 ವಸ್ತುಗಳನ್ನು ಕೊಟ್ಟರೆ ನಿರಾಕರಿಸದೆ ತಗೆದುಕೊಳ್ಳಿ ಅದೃಷ್ಟ ಬರುತ್ತೆ

ಯಾರಾದರೂ ಈ 5 ವಸ್ತುಗಳನ್ನು ಕೊಡಲು ಬಂದರೆ ಬೇಡ ಎನ್ನಬೇಡಿ. ಮೊದಲು ತೆಗೆದುಕೊಂಡೆ ಜೀವನದಲ್ಲಿ ನೀವು ನೋಡಿರಲಾರದಷ್ಟು ಹಣ ಬಂದು ಸೇರುತ್ತದೆ. ಅದೃಷ್ಟ ಅನ್ನೋದು ಯಾವಾಗ ಬರುತ್ತದೆ ಹೇಗೆ ಬರುತ್ತದೆ ಯಾವಾಗ ಹೋಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಅದೃಷ್ಟ ನಮ್ಮ ಸುತ್ತಮುತ್ತಲೇ ಇದ್ದರು ನಮಗೆ ತಿಳಿಯುವುದೇ ಇಲ್ಲ. ಕಡು ಬಡವನಾಗಿದ್ದ ಮನುಷ್ಯ ಒಂದೇ ದಿನದಲ್ಲಿ ದೊಡ್ಡ ಶ್ರೀಮಂತನಾಗಬಹುದು. ಒಬ್ಬ ಮನುಷ್ಯ ಶ್ರೀಮಂತನಾಗಲು ಅಥವಾ ಬಡವನಾಗಲು ಬಹಳ ಸಮಯ ಬೇಕಾಗಿಲ್ಲ.

ಇದೆಲ್ಲ ಭಗವಂತನ ಲೀಲೆ. ಅದೃಷ್ಟ ದುರಾದೃಷ್ಟಗಳು ಪ್ರತಿಯೊಬ್ಬರ ಹಣೆಬರದಲ್ಲಿ ನಿರ್ಧಾರವಾಗಿರುತ್ತದೆ. ಅದೃಷ್ಟ ಇದ್ದರೆ ಬಿಕ್ಷುಕ ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತನಾಗುತ್ತಾನೆ. ದುರಾದೃಷ್ಟ ಬೆನ್ನಟ್ಟಿದರೆ ಸಿರಿವಂತ ಬೀದಿಗೆ ಬೀಳುತ್ತಾನೆ. ಜೀವನದಲ್ಲಿ ಕೆಲವೊಂದು ಸೂಚನೆಗಳು ಮುಂದಿನ ದಿನಗಳಲ್ಲಿ ನಿಮಗೆ ಬಾರಿ ಅದೃಷ್ಟವನ್ನು ತಂದು ಕೊಡುವುದರ ಸೂಚಕವಾಗಿರುತ್ತದೆ.

ನಿಮಗೆ ಬೆಳಗ್ಗೆ ಎದ್ದ ತಕ್ಷಣ ಗೋವಿನ ಅಥವಾ ಮುತ್ತೈದೆಯರ ದರ್ಶನವಾದರೆ ಆ ದಿನಪೂರ್ತಿ ಬಹಳ ಲಾಭದಾಯಕವಾಗಿರುತ್ತದೆ. ಇದರಿಂದ ಮುಂದಿನ ದಿವಸಗಳಲ್ಲಿ ಬಹಳ ಅದೃಷ್ಟ ಇದೆ ಎಂದು ತಿಳಿಯಬಹುದು. ಇನ್ನು ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಕೆಲವು ವ್ಯಕ್ತಿಗಳನ್ನು ನೋಡಿದಾಗ ದಿನಪೂರ್ತಿ ಸಂತೋಷದಿಂದ ಇರುತ್ತಾರೆ. ಅಂದುಕೊಂಡದ್ದಲ್ಲ ನೆರವೇರುತ್ತದೆ.

ಕೆಲಸಗಳು ಅಡೆತಡೆ ಇಲ್ಲದೆ ನೆರವೇರುತ್ತವೆ. ಕೆಲಸದ ನಿಮಿತ್ತ ಮನೆಯಿಂದ ಹೊರಡುವಾಗ ತುಂಬಿದ ಕೊಡದ ನೀರನ್ನು ಕಂಡರೆ ಅಥವಾ ಪಾತ್ರೆಯಲ್ಲಿ ಪೂರ್ಣ ತುಂಬಿರುವ ಹಾಲನ್ನು ಕಂಡರೆ ಈ ದೃಶ್ಯಗಳು ನಿಮಗೆ ಅದೃಷ್ಟವನ್ನು ತರುವ ಮುನ್ಸೂಚನೆಯಾಗಿದೆ. ನಿಮ್ಮ ಮನೆಯ ಮುಂದೆ ಬೆಕ್ಕು ಮರಿ ಹಾಕಿದರೆ ಅದು ಸಹ ನಿಮಗೆ ಅದೃಷ್ಟವನ್ನು ತಂದು ಕೊಡುವ ಸಂಕೇತವಾಗಿದೆ.

ಕೆಲವೊಂದು ಪಕ್ಷಿಗಳು ಬೆಳಗ್ಗೆ ಎದ್ದ ತಕ್ಷಣ ಕಣ್ಣಿಗೆ ಕಂಡರೆ ಅದು ಕೂಡ ಅದೃಷ್ಟವೇ. ಆ ದಿನ ಬೆಳಗ್ಗೆ ಹೇಳುತ್ತಿದ್ದ ಹಾಗೆ ಖುಷಿಯಾದ ಅನುಭವವಾದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಸಮಯ ಎದುರಾಗಲಿದೆ ಎನ್ನುವುದರ ಸಂಕೇತ. ಬೆಳಗ್ಗೆ ಹೇಳುತ್ತಿದ್ದ ಹಾಗೆ ಕೆಲವರಿಗೆ ಧನಪ್ರಾಪ್ತಿಯಾಗುವುದು ಆಗುತ್ತದೆ ಇದು ಸಹ ಮುಂದಿನ ದಿನಗಳಲ್ಲಿ ಒಳ್ಳೆಯದಾಗುವುದರ ಸಂಕೇತ.

ಈ ರೀತಿ ಕೆಲವರಿಗೆ ಒಳ್ಳೆಯ ಸಮಯ ಬರುವ ಮುನ್ನ ಅದೃಷ್ಟ ಬರುವ ಮುನ್ನ, ಅಥವಾ ಸಂತೋಷದ ದಿನಗಳು ಬರುವ ಮುನ್ನ ಕೆಲವೊಂದು ಮುನ್ಸೂಚನೆಗಳು ಸಿಕ್ಕಿರುತ್ತವೆ, ಆದರೆ ಬಹಳಷ್ಟು ಜನ ಅದನ್ನು ಗಮನಿಸಿರುವುದಿಲ್ಲ. ನಿಮ್ಮ ಮನೆಗೆ ಕೆಲವೊಂದು ವಸ್ತುಗಳು ಬಂದಾಗ ನಿರಾಕರಿಸುವುದು ಅಥವಾ ಕೆಲವೊಂದು ವ್ಯಕ್ತಿಗಳನ್ನು ಅವಮಾನಿಸಿದರೆ,

ನಿಮ್ಮ ಜೀವನದಲ್ಲಿ ಅದೃಷ್ಟ ದೂರವಾಗುತ್ತದೆ. ಕೆಲವೊಂದು ಘಟನೆಗಳು ಜೀವನದಲ್ಲಿ ಮುಂದೆ ಬರುವ ಅದೃಷ್ಟದ ಘಟನೆಗಳನ್ನು ಸೂಚಿಸುತ್ತದೆ. ಹಾಗಾಗಿ ಕೆಲವು ವಸ್ತುಗಳು ಯಾವಾಗ ಎಲ್ಲಿ ಸಿಕ್ಕರೂ ಸಹ ನಿರಾಕರಿಸಬಾರದು. ಅವುಗಳಲ್ಲಿ ಮೊದಲನೆಯದು ಶಿವನ ಪ್ರಸಾದ. ಸೋಮವಾರದ ದಿನ ಶಿವನ ವಾರವಾಗಿದ್ದು ಈ ದಿನ ಉಪವಾಸ ಮಾಡುವವರಿಗೆ ಶುಭವಾಗುತ್ತದೆ.

ಅವಿವಾಹಿತ ಮಹಿಳೆಯರು ಸೋಮವಾರ ಉಪವಾಸ ಮಾಡುವುದರಿಂದ ಶಿವನಂತಹ ಪತಿಯ ಸಿಗುತ್ತಾನೆ ಎಂಬುವ ನಂಬಿಕೆ ಇದೆ. ಇವನು ಸಹ ಭಾವ ನಂಬಿಕೆ ಮತ್ತು ಭಕ್ತಿಗೆ ಸುಲಭವಾಗಿ ಒಲಿಯುತ್ತಾನೆ. ಹೀಗಾಗಿ ಶಿವನನ್ನು ಬೋಲೇ ಬಾಬಾ ಎಂದು ಕರೆಯುತ್ತಾರೆ. ಶಿವ ಪೂಜೆಯಲ್ಲಿ ದೋಷ ಕಂಡುಬಂದರೆ ಶಿವನಿಗೆ ಕೋಪ ಉಂಟಾಗುತ್ತದೆ. ಪೂಜೆಯಲ್ಲಿ ನೈವೇದ್ಯ ಮಾಡಿದ್ದುದನ್ನು ಭಕ್ತರಿಗೆ ಹಂಚಿದಾಗ ಅದುವೇ ಪ್ರಸಾದವಾಗುತ್ತದೆ. ಅಂತಹ ಪ್ರಸಾದವನ್ನು ನಾವು ನಿರಾಕರಿಸಬಾರದು. ನೀವು ಪೂಜೆಯಲ್ಲಿ ಭಾಗವಹಿಸುತ್ತಿದ್ದಾಗೆಯೂ ನಿಮಗೆ ಪ್ರಸಾದ ದೊರೆತರೆ ಸಾಕ್ಷಾತ್ ಶಿವನ ಅನುಗ್ರಹ ನಿಮ್ಮ ಮೇಲೆ ಇದೆ ಎಂದೆ ಭಾವಿಸಬೇಕು.

Leave a Comment