ನಿಮ್ಮ ಮೇಲೆ ದೃಷ್ಟಿ ಬೀಳುತ್ತಾ

ಪದೇ ಪದೇ ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳುತ್ತಾ…..ನಿಮ್ಮ ಏಳಿಗೆ ಕಂಡು ಹೊಟ್ಟೆಕಿಚ್ಚು ಪಡುತ್ತಾರಾ? ನೆಮ್ಮದಿ ಇಲ್ವಾ? ಮನುಷ್ಯರ ಕಣ್ಣು ಬಿದ್ದರೆ ಮರವೇ ಮುರಿಯುತ್ತಂತೆ. ಜೊತೆಯಲ್ಲೇ ಇದ್ದು ಕೆಟ್ಟದಾಗಲಿ ಎಂದು ಬಯಸುವ ಜನರು ತುಂಬಾ ಇದ್ದಾರೆ. ಮಾತಲ್ಲಿ ಬಣ್ಣ ಮನಸಲ್ಲಿ ಸುಣ್ಣ ಇಟ್ಟುಕೊಂಡಿರುವ ಜನರಿದ್ದಾರೆ ಎಚ್ಚರ.
ಇಂತಹವರ ದೃಷ್ಠಿ ಬಿದ್ದಾಗ ಮನುಷ್ಯ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಹೋಗುತ್ತಾನೆ.
ಮುಖದಲ್ಲಿ ತೇಜಸ್ಸು ಚೈತನ್ಯ ಎರಡು ಇರುವುದಿಲ್ಲ.

ಅವುಗಳನ್ನು ಮತ್ತೆ ಮರಳಿ ತರಬೇಕು ಅಂದರೆ ದೃಷ್ಟಿ ಅವಶ್ಯಕವಾಗಿ ತೆಗೆಯಬೇಕು.ದೃಷ್ಟಿಯಲ್ಲಿ ನಾಲ್ಕು ವಿಧವಾಗಿ ಇರುತ್ತವೆ. 1,ಕಣ್ಣಿನ ದೃಷ್ಟಿ. 2.ನರದೋಷ, 3.ನರಪೀಡೆ,4, ನರ ಶಾಪ ಕಣ್ಣಿನ ದೃಷ್ಟಿ ತಗಲುವುದರಿಂದ ನಮ್ಮ ಅಭಿವೃದ್ಧಿ ದಿನೇ ದಿನೇ ಕುಂಠಿತವಾಗುತ್ತದೆ ಮತ್ತು ಕಡಮೆಯಾಗುತ್ತಾ ಹೋಗುತ್ತದೆ. ಹಾಗೆಯೇ ಕುಟುಂಬದವರು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ತಲೆನೋವು, ತಲೆಸುತ್ತು, ವಾಂತಿ, ಹೊಟ್ಟೆ ನೋವು ಮತ್ತು ಊಟ ತಿಂಡಿ ಸರಿಯಾಗಿ ಮಾಡುವುದಿಲ್ಲ. ಮಂಕಾಗಿ ಇರುವುದು ನಿಶ್ಯಕ್ತಿ ಇವೆಲ್ಲಾ ದೃಷ್ಟಿ ದೋಷದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು.

ದೃಷ್ಟಿ ತಗಲುಬಾರದು ಎಂದರೆ ನೀವು ಅಂತಹ ಜನರ ಮಧ್ಯೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ.
ಹಣೆಯ ಮೇಲೆ ಸದಾ ಕುಂಕುಮ ಇರುವಂತೆ ನೋಡಿಕೊಳ್ಳಿ. ಆಂಜನೇಯಸ್ವಾಮಿ ದೇವಸ್ಥಾನದ ಕುಂಕುಮ ಇಟ್ಟರೆ ದೃಷ್ಟಿ ತಗಲುವುದೇ ಇಲ್ಲ.ಗಂಡಸರು ಕೆಂಪು ಬಣ್ಣದ ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ನರ ದೃಷ್ಠಿ ತಗಲುವುದಿಲ್ಲ.

ಚಿಕ್ಕ ಮಕ್ಕಳಿಗೆ ಕಪ್ಪು ಬಣ್ಣದ ನೂಲನ್ನು ಕೈಗೆ ಮತ್ತು ಕಾಲಿಗೆ ಕಟ್ಟುವುದರಿಂದ ಕೆಟ್ಟ ದೃಷ್ಟಿ ತಗಲುವುದಿಲ್ಲ.
ಕಣ್ಣಿಗೆ ಹಚ್ಚುವ ಕಾಡಿಗೆ ಕೂಡ ಕೆಟ್ಟ ದೃಷ್ಟಿಯನ್ನು ತಡೆಯುತ್ತದೆ. ಮನೆಯ ಮುಂದೆ ಇರುವ ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಚೆನ್ನಾಗಿ ಬೆಳೆಸಿದರೆ ಒಣಗದಂತೆ ನೋಡಿಕೊಂಡರೆ ನರದೃಷ್ಟಿ ಮನೆಯ ಮೇಲೆ ಮತ್ತು ಮನೆಯಲ್ಲಿ ವಾಸಿಸುವ ಯಾವ ಮನುಷ್ಯ ಮತ್ತು ಪ್ರಾಣಿಗೂ ಕೆಟ್ಟ ಶಕ್ತಿಯ ದೃಷ್ಟಿ ಬೀಳದಂತೆ ನೋಡಿಕೊಳ್ಳುತ್ತದೆ.
ಈಗಾಗಲೇ ದೃಷ್ಟಿ ತಗುಲಿದರೆ ಹೀಗೆ ಮಾಡಿ…

ದೃಷ್ಟಿದೋಷ ಇರುವವರು ಅದನ್ನು ನಿವಾರಿಸಲು ಒಂದು ಹಿಡಿಯುಪ್ಪು ಮತ್ತು ಒಂದೆರಡು ಒಣಮೆಣಸಿನಕಾಯಿ ಜೊತೆಗೆ ನಿವಾಳಿಸಿ ಬೆಂಕಿಯಲ್ಲಿ ಹಾಕಬೇಕು. ದುಷ್ಟಶಕ್ತಿಗಳ ನಿವಾರಣೆಗೆ ಒಂದು ಪಾತ್ರೆಯಲ್ಲಿ ಉಪ್ಪು ಹಾಕಿ ಕಾಲನ್ನು 10 ನಿಮಿಷಗಳ ಕಾಲ ಅದರಲ್ಲಿ ಇಟ್ಟರೆ ಕೆಟ್ಟ ಕಣ್ಣಿನ ದೃಷ್ಟಿ ನಿವಾರಣೆಯಾಗುತ್ತದೆ. ಕೊನೆಯದಾಗಿ ಹಂಚಿ ಕಡ್ಡಿಯಲ್ಲಿ ಒಂಬತ್ತು ಕಡ್ಡಿಗಳನ್ನು ತೆಗೆದುಕೊಂಡು 9 ಬಾರಿ ನಿವಾಳಿಸಬೇಕು ಹೇಗೆಂದರೆ ಮೇಲಿಂದ ಕೆಳಗೆ ಮೂರು

ಬಾರಿ ನಿವಾಳಿಸಿ ಎಡಬದಿಯಿಂದ ಮೂರು ಸುತ್ತು ನಿವಾಳಿಸಿ ಮತ್ತು ಬಲಬದಿಯಿಂದ ಮೂರು ಸುತ್ತು ನಿವಾಳಿಸಿ ಹೀಗೆ ಒಟ್ಟು ಒಂಬತ್ತು ಸುತ್ತು ನಿವಾಳಿಸಿ ದೃಷ್ಟಿ ತೆಗೆದು ಮನೆಯ ಹೊರಗೆ ತೆಗೆದುಕೊಂಡು ಒಂದು ಮೂಲೆಯಲ್ಲಿ ನಿಲ್ಲಿಸಿ ಬೆಂಕಿ ಹಚ್ಚಬೇಕು ಜೋರಾಗಿ ಸದ್ದು ಮಾಡುತ್ತಾ ಸುಟ್ಟು ಹೋದರೇ ಹೆಚ್ಚು ದೃಷ್ಟಿ ತಗುಲಿದೆ ಎಂದರ್ಥ. ಇದನ್ನು ಮನೆಯವರ ಕೈ ಯಿಂದ ಮಾಡಿಸುವುದಕ್ಕಿಂತ ಪಕ್ಕದ ಮನೆಯವರನ್ನು ಕರೆದು ಮಾಡಿಸಿದರೆ ಉತ್ತಮ ದೃಷ್ಟಿದೋಷ ಬೇಗ ನಿವಾರಣೆ ಆಗುತ್ತದೆ.

Leave a Comment