5 ಸಂಕೇತ ಶಿವನು ನಿಮ್ಮ ಅಕ್ಕಪಕ್ಕದಲ್ಲಿಯೇ ಇದ್ದಾರೆ 

ಈಶ್ವರ ಸದಾ ನಮ್ಮ ಸಂಪರ್ಕದಲ್ಲಿ ಇರುತ್ತಾರೆ. ಆದರೂ ನಮಗೆ ಅದರ ಅನುಭವ ಆಗುವುದಿಲ್ಲ. ಭಕ್ತರಿಗೆ ಪೂಜೆ ಮಾಡಿದ ನಂತರವೂ ಈಶ್ವರನ ಅನುಭವ ಆಗುವುದಿಲ್ಲ. ಭಕ್ತರಿಗೆ ನಿರಾಶೆಯಾಗುತ್ತದೆ. ಇಲ್ಲಿ ಕೆಲವು ಸೂಕ್ಷ್ಮ ವಿಷಯಗಳಿರುತ್ತದೆ. ಕೆಲವು ಸಂಕೇತಗಳನ್ನು ತಿಳಿಯದಿರುವುದರಿಂದ ಈಶ್ವರನ ಸಂಪರ್ಕ ನಮಗೆ ಆಗುವುದಿಲ್ಲ. ಇಂತಹ 5 ಸಂಕೇತಗಳಿವೆ.

ಸಂಕೇತಗಳು ಸಿಕ್ಕಿದಾಗ ಇನ್ನಷ್ಟು ಹೆಚ್ಚು ಧ್ಯಾನ ಪೂಜೆ ಪುನಸ್ಕಾರಗಳನ್ನು ಮಾಡಬೇಕು.
ಮೊದಲನೆಯದಾಗಿ ಈಶ್ವರನ ಕೃಪೆ ಇರುವ ವ್ಯಕ್ತಿಗಳಿಗೆ ಮುಂದೆ ನಡೆಯುವ ಘಟನೆಗಳ ಬಗ್ಗೆ ಪೂರ್ವಭಾಸ ಆಗುತ್ತಿರುತ್ತದೆ. ಸ್ವಪ್ನದಲ್ಲಿ ಸೂಚನೆ ಸಿಗಬಹುದು. ನಮ್ಮ ಚೇತನ ಮನಸ್ಸು ಜಾಗೃತಾವಸ್ಥೆಯಲ್ಲಿ ಸಕ್ರಿಯವಾಗಿದ್ದರೆ. ಅವಚೇತನ ಮನಸ್ಸು ಯಾವಾಗಲೂ ಸಕ್ರಿಯವಾಗಿರುತ್ತದೆ.

ಕನಸುಗಳು ವ್ಯಕ್ತಿ ಆಸೆ ಸಮಸ್ಯೆ ಮತ್ತು ದುರಾಸೆಗಳ ಪರಿಣಾಮವೇ ಆಗಿರುತ್ತದೆ.ಯಾವಾಗ ಒಬ್ಬ ವ್ಯಕ್ತಿ ಶಿವನ ಸಾಧನೆಯಲ್ಲಿ ಇರುತ್ತಾರೆಯೋ ಇಂತಹ ವ್ಯಕ್ತಿಯ ಮನಸ್ಸು ಬುದ್ಧಿ ಅದ್ಭುತವಾದ ಶಕ್ತಿಯಿಂದ ತುಂಬಿರುತ್ತದೆ. ಆತ್ಮಶಕ್ತಿ ಹೆಚ್ಚಾಗುತ್ತದೆ. ವ್ಯಕ್ತಿಯ ಶಕ್ತಿ ಕೇಂದ್ರಕ್ಕೆ ಒಳಗಾದಾಗ ವಿಷನ್ ಪವರ್ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಅವಚೇತನ ಮನಸ್ಸು ಬ್ರಹ್ಮಾಂಡದಲ್ಲಿ ಹರಿದಾಡುವಂತಹ ದೈವಿಕ ಶಕ್ತಿಗಳ ಸಂಪರ್ಕಕ್ಕೆ ಬರುತ್ತದೆ. ಶಾಶ್ವತ ಶಕ್ತಿಯೊಂದಿಗೆ ಹೊಂದಿಕೊಳ್ಳುತ್ತದೆ.

ಈ ಸ್ಥಿತಿಯಲ್ಲಿ ಬೀಳುವ ಕನಸು ನಿಜ. ಬ್ರಹ್ಮ ಮುಹೂರ್ತದಲ್ಲಿ ಬೀಳುವ ಕನಸು ಭವಿಷ್ಯದ ಬಗ್ಗೆ ಪೂರ್ವಭಾಸವನ್ನು ಮೂಡಿಸುತ್ತದೆ. ಸಾಧಾರಣ ಚೇತನ ಮನಸ್ಸಿಗೆ ಇದು ತಿಳಿಯುವುದು ಅಸಾಧ್ಯ.
ಎರಡನೇ ಸಂಕೇತವೆಂದರೆ ನೀವು ಮಾತನಾಡಿದ್ದು ಸತ್ಯವಾಗುತ್ತದೆ. ಧ್ಯಾನದ ಸಮಯದಲ್ಲಿ ಅಥವಾ ಧ್ಯಾನದ ನಂತರ ಏನಾದರೂ ಹೇಳಿದರು ಅದು ವಾಸ್ತವದಲ್ಲಿ ನಡೆಯುತ್ತದೆ. ಇಂಥವರು ಸಾಧನೆಯಲ್ಲಿ ಆಳವಾಗಿ ಇರುತ್ತಾರೆ. ಅಂತರಾತ್ಮ ದಲ್ಲಿರುವ ಎಲ್ಲ ನಕಾರಾತ್ಮಕ ಶಕ್ತಿಗಳು ನಾಶವಾಗಿರುತ್ತವೆ.

ವಿಕಾರಗಳ ನಾಶವಾಗಿರುತ್ತದೆ. ಆಜ್ಞಾಚಕ್ರ ಅನಾಹುತ ಚಕ್ರ ವಿಶುದ್ಧಿ ಚಕ್ರಗಳು ಜಾಗೃತಾವಸ್ಥೆಗೆ ಬಂದಿರುತ್ತದೆ. ಇಲ್ಲಿ ಶಿವನ ಶಕ್ತಿಯ ಸಂಪರ್ಕಕ್ಕೆ ಸೇರಿರುತ್ತೀರಿ. ಶಿವನ ಭಕ್ತಿಯಲ್ಲಿ ಮುಳುಗಿರುವವರಿಗೆ ಇಂತಹ ಅನುಭವವಾಗುತ್ತದೆ.. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಏನಾದರೂ ಒಂದು ಉಪಾಯ ಕಾಣಿಸುತ್ತದೆ. ಸಮಸ್ಯೆಯಿಂದ ಹೊರ ಬರುವ ಆಲೋಚನೆಗಳು ಅಚಾನಕ್ಕಾಗಿ ನಿಮ್ಮ ಮನಸ್ಸಿಗೆ ಬರುತ್ತದೆ.
ನಾಲ್ಕನೇ ಸಂಕೇತ ಏನೆಂದರೆ ಅಚನಕ್ಕಾಗಿ ಬ್ರಹ್ಮ ಮುಹೂರ್ತದಲ್ಲಿ ಎಚ್ಚರವಾಗುತ್ತದೆ.

ಬ್ರಹ್ಮ ಮುಹೂರ್ತದಲ್ಲಿ ದೈವಿಶಕ್ತಿಗಳು ಸಕಾರಾತ್ಮಕ ಶಕ್ತಿಗಳು ಇರುತ್ತವೆ. ಯಾವುದೇ ಅಲರಾಂ ಇಲ್ಲದೆ ಏಳುತ್ತೀರ. ನಿಮಗಾಗಿ ಶಿವನು ನೀಡುವ ಸಂಕೇತ ಎಂದು ಅರ್ಥ ಮಾಡಿಕೊಳ್ಳಬೇಕು. ಪುನಹ ಮಲಗಿ ಸಮಯ ಹಾಳುಮಾಡಬಾರದು. ಶಿವನ ಇಚ್ಛೆಯನ್ನು ಅರ್ಥ ಮಾಡಿಕೊಂಡು ಇದರ ಲಾಭವನ್ನು ಪಡೆಯಬೇಕು. ನೀವು ಶಿವನ ಭಕ್ತಿಯಲ್ಲಿ ಮುಳುಗಬೇಕು.ಐದನೆಯ ಸಂಕೇತ ಎಂದರೆ ಕನಸಿನಲ್ಲಿ ನಿಮಗೆ ಶಿವನು ಕಂಡು ಬಂದರೆ ಶಿವಲಿಂಗ ಕಂಡುಬಂದರೆ,

ಅಥವಾ ಶಿವನಿಗೆ ಅಭಿಷೇಕ ಕಂಡು ಬಂದರೆ ಇವೆಲ್ಲ ಶಿವನ ಕೃಪೆಯ ದೊಡ್ಡ ಸಂಕೇತಗಳು. ನೀವು ತುಂಬಾ ಅದೃಷ್ಟ ಶಾಲೆಗಳು ಮತ್ತು ಶಿವನ ದರ್ಶನವನ್ನು ಸ್ವಪ್ನದಲ್ಲಿ ಮಾಡಿದ್ದೀರಿ ಎಂದರ್ಥ. ಡಮರುಗ ಸರ್ಪ ತ್ರಿಶೂಲ ಕನಸಿನಲ್ಲಿ ಕಂಡರೆ ಇದು ಕೂಡ ಶಿವನ ಕೃಪೆ. ಸಂಕೇತಗಳು ಕಂಡಾಗ ಪೂರ್ತಿಯಾಗಿ ಶಿವನ ಭಕ್ತಿಯಲ್ಲಿ ಮುಳುಗಬೇಕು. ನೀವು ಹೀಗೆ ಮಾಡಿದಾಗ ನಿಮ್ಮ ಜೀವನದ ಪರಮ ಗುರಿ ಅಂದರೆ ಶಿವನನ್ನು ಸೇರುವುದು ಬಹಳ ದೂರ ಉಳಿಯುವುದಿಲ್ಲ.

Leave a Comment