ಬೀರುವನ್ನು ಯಾವ ದಿಕ್ಕಿಗೆ ಇಡಬಾರದು

ಬೀರುವನು ಯಾವ ದಿಕ್ಕಿಗೆ ತಿರುಗಿಸಿ ಇಟ್ಟರೆ ಸಾಲ ಭಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ಸಿಗುತ್ತದೆ ಎಂದು ತಿಳಿಯೋಣ… ಬೀರುವಿನಲ್ಲಿ ಲಕ್ಷ್ಮಿವಾಸಿ ವಾಸವಿರುತ್ತಾರೆ ಏಕೆಂದರೆ ನಾವು ದುಡ್ಡು ಚಿನ್ನ ಬೆಳ್ಳಿ ಎಲ್ಲವನ್ನು ಬೀರಿವಿನಲ್ಲಿ ಇಟ್ಟಿರುವುದರಿಂದ ತಾಯಿ ಲಕ್ಷ್ಮಿ ದೇವಿ. ಬೀರುವಿನಲ್ಲಿ ನೆಲೆಸಿರುತ್ತಾಳೆ, ಆದ್ದರಿಂದ ಬೀರುವನ್ನು ಇಡುವುದರ ಬಗ್ಗೆ ಹೆಚ್ಚು ಗಮನವಹಿಸುವುದು ಬಹಳ ಅಗತ್ಯವಾಗಿದೆ…

ಬೀರುವನ್ನು ಆಗ್ನೇಯ ದಿಕ್ಕಿಗೆ ಇಡಬಾರದು ಆಗ್ನೇಯ ವೆಂದರೆ ಬೆಂಕಿ ಹಣ ಚಿನ್ನ ಎಲ್ಲವೂ ಬೆಂಕಿಯ ಪಾಲಾದಂತೆ ಮನೆಯಲ್ಲಿ ಹಣ ನಿಲ್ಲುವುದಿಲ್ಲ…. ವಾಯುವ್ಯ ದಿಕ್ಕಿಗೆ ಇಟ್ಟರೆ ಗಾಳಿ ಗೆ ಹಣ ಒಡವೆ ಗಾಳಿಗೆ ತೇಲಿ ಹೋದಂತೆ ಕೈಯಲ್ಲಿ ನಿಲ್ಲುವುದೇ ಇಲ್ಲ ಈಶಾನ್ಯ ಭಾಗದಲ್ಲಿ ಭಾರವಾದ ವಸ್ತುಗಳನ್ನು ಇಡುವ ಹಾಗೆ ಇಲ್ಲ ಇನ್ನು ಬೀರು ಇಡುವುದು ಒಳಿತಲ್ಲ.

ಹಾಗಾದರೆ ಬೀರುವನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ಮಧ್ಯದಲ್ಲಿರುವ ನೈರುತ್ಯ ದಿಕ್ಕಿಗೆ ಇಡಬೇಕು ನಿರುತಿ ಎನ್ನುವ ರಾಕ್ಷಸ ದೇವತೆ ಒಳಗಡೆ ಇಂದ ಮೇಲಕ್ಕೆ ಎದ್ದೇಳದೆ ಇರೋ ಹಾಗೆ ಭಾರ ಅನ್ನೋದನ್ನ ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಿದ್ದಾರೆ…. ಮುಖ್ಯವಾಗಿ ಉತ್ತರಾಭಿಮುಖವಾಗಿ ಇಡಬೇಕು ಅಂದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ನಡುವೆ ಬೀರು ತೆರೆದಾಗ ಅದು ಉತ್ತರ ದಿಕ್ಕಿಗೆ ನೋಡುತ್ತಿರಬೇಕು

ಉತ್ತರ ದಿಕ್ಕು ಕುಬೇರ ದಿಕ್ಕು ನವಾನಿಧಿಗಳಿಗೆ ಅಧಿಪತಿ ಕಲಿಯುಗದ ಪ್ರತ್ಯಕ್ಷ ದೇವನಾಗಿರುವ ವೆಂಕಟೇಶ್ವರ ಸ್ವಾಮಿಗೆ ಮದುವೆಯ ಸಂದರ್ಭದಲ್ಲಿ ಸಾಲವನ್ನು ಕೊಟ್ಟಿರುವುದು ಕುಬೇರ.. ಬೇರೆನ ಆಶೀರ್ವಾದ ಸಿಗಬೇಕೆಂದರೆ ಬೀರು ಉತ್ತರ ದಿಕ್ಕಿಗೆ ಅಭಿಮುಖವಾಗಿ ಇರಬೇಕು ಹೀಗೆ ಇಟ್ಟರೆ ಎಲ್ಲಾ ದಾರಿದ್ರ ದೂರವಾಗಿ ಲಕ್ಷ್ಮಿ ಅನುಗ್ರಹವಾಗುತ್ತದೆ ಇದನ್ನು ನಂಬಿಕೆ ಇಟ್ಟು ಮಾಡಿ..

ಮುಖ್ಯವಾಗಿ ಬೀರುವಿನ ಬಾಗಿಲ ಮೇಲೆ ಎರಡು ಕಡೆ ಸ್ವಸ್ತಿಕ್ ಬರೆದಿರಬೇಕು….. ಇನ್ನು ಶರ್ಟ್ ಮೇಲಿನ ಜಾಗದಲ್ಲಿ ದುಡ್ಡು ಇಡುವುದು ಹೃದಯ ಸ್ಥಾನ ಇಡಬೇಕು ಅಂದರೆ ಪ್ಯಾಂಟ್ ನಲ್ಲಿ ದುಡ್ಡು ಇಡುವುದಾದರೆ ಅದನ್ನು ಪರಿಶುದ್ಧವಾಗಿ ಇಡಬೇಕು ಅಂದರೆ ಬಿಡಿ ಸಿಗರೇಟ್ ಬೆಂಕಿ ಪಟ್ಟಣ ಇಂತಹ ಮದ್ದು ವಸ್ತುಗಳನ್ನು ಇಡಬಾರದು….. ಲಕ್ಷ್ಮಿ ದೇವಿಗೆ ಮದ್ದು ಪದಾರ್ಥ ದುರ್ವಾಸನೆ ಎಂದರೆ ಆಗುವುದಿಲ್ಲ ಲಕ್ಷ್ಮಿ ಅಲ್ಲಿ ನಿಲ್ಲುವುದಿಲ್ಲ
ಇನ್ನೊಂದು ವಿಷಯವೇನೆಂದರೆ ಯಾವುದೇ ಕಾರಣಕ್ಕೂ ಜೀವನ ಖಾಲಿ ಬಿಡಬಾರದು ಮನೆಯಿಂದ ಹೊರಗಡೆ ಹೋಗುವಾಗ ಜೇಬು ಕಾಲಿ ಇಡಬಾರದು ರೂ.10 ಇಟ್ಟು ಕೊಂಡಿರಬೇಕು.

Leave a Comment