ಈ ಒಂದು ಸಂಖ್ಯೆ ಹೇಳಿ ಕೋಟಿ ಸಾಲ ಬೇಕಾದೂ ಸಿಗುತ್ತೆ

ಸಾಲ ಕೇಳುವ ಮುನ್ನ ಈ ಒಂದು ಸಂಖ್ಯೆಯನ್ನ ಮನಸ್ಸಿನಲ್ಲಿ ಅಂದುಕೊಂಡು ಸಾಲ ಕೇಳಿ ಬೇಕಾದರೇ 5 ಕೋಟಿ ಸಾಲಬೇಕಾದರೂ ಸಿಗುತ್ತದೆ. ಇಂತಹ ಕುತೂಹಲಕಾರಿ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ನಾವು ಎಷ್ಟು ದುಡ್ಡು ಖರ್ಚು ಮಾಡುತ್ತೀವೋ ಅಷ್ಟು ದುಪ್ಪಟ್ಟು ಹಣ ನಮಗೆ ಆದಾಯವಾಗಿ ಬರಲಿ ಎಂದು ನಾವೆಲ್ಲಾ ಬಯಸುತ್ತೇವೆ. ದುಡ್ಡನ್ನು ದುಡಿಯಲು

ನಾವೆಲ್ಲಾ ಹಗಲು ರಾತ್ರಿ ನಾವೆಲ್ಲಾ ಸಾಕಷ್ಟು ಕಷ್ಟಪಡುತ್ತೇವೆ. ನಾವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಹಣ ನಮ್ಮತ್ತ ಹರಿದು ಬರಲಿಲ್ಲವೆಂದರೆ ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಸಂಖ್ಯೆಗಳಿಗೆ ಸಾಕಷ್ಟು ಶಕ್ತಿಇದೆ. ಸಂಖ್ಯೆಯೊಳಗೆ ಇರುವ ತಾಕತ್ತನ್ನು ಬಳಸಿಕೊಂಡು ಹಣವನ್ನು ನಮ್ಮತ್ತ ಹರಿದು ಬರುವಂತೆ ಮಾಡಬಹುದು. ಈ ಒಂದು ಸಂಖ್ಯೆಯನ್ನು

ಮನಸ್ಸಿನಲ್ಲಿ ಹೇಳಿಕೊಂಡು ಚಿಕ್ಕದಾದ ಪ್ರಯೋಗ ಮಾಡಿದರೇ ದಿನದಿಂದ ದಿನಕ್ಕೆ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಅಷ್ಟೇ ಅಲ್ಲ ನೀವು ಸಾಲದ ಬಾಧೆಯಿಂದ ಬಳಲುತ್ತಿದ್ದರೇ ಸಾಲ ತೀರುತ್ತದೆ. ನಿಮಗೆ ಸಾಲ ಸಿಗುತ್ತಿಲ್ಲವೆಂದಾರೇ ಸಾಲನೂ ಸಿಗುತ್ತದೆ. ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಆಗುವುದೇ ಇಲ್ಲ. ನೀವು ಎಷ್ಟು ಖರ್ಚು ಮಾಡುತ್ತೀರ ಅಷ್ಟು ಡಬ್ಬಲ್ ಹಣ ನಿಮ್ಮ ಆದಾಯದ ರೂಪದಲ್ಲಿ ನಿಮ್ಮ ಕೈ ಸೇರುತ್ತದೆ. ನೀವು ಜೀವನದಲ್ಲಿ ಆನಂದದಿಂದ ಇರುತ್ತೀರ.

ಬಹಳಷ್ಟು ಜನರಲ್ಲಿ ಹಣ ಏಕೆ ನಿಲ್ಲುವುದಿಲ್ಲವೆಂಬುದನ್ನು ಮೊದಲು ತಿಳಿದುಕೊಳ್ಳೋಣ. ಯಾವ ಹೆಣ್ಣು ಮಕ್ಕಳನ್ನು ಅವಮಾನ ಮಾಡಬಾರದು. ಮನೆಯಲ್ಲಾಗಲೀ ಅಥವಾ ನೀವು ಉದ್ಯೋಗ ಮಾಡುವ ಸ್ಥಳದಲ್ಲಾಗಲೀ, ವ್ಯಾಪಾರ ಮಾಡುವ ಸ್ಥಳದಲ್ಲಾಗಲೀ ಹೆಣ್ಣು ಮಕ್ಕಳು ನೊಂದುಕೊಳ್ಳಬಾರದು. ಎಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುವುದಿಲ್ಲವೋ ಅಂತಹ ಕಡೆ ಲಕ್ಷ್ಮಿ ನೆಲೆಸುವುದಿಲ್ಲ.

ಕೆಲವರಿಗೆ ಹೆಣ್ಣು ಮಕ್ಕಳು ಎಂದರೆ ತಾತ್ಸಾರ ಮನೋಭಾವನೆ ಬೆಳೆದಿರುತ್ತದೆ. ಹೆಣ್ಣು ಮಕ್ಕಳ ವಿಚಾರಕ್ಕೆ ಸಣ್ಣ ಪುಟ್ಟ ವಿಚಾರಕ್ಕೂ ರೇಗುತ್ತಾರೆ ಮತ್ತು ಕೈ ಮಾಡುತ್ತಾರೆ. ಇಂತಹ ಕಡೆ ಲಕ್ಷ್ಮಿದೇವಿ ಖಂಡಿತ ಅನುಗ್ರಹ ತೋರುವುದಿಲ್ಲ. ಹಿಂದಿನಿಂದಲೂ ಶ್ರೀಮಂತಿಕೆಯಿಂದ ಬಂದವರೇ ಹೆಣ್ಣು ಮಕ್ಕಳನ್ನ ಅವಮಾನಿಸಿ ಎಲ್ಲಾ ಸಂಪತ್ತನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

ನಮ್ಮಲ್ಲಿ ಹೆಣ್ಣು ಮಕ್ಕಳನ್ನು ಶುಕ್ರವಾರದ ದಿನ ಕಳಿಸಿಕೊಡುವ ಸಂಪ್ರದಾಯ ಇಲ್ಲ. ಹೆಣ್ಣು ಮಕ್ಕಳು ಲಕ್ಷ್ಮಿ ಸಮಾನ ಎನ್ನುವುದು ಈ ಕಾರಣಕ್ಕಾಗಿ, ಹಾಗಾಗಿ ಹೆಣ್ಣು ಮಕ್ಕಳನ್ನು ಗೌರವಿಸಬೇಕು. ಸಂಜೆಯ ವೇಳೆ ಅರಿಶಿಣ ಕುಂಕುಮ, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಕನ್ನಡಿ, ಸಕ್ಕರೆ, ಹಣ ಇಂತಹ ವಸ್ತುಗಳನ್ನು ಬೇರೆಯವರಿಗೆ ಕೊಡಬಾರದು. ಅದರಲ್ಲೂ ಶುಕ್ರವಾರ ಮತ್ತು ಮಂಗಳವಾರ,

ಅಮಾವಾಸ್ಯೆಯಂದು ಇಂತಹ ವಸ್ತುಗಳನ್ನು ಸಂಜೆ ವೇಳೆ ಮತ್ತು ಸಂಜೆಯ ನಂತರ ಇನ್ನೊಬ್ಬರಿಗೆ ನೀಡಿದರೇ ಬಡತನ ಬೆನ್ನಟ್ಟಿ ಬರುತ್ತದೆ. ಸಂಜೆ ನಂತರ ಮನೆಯಲ್ಲಿ ಗುಡಿಸಿದ ಕಸವನ್ನು ಒಂದು ಕಡೆ ಇಟ್ಟು, ಬೆಳಿಗ್ಗೆ ಹೊರಗಡೆ ಹಾಕಬೇಕು. ನೀವು ಲಕ್ಷ್ಮಿಯನ್ನು ಮನೆಯಲ್ಲಿ ಉಳಿಸಿಕೊಳ್ಳಲು ಜಾಗರೂಕರಾಗಿರಿ. ಇಂತಹ ಸಣ್ಣ ಪುಟ್ಟ ತಪ್ಪುಗಳಿಂದ ಲಕ್ಷ್ಮಿದೇವಿಯು ಮನೆಯಿಂದ ಹೊರಹೋಗುತ್ತಾಳೆ.

ಮನುಷ್ಯನ ಜನನ ಮತ್ತು ಮರಣವಾಗಲಿ ಆತನ ಜೀವನದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಲಿ ಅವೆಲ್ಲವೂ ಒಳ್ಳೆಯ ದಿನಾಂಕದಲ್ಲಿ ನಡೆದಿರುತ್ತದೆ. ಅಲ್ಲಿ ಸಂಖ್ಯೆಯೇ ಇರುತ್ತದೆ. ಮನುಷ್ಯನ ಜೀವನದಲ್ಲಿ ಏನೇ ನಡೆಯಲಿ ಅಲ್ಲಿ ಸಂಖ್ಯೆಗಳ ಪಾತ್ರ ಮಹತ್ತ್ವಪೂರ್ಣವಾಗಿರುತ್ತದೆ. ಗ್ರಹಗಳಿಗೂ ಸಂಖ್ಯೆಗಳಿರುತ್ತದೆ. ಹಾಗೆಯೇ ಹಣವನ್ನು ಆಕರ್ಷಣೆ ಮಾಡಲು ಒಂದು ಸಂಖ್ಯೆ ಇರುತ್ತದೆ.

ಜೀವನದಲ್ಲಿ ಪ್ರತಿಯೊಬ್ಬರು ಖರ್ಚು ಮಾಡೇ ಮಾಡುತ್ತಾರೆ. ನಾವು ಖರ್ಚು ಮಾಡುವ ಹಣ ನಮಗೆ ವಾಪಸ್ಸು ಬರಬೇಕಾದರೇ ಈ ನಂಬರ್ ಅನ್ನು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳಿ. 1 4 0 3. ಹಣವನ್ನು ಖರ್ಚು ಮಾಡುವ ಮೊದಲು ಈ ನಂಬರ್ ಅನ್ನು ಮನಸ್ಸಿನಲ್ಲಿ ಹೇಳಿಕೊಳ್ಳಿ ನೀವು ಖರ್ಚು ಮಾಡಿದ ಡಬ್ಬಲ್ ಹಣ ವಾಪಸ್ಸು ಬರುತ್ತದೆ ಮತ್ತು

ಇದೇ ಸಂಖ್ಯೆಯನ್ನ ಕೈಯಿಂದ ಗಾಳಿಯಲ್ಲಿ ಬರೆದು ಮಲಗಿಕೊಳ್ಳಿ, ನಮ್ಮ ಸುತ್ತಮುತ್ತ ಅದೃಶ್ಯ ಶಕ್ತಿಗಳ ಸಂಚಾರವಿರುತ್ತದೆ. ಅವುಗಳು ನಮ್ಮ ಜೀವನದಲ್ಲಿ ಅದೃಷ್ಟ ತಂದುಕೊಡುತ್ತವೆ. ಹಾಗಾಗಿ ನೀವು ಮಲಗುವ ಮುನ್ನ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ನಿಮ್ಮ ಹಣಕಾಸಿನ ಸಮಸ್ಯೆ ಪರಿಹಾರವಾಗಲೆಂದು ಕೇಳಿಕೊಂಡು ಗಾಳಿಯಲ್ಲಿ

1 4 0 3 ಅಂಕಿಯನ್ನು ತೋರುಬೆರಳಿನಿಂದ ಬರೆದು ತಕ್ಷಣ ಒಂದು ಲೋಟ ನೀರು ಕುಡಿದು ಮಲಗಿಕೊಳ್ಳಿ, ನಿಮ್ಮ ಹಣಕಾಸಿನ ಸಮಸ್ಯೆ ಖಂಡಿತ ಸುಧಾರಿಸುತ್ತದೆ. ಈ ನಂಬರ್ ಧನಾಕರ್ಷಣೆಯ ಸಂಖ್ಯೆಯಾಗಿದೆ. ಸಾಲ ಕೇಳುವ ಮುನ್ನ ಈ ಸಂಖ್ಯೆಯನ್ನ ಹೇಳಿಕೊಂಡು ಸಾಲ ಕೇಳಿ ಬೇಕಾದರೇ ಐದು ಕೋಟಿ ಸಾಲಬೇಕಾದರೂ ಸಿಗುತ್ತದೆ.

Leave a Comment