ಕನಸಲ್ಲಿ ಯಾವ ದೇವರನ್ನು ಕಂಡರೆ ಏನು ಫಲ

ಕನಸಲ್ಲಿ ಯಾವ ದೇವರನ್ನು ಕಂಡರೆ ಏನು ಫಲ ಕನಸಿನಲ್ಲಿ ವಿಷ್ಣು ದೇವರನ್ನು ಕಂಡರೆ- ಅದೃಷ್ಟ ಸಂಕೇತ ದೊಡ್ಡ ಲಾಭ ಬರಲಿದೆ ಎಂದು ಅರ್ಥ… ಲಕ್ಷ್ಮಿ ದೇವರನ್ನು ಕಂಡರೆ- ಅಪಾರ ಸಂಪತ್ತು ಬರುತ್ತದೆ ಉದ್ಯೋಗ ವ್ಯವಹಾರ ಹೊರತುಪಡಿಸಿ ಬೇರೆ ರೀತಿ ಹಣವನ್ನು ಪಡೆಯುವ ಸಂಕೇತವಾಗಿದೆ…

ಹನುಮಂತ ದೇವರನ್ನು ಕಂಡರೆ- ಶತ್ರುಗಳ ಮೇಲೆ ವಿಜಯ. ಕೆಲಸದ ಸ್ಥಳದಲ್ಲಿ ಉನ್ನತಿ… ರಾಮನನ್ನು ಕಂಡ-ರೆ ದೊಡ್ಡ ಯಶಸ್ಸಿನ ಸಂಕೇತವಾಗಿದೆ… ಶಿವಲಿಂಗವನ್ನು ಕಂಡರೆ- ಬಹು ಶುಭವೆಂದು ಪರಿಗಣಿಸಲಾಗಿದೆ. ಅಂತಹ ಕನಸು ನಿಮ್ಮ ಎಲ್ಲಾ ತೊಂದರೆಗಳು ಕೊನೆಗೊಳ್ಳುವ ಸಮಯ ಬಂದಿದೆ ಎಂದು ಸೂಚಿಸುತ್ತದೆ.

ಶ್ರೀ ಕೃಷ್ಣನನ್ನು ಕಂಡರೆ- ಪ್ರೀತಿ ಪ್ರೇಮದ ವಿಷಯದಲ್ಲಿ ಯಶಸ್ಸು ಮತ್ತು ಪ್ರಗತಿ… ದುರ್ಗಾಮಾತೆಯನ್ನು ಕಂಡರೆ- ಅತ್ಯಂತ ಶುಭ ದುರ್ಗಾದೇವಿ ಕೆಂಪು ಬಟ್ಟೆಯಲ್ಲಿ ನಗುತ್ತಿರುವಂತೆ ಕಂಡು ಬಂದರೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು…

ಗಣಪತಿ ಕಂಡರೆ -ಪ್ರತಿ ಅಡೆಚಣೆಗಳಿಂದ ಸ್ವತಂತ್ರ ಪಡೆಯುತ್ತೀರಿ ಮತ್ತು ಮನೆಯಲ್ಲಿ ಶುಭಕಾರ್ಯ ನಡೆಯುವುದು.. ಸರಸ್ವತಿಯನ್ನು ಕಂಡರೆ- ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು…

Leave a Comment