ಕೆಟ್ಟ ದೃಷ್ಟಿ ಬಿದ್ದರೆ ಸರ್ವನಾಶ ಖಂಡಿತಾ ಎಚ್ಚರ..!

ನಾವು ಈ ಲೇಖನದಲ್ಲಿ ಕೆಟ್ಟ ದೃಷ್ಟಿ ಬಿದ್ದರೆ ಸರ್ವನಾಶ ಖಂಡಿತಾ ಹೇಗೆ ಆಗುತ್ತದೆ. ಎಂದು ತಿಳಿಯೋಣ . ಮನುಷ್ಯರ ಕಣ್ಣು ಬಿದ್ದರೆ ಮರವೇ ಮುರಿಯುತ್ತದೆ….!ಜೊತೆಯಲ್ಲೇ ಇದ್ದು ಕೆಟ್ಟದಾಗಲಿ ಎಂದು ಬಯಸುವ ಜನರು ತುಂಬಾ ಇದ್ದಾರೆ. ಮಾತಲ್ಲಿ ಬಣ್ಣ, ಮನಸ್ಸಲ್ಲಿ ಸುಣ್ಣ ಇಟ್ಟುಕೊಂಡಿರುವ ಜನರಿದ್ದಾರೆ ಎಚ್ಚರ …

ಇಂತವರ ದೃಷ್ಟಿ ಬಿದ್ದಾಗ ಮನುಷ್ಯ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಹೋಗುತ್ತಾರೆ …. ಮುಖದಲ್ಲಿ ತೇಜಸ್ಸು, ಚೈತನ್ಯ ಎರಡೂ ಇರುವುದಿಲ್ಲ. ಅವುಗಳನ್ನು ಮತ್ತೆ ಮರಳಿ ತರಬೇಕು ಅಂದರೆ ದೃಷ್ಟಿ ಅವಶ್ಯಕತೆ ತೆಗೆಯಬೇಕು..

ದೃಷ್ಟಿಯಲ್ಲಿ ನಾಲ್ಕು ವಿಧ ಇರುತ್ತವೆ. ಕಣ್ಣಿನ ದೃಷ್ಟಿ , ನರ ದೋಷ , ನರ ಪೀಡೆ, ನರ ಶಾಪ
ಕಣ್ಣಿನ ದೃಷ್ಟಿ ತಗುಲುವುದರಿಂದ ನಮ್ಮ ಅಭಿವೃದ್ಧಿ ದಿನೇ ದಿನೇ ಕುಂಠಿತವಾಗುತ್ತದೆ . ಮತ್ತು ಕಡಿಮೆಯಾಗುತ್ತಾ ಹೋಗುತ್ತದೆ

ಹಾಗೆಯೇ ಕುಟುಂಬದವರು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ… ತಲೆ ನೋವು, ತಲೆಸುತ್ತು , ವಾಂತಿ, ಹೊಟ್ಟೆನೋವು,ಊಟ ತಿಂಡಿ ಸರಿಯಾಗಿ ಮಾಡುವುದಿಲ್ಲ …. ಮಂಕಾಗಿ ಇರುವುದು, ನಿಶ್ಶಕ್ತಿ ಇವೆಲ್ಲಾ ದೃಷ್ಟಿ ದೋಷದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು … ದೃಷ್ಟಿ ತಗಲಬಾರದು ಎಂದರೆ ನೀವು ಅಂತ ಜನರ ಮಧ್ಯೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ…

ಹಣೆಯ ಮೇಲೆ ಸದಾ ಕುಂಕುಮ ಇರುವಂತೆ ನೋಡಿಕೊಳ್ಳಿ… ಆಂಜನೇಯ ಸ್ವಾಮಿ ದೇವಸ್ಥಾನದ ಕುಂಕುಮ ಇಟ್ಟರೆ ದೃಷ್ಟಿ ತಗಲುವುದೇ ಇಲ್ಲಾ ಗಂಡಸರು ಕೆಂಪು ಬಣ್ಣದ ದಾರವನ್ನು ಕೈಗೆ ಕಟ್ಟಿಕೊಳ್ಳುವುರಿಂದ ನರದೃಷ್ಟಿ ತಗಲುವುದಿಲ್ಲ… ಚಿಕ್ಕ ಮಕ್ಕಳಿಗೆ ಕಪ್ಪು ಬಣ್ಣದ ನೂಲನ್ನು ಕೈಗೆ ಮತ್ತು ಕಾಲಿಗೆ ಕಟ್ಟುವುದರಿಂದ ಕೆಟ್ಟ ದೃಷ್ಟಿ ತಗುಲುವುದಿಲ್ಲ….

ಕಣ್ಣಿಗೆ ಹಚ್ಚುವ ಕಾಡಿಗೆ ಕೂಡ ಕೆಟ್ಟ ದೃಷ್ಟಿಯನ್ನು ತಡೆಯುತ್ತದೆ… ಮನೆಯ ಮುಂದೆ ಇರುವ ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಚೆನ್ನಾಗಿ ಬೆಳೆಸಿದರೆ ,ಒಣಗದಂತೆ ನೋಡಿಕೊಂಡರೆ ನರದೃಷ್ಟಿ ಮನೆಯ ಮೇಲೆ ಮತ್ತು ಮನೆಯಲ್ಲಿ ವಾಸಿಸುವ ಯಾವ ಮನುಷ್ಯ ಪ್ರಾಣಿಗೂ ಕೆಟ್ಟ ಶಕ್ತಿಯ ದೃಷ್ಟಿ ಬೀಳದಂತೆ ನೋಡಿಕೊಳ್ಳುತ್ತದೆ ….

ಹೀಗಾಗಲೇ ದೃಷ್ಟಿ ತಗುಲಿದ್ದರೆ ಹೀಗೆ ಮಾಡಿ. ದೃಷ್ಟಿ ದೋಷ ಇರುವವರು ಅದನ್ನು ನಿವಾರಿಸಲು ಒಂದು ಹಿಡಿ ಉಪ್ಪು ಮತ್ತು ಒಂದೆರಡು ಒಣ ಮೆಣಸಿನಕಾಯಿ ಜೊತೆಗೆ ನೀವಾಳಿಸಿ ಬೆಂಕಿಯಲ್ಲಿ ಹಾಕಬೇಕು.. ದುಷ್ಟ ಶಕ್ತಿಗಳ ನಿವಾರಣೆಗೆ ಒಂದು ಪಾತ್ರೆಯಲ್ಲಿ ಉಪ್ಪು ಹಾಕಿ ಕಾಲನ್ನು ಹತ್ತು ನಿಮಿಷಗಳ ಕಾಲ ಅದರಲ್ಲಿ ಇಟ್ಟರೆ , ಕೆಟ್ಟ ಕಣ್ಣಿನ ದೃಷ್ಟಿ ನಿವಾರಣೆಯಾಗುತ್ತದೆ…

ಕೊನೆಯದಾಗಿ ಹಂಚಿ ಕಡ್ಡಿಯಲ್ಲಿ ಒಂಬತ್ತು ಕಡ್ಡಿಗಳನ್ನು ತೆಗೆದುಕೊಂಡು 9 ಬಾರಿ ನೀವಾಳಿಸಬೇಕು.. ಹೇಗೆಂದರೆ ಮೇಲಿನಿಂದ ಕೆಳಗೆ ಮೂರು ಬಾರಿ ನೀವಾಳಿಸಿ, ಎಡ ಬದಿಯಿಂದ ಮೂರು ಸುತ್ತು ನೀವಾಳಿಸಿ, ಮತ್ತು ಬಲ ಬದಿಯಿಂದ ಮೂರು ಸುತ್ತು ನೀವಾಳಿಸಿ . ಹೀಗೆ ಒಟ್ಟು ಒಂಬತ್ತು ಸುತ್ತು ನೀವಾಳಿಸಿ ದೃಷ್ಟಿ ತೆಗೆದು ಮನೆಯ ಹೊರಗೆ ತೆಗೆದುಕೊಂಡು ಒಂದು ಮೂಲೆಯಲ್ಲಿ ನಿಲ್ಲಿಸಿ ಬೆಂಕಿ ಹಚ್ಚಬೇಕು… ಜೋರಾಗಿ ಸದ್ದು ಮಾಡುತ್ತಾ , ಸುಟ್ಟು ಹೋದರೆ ಜಾಸ್ತಿ ದೃಷ್ಟಿ ತಗುಲಿದೆ ಎಂದರ್ಥ… ಇದನ್ನು ಮನೆಯವರ ಕೈಯಿಂದ ಮಾಡಿಸುವುದಕ್ಕಿಂತ ಅಕ್ಕಪಕ್ಕದ ಮನೆಯವರನ್ನು ಕರೆದು ಮಾಡಿಸಿದರೆ , ಉತ್ತಮ ದೃಷ್ಟಿ ದೋಷ ಬೇಗ ನಿವಾರಣೆಯಗುತ್ತದೆ ……

Leave a Comment