ಮನೆಯ ಅಭಿವೃದ್ಧಿ ಸಮೃದ್ಧಿಗಾಗಿ ಗೃಹಿಣಿಯರಿಗೆ ಕಿವಿ ಮಾತುಗಳು

0

ನಾವು ಈ ಲೇಖನದಲ್ಲಿ ಮನೆಯ ಅಭಿವೃದ್ಧಿ ಸಮೃದ್ಧಿಗಾಗಿ ಗೃಹಿಣಿಯರಿಗೆ ಹೇಳುವ ಕಿವಿ ಮಾತುಗಳು ಯಾವುದು ಎ೦ದು ತಿಳಿಯೋಣ . ಸುಮಂಗಲಿಯರು ಕೊಳಕಾದ ಬಟ್ಟೆ ಹರಿದ ಬಟ್ಟೆಗಳನ್ನು ಧರಿಸಬಾರದು . ಮನೆಯಲ್ಲಿಯೇ ಇದ್ದರೂ ಸಹ ಸ್ವಚ್ಛವಾಗಿ ಇರುವ ಚೆನ್ನಾಗಿ ಕಾಣಿಸುವ ಬಟ್ಟೆಗಳನ್ನೇ ಧರಿಸಬೇಕು .

ಸುಮಂಗಲಿಯರು ಎಂದಿಗೂ ಕೂದಲನ್ನು ಕೆದರಿಕೊಂಡು ಇರಬಾರದು . ನೀಟಾಗಿ ಬಾಚಿ ಜಡೆ ಕಟ್ಟಬೇಕು .

ಮನೆಯಲ್ಲಿ ಧೂಳು ಕಸ ಜೇಡರ ಬೆಲೆ ಕಟ್ಟುವುದು ದರಿದ್ರತೆಯ ಸಂಕೇತ . ವಾರಕ್ಕೊಮ್ಮೆ ಅಂದರೆ ಮಂಗಳವಾರ ಶುಕ್ರವಾರ ಬಿಟ್ಟು, ಉಳಿದ ದಿನಗಳಲ್ಲಿ ಮನೆಯ ಧೂಳು ಕಸವನ್ನು ತೆಗೆದು ಸ್ವಚ್ಛ ಮಾಡಬೇಕು .

ಸುಮಂಗಲಿಯರು ಸೂರ್ಯೋದಯಕ್ಕೆ ಮುಂಚೆ ಮನೆ ಬಾಗಿಲಿಗೆ ನೀರು ಹಾಕಿ ಈ ಒಂದು ಚಿಕ್ಕ ರಂಗೋಲಿಯನ್ನು ಆದರೂ ಇಡಲೇಬೇಕು. ಸ್ನಾನ ಮಾಡಿ ಹೊಸ್ತಿಲ ಪೂಜೆ ಮಾಡಿ ನಂತರ ಅಡುಗೆ ಮಾಡಬೇಕು . ಮನೆಯ ಸುಮಂಗಲಿಯರು ಈ ನಿಯಮವನ್ನು ಪಾಲಿಸಿದರೆ ತಾಯಿ ಮಹಾಲಕ್ಷ್ಮಿಯು ಸಹ ಸಂತೋಷ ಗೊಂಡು ಆ ಮನೆಯಲ್ಲಿ ನೆಲೆಸುತ್ತಾಳೆ .

ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಮತ್ತು ಕುಂಬಳಕಾಯಿ ಒಡೆಯ ಕೂಡದು . ಮತ್ತು ಒಡೆಯುವ ಜಾಗದಲ್ಲಿಯೂ ಸಹ ಇರ ಕೂಡದು . ಗರ್ಭಿಣಿ ಸ್ತ್ರೀಯರು ನಿಂಬೆ ಹಣ್ಣನ್ನು ಕೊಯ್ದು ದೀಪ ಹಚ್ಚಬಾರದು .

ಮನೆಯಲ್ಲಿ ಯಾವುದಾದರೂ ವಸ್ತು ಖಾಲಿಯಾಗಿ ಇದ್ದರೆ ಅದು ಖಾಲಿಯಾಯಿತು ಎಂದು ಹೇಳಬಾರದು. ಬದಲಾಗಿ ಅಂಗಡಿಯಿಂದ ತೆಗೆದುಕೊಂಡು ಬರಬೇಕು ಎಂದು ಹೇಳಬೇಕು .

ದುಃಖ ವಿಚಾರಿಸಲು ಬಂದವರು ಹೋಗುವಾಗ ಹೋಗಿ ಬರುತ್ತೇನೆ ಎಂದು ಹೇಳಬಾರದು . ಹಾಗೇನೇ ದುಃಖ ವಿಚಾರಿಸಲು ಬಂದವರನ್ನು ಬನ್ನಿ ಬಿನ್ನಿ ಎಂದು ಆಹ್ವಾನಿಸಿ ಸ್ಥಳ ಕೊಟ್ಟು ಕೂರಿಸಿ ಅತಿಥಿ ಸತ್ಕಾರ ಮಾಡಿದರೆ , ಅದು ಪರೋಕ್ಷವಾಗಿ ಅಶುಭಕ್ಕೆ ನಾಂದಿ ಹಾಡಿದಂತೆ ಆಗುತ್ತದೆ .

ಕಪ್ಪು ವರ್ಣದ ಬಟ್ಟೆಗಳನ್ನು ಧರಿಸುವುದು ಎಂದಿಗೂ ಒಳ್ಳೆಯದಲ್ಲ .ಉಪ್ಪು ಹುಣಸೆ ಹಣ್ಣನ್ನು ಯಾರಿಗೂ ಕೈಯಲ್ಲಿ ಕೊಡಬಾರದು .

ಪ್ರತಿನಿತ್ಯ ಊಟಕ್ಕೂ ಮುನ್ನ ಕಾಗೆಗೆ ಅಥವಾ ಸಾಕು ಪ್ರಾಣಿಗಳಿಗೆ ಊಟ ಇಟ್ಟರೆ ಒಳ್ಳೆಯದು .

ಸುಮಂಗಲಿಯರು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಕಾಲು ಅಲುಗಾಡಿಸುತ್ತಾ ಕೂರುವುದು ಒಂಟಿ ಕಾಲಿನಲ್ಲಿ ನಿಲ್ಲುವುದು , ಇಂಥವುಗಳನ್ನು ಎಂದಿಗೂ ಮಾಡಬಾರದು . ಇದರಿಂದ ದರಿದ್ರ ಉಂಟಾಗುತ್ತದೆ .

ಹೊಸ ಬಟ್ಟೆಗಳನ್ನು ಧರಿಸುವ ಮೊದಲು , ಅದಕ್ಕೆ ಸ್ವಲ್ಪ ಅರಿಶಿಣವನ್ನು ಆ ಬಟ್ಟೆಯ ಯಾವುದಾದರೂ ಒಂದು ಕಡೆಗೆ ಹಚ್ಚಿ ನಂತರ ಧರಿಸಬೇಕು .

ಮನೆಯಲ್ಲಿನ ಅಕ್ಕ ತಂಗಿಯರನ್ನು ತವರಿಗೆ ವರ್ಷಕ್ಕೊಮ್ಮೆ ಕರಿಸಿ ಅರಿಶಿಣ ಕುಂಕುಮ ಫಲ ತಾಂಬೂಲವನ್ನು ಕೊಟ್ಟು ಹರಸಿದರೆ ಮನೆತನ ತುಂಬಾ ಎತ್ತರಕ್ಕೆ ಬೆಳೆಯುತ್ತದೆ .

ಹೂಗಳನ್ನು ಬಾಗಿಲ ಬಳಿ ಮಾರಾಟ ಮಾಡಲು ಬಂದಾಗ ಬೇಡ ಎನ್ನಬಾರದು .ಅದರ ಬದಲಾಗಿ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಬೇಕು .

ಸುಮಂಗಲಿಯರು ಬೈತಲೆಯಲ್ಲಿ ಯಾವಾಗಲೂ ಕುಂಕುಮವನ್ನು ಹಾಕಿಕೊಂಡು ಇರಬೇಕು . ಹಣೆಯನ್ನು ಬೈತಲೆಯನ್ನು ಎಂದಿಗೂ ಕುಂಕುಮವಿಲ್ಲದೆ ಖಾಲಿ ಬಿಡಬಾರದು .

ಕೆಲವು ಮಹಿಳೆಯರಿಗೆ ತಲೆಯನ್ನು ಎರಡು ಕೈಗಳಿಂದ ಕೆರೆಯುವ ಅಭ್ಯಾಸ ಇರುತ್ತದೆ .ಆದರೆ ಈ ರೀತಿ ಮಾಡುವುದು ಸಹ ಒಳ್ಳೆಯದಲ್ಲ .

ಸುಮಂಗಲಿಯರು ಕೈಗಳನ್ನು ಖಾಲಿ ಬಿಡಬಾರದು ಕೈಗಳಿಗೆ ಗಾಜಿನ ಬಳೆ ಹಾಕಿದರೆ ತುಂಬಾ ಒಳ್ಳೆಯದು . ಒಂದು ವೇಳೆ ಅದು ಸಾದ್ಯವಾಗದೇ ಇದ್ದರೆ , ಯಾವುದಾದರೂ ಒಂದು ಅರಿಶಿಣ ದಾರ ಕೈಗೆ ಕಟ್ಟಿಕೊಳ್ಳಲೇ ಬೇಕು .

ಸುಮಂಗಲಿಯರ ಬಾಯಿಂದ ಕೆಟ್ಟ ಪದ ಬರಲೇ ಬಾರದು . ಕೆಟ್ಟ ಪದಗಳಿಂದ ಮಕ್ಕಳಿಗೆ ಗಂಡನಿಗೆ ಅಥವಾ ಯಾರಿಗೆ ಆದರೂ ಬೈಯಬಾರದು .

ಯಾವುದೇ ಕಾರಣಕ್ಕೂ ಶುಕ್ರವಾರ ಮಂಗಳವಾರ ಹಾಗೂ ಸಾಯಂಕಾಲದ ಹೊತ್ತು ಕಣ್ಣಲ್ಲಿ ನೀರು ಹಾಕಬಾರದು .

ಮನೆಗೆ ಬಂದ ಹೆಂಗಸರಿಗೆ ಅರಿಶಿಣ ಕುಂಕುಮ ತಾಂಬೂಲವನ್ನು ಕೊಟ್ಟು ಕಳುಹಿಸಬೇಕು .

ಸುಮಂಗಲಿಯರು ತಮ್ಮ ಕಾಲಿನ ಪಾದಗಳನ್ನು ಒಡೆಯದಂತೆ ನೋಡಿಕೊಳ್ಳಬೇಕು . ಕೈ ಕಾಲುಗಳನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಂಡಿರಬೇಕು .

ಸುಮಂಗಲಿಯರು ಎಂದಿಗೂ ಕೋಪ ಮಾಡಿಕೊಂಡು ಊಟ ಮಾಡದೆ ಮಲಗಬಾರದು .ಹಾಗೆ ಮಾಡಿದರೆ ತಾಯಿ ಅನ್ನಪೂರ್ಣೇಶ್ವರಿಗೆ ಅವಮಾನ ಮಾಡಿದಂತೆ ಆಗುತ್ತದೆ .

ಒಡೆದ ತೆಂಗಿನ ಕಾಯಿಯನ್ನು ಇನ್ನೊಬ್ಬರಿಗೆ ಕೊಡುವಾಗ ಮೂರು ಕಣ್ಣು ಇರುವ ಭಾಗವನ್ನು ನೀವು ಇಟ್ಟುಕೊಂಡು ಉಳಿದ ಭಾಗವನ್ನು ಬೇರೆಯವರಿಗೆ ಕೊಡಬೇಕು .

ಸುಮಂಗಲಿಯರು ಹೊತ್ತಲ್ಲದ ಹೊತ್ತಿನಲ್ಲಿ ದೀಪ ಹಚ್ಚುವುದು ಪೂಜೆ ಮಾಡುವುದು ಇಂತವುಗಳನ್ನು ಮಾಡಬಾರದು .

ಸ್ತ್ರೀ ಎಂದರೆ ಆಕೆ ಲಕ್ಷ್ಮಿ ಸ್ವರೂಪ . ಹಾಗಾಗಿ ಅವಳನ್ನು ನೋಡಿದ ಕೂಡಲೇ ಕೈ ಮುಗಿದು ನಮಸ್ಕರಿಸಬೇಕು ಎನ್ನುವ ಭಾವನೆ ಮೂಡಬೇಕೆ ಹೊರತು ಬೇರೆ ಇನ್ಯಾವುದೋ ಭಾವನೆಗಳಿಗೆ ಜಾಗ ಕೊಡದಂತೆ ಸುಮಂಗಲಿ ಆದವಳು ವರ್ತಿಸಬೇಕು .

Leave A Reply

Your email address will not be published.