ತುಳಸಿಗೆ ನೀರು ಹಾಕುವಾಗ 3 ಶಬ್ದ ಹೇಳಿ ಬಡತನ ದೂರ ಆಗುತ್ತದೆ, ಶ್ರೀಕೃಷ್ಣ ಹೇಳಿದ ಮಾತು

ನಾವು ಈ ಲೇಖನದಲ್ಲಿ ತುಳಸಿಗೆ ನೀರು ಹಾಕುವ ಸಮಯದಲ್ಲಿ ಈ ಮೂರು ಶಬ್ಧಗಳನ್ನು ಹೇಳುವುದರಿಂದ ಹೇಗೆ ಬಡತನ ದೂರ ಆಗುತ್ತದೆ ಎಂದು ನೋಡೋಣ. ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಈ ಮೂರು ಶಬ್ದಗಳನ್ನು ಹೇಳಬೇಕು . ಎಲ್ಲಾ ಮನಸ್ಸಿನ ಇಚ್ಛೆಗಳು ಪೂರ್ತಿ ಆಗುತ್ತವೆ . ದೇವಿ ಸತ್ಯಭಾಮೆಯವರು ತುಳಸಿ ಗಿಡಕ್ಕೆ ನೀರನ್ನು ಹಾಕುವುದನ್ನು ಭಗವಂತನಾದ ಶ್ರೀ ಕೃಷ್ಣರ ಬಳಿ ಕೇಳುತ್ತಾರೆ . ಆಗ ಭಗವಂತನಾದ ಶ್ರೀಕೃಷ್ಣರು ಅದರ ಮಹತ್ವವನ್ನು ಹೇಳುತ್ತಾರೆ .

ನಂತರ ಸತ್ಯಭಾಮೆ ಈ ರೀತಿ ಹೇಳುತ್ತಾರೆ . ನೀವು ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸುವುದರ ಮಹತ್ವವನ್ನು ತಿಳಿಸಿಕೊಟ್ಟಿದ್ದೀರಾ . ಆದರೆ ನನ್ನ ಮನಸ್ಸಿನಲ್ಲಿ ಒಂದು ಕುತೂಹಲದ ಪ್ರಶ್ನೆ ಇದೆ . ಅದು ತುಳಸಿ ಗಿಡಕ್ಕೆ ಜಲವನ್ನು ಹೇಗೆ ಅರ್ಪಿಸಬೇಕು . ತುಳಸಿ ಗಿಡಕ್ಕೆ ನೀರನ್ನು ಹಾಕುವ ಸರ್ವೋತ್ತಮ ವಿಧಿ ಯಾವುದು ಇದೆ . ತುಳಸಿಗೆ ಜಲವನ್ನು ಅರ್ಪಿಸುವಾಗ ಮಂತ್ರ ಯಾವುದು ಇದೆ . ದಯವಿಟ್ಟು ನನಗೆ ಈ ಎಲ್ಲಾ ಪ್ರಶ್ನೆಗಳಿಗೆ ಇರುವ ಉತ್ತರವನ್ನು ಕೊಡಿ . ಆಗ ಭಗವಂತನಾದ ಶ್ರೀ ಕೃಷ್ಣ ದೇವಿ ಸತ್ಯಭಾಮೆಗೆ ಹೇಳುತ್ತಾರೆ.

ಹೇ ಪ್ರಿಯೆ ಯಾವ ರೀತಿ ನಿನಗೆ ನಾನು ತುಳಸಿಯ ಮಹಾತ್ಮೆಯನ್ನು ಹೇಳಿದ್ದೆ , ಅದೇ ರೀತಿ ತುಳಸಿಗೆ ಜಲವನ್ನು ಅರ್ಪಿಸುವ ಸಮಯದಲ್ಲಿ ಹೇಳುವ ಮಂತ್ರಕ್ಕೂ ಕೂಡ ದೊಡ್ಡ ಮಹತ್ವ ಇದೆ . ಈ ಮಂತ್ರ ಕೇವಲ ಮೂರು ಶಬ್ದಗಳಲ್ಲಿ ಇದೆ . ಆದರೆ ಇದರ ಪ್ರಭಾವ ತುಂಬಾ ಕಲ್ಯಾಣ ಕಾರ್ಯ ಆಗಿದೆ . ಯಾರು ಪ್ರತಿದಿನ ತುಳಸಿಗೆ ಜಲವನ್ನು ಅರ್ಪಿಸುವ ಸಮಯದಲ್ಲಿ ಮೂರು ಶಬ್ದವನ್ನು ತಮ್ಮ ಬಾಯಿಂದ ಯಾರು ಹೇಳುತ್ತಾರೆ ಇಲ್ಲಿ ಸಾಕ್ಷಾತ್ ಲಕ್ಷ್ಮೀದೇವಿ ಅವರ ಮನೆಯನ್ನು ಪ್ರವೇಶ ಮಾಡುತ್ತಾಳೆ .

ಅವರ ದರಿದ್ರತೆ ನಾಶವಾಗುತ್ತದೆ . ಧನ ಧಾನ್ಯದ ಪ್ರಾಪ್ತಿಯೂ ಆಗುತ್ತದೆ .ಆ ಮಂತ್ರವನ್ನು ಹೇಳುವ ಮುನ್ನ ತುಳಸಿಯ ಈ ಮಹತ್ವವನ್ನು ತಿಳಿಸಲಾಗಿದೆ . ಈ ಮಹಾತ್ಮೆಯನ್ನು ಎಲ್ಲಾ ಮನುಷ್ಯರು ಕೇಳಿದರು ಸಹ ಎಲ್ಲಾ ಪಾಪಗಳು ನಾಶವಾಗುತ್ತವೆ . ನೂರು ವರ್ಷಗಳು ಜಲವನ್ನು ಅರ್ಪಿಸಿದ ಪುಣ್ಯ ಸಿಗುತ್ತದೆ . ಹಾಗಾಗಿ ಹೇ ದೇವಿ ಗಮನವಿಟ್ಟು ಪೂರ್ತಿಯಾಗಿ ಈ ಕಥೆಯನ್ನು ಕೇಳಿ . ಹೇ ಪ್ರಭು ನಾನು ಕಥೆಯನ್ನು ಖಂಡಿತವಾಗಿ ಕೇಳುತ್ತೇನೆ. ನೀವು ತುಳಸಿಯ ಮಂತ್ರದ ಮಹಾತ್ಮೆಯ ಬಗ್ಗೆ ತಿಳಿಸಿರಿ . ಶ್ರೀಕೃಷ್ಣರು ಹೇಳುತ್ತಾರೆ. ದಕ್ಷಿಣದಲ್ಲಿ ಒಂದು ಸುಂದರವಾದ ನಗರ ಇತ್ತು .ಆ ನಗರದಲ್ಲಿ ಸುಶರ್ಮ ಹೆಸರಿನ ಒಬ್ಬ ಬ್ರಾಹ್ಮಣ ಇದ್ದ .

ಆತ ಪಾಪಿಗಳ ಶಿರೋ ಮಣಿ ಆಗಿದ್ದ . ಈತನು ಜನ್ಮದಿಂದಲೂ ಬ್ರಾಹ್ಮಣನಾಗಿದ್ದ . ಆದರೆ ಕರ್ಮದಿಂದ ಆತ ದುರಾಚಾರಿ ಆಗಿದ್ದ, ಈತ ಯಾವುದೇ ಪೂಜೆ ಪಾಠ ಮಾಡುತ್ತಿರಲಿಲ್ಲ. ಅಧ್ಯಯನ ಮಾಡುತ್ತಿರಲ್ಲ . ಹೋಮ ಹಾಗೂ ತಿಥಿಗಳ ಸತ್ಕಾರವನ್ನು ಮಾಡುತ್ತಿರಲಿಲ್ಲ . ದ್ವಾರದ ಬಳಿ ಬಂದ ಅತಿಥಿಗಳಿಗೆ ದಾನ ಮಾಡದೆ ಓಡಿಸುತ್ತಿದ್ದ . ಯಾವತ್ತಿಗೂ ಪರ ಸ್ತ್ರೀಯರಲ್ಲಿ ಆಸಕ್ತಿಯನ್ನು ಹೊಂದಿದ್ದ . ಈತನಲ್ಲಿ ಮಧ್ಯಪಾನ ಮಾಡುವ ಅಭ್ಯಾಸ ಕೂಡ ಇತ್ತು. ಜೊತೆಗೆ ಮಾಂಸವನ್ನು ಸೇವನೆ ಮಾಡುತ್ತಿದ್ದ .

ಈತ ಹಗಲಿನಲ್ಲಿ ಹೊಲದಲ್ಲಿ ಕೆಲಸ ಮಾಡಿ , ಎಲೆಗಳನ್ನು ಮಾರಿ ಜೀವನ ನಡೆಸುತ್ತಿದ್ದ . ರಾತ್ರಿ ವೇಶ್ಯೆಯ ಸಂಗಡ ಇರುತ್ತಿದ್ದ . ಈ ರೀತಿಯಾಗಿ ಅನೇಕ ವರ್ಷಗಳು ಜೀವನ ಮಾಡುತ್ತಾನೆ. ನಂತರ ಒಂದು ದಿನ ಎಲೆಗಳನ್ನು ಮಾರಾಟ ಮಾಡಲು ಎಲೆಗಳನ್ನು ಕೂಡಿ ಹಾಕಲು ಒಬ್ಬ ಋುಷಿ ಮುನಿಯ ಕುಟೀರದಲ್ಲಿ ತಿರುಗಾಡಲು ಶುರು ಮಾಡಿದ. ಅಲ್ಲಿ ಆತ ಎಲೆಗಳನ್ನು ತೆಗೆಯಲು ಶುರು ಮಾಡುತ್ತಾನೆ. ಅದೇ ಕ್ಷಣ ಅಲ್ಲಿ ಇರುವ ಹಾವು ಆತನನ್ನು ಕಚ್ಚಿತು. ಅದೇ ಸಮಯದಲ್ಲಿ ಆತನ ಮೃತ್ಯು ಕೂಡ ಆಯಿತು.

ಇದಾದ ನಂತರ ಇಬ್ಬರು ಯಮ ಧೂತರು ಕರೆದುಕೊಂಡು ಹೋಗಲು ಆಸ್ಥಾನಕ್ಕೆ ಬಂದರು. ಆತನನ್ನು ಎತ್ತಿಕೊಂಡು ಯಮ ಲೋಕಕ್ಕೆ ಹೋಗಲು ಶುರು ಮಾಡಿದರು. ದಾರಿಯಲ್ಲಿ ಆತ ಯಮ ದೂತರೊಂದಿಗೆ ತುಂಬಾ ಬೇಡಿಕೊಂಡು ಕಣ್ಣೀರು ಹಾಕುತ್ತಾನೆ. ಹೇ ದೂತರೇ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ. ನನ್ನನ್ನು ಬಿಟ್ಟು ಬಿಡಿ. ನನ್ನ ಪ್ರಾಣ ಮರಳಿ ಕೊಡಿ . ಆದರೆ ಯದು ಧೂತರು ಈ ರೀತಿಯಾಗಿ ಹೇಳುತ್ತಾರೆ. ಹೇ ದುಷ್ಟ ಬ್ರಾಹ್ಮಣ ನಿನ್ನ ಪಾಪ ಕರ್ಮಗಳ ಕಾರಣದಿಂದಾಗಿ ನಿನ್ನನ್ನು ಹಾವು ಕಚ್ಚಿದೆ.

ಈಗ ಖಂಡಿತವಾಗಿ ಯಮರಾಜರು ನಿನ್ನನ್ನು ಕೆಟ್ಟದಾಗಿರುವ ನರಕಕ್ಕೆ ಹಾಕುತ್ತಾರೆ. ನಂತರ ಯಮ ದೂತರು ಯಮ ಲೋಕಕ್ಕೆ ಕರೆದು ಕೊಂಡು ಹೋಗುತ್ತಾರೆ. ಅಲ್ಲಿ ಚಿತ್ರ ಗುಪ್ತರು ಅವನ ಪಾಪದ ಲೆಕ್ಕಾಚಾರವನ್ನು ತೆಗೆಯುತ್ತಾರೆ. ನಂತರ ಯಮ ರಾಜರಿಗೆ ಈ ರೀತಿ ಹೇಳುತ್ತಾರೆ. ಹೇ ಧರ್ಮರಾಜರೇ ಈ ಬ್ರಾಹ್ಮಣ ಹುಟ್ಟಿನಿಂದ ಸಾಯುವ ತನಕ ಕೇವಲ ಪಾಪವನ್ನೇ ಮಾಡಿದ್ದಾನೆ. ಯಾವತ್ತಿಗೂ ಪುಣ್ಯ ದ ಕೆಲಸ ಮಾಡಿಲ್ಲ. ನಂತರ ಧರ್ಮ ರಾಜರು ಹೇಳುತ್ತಾರೆ. ಈ ಮಹಾ ಪಾಪಿಯನ್ನು ಎತ್ತಿಕೊಂಡು ನರಕದಲ್ಲಿ ಹಾಕಿ . ನಂತರ ಯಮ ಧೂತರು ಬ್ರಾಹ್ಮಣನನ್ನು ಕರೆದುಕೊಂಡು ನರಕದ ಭಯಂಕರವಾದ ಅಗ್ನಿಯಲ್ಲಿ ನೂಕುತ್ತಾರೆ.

ಅನೇಕ ವರ್ಷಗಳು ನರಕದಲ್ಲಿ ಶಿಕ್ಷೆಯನ್ನು ಅನುಭವಿಸಿದ ನಂತರ , ಆ ಬ್ರಾಹ್ಮಣನಿಗೆ ಮುಂದಿನ ಜನ್ಮದಲ್ಲಿ ಅವನಿಗೆ ಹಸುವಿನ ಶರೀರ ದೊರೆಯುತ್ತದೆ. ಹಸುವಿನ ಜನ್ಮದಲ್ಲಿ ಈತ ಭಾರವನ್ನು ಎತ್ತುವ ಕೆಲಸ ಮಾಡುತ್ತಾನೆ. ಈತನ ಮಾಲಿಕನು ಹಗಲು ರಾತ್ರಿ ಎನ್ನದೇ ಈತನ ಹತ್ತಿರ ದುಡಿಸಿಕೊಳ್ಳುತ್ತಿದ್ದ. ನಂತರ ಯಾವಾಗ ಈ ಹಸುವಿನ ಶಕ್ತಿ ಕಡಿಮೆಯಾಯಿತು , ಆಗ ಈತನನ್ನು ಮಾಲೀಕನು ಹಸುವನ್ನು ಒಬ್ಬ ಕುಂಟ ವ್ಯಕ್ತಿಗೆ ಮಾರುತ್ತಾನೆ . ಆ ಕುಂಟ ವ್ಯಕ್ತಿಯು ಭಾರವನ್ನು ಎತ್ತಲು ಹಸುವನ್ನು ಬಳಸಿಕೊಳ್ಳುತ್ತಾನೆ . ಈತ ಹಸುವಿನ ಬೆನ್ನಿನ ಮೇಲೆ ಕುಳಿತು ಸವಾರಿ ಮಾಡುತ್ತಿದ್ದ.

ಈ ರೀತಿಯಾಗಿ ಹಸು 8 ವರ್ಷಗಳ ಕಾಲ ಆ ವ್ಯಕ್ತಿಯನ್ನು ಹೊತ್ತುಕೊಂಡು ತಿರುಗಾಡಿತು . ಒಂದು ದಿನ ಆ ಕುಂಟ ವ್ಯಕ್ತಿಯು ಈ ಹಸುವಿನ ಮೇಲೆ ಕುಳಿತು ಎತ್ತರದ ಬೆಟ್ಟವನ್ನು ಏರಲು ಹೋಗುತ್ತಾನೆ. ತುಂಬಾ ಹೊತ್ತಿನ ತನಕ ಆ ಬೆಟ್ಟವನ್ನು ಏರುವ ಕಾರಣದಿಂದಾಗಿ ಆ ಹಸು ತುಂಬಾ ಸುಸ್ತಾಗುತ್ತದೆ. ಇದರ ಶಕ್ತಿ ಕ್ಷೀಣಗೊಳ್ಳುತ್ತದೆ. ಕೆಲವು ಸಮಯದ ನಂತರ ಅದು ಮೂರ್ಚೆಗೆ ಒಳಗಾಗಿ ನೆಲದ ಮೇಲೆ ಬೀಳುತ್ತದೆ. ಮತ್ತು ಅಂತಿಮ ಉಸಿರನ್ನು ತೆಗೆದುಕೊಳ್ಳಲು ಶುರುಮಾಡುತ್ತದೆ .

ನಂತರ ಅಲ್ಲಿ ನಿಂತಿರುವ ಜನರಿಗೆ ಹಸುವಿನ ಮೇಲೆ ಕರುಣೆ ಬರುತ್ತದೆ . ಅವರು ಅದರ ಬಾಯಲ್ಲಿ ನೀರನ್ನು ಹಾಕುತ್ತಾರೆ . ಕೆಲವು ಜನರಲ್ಲಿ ಒಬ್ಬ ಪುಣ್ಯಾತ್ಮ ವ್ಯಕ್ತಿ ಇದ್ದ . ಒಳ್ಳೆಯದನ್ನು ಮಾಡಲು ತನ್ನ ಪುಣ್ಯವನ್ನು ಹಸುವಿಗೆ ಕೊಡುತ್ತಾನೆ . ಅದನ್ನು ಕಂಡು ಬೇರೆ ಜನರು ತಮ್ಮ ಪುಣ್ಯ ಕಾರ್ಯಗಳನ್ನು ನೆನೆಸಿಕೊಂಡು , ಆ ಪುಣ್ಯವನ್ನು ಹಸುವಿಗೆ ಕೊಡುತ್ತಾರೆ .ಯಾಕೆಂದರೆ ಹಸಿವಿಗೆ ಮುಕ್ತಿ ಸಿಗಲಿ ಎಂದು ಈ ರೀತಿ ಮಾಡುತ್ತಾರೆ . ಆ ಜನರ ಗುಂಪಿನಲ್ಲಿ ಒಬ್ಬ ವೇಶ್ಯೆ ಕೂಡ ಇದ್ದಳು . ಎಲ್ಲರೂ ತಮ್ಮ ಪುಣ್ಯಗಳನ್ನು ಹಸುವಿಗೆ ಕೊಡುತ್ತಿದ್ದರು . ಇದನ್ನು ಕಂಡು ಆ ವೇಶ್ಯೆ ಕೂಡ ತನ್ನ ಪುಣ್ಯವನ್ನು ಹಸುವಿಗೆ ಕೊಡುತ್ತಾಳೆ .

ಕೆಲವು ಸಮಯದ ನಂತರ ಹಸುವಿನ ಮೃತ್ಯು ಆಗುತ್ತದೆ . ನಂತರ ಆ ಸ್ಥಾನಕ್ಕೆ ಯಮದೂತರು ಬರುತ್ತಾರೆ . ಆ ಹಸುವಿನ ಶರೀರದಿಂದ ಆ ಬ್ರಾಹ್ಮಣನ ಆತ್ಮವನ್ನು ತೆಗೆದುಕೊಂಡು , ಯಮಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ . ಮರಳಿ ಚಿತ್ರಗುಪ್ತರು ಆತನ ಪಾಪ ಪುಣ್ಯದ ಲೆಕ್ಕಾಚಾರವನ್ನು ತೆಗೆಯುತ್ತಾರೆ . ಆಗ ಅವರಿಗೆ ಆಶ್ಚರ್ಯ ಆಗುತ್ತದೆ . ಆ ವೇಶ್ಯೆಯ ಮೂಲಕ ಹಸುವಿಗೆ ನೀಡಿದಂತ ಪುಣ್ಯವು ತುಂಬಾ ದೊಡ್ಡದಾಗಿ ಇರುತ್ತದೆ . ಆ ಪುಣ್ಯದ ಪ್ರಭಾವದಿಂದ ಈತನ ಎಲ್ಲಾ ಜನ್ಮದ ಪಾಪಗಳು ನಷ್ಟವಾಗುತ್ತದೆ .

ನಂತರ ಯಮರಾಜರು ಬ್ರಾಹ್ಮಣನ ಎಲ್ಲಾ ಪಾಪಗಳನ್ನು ಕ್ಷಮಿಸುತ್ತಾರೆ . ನಂತರ ಈ ರೀತಿಯಾಗಿ ಹೇಳುತ್ತಾರೆ ಹೇ ಬ್ರಾಹ್ಮಣ ಆ ವೇಶ್ಯೆ ಯು ತನ್ನ ಪುಣ್ಯ ಕರ್ಮಗಳನ್ನು ನಿನಗೆ ಕೊಟ್ಟು , ನಿನಗೆ ದೊಡ್ಡ ಉಪಕಾರವನ್ನು ಮಾಡಿದ್ದಾಳೆ . ಕೇವಲ ಆಕೆಯ ಕಾರಣದಿಂದಲೇ ನಿನ್ನ ಎಲ್ಲಾ ಜನ್ಮದ ಪಾಪಗಳು ನಾಶ ಆಗಿವೆ. ನಂತರ ಯಮರಾಜರು ಆತನಿಗೆ ಮರಳಿ ಮನುಷ್ಯ ಜನ್ಮವನ್ನು ಕೊಡುತ್ತಾರೆ . ಈ ಬಾರಿ ಆತ ಭೂಮಿಯ ಮೇಲೆ ಉತ್ತಮ ಬ್ರಾಹ್ಮಣ ಕುಲದಲ್ಲಿ ಜನ್ಮವನ್ನು ಪಡೆಯುತ್ತಾನೆ. ಆ ಮಹಾ ಪುಣ್ಯದ ಪ್ರಭಾವದಿಂದ , ಹೊಸ ಜನ್ಮದಲ್ಲಿ ಇವರಿಗೆ ತಮ್ಮ ಪೂರ್ವ ಜನ್ಮದ ವಿಷಯಗಳು ನೆನಪಿಗೆ ಬರುತ್ತವೆ .

ಯಾವಾಗ ಈ ಬ್ರಾಹ್ಮಣ ದೊಡ್ಡವನಾಗುತ್ತಾನೆ .ಅವರಿಗೆ ಎಲ್ಲಾ ವಿಷಯಗಳು ನೆನಪಿಗೆ ಬರುತ್ತವೆ . ಹಿಂದಿನ ಜನ್ಮದಲ್ಲಿ ತಾವು ಒಂದು ಹಸುವಾಗಿದ್ದು , ಒಬ್ಬ ವೇಶ್ಯೆ ತನಗೆ ಪುಣ್ಯಕರ್ಮಗಳನ್ನು ನೀಡಿದ್ದು ನೆನಪಿಗೆ ಬರುತ್ತದೆ . ಹಾಗಾಗಿ ಇವರ ಮನಸ್ಸಿನಲ್ಲಿ ಆ ವೇಶೈಯ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹುಟ್ಟುತ್ತದೆ . ಆ ಪುಣ್ಯದ ಬಗ್ಗೆ ತಿಳಿದುಕೊಳ್ಳಲು ಆ ವೇಶ್ಯಯನ್ನು ಹುಡುಕಾಡುತ್ತಾ , ಆಕೆಯ ನಗರಕ್ಕೆ ಹೋಗುತ್ತಾನೆ . ಆ ವೇಶ್ಯೆಯು ಈಗ ವೃದ್ದೆ ಆಗಿದ್ದಳು . ಯಾವಾಗ ಆ ವೇಶ್ಯೆಯು ಸಿಗುತ್ತಾಳೋ ,

ಆಕೆಯ ಮುಂದೆ ಈ ಬ್ರಾಹ್ಮಣನು ಹೋಗಿ ಪದೇ ಪದೇ ನಮಸ್ಕಾರ ಮಾಡುತ್ತಾನೆ. ಆ ವೇಶ್ಯೆಗೆ ಧನ್ಯವಾದಗಳು ತಿಳಿಸುತ್ತಾನೆ. ಆ ವೇಶ್ಯೆಯು ಈ ರೀತಿ ಹೇಳುತ್ತಾಳೆ . ಹೇ ಬ್ರಾಹ್ಮಣ ಶ್ರೇಷ್ಠ ನೀವು ಯಾರು ? ನೀವು ಯಾವ ಕಾರಣದಿಂದಾಗಿ ನನ್ನಂಥ ವೇಶ್ಯೆಗೆ ನಮಸ್ಕಾರ ಮಾಡಿ, ಧನ್ಯವಾದಗಳು ಹೇಳುತ್ತಿದ್ದೀರಾ . ನೀವು ನಮಸ್ಕಾರ ಮಾಡುವ ಕಾರ್ಯವನ್ನು ನಾನು ಏನು ಮಾಡಿದ್ದೇನೆ . ಆಗ ಬ್ರಾಹ್ಮಣನು ಹೇಳುತ್ತಾನೆ . ಹೇ ತಾಯಿಯೇ ನಾನು ಅದೇ ಹಸು ಆಗಿದ್ದೇನೆ .

ನೀವು ನನಗೆ ಎಲ್ಲಾ ಪುಣ್ಯ ಕರ್ಮಗಳನ್ನು ಕೊಟ್ಟಿದ್ದೀರಿ .ನನ್ನ ಪಾಪ ಕರ್ಮಗಳ ಕಾರಣದಿಂದಾಗಿ ಹಿಂದಿನ ಜನ್ಮದಲ್ಲಿ ನಾನು ಒಂದು ಹಸುವಾಗಿ ಹುಟ್ಟಿದ್ದೆ ,ಬೆಟ್ಟದ ಮೇಲೆ ನಾನು ಸಾಯುವಂತ ಸ್ಥಿತಿಯಲ್ಲಿ ಇದ್ದಾಗ ನೀವು ನಿಮ್ಮ ಪುಣ್ಯ ಕರ್ಮಗಳನ್ನು ನನಗೆ ಕೊಟ್ಟಿದ್ದೀರಿ . ನಿಮ್ಮ ಪುಣ್ಯ ಕರ್ಮದ ಕಾರಣದಿಂದಾಗಿ , ನನಗೆ ಮರಳಿ ಇಂದು ಮನುಷ್ಯ ಜನ್ಮ ಸಿಕ್ಕಿದೆ . ನಿಮ್ಮ ಮೂಲಕ ಪಡೆದಂತ ಆ ಪುಣ್ಯದ ಕಾರಣದಿಂದಲೇ ನನ್ನ ಪೂರ್ವ ಜನ್ಮದ ಎಲ್ಲಾ ವಿಷಯಗಳು ನಿನಗೆ ನೆನಪಿದೆ . ಹಾಗಾಗಿ ನೀವು ಯಾವ ರೀತಿಯ ಪುಣ್ಯ ಕರ್ಮಗಳನ್ನು ಕೊಟ್ಟಿದ್ದೀರಿ ಎಂದು ತಿಳಿದುಕೊಳ್ಳಲು ಬಂದಿದ್ದೇನೆ .

ಈ ಕಾರಣದಿಂದ ನನ್ನ ಎಲ್ಲಾ ಜನ್ಮದ ಪಾಪಗಳು ನಷ್ಟವಾಗಿದೆ . ನಾನು ಆ ಪುಣ್ಯದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತೇನೆ . ಆಗ ವೇಶ್ಯೆ ಹೇಳುತ್ತಾಳೆ . ಹೇ ಬ್ರಾಹ್ಮಣ ಶ್ರೇಷ್ಠ ನಾನು ನನ್ನ ಜೀವನದಲ್ಲಿ ಯಾವುದೇ ಪುಣ್ಯ ಕೆಲಸವನ್ನು ಮಾಡಿಲ್ಲ . ಆದರೆ ನನ್ನ ಮನೆಯಲ್ಲಿ ಒಂದು ಗಿಳಿಯು ಇದೆ . ಪಂಜರದಲ್ಲಿ ಕುಳಿತುಕೊಂಡು ದಿನವು ಏನನ್ನಾದರೂ ಹೇಳುತ್ತಿರುತ್ತದೆ . ಅದನ್ನು ಕೇಳಿ ನನ್ನ ಅಂತರ ಮನಸ್ಸು ಪವಿತ್ರಗೊಂಡಿದೆ . ಆ ಗಿಳಿಯು ಹೇಳಿದ ಮಂತ್ರದ ಪುಣ್ಯ ಫಲವನ್ನು ನಾನು ನಿನಗೆ ದಾನವಾಗಿ ಕೊಟ್ಟಿದ್ದೆ . ನಂತರ ಆ ವೇಶ್ಯೆ ಮತ್ತು ಬ್ರಾಹ್ಮಣರು ಆ ಗಿಳಿಯ ಹತ್ತಿರ ಹೋಗುತ್ತಾರೆ . ಅದಕ್ಕೆ ಪ್ರಶ್ನೆಯನ್ನು ಮಾಡುತ್ತಾರೆ .

ಹೇ ಗಿಳಿ ನೀನು ಯಾವ ಮಂತ್ರವನ್ನು ಹೇಳುತ್ತಿರುತ್ತೀಯಾ , ಆ ಮಂತ್ರವನ್ನು ನಿನಗೆ ಯಾರು ಕಲಿಸಿದರು . ಮತ್ತು ಆ ಮಂತ್ರದ ಅರ್ಥ ಏನಿದೆ . ಆಗ ಆ ಗಿಳಿಯು ತನ್ನ ಪೂರ್ವ ಜನ್ಮದ ಕಥೆಯನ್ನು ಹೇಳಲು ಶುರುಮಾಡುತ್ತದೆ . ಹೇ ಬ್ರಾಹ್ಮಣ ಶ್ರೇಷ್ಠ ಹಿಂದಿನ ಜನ್ಮದಲ್ಲಿ ನಾನು ಒಬ್ಬ ಬ್ರಾಹ್ಮಣನಾಗಿದ್ದೆ . ನಾನು ನನ್ನ ಜ್ಞಾನದ ಅಹಂಕಾರದಲ್ಲಿ ಕುರುಡನಾಗಿದ್ದೆ . ನಾನು ಯಾವತ್ತಿಗೂ ಗುರು ಜನರಿಗೆ ಗೌರವ ಕೊಡಲಿಲ್ಲ . ನಾನು ಯಾವಾಗಲೂ ಅವರಿಗೆ ಅವಮಾನ ಮಾಡಿದೆ . ನನಗೆ ನನ್ನ ಜ್ಞಾನದ ಮೇಲೆ ಎಷ್ಟು ಅಹಂಕಾರ ಇತ್ತು ಎಂದರೆ , ಯಾವಾಗ ನನ್ನ ಸಿಟ್ಟು ಹೆಚ್ಚಾಯಿತು ,

ಆಗಿನಿಂದ ನಾನು ಎಲ್ಲರ ಮೇಲೆ ದ್ವೇಷ ಸಾರಿದೆ . ಬೇರೆ ಮನುಷ್ಯರನ್ನು ಕೀಳಾಗಿ ಕಂಡೆನು . ದೊಡ್ಡ ಸಭೆಯಲ್ಲಿ ವಿದ್ವಾನರಿಗೆ ಅವಮಾನ ಮಾಡಿದೆ . ಕಾಲ ನಂತರದಲ್ಲಿ ನನ್ನ ಮೃತ್ಯು ಆಯಿತು . ನನ್ನನ್ನು ಯಮಲೋಕಕ್ಕೆ ಕರೆದುಕೊಂಡು ಹೋದರು . ಪೂಜ್ಯ ಜನರು, ಗುರು ಜನರಿಗೆ ಅವಮಾನ ಮಾಡಿದ ಕಾರಣ ನಾನು ಗಿಳಿಯಾಗಿ ಹುಟ್ಟಿದೆನು .ನನ್ನ ಪಾಪ ಕರ್ಮಗಳ ಕಾರಣದಿಂದಾಗಿ , ಹುಟ್ಟಿದಾಗಲೇ ತಂದೆ ತಾಯಿ ದೂರವಾದರೂ . ಒಂದು ದಿನ ಮರದ ಕೊಂಬೆಯ ಮೇಲೆ ಕುಳಿತುಕೊಂಡು ಅಳುತ್ತಿದ್ದೆ . ಅದೇ ಸ್ಥಾನದಿಂದ ಕೆಲವು ಮುನಿಗಳು ಹೋಗುತ್ತಿದ್ದರು . ಅವರು ನನ್ನ ಧ್ವನಿಯನ್ನು ಕೇಳಿದರು .

ನನ್ನನ್ನು ಕರೆದುಕೊಂಡು ತಮ್ಮ ಆಶ್ರಮಕ್ಕೆ ಹೋದರು . ಅಲ್ಲಿರುವ ಆಶ್ರಮದಲ್ಲಿ ನನ್ನನ್ನು ಒಂದು ಸುಂದರವಾದ ಪಂಜರದಲ್ಲಿ ಇಟ್ಟರು . ನನ್ನನ್ನು ಚೆನ್ನಾಗಿ ಕಾಳಜಿ ಮಾಡಲು ಶುರು ಮಾಡಿದರು . ಪ್ರತಿನಿತ್ಯ ನನಗೆ ಅವರು ಆಹಾರವನ್ನು ಕೊಡುತ್ತಿದ್ದರು . ಮತ್ತು ಏನನ್ನಾದರೂ ಕಲಿಸುತ್ತಿದ್ದರು . ಆ ಸ್ಥಾನದಲ್ಲಿ ಋಷಿಮುನಿಗಳು ಸ್ತ್ರೀಯರು ಮತ್ತು ಬಾಲಕರು ಪ್ರತಿನಿತ್ಯ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸುತ್ತಿದ್ದರು . ಅದರ ಮುಂದೆ ಒಂದು ಮಂತ್ರವನ್ನು ಜಪ ಮಾಡುತ್ತಿದ್ದರು . ಅವರ ಬಾಯಿಂದ ಪದೇಪದೇ ಆ ಮಂತ್ರವನ್ನು ಕೇಳಿ . ನಾನು ಆ ಮಂತ್ರವನ್ನು ಬಾಯಿಪಾಠ ಮಾಡಿಕೊಂಡೆ .

ಆಗಿನಿಂದ ಆ ಮಂತ್ರವನ್ನು ನಾನು ತಿಳಿದಿದ್ದೇನೆ . ಅದೇ ಮಂತ್ರವನ್ನು ನಾನು ಹಗಲು ರಾತ್ರಿ ಹೇಳುತ್ತೇನೆ . ಆ ಮಂತ್ರದ ಪ್ರಭಾವದಿಂದ ನನಗೆ ಯಾವತ್ತೂ ಸಾವು ಬರಲಿಲ್ಲ .ನನ್ನ ಆಯಸ್ಸು ನೂರು ವರ್ಷಗಳ ತನಕ ಆಯಿತು . ನಂತರ ಇಷ್ಟು ವರ್ಷಗಳ ತನಕ ನಾನು ಜೀವಂತವಾಗಿ ಇದ್ದೇನೆ . ಈ ನಡುವೆ ಆ ಸ್ಥಾನಕ್ಕೆ ಒಬ್ಬ ಕಳ್ಳನೂ ಬಂದನು. ಆತ ಅಲ್ಲಿಂದ ನನ್ನನ್ನು ಕದ್ದು ತೆಗೆದುಕೊಂಡು ಹೋದನು . ಆಗ ಈ ವೇಶ್ಯೆ ಕಳ್ಳ ನಿಂದ ನನ್ನನ್ನು ಖರೀದಿ ಮಾಡಿದಳು . ಈ ವೇಶ್ಯೆಯ ಮನೆಗೆ ಬಂದ ನಂತರವೂ ನಾನು ಆ ಮಂತ್ರವನ್ನು ಹೇಳುತ್ತಿದ್ದೆ . ಇದನ್ನು ಕೇಳಿದ ಆ ವೇಶ್ಯೆಯ ಮನಸ್ಸು ಕೂಡ ಪವಿತ್ರವಾಯಿತು .

ಆಕೆ ತನ್ನ ವೇಶ್ಯೆಯ ಕಾರ್ಯವನ್ನು ಬಿಟ್ಟು , ಭಗವಂತನಾದ ವಿಷ್ಣುವಿನ ಭಕ್ತಿಯಲ್ಲಿ ಲೀನವಾದಳು . ಅದೇ ಮಂತ್ರದ ಪ್ರಭಾವದಿಂದ ನನ್ನ ಪೂರ್ವಜನ್ಮದ ಪಾಪಗಳು ನಷ್ಟವಾದವು . ಅದೇ ಮಂತ್ರದಿಂದ ಈ ವೇಶ್ಯೆಯ ಅಂತರ ಮನಸ್ಸು ಕೂಡ ಪವಿತ್ರವಾಯಿತು . ಹೇ ಬ್ರಾಹ್ಮಣ ದೇವತಾ ಅದೇ ಮಂತ್ರದ ಪ್ರಭಾವದಿಂದ ನೀವು ಪಾಪದಿಂದ ಮುಕ್ತಿ ಹೊಂದಿದ್ದೀರಾ . ಈ ರೀತಿಯಾಗಿ ಆ ಗಿಳಿಯು ಬ್ರಾಹ್ಮಣ ಮತ್ತು ವೇಶ್ಯ ವೃದ್ಧೆಗೆ ಎಲ್ಲಾ ವಿಷಯವನ್ನು ತಿಳಿಸುತ್ತದೆ . ಇದನ್ನು ಕೇಳಿ ಇಬ್ಬರಿಗೂ ಖುಷಿಯಾಗುತ್ತದೆ .

ನಂತರ ಇಬ್ಬರೂ ತುಳಸಿಗೆ ಪ್ರತಿನಿತ್ಯ ಜಲವನ್ನು ಅರ್ಪಿಸಿ ಆ ಮಂತ್ರವನ್ನು ಜಪ ಮಾಡಲು ಶುರು ಮಾಡುತ್ತಾರೆ . ನಂತರ ಆ ಗಿಳಿ, ವೇಶ್ಯೆ ಮತ್ತು ಬ್ರಾಹ್ಮಣನು ಮೂರು ಜನ ಆ ಮಂತ್ರದ ಪ್ರಭಾವದಿಂದ ದಿವ್ಯವಾದ ವಿಮಾನದಲ್ಲಿ ಕುಳಿತುಕೊಂಡು ವಿಷ್ಟು ಲೋಕಕ್ಕೆ ಹೋಗುತ್ತಾರೆ. ಶ್ರೀಕೃಷ್ಣರು ಈ ರೀತಿ ಹೇಳುತ್ತಾರೆ . ಹೇ ದೇವಿ ಸತ್ಯಭಾಮೆ ತುಳಸಿಯ ಕೇವಲ ಈ ಮಂತ್ರದ ಪ್ರಭಾವದಿಂದ ಗಿಳಿ, ವೇಶ್ಯೆ ಮತ್ತು ಬ್ರಾಹ್ಮಣನ ಎಲ್ಲಾ ಪಾಪಗಳು ನಷ್ಟ ಆಗಿದೆ . ಹಾಗಾಗಿ ಪ್ರತಿಯೊಬ್ಬ ಮನುಷ್ಯರು ಪ್ರತಿದಿನ ಜಲವನ್ನು ಅರ್ಪಿಸುವ ಸಮಯದಲ್ಲಿ ,

ಈ ಒಂದು ಮಂತ್ರವನ್ನು ಖಂಡಿತವಾಗಿ ಉಚ್ಚಾರಣೆ ಮಾಡಬೇಕು . ಹೇ ದೇವಿ ಆ ಮಂತ್ರವು ಈ ಪ್ರಕಾರದಲ್ಲಿ ಇದೆ .
“ಓಂ ಬೃಂದಾವಣ್ಣೇ ಸ್ವಾಃ , ಓಂ ಬೃಂದಾವಣ್ಯೇ ಸ್ವಾಃ , ಓಂ ಬೃಂದಾವಣ್ಣೆ ಸ್ವಾಃ ” ಈ ರೀತಿಯಾಗಿ ಇದೆ. ಶ್ರೀ ಕೃಷ್ಣರು ಈ ರೀತಿ ಹೇಳುತ್ತಾರೆ . ಯಾವ ಸ್ತ್ರೀಯರು ಪ್ರತಿನಿತ್ಯ ತುಳಸಿಯ ಮುಂದೆ ಜಲವನ್ನು ಅರ್ಪಿಸುವ ಸಮಯದಲ್ಲಿ ಈ ಮಂತ್ರದ ಉಚ್ಚಾರಣೆಯನ್ನು ಮಾಡುತ್ತಾರೆ, ಅವರು ಸೌಭಾಗ್ಯವತಿ ಆಗುತ್ತಾರೆ . ಯಾವ ಪುರುಷರು ತುಳಸಿಯ ಮುಂದೆ ಈ ಮಂತ್ರವನ್ನು ಜಪ ಮಾಡುತ್ತಾರೆ . ಅವರಿಗೆ ಅಕ್ಷಯ ಧನ ಪ್ರಾಪ್ತಿ ಆಗುತ್ತದೆ .ಯಾರ ಮನೆಯ ಮುಂದೆ ಪ್ರತಿದಿನ ತುಳಸಿ ಗಿಡದ ಪೂಜೆ ಮಾಡಲಾಗುತ್ತದೆಯೋ ,

ಮನೆಯಲ್ಲಿ ಸಾಕ್ಷಾತ್ ಲಕ್ಷ್ಮೀದೇವಿಯ ವಾಸ ಆಗುತ್ತದೆ . ತುಳಸಿಯ ಈ ಮಂತ್ರವು ಕಲ್ಪತರು ಆಗಿದೆ . ಸಮಸ್ತ ಫಲಗಳನ್ನು ನೀಡುವಂತಹದ್ದು ಆಗಿದೆ . ಯಾರು ತುಳಸಿಯ ಮುಂದೆ ಈ ಮಂತ್ರವನ್ನು ಜಪ ಮಾಡುತ್ತಾರೆ, ಅವರಿಗೆ ಸಂಪೂರ್ಣ ಸಿದ್ಧಿ ದೊರೆಯುತ್ತದೆ . ಸ್ತ್ರೀಯರು ಯಾವತ್ತಿಗೂ ಸ್ನಾನ ಮಾಡಿದ ನಂತರ , ತಮ್ಮ ತಲೆ ಕೂದಲನ್ನು ಕಟ್ಟಿಕೊಂಡು , ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಂಡು ಪ್ರತಿದಿನ ತುಳಸಿಗೆ ಜಲವನ್ನು ಈ ಮಂತ್ರವನ್ನು ಹೇಳುತ್ತಾ ಅರ್ಪಿಸಬೇಕು . ಪ್ರತಿದಿನ ತುಳಸಿಗೆ ಪರಿಕ್ರಮಣ ಮಾಡಬೇಕು . ಇದರಿಂದ ಎಲ್ಲಾ ದೋಷಗಳು ನಷ್ಟವಾಗುತ್ತವೆ .

ಪ್ರತಿದಿನ ಸಾಯಂಕಾಲ ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚಬೇಕು . ತುಳಸಿ ಗಿಡದ ಹತ್ತಿರ ಕೂತುಕೊಂಡು ಭಗವಂತನಾದ ವಿಷ್ಣುವಿನ ಆರಾಧನೆ ಮಾಡಬೇಕು , ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚುವುದರಿಂದ ಮನುಷ್ಯರಿಗೆ ಧನ ಧಾನ್ಯದ ಪ್ರಾಪ್ತಿ ಆಗುತ್ತದೆ . ಸಾವಿರಾರು ಅಮೃತ ಕೊಡಗಳಿಂದ ಸ್ನಾನ ಮಾಡಿದ ನಂತರವೂ ಭಗವಂತನಾದ ವಿಷ್ಣುವಿಗೆ ಅಷ್ಟೊಂದು ತೃಪ್ತಿ ಆಗುವುದಿಲ್ಲ . ಆದರೆ ಅವರ ಭಕ್ತರು ಕೇವಲ ಒಂದು ತುಳಸಿ ದಳವನ್ನು ಅರ್ಪಿಸಿದರು, ಅವರು ಸಂಪೂರ್ಣವಾಗಿ ತೃಪ್ತಿಯನ್ನು ಹೊಂದುತ್ತಾರೆ . 10 ಸಾವಿರ ಹಸುಗಳನ್ನು ದಾನ ಮಾಡಿದಾಗ , ಮಾನವನು ಯಾವ ಪುಣ್ಯ ಫಲಗಳನ್ನು

ಪಡೆದುಕೊಳ್ಳುತ್ತಾ ನೋ, ಅದೇ ಫಲವನ್ನು ತುಳಸಿ ಎಲೆಯ ದಾನದಿಂದ ಪಡೆದುಕೊಳ್ಳುತ್ತಾನೆ . ಯಾರು ತಮ್ಮ ಮೃತ್ಯುವಿನ ಸಮಯದಲ್ಲಿ ತುಳಸಿ ಎಲೆಯ ಜಲವನ್ನು ಸೇವಿಸುತ್ತಾರೋ, ಅವರು ಎಲ್ಲ ಪಾಪಗಳಿಂದ ಮುಕ್ತಿಯನ್ನು ಪಡೆದು , ಶ್ರೀ ಕೃಷ್ಣ ರ ಧಾಮಕ್ಕೆ ಹೋಗುತ್ತಾರೆ . ಶ್ರೀ ಕೃಷ್ಣರು ಈ ರೀತಿ ಹೇಳುತ್ತಾರೆ . ಹುಣ್ಣಿಮೆ , ಅಮಾವಾಸ್ಯೆ , ದ್ವಾದಶಿ ಮತ್ತು ಸೂರ್ಯ ಸಂಕ್ರಾಂತಿಯ ದಿನ ಮಧ್ಯಾಹ್ನ ರಾತ್ರಿ ಮತ್ತು ಅಶೌಚದ ಸಮಯದಲ್ಲಿ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡದೆ ,

ಕೈ ಕಾಲು ಮುಖವನ್ನು ತೊಳೆದುಕೊಳ್ಳದೆ , ರಾತ್ರಿಯ ಬಟ್ಟೆಗಳು ತೊಟ್ಟುಕೊಂಡು ತುಳಸಿ ಗಿಡವನ್ನು ಕತ್ತರಿಸುತ್ತಾರೋ ಅಂತಹವರು ಮಹಾ ಪಾಪಿಗಳು ಆಗುತ್ತಾರೆ. ಶ್ರಾದ್ಧಾ , ವ್ರತ , ದಾನ ಜೊತೆಗೆ ದೇವ ಪೂಜೆಗಾಗಿ ತೆಗೆದು ಕೊಂಡಿರುವ ತುಳಸಿ ಎಲೆ ಬಾಡಿ ಹೋದ ನಂತರವೂ ಮೂರು ರಾತ್ರಿಗಳ ತನಕ ಪವಿತ್ರವಾಗಿಯೇ ಇರುತ್ತದೆ . ತುಳಸಿಯ ಒಂದೊಂದು ಎಲೆಯನ್ನು ಕತ್ತರಿಸುವ ಬದಲಿಗೆ , ಎಲೆಯ ಜೊತೆಗೆ ಪ್ರಮುಖವಾದ ಮುಂದಿನ ಭಾಗವನ್ನು ತೆಗೆಯಬೇಕು . ತುಳಸಿಯ ಹೂವಿನ ಭಾಗವನ್ನು ಅತ್ಯಂತ ಶ್ರೇಷ್ಠವಾದ ಭಾಗ ಎಂದು ತಿಳಿಯಲಾಗಿದೆ . ತುಳಸಿಯ ಹೂಗಳನ್ನು ತೆಗೆಯುವಾಗ ಅದರಲ್ಲಿ ಎಲೆಗಳು ಇರೋದು ತುಂಬಾ ಮುಖ್ಯವಾಗಿರುತ್ತದೆ .

ಪೂಜ್ಯ ಭಾವನೆಯಿಂದ ತುಳಸಿ ಗಿಡಕ್ಕೆ ತೊಂದರೆ ಆಗದಂತೆ , ತುಳಸಿಯ ಮುಂಭಾಗವನ್ನು ತೆಗೆಯಬೇಕು . ಇದರಿಂದ ಪೂಜೆಯು ಲಕ್ಷ ಪಟ್ಟು ಹೆಚ್ಚಾಗುತ್ತದೆ . ತುಳಸಿ ಎಲೆಗಳನ್ನು ಬೆರಳಿನ ಉಗರಿನಿಂದ ತೆಗೆಯಬಾರದು . ಇದರಿಂದ ಪಾಪವೂ ಅಂಟುತ್ತದೆ . ರಾತ್ರಿ ತುಳಸಿ ಗಿಡವನ್ನು ಸ್ಪರ್ಶಿಸಬಾರದು . ಅಥವಾ ಅದರ ಎಲೆಗಳನ್ನು ತೆಗೆಯಬಾರದು . ರಾತ್ರಿ ತುಳಸಿ ಸಸ್ಯವು ನಿದ್ರೆಯ ಅವಸ್ಥೆಯಲ್ಲಿ ಇರುತ್ತದೆ . ಇಂತಹ ಸ್ಥಿತಿಯಲ್ಲಿ ಎಲೆಗಳನ್ನು ತೆಗೆದರೆ ಪಾಪವೂ ಅಂಟುತ್ತದೆ .ಗುರುವಾರ ತುಳಸಿ ಗಿಡಕ್ಕೆ ಸ್ವಲ್ಪ ಹಸಿ ಹಾಲನ್ನು ಹಾಕಿ .

ಹಾಲನ್ನು ಹಾಕುವ ಸಮಯದಲ್ಲಿ “ಓಂ ಭಗವತೇ ವಾಸುದೇವಾಯ ನಮಃ ” ಈ ಮಂತ್ರವನ್ನು ಖಂಡಿತವಾಗಿ ಜಪ ಮಾಡಬೇಕು . ತುಳಸಿ ಗಿಡದ ಹತ್ತಿರ ಸಾಲಿಗ್ರಾಮವನ್ನು ಇಟ್ಟು ಅದರ ಪೂಜೆಯನ್ನು ಮಾಡಿ . ಯಾವುದಾದರೂ ಮಹಿಳೆಯರು ಋತುಚಕ್ರದಲ್ಲಿ ಇದ್ದರೆ, ತುಳಸಿ ಗಿಡವನ್ನು ಪೂಜೆ ಮಾಡಬಾರದು . ಋತುಚಕ್ರದ ಸಮಯದಲ್ಲಿ ತುಳಸಿಯನ್ನು ಸ್ಪರ್ಶ ಮಾಡಿದರೆ , ಆ ಪಾಪ ಅಂಟುತ್ತದೆ . ಇದರಿಂದ ದುರ್ಗತಿಯಾಗುತ್ತದೆ . ಈ ರೀತಿಯಾಗಿ ಭಗವಂತನಾದ ಶ್ರೀ ಕೃಷ್ಣ ರು ದೇವಿ ಸತ್ಯಭಾಮೆ ಅವರಿಗೆ ತುಳಸಿಗೆ ಜಲವನ್ನು ಅರ್ಪಿಸುವ ಮಹಾ ಮಂತ್ರದ ಬಗ್ಗೆ ತಿಳಿಸಿದ್ದಾರೆ .

Leave a Comment