ಎರಡು ದಿನಗಳಲ್ಲಿ ಏನೇನೋ ಆಟ!

ನಾವು ಈ ಲೇಖನದಲ್ಲಿ ಮಾರ್ಚ್ ತಿಂಗಳ ಮೇಷ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಯಶಸ್ಸಿನ ಮಟ್ಟಿಗೆ ಈ ತಿಂಗಳು ತುಂಬಾ ಚೆನ್ನಾಗಿ ಇರುತ್ತದೆ. ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತೇವೆ . 14 ಮತ್ತು 15ನೇ ತಾರೀಕಿನಲ್ಲಿ ಆಗುವ ಬದಲಾವಣೆಯಿಂದ ಬಹಳಷ್ಟು ಪರಿವರ್ತನೆಗಳು ಆಗುವ ಸಾಧ್ಯತೆ ಇದೆ . ಈ ದಿನಾಂಕದಲ್ಲಿ ಆಗುವ ವಿಶೇಷತೆಯ ಬಗ್ಗೆ ತಿಳಿಯೋಣ . ಸಾಡೇಸಾತಿಗಿಂತ ಮೊದಲು ಉಳಿದಿರುವ ಅವಧಿ ಮೇಷ ರಾಶಿಯವರಿಗೆ ಇದು . ಬಹಳ ವೇಗವಾಗಿ ನಿಮ್ಮ ಕೆಲಸಗಳು ಆಗುತ್ತದೆ .

ಶನಿ ಮತ್ತು ಬೇರೆ ಗ್ರಹಗಳ ಸಹಕಾರ ನಿಮಗೆ ಇರುತ್ತದೆ . ಗುರು ಗ್ರಹದ ಸಹಕಾರ ಕೂಡ ನಿಮಗೆ ಸಿಗುತ್ತದೆ. ಗುರುವಿನ ಫಲಗಳು ಕೂಡ ದೊರೆಯುವ ಸಾಧ್ಯತೆ ಇದೆ . ಶುಕ್ರ ಗ್ರಹದಿಂದ ನಿಮಗೆ ಬಹಳ ಒಳ್ಳೆಯ ಫಲಗಳು ದೊರೆಯುತ್ತದೆ ನಿಮ್ಮ ಏಕಾದಶ ಭಾವದಲ್ಲಿ. ಲಾಭದಲ್ಲಿ ಶನಿ ಇದೆ .ಇದರಿಂದ ಶುಕ್ರ ಕೂಡ ಸೇರಿಕೊಳ್ಳುತ್ತದೆ . ಶನಿ ಗ್ರಹ ಲಾಭದಲ್ಲಿ ಇರುವಾಗ ನಿಮಗೆ ಹಣದ ಕೊರತೆ ಇರುವುದಿಲ್ಲ .

ಖರೀದಿ ಮಾಡುವ ಖುಷಿಯನ್ನು ಅನುಭವಿಸಬಹುದು . ಆಹಾರ ವಿಹಾರ , ಹೊರಗಡೆ ಹೋರಾಡುವುದು, ಪ್ರಯಾಣ ಈ ರೀತಿಯಾಗಿ ಕೆಲವರ ಜೀವನದಲ್ಲಿ ನಡೆಯುತ್ತದೆ . ಯಥೇಚ್ಛವಾಗಿ ಹಣ ದೊರೆಯುತ್ತಿರುತ್ತದೆ . ಶನಿ ಕೂಡ ಲಾಭದಲ್ಲೇ ಇರುವುದರಿಂದ ಬಹಳ ಸಹಕಾರಿಯಾಗಿರುತ್ತದೆ . ಹಣಕಾಸಿನ ವಿಚಾರದಲ್ಲಿ ತಲೆಬಿಸಿ ಇರುವುದಿಲ್ಲ . ಎರಡನೇ ತಾರೀಕಿಗೆ ಶುಕ್ರನ ಪರಿವರ್ತನೆ ಆಗುತ್ತದೆ . ಶುಕ್ರ ವ್ಯಯಭಾವಕ್ಕೆ ಹೋಗುತ್ತೇನೆ . ಶುಕ್ರ ವ್ಯಯ ಭಾವಕ್ಕೆ ಹೋದಾಗ ಆದಾಯದಲ್ಲಿ ಬಹಳ ವೃದ್ಧಿಯಾಗುತ್ತದೆ .

ಹಲವಾರು ಮೂಲಗಳಿಂದ ಹಣ ಬಂದು ಸೇರುವ ಸಾಧ್ಯತೆ ಇರುತ್ತದೆ . ಸಾಕಷ್ಟು ಖುಷಿ , ನೆಮ್ಮದಿ ಕೊಡುವ ಒಂದು ವಾತಾವರಣ ನಿರ್ಮಾಣವಾಗುತ್ತದೆ . ವಿಶೇಷವಾಗಿ ಸಾಹಿತ್ಯ, ಕಲೆ, ಸಂಗೀತ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳಿಗೆ ಶುಕ್ರನ ಒಂದು ಸಹಕಾರ . ಸಹಕಾರ ಎಂದರೆ, ಮನಸ್ಸಿಗೆ ನೆಮ್ಮದಿ , ಖುಷಿ ಮತ್ತು ಖ್ಯಾತಿಯನ್ನು ತಂದು ಕೊಡುವ ಪರಿವರ್ತನೆಗಳು . ಈ ಖ್ಯಾತಿಗೆ ಸಂಬಂಧಪಟ್ಟ ರವಿಯ ಒಂದಷ್ಟು ಬೆಂಬಲ ಕೂಡ ನಿಮಗೆ ಸಿಗುತ್ತದೆ . ವ್ಯಾಪಾರಸ್ಥರಿಗೆ ವ್ಯವಹಾರದ ಚಟುವಟಿಕೆಗಳಲ್ಲಿ ತುಂಬಾ ಪ್ರಗತಿ ಉಂಟಾಗುತ್ತದೆ .

ಸಾಕಷ್ಟು ಲಾಭಗಳು ಕೂಡ ಸಿಗುತ್ತವೆ . ಹೊಸ ಹೂಡಿಕೆಗಳಿಗೆ ಒಂದಷ್ಟು ಭರವಸೆ ಸಿಗುತ್ತದೆ . ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡುವ ಹೂಡಿಕೆಗಳಿಗೆ ತುಂಬಾ ಒಳ್ಳೆಯ ಅವಕಾಶಗಳು ದೊರೆಯುತ್ತದೆ . ಇವೆಲ್ಲವನ್ನು ಶುಕ್ರ ಗ್ರಹ ನಿಮಗೆ ಈ ತಿಂಗಳಲ್ಲಿ ತಂದುಕೊಡುತ್ತಿದೆ . ಈ ತಿಂಗಳಲ್ಲಿ ವಿದ್ಯಾರ್ಥಿಗಳಿಗೂ ತುಂಬಾ ಚೆನ್ನಾಗಿ ಇದೆ . ಬಹಳಷ್ಟು ವ್ಯಕ್ತಿಗಳಿಗೆ ಪರೀಕ್ಷೆಯ ತಿಂಗಳು ಇದಾಗಿರುತ್ತದೆ . ಪರೀಕ್ಷೆಗಳನ್ನು ಎದುರಿಸುವ ಸಂದರ್ಭ ಇರುತ್ತದೆ . ಬುಧ ಗ್ರಹ ಕೂಡ ಪ್ರಾರಂಭದಲ್ಲಿ ಲಾಭದಲ್ಲೇ ಇರುತ್ತದೆ .

ಆದ್ದರಿಂದ ಪರೀಕ್ಷೆ ಕೂಡ ಲಾಭದಾಯಕವಾಗಿರುತ್ತದೆ .ಒಳ್ಳೆಯ ಫಲಿತಾಂಶ ತೆಗೆದುಕೊಳ್ಳಬಹುದು . ಈ ಒಂದು ಮೊದಲ ವಾರದಲ್ಲಿ . ಎರಡನೇ ವಾರದಲ್ಲಿ ಪರೀಕ್ಷೆಗಳು ಆರಂಭವಾದರೆ , ಸ್ವಲ್ಪಮಟ್ಟಿಗೆ ಪ್ರಶ್ನೆಗಳಲ್ಲಿ ಸ್ವಲ್ಪ ಅಡೆತಡೆಗಳು ಉಂಟಾಗುವ ಸಾಧ್ಯತೆ ಇರುತ್ತದೆ . ಹುಳುಕು , ಹಿಂಜರಿಕೆ , ಆತ್ಮವಿಶ್ವಾಸದ ಕೊರತೆ ಕಾಣುತ್ತದೆ . ಇದರ ಬಗ್ಗೆ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು . ಯಾವುದೇ ಒಂದು ವಿಚಾರವನ್ನು ಮರೆತು ಹೋಗುವ ಸಾಧ್ಯತೆ ಕೂಡ ಇರುತ್ತದೆ .

ತೀರಾ ಸಮಸ್ಯೆ ಇರುವ ವ್ಯಕ್ತಿಗಳು ಬರಿವಣಿಗೆಯನ್ನು ಪ್ರಯತ್ನ ಮಾಡಬೇಕು .ಪರೀಕ್ಷೆಯ ಸಮಯ ಕೂಡ ಇವರಿಗೆ ಸುಲಭವಾಗಿ ಇರುವುದಿಲ್ಲ . ಪ್ರಯತ್ನ ಮಾಡಿಕೊಂಡರೆ ಉತ್ತಮ . ಒಳ್ಳೆಯ ರೀತಿಯಲ್ಲಿ ಫಲಿತಾಂಶ ತೆಗೆಯಲು ಪ್ರಯತ್ನ ಪಟ್ಟರೆ , ಫಲಿತಾಂಶ ಖಂಡಿತವಾಗಿ ಹೆಚ್ಚಾಗಿರುತ್ತದೆ . 14 ಮತ್ತು 15ನೇ ತಾರೀಕು ನಿಮಗೆ ಬಹಳ ಪ್ರಾಮುಖ್ಯತೆ ಇರುವ ದಿನಾಂಕ ಆಗಿರುತ್ತದೆ . ಯಾಕೆಂದರೆ , 14ನೇ ತಾರೀಖಿನಂದು ರವಿ ಪರಿವರ್ತನೆ ಯಾಗುತ್ತದೆ . ರವಿ ಗ್ರಹ ಏಕಾದಶ ಭಾವದಿಂದ ದ್ವಾದಶ ಭಾವಕ್ಕೆ ಹೋಗುತ್ತದೆ. ಏಕಾದಶ ಎಂದರೆ, ಬಹಳ ಲಾಭದಾಯಕ . ರವಿ ಏಕಾ ದಶದಲ್ಲಿ ಇರುವಾಗ ಬಹಳ ಧೈರ್ಯ ,ಆತ್ಮವಿಶ್ವಾಸವನ್ನು ,

ಸಾಹಸ , ಪರಾಕ್ರಮವನ್ನು ಹಾಗೆಯೇ ಬಹಳಷ್ಟು ಅದೃಷ್ಟವನ್ನು ಕೊಡುತ್ತದೆ . ಅಂದರೆ ಕೈ ಹಾಕಿದಲ್ಲಿ ಒಳ್ಳೆಯ ಪ್ರಗತಿ, ಸಾಧನೆಗಳು , ಮಾಡಿರುವ ಕೆಲಸಕ್ಕೆ ಒಳ್ಳೆಯ ಪ್ರತಿಫಲಗಳು ಅದರ ಜೊತೆಯಲ್ಲಿ ಹೆಸರು ಮಾಡುವಂತದ್ದು . ಸನ್ಮಾನಗಳು ಸಿಗುವಂತದ್ದು .ಜನರು ನಿಮಗೆ ಗೌರವವನ್ನು ಕೊಡುವಂತದ್ದು . ಇವೆಲ್ಲವೂ ದೊರೆಯುತ್ತದೆ . ಇದು ಶಾಶ್ವತವಾಗಿ ಇರಲು ಸಾಧ್ಯವಿಲ್ಲ . ರವಿ ಗ್ರಹದ ಬಹಳ ಸೀಮಿತ ಚಲನೆಯಿಂದ ನಿಮ್ಮ ರಾಶಿಯಲ್ಲಿ ಇರುತ್ತದೆ . ಏಕಾದಶ ಭಾವದಿಂದ ದ್ವಾದಶ ಭಾವಕ್ಕೆ ಹೋಗಲೇಬೇಕು .

ರವಿಯಿಂದ ವಿಶೇಷವಾಗಿ ಆರೋಗ್ಯದ ರಕ್ಷಣೆ ಕೂಡ ಸಿಗುತ್ತಿತ್ತು . ಧೃಢ ಮನಸ್ಸು ಧೈರ್ಯ ಎಂತಹುದೇ ಪರಿಸ್ಥಿತಿ ಬಂದರೂ , ಅಂಜಿಕೆ ಇಲ್ಲದೆ ಎದುರಿಸುವ ಒಂದು ಸಾಮರ್ಥ್ಯ ಕೂಡ ರವಿಯಿಂದ ಸಿಗುತ್ತಿತ್ತು . ಸ್ವಲ್ಪ ಮನೋ ವೈಜ್ಞಾನಿಕವಾಗಿ ಒತ್ತಡದಲ್ಲಿ ಬೀಳುತ್ತೀರಾ .ಸ್ವಲ್ಪ ಆತ್ಮವಿಶ್ವಾಸದ ಕೊರತೆ ನಿಮ್ಮಲ್ಲಿ ಕಾಣಬಹುದು . ಆರೋಗ್ಯದಲ್ಲೂ ಸಣ್ಣ ಪುಟ್ಟ ಏರುಪೇರುಗಳು ಉಂಟಾಗಬಹುದು . ಆದರೆ ತುಂಬಾ ಚಿಂತೆ ಮಾಡುವ ಅವಶ್ಯಕತೆ ಇರುವುದಿಲ್ಲ .

ಈ ಬೆಳವಣಿಗೆ ಪರಿಣಾಮಗಳು ಹೆಚ್ಚಾಗಿ ಮಾನಸಿಕವಾಗಿ ಇರುತ್ತದೆ . 15ನೇ ತಾರೀಕಿಗೆ ರವಿ ಪರಿವರ್ತನೆ ಆಗುವುದರಿಂದ ರವಿಯಿಂದ ಸಿಗುವ ಶುಭ ಫಲಗಳು ವಿಶೇಷವಾಗಿ ದುಡ್ಡಿನ ವಿಚಾರದಲ್ಲಿ ಯಶಸ್ಸಿನ ವಿಚಾರದಲ್ಲಿ ಬಹಳ ಒಳ್ಳೆಯ ಫಲಗಳನ್ನು ರವಿ ಕೊಡುತ್ತಾನೆ . ಇದೇ ತರಹದ ಫಲವನ್ನು ಕೊಡುವ ಗ್ರಹ ಕುಜ ಗ್ರಹ ಪರಿವರ್ತನೆಯಾಗಿ ಏಕಾದಶ ಭಾವಕ್ಕೆ ಬರುತ್ತದೆ . ಆ ಸಮಯದಲ್ಲಿ ರವಿಯ ಒಂದಷ್ಟು ರವಿಯ ಪಾತ್ರವನ್ನು ಕುಜ ಗ್ರಹ ನಿರ್ವಹಣೆ ಮಾಡುತ್ತದೆ .ಬಹಳಷ್ಟು ಧನಾತ್ಮಕವಾಗಿ ಇರುತ್ತದೆ . ರಿಯಲ್ ಎಸ್ಟೇಟ್ ಉದ್ಯಮ ಇಂಥ ಹ ವಿಚಾರದಲ್ಲಿ ಹೆಚ್ಚಿನ ಯಶಸ್ಸು ಸಿಗುತ್ತದೆ .

ಒಂದೇ ಒಂದು ಕೊರತೆ ಎಂದರೆ , ರವಿಯಿಂದ ಸಿಕ್ಕ ಪ್ರಸಿದ್ಧಿ ಖ್ಯಾತಿ ಇವೆಲ್ಲವೂ ಸಿಗದೇ ಇರಬಹುದು . ಈ ತಿಂಗಳಲ್ಲಿ 15ನೇ ತಾರೀಖಿನ ನಂತರ ಮಾನಸಿಕ ಏರುಪೇರುಗಳು ಉಂಟಾಗುತ್ತದೆ . ಕುಜ ಮತ್ತು ರವಿ ಗ್ರಹ ಗಳು ಶನಿಯ ಜೊತೆ ಸಿಕ್ಕಿ ಹಾಕಿಕೊಳ್ಳುತ್ತದೆ .ನಿಮ್ಮ ಏಕಾದಶ ಭಾವದಲ್ಲಿ . ಒಂದು ಮಟ್ಟಕ್ಕೆ ಸಂಘರ್ಷ ವಿರೋಧ ಭಾಷಗಳು ವ್ಯವಹಾರದ ಪಾಲುದಾರರ ಜೊತೆಯಲ್ಲಿ ಸ್ವಲ್ಪ ತಿಕ್ಕಾಟಗಳು , ಕೌಟುಂಬಿಕ ವಲಯದಲ್ಲಿ ಇರಬಹುದು ಇದೆಲ್ಲಾ ಇದ್ದೇ ಇರುತ್ತದೆ .ಈ ತಿಂಗಳ ಮಟ್ಟಿಗೆ ಯಶಸ್ಸು ತುಂಬಾ ಚೆನ್ನಾಗಿರುತ್ತದೆ . 14 ಮತ್ತು 15ನೇ ತಾರೀಖಿನ ಪರಿವರ್ತನೆಗಳು ನಿಮ್ಮ ಜೀವನದಲ್ಲಿ ಯಶಸ್ಸನ್ನು ತಂದು ಕೊಡಲಿ ಎಂದು ಹೇಳಲಾಗುತ್ತದೆ .

Leave a Comment