ಧನ, ಧಾನ್ಯದಿಂದ ಸಂಪನ್ನರಾಗಬೇಕೆ | ಮನೆಯಲ್ಲಿ ನಿಮಯಮಾನುಸಾರ ಶಂಖ ಇರಿಸಬೇಕು| ದುಷ್ಟ ಶಕ್ತಿ ದೂರವಾಗುತ್ತವೆ 

ಧನಧಾನ್ಯದಿಂದ ಸಂಪನ್ನರಾಗಬೇಕೆ? ಮನೆಯಲ್ಲಿ ನಿಯಮಾನುಸಾರ ಶಂಖವನ್ನು ಇರಿಸಬೇಕು ಇದರಿಂದ ದುಷ್ಟಶಕ್ತಿಗಳು ದೂರವಾಗುತ್ತವೆ. ಶಂಖದ ಹೆಸರು ಕೇಳಿದರೆ ಮನದಲ್ಲಿ ಭಕ್ತಿಯ ಭಾವಗಳು ಉಂಟಾಗುತ್ತದೆ. ಹಿಂದೂಧರ್ಮದಲ್ಲಿ ಶಂಖವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣವೆಂದರೆ ಮಹಾಲಕ್ಷ್ಮಿ ಮಾತೆ ಭಗವಾನ್‌ ವಿಷ್ಣು ತಮ್ಮ ಕೈಯಲ್ಲಿ ಶಂಖವನ್ನು ಇಡಿದಿರುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮಹಾಭಾರತ ಯುದ್ಧಕಾಲದಲ್ಲಿ ಶ್ರೀಕೃಷ್ಣನು ಪಾಂಚಜನ್ಯ ಶಂಖವನ್ನು, ಅರ್ಜುನನು ದೇವದತ್ತ, ಮತ್ತು ಭೀಮನು ಪೌಂಡಕ ಎಂಬ ಶಂಖನಾದವನ್ನು ಮೊಳಗಿಸಿದ್ದರು. ಯುಧಿಷ್ಠಿರನು ಅನಂತ ವಿಜಯ, ನಕುಲ ಸುಘೋಘ ಮತ್ತು ಸಹದೇವನು ಮಣಿಪುಷ್ಪಕ ಎಂಬ ಶಂಖವನ್ನು ಊದುವ ಮೂಲಕ ಯುದ್ಧವನ್ನು ಘೋಷಿಸಿದ್ದರು. ವಿಷ್ಣು ಪುರಾಣದ ಪ್ರಕಾರ ಸಮುದ್ರರಾಜನ ಪುತ್ರಿಯಾಗಿರುವ ಲಕ್ಷ್ಮಿಮಾತೆಯೊಂದಿಗೆ ಶಂಖದ ಉತ್ಪತ್ತಿಯಾಗಿತ್ತು ಎಂದು ಹೇಳಲಾಗುತ್ತದೆ. ಅಂದರೆ ಶಂಖವು ಲಕ್ಷ್ಮಿಮಾತೆಯು ಒಡಹುಟ್ಟಿದವರೆಂದು ತಿಳಿಸಲಾಗಿದೆ.

ಹೀಗಾಗಿ ಎಲ್ಲಿ ಶಂಖವಿರುತ್ತದೆಯೋ ಅಲ್ಲಿ ಲಕ್ಷ್ಮಿಮಾತೆಯು ನೆಲೆಸಿರುತ್ತಾಳೆ ಎನ್ನಲಾಗುತ್ತದೆ. ಹೀಗಾಗಿ ಎಲ್ಲಿ ಶಂಖವನ್ನು ಇಡಲಾಗುತ್ತದೆಯೋ ಅಲ್ಲಿ ಲಕ್ಷ್ಮಿ ಮಾತೆಯು ನೆಲೆಸುತ್ತಾಳೆ ಎಂಬ ಪ್ರತೀತಿಯು ಇದೆ. ಇದರಿಂದಾಗಿ ನಮ್ಮ ಸನಾತನ ಧರ್ಮದಲ್ಲಿ ಶಂಖಕ್ಕೆ ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಇಷ್ಟೆಲ್ಲ ಮಹತ್ವವನ್ನು ಹೊಂದಿರುವ ಶಂಖವು ನಮ್ಮ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತದೆ.

ಇದನ್ನು ನಿಯಮಾನುಸಾರ ಪೂಜೆ ಮಾಡಿದರೆ ನಮ್ಮ ದಾರಿದ್ರ್ಯವನ್ನು ಹೋಗಲಾಡಿಸುತ್ತದೆಂದು ಹೇಳಲಾಗುತ್ತದೆ. ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದ ಜೊತೆಗೆ ಚಮತ್ಕಾರಿ ಶಂಖವು ಆರೋಗ್ಯವನ್ನು ಕೂಡ ಸುಧಾರಿಸುವ ಪಾತ್ರವನ್ನು ನಿರ್ವಹಿಸುತ್ತದೆ. ಚಮತ್ಕಾರ ಹೊಂದಿರುವ ಶಂಖದ ಶಕ್ತಿಯ ಬಗ್ಗೆ ತಿಳಿದುಕೊಳ್ಳೋಣ ಜೊತೆಗೆ ಇದನ್ನು ಯಾವ ರೀತಿ ಪ್ರಯೋಗಿಸಬೇಕು ವಿಸ್ತಾರವಾಗಿ ತಿಳಿದುಕೊಳ್ಳೋಣ.

ಶಂಖದಿಂದಾಗಿ ಅನಿಷ್ಟ ಪ್ರಭಾವ ಮತ್ತು ವಾಸ್ತುದೋಷಗಳು ನಿವಾರಣೆಗೊಳ್ಳುತ್ತದೆ. ಮನೆಯಲ್ಲಿ ಶಂಖವನ್ನು ಇರಿಸುವುದರಿಂದಾಗಿ ವಾಸ್ತುವಿಕಾರಗಳು ದೂರವಾಗುವುದಲ್ಲದೇ ಜೊತೆಗೆ ಐಶ್ವರ್ಯ ಮತ್ತು ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ. ಮನೆಯಲ್ಲಿ ಯಾವುದೇ ಭಾಗದಲ್ಲಿ ವಾಸ್ತುದೋಷವಿದ್ದರೆ ಆ ಮೂಲೆಯಲ್ಲಿ ಶಂಖವನ್ನು ಇಡುವುದರಿಂದ ವಾಸ್ತುದೋಷವಿಲ್ಲದಂತಾಗುತ್ತದೆ. ಜೊತೆಗೆ ಆ ಮನೆಯಲ್ಲಿ ಸುಖ ಸಂಮೃದ್ಧಿ ಉಂಟಾಗುತ್ತದೆ.

ಹಾಗೆಯೇ ಶಂಖನಾದವು ಎಲ್ಲಿವರೆಗೆ ಮುಟ್ಟುತ್ತದೆಯೋ ಅಲ್ಲಿಯವರೆಗೆ ಗಾಳಿಯು ಪರಿಶುದ್ಧವಾಗುವುದರ ಜೊತೆಗೆ ಆ ಪ್ರದೇಶದಲ್ಲಿ ಸಕಾರಾತ್ಮಕವಾಗಿ ಪೂಜೆಯು ಸಂಚಲಿಸುತ್ತದೆ. ವಿಶೇಷವಾಗಿ ಶಂಖ ನಾದವು ಕೇಳಿ ಬರುವ ಸ್ಥಳದಲ್ಲಿ ಅನಿಷ್ಟ ಪ್ರಭಾವಗಳು ನಾಶಗೊಳ್ಳುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ಮಲಗಿರುವ ಭೂಮಿಯು ನಿಯಮಿತ ಶಂಖನಾದದಿಂದ ಎಚ್ಚರಗೊಳ್ಳುತ್ತದೆ ಎಂದು ತಿಳಿಸಲಾಗಿದೆ.

ಭೂಮಿಯ ಜಾಗೃತಿಯೊಂದಿಗೆ ಕಷ್ಟದುಃಖಗಳು ಕಡಿಮೆಯಾಗುತ್ತವೆ. ಹಾಗೆಯೇ ಕುಟುಂಬ ಸದಸ್ಯರಲ್ಲಿ ಸಂತೋಷ ಮತ್ತು ಸಂಮೃದ್ಧಿಗಳು ಉಂಟಾಗುತ್ತವೆ. ಇನ್ನು ಶಂಖದ ಮೂಲಕ ಪ್ರತಿನಿತ್ಯ ಹಸುವಿನ ಹಾಲನ್ನು ಸಿಂಪಡಿಸುವುದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ. ಜೊತೆಗೆ ಶಂಖದಿಂದ ಹಸುವಿನ ಹಾಲನ್ನು ಸಿಂಪಡಿಸುವ ಸ್ಥಳದಲ್ಲಿ ಧನಾತ್ಮಕ ಪೂಜೆ ಉತ್ಪತ್ತಿಯಾಗುತ್ತದೆ. ವಿಶೇಷವಾಗಿ ದೇವರ ಆರಾಧನೆ ಮಾಡುವ ವೇಳೆಯಲ್ಲಿ ಶಂಖನಾದ ಮೊಳಗಿಸುವುದು ಸಾಕಷ್ಟು ಶುಭಫಲ ಸಿಗುತ್ತದೆ. ಪೂಜೆಯ ಸಂದರ್ಭದಲ್ಲಿ ಶಂಖನಾದ ಮೊಳಗಿಸುವುದು ಪರಿಸರವನ್ನು ಶುದ್ಧ ಮತ್ತು ಪವಿತ್ರಗೊಳಿಸುತ್ತದೆ.

ಅಲ್ಲದೆ ಧನಾತ್ಮಕ ಪೂಜೆ ಉತ್ಪತ್ತಿಯಾಗುತ್ತದೆ. ಜೊತೆಗೆ ಆರೋಗ್ಯ ವೃದ್ಧಿಯು ಸಹಕಾರಿಯಾಗಿದೆ. ನಾಸಾದಂತಹ ವೈಜ್ಞಾನಿಕ ಸಂಸ್ಥೆ ಹೇಳಿರುವ ಪ್ರಕಾರ ಶಂಖನಾದದ ವೇಳೆಯಲ್ಲಿ ಖಗೋಳದಲ್ಲಿರುವ ಊಜೆವು ಹೊರಸೂಸುತ್ತದೆ. ಈ ಊಜೆವು ಕೂಡ ರೋಗಾಣುಗಳನ್ನು ನಾಶಗೊಳಿಸುವ ಶಕ್ತಿಯನ್ನು ಹೊಂದಿದೆ. ಅದಲ್ಲದೆ ಖಗೋಳದ ಊಜೆ ಹೊರಸೂಸುವುದರಿಂದ ವ್ಯಕ್ತಿಯಲ್ಲಿ ಊಜೆಯ ಸಂಚಾರಗೊಳ್ಳುತ್ತದೆ. ಅಲ್ಲದೇ ಶಂಖದಲ್ಲಿ ಹೇರಳ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೂಡ ಇರುತ್ತದೆ. ಹೀಗಾಗಿ ಶಂಖದಲ್ಲಿ ರಾತ್ರಿ ನೀರು ಶೇಖರಿಸಿಟ್ಟು ಆ ಜಲವನ್ನು ಬೆಳಗಿನ ಸಮಯದಲ್ಲಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಕ್ಯಾಲ್ಸಿಯಂ ಕೂಡ ಸಿಗುತ್ತದೆ.

ಇನ್ನು ಶಂಖನಾದ ಮೊಳಗಿಸುವ ವೇಳೆಯಲ್ಲಿ 3 ಕ್ರಿಯೆಗಳು ಏಕಕಾಲಕ್ಕೆ ನೆರವೇರುತ್ತವೆ. ಅಂದರೆ ಶಂಖನಾದ ಮೊಳಗಿಸುವ ಸಂದರ್ಭದಲ್ಲಿ ವ್ಯಕ್ತಿಯಲ್ಲಿನ ಚಕ್ರ ಮತ್ತು ಪ್ರಣಾಯಾಮದಂತಹ ಕ್ರಿಯೆಯು ಜೊತೆ ಜೊತೆಯಲ್ಲಿ ನೆರವೇರುತ್ತದೆ. ಇದರಿಂದಾಗಿ ದೇಹವು ನಿರೋಗಿಯಾಗಿ ಮಾರ್ಪಡುತ್ತದೆ. ಶಂಖವನ್ನು ಊದುವುದು ಪ್ರಯೋಜನಕಾರಿ ಮತ್ತು ಶಂಖವನ್ನು ಊದುವುದರಿಂದ ಶ್ವಾಸಕೋಶವು ಬಲಗೊಳ್ಳುತ್ತದೆ. ಶಂಖದ ಶಬ್ದದೊಂದಿಗೆ ಮೆದುಳು ನರಮಂಡಲವು ಸಕ್ರಿಯವಾಗಿರುತ್ತದೆ.

ಇನ್ನು ಶಂಖಕ್ಕೆ ಅಪಾರವಾದ ಧಾರ್ಮಿಕ ನಂಬಿಕೆ ಇದೆ. ಧರ್ಮಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯ ಜೊತೆಗೆ ಶಂಖವನ್ನು ಸ್ಥಾಪಿಸಿ ನಿಯಮಿತವಾಗಿ ಪೂಜಿಸಿದರೆ ಲಕ್ಷ್ಮಿದೇವಿಯು ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಆ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎಂದಿಗೂ ಬರುವುದಿಲ್ಲ. ಎಲ್ಲಿ ಶಂಖನಾದ ಕೇಳಿಸುತ್ತದೆಯೋ ಅಲ್ಲಿ ಲಕ್ಷ್ಮಿ ಮಾತೆಯು ಪ್ರಸನ್ನ ಚಿತ್ತಳಾಗಿ ವಿರಾಜಮಾನಳಾಗಿರುತ್ತಾಳೆ ಎಂಬ ನಂಬಿಕೆ.

ದಕ್ಷಿಣಾವರ್ತಿ ಶಂಖದ ಮೇಲ್ಭಾಗದಲ್ಲಿ ಚಂದ್ರ, ಮಧ್ಯದಲ್ಲಿ ವರುಣ, ಹಿಂದೆ ಬ್ರಹ್ಮ, ಮುಂಭಾಗದಲ್ಲಿ ಗಂಗಾ ಯಮುನ ಹಾಗೆ ಸರಸ್ವತಿಯರು ಕೂಡ ಇರುತ್ತಾರೆ ಎಂದು ನಂಬಲಾಗಿದೆ. ಇದರಿಂದ ಹೊರಸೂಸುವ ಪವಿತ್ರ ನೀರನ್ನು ತೀರ್ಥಮಯ ಎಂದು ಪರಿಗಣಿಸಲಾಗುತ್ತದೆ.
ಶಂಖದಿಂದ ಹೊರಬರುವ ಜಲದಿಂದ ಸ್ನಾನ ಮಾಡುವವನು ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡಿದಂತಹ ಫಲವನ್ನು ಹೊಂದುತ್ತಾನೆ. ಇನ್ನು ಸನಾತನ ಹಿಂದೂ ಧರ್ಮದ ಪ್ರಕಾರ ಎಲ್ಲಿ ಶಂಖವಿರುತ್ತದೆಯೋ ಅಲ್ಲಿ ಭಗವಾನ್‌ ಶ್ರೀಹರಿ ಲಕ್ಷ್ಮಿಯೊಂದಿಗೆ ನೆಲೆಸಿರುತ್ತಾನೆ. ಇದರಿಂದಾಗಿ ಅಲ್ಲಿರುವ ಕೆಟ್ಟ ಶಕ್ತಿಗಳು ಕೂಡ ದೂರಗೊಳ್ಳುತ್ತದೆ.

ವಿಶೇಷವೆಂದರೆ ಶಂಖದಿಂದ ಹೊರಬರುವ ಜಲವು ಎಲ್ಲರನ್ನು ಪವಿತ್ರಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಬಹುತೇಕ ಧಾರ್ಮಿಕ ಸ್ಥಳಗಳಲ್ಲಿ ಆರಾತಿಯ ನಂತರ ಶಂಖದಿಂದ ಜಲವನ್ನು ಭಕ್ತರಿಗೆ ಚಿಮುಕಿಸಲಾಗುತ್ತದೆ. ಇದರ ಜೊತೆಗೆ ಶಂಖದಿಂದ ನವಗ್ರಹಗಳನ್ನು ಶಾಂತಗೊಳಿಸಬಹುದು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖಿಸಿದೆ. ಅದರಂತೆ ಮಂಗಳವಾರದ ದಿನ ಶಂಖವನ್ನು ಊದುವುದರಿಂದ ಮತ್ತು ಸುಂದರ ಕಾಡವನ್ನು ಓದುವುದರಿಂದ ಮಂಗಳಗ್ರಹದ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ ಮತ್ತು ಆಂಜನೇಯಸ್ವಾಮಿಯ ವಿಶೇಷ ಕೃಪೆ ಪ್ರಾಪ್ತಿಯಾಗುತ್ತದೆ.

ಇನ್ನು ಶಂಖವನ್ನು ಅಕ್ಕಿಯಲ್ಲಿ ತುಂಬಿಸಿ ಆ ಶಂಖವನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ಅದನ್ನು ನಿಮ್ಮ ಮನೆಯ ತಿಜೋರಿಯಲ್ಲಿ ಇಡುವುದರಿಂದಾಗಿ ಅನ್ನಪೂರ್ಣೇಶ್ವರಿಯ ವಿಶೇಷ ಕೃಪೆ ನಿಮ್ಮ ಮೇಲಿರುತ್ತದೆ. ಜೊತೆಗೆ ಈ ನಿಯಮ ಪಾಲಿಸುವವರ ಮನೆಯಲ್ಲಿ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ. ಬುಧವಾರದಂದು ಶಂಖದಲ್ಲಿ ಶುದ್ಧ ಜಲ ಮತ್ತು ತುಳಸಿಯಿಂದ ಸಾಲಿಗ್ರಾಮಕ್ಕೆ ಅಭಿಷೇಕ ಮಾಡುವುದರಿಂದಾಗಿ ಬುಧಗ್ರಹವು ಶಾಂತಗೊಳ್ಳುತ್ತದೆ. ಕುಂಕುಮ ತಿಲಕದಿಂದ ಶಂಖವನ್ನು ಪೂಜಿಸುವುದರಿಂದಾಗಿ ಭಗವಾನ್‌ ವಿಷ್ಣು ಮತ್ತು ಬುಧಗ್ರಹದ ಅಪಾರ ಕೃಪೆಯು ಲಭಿಸುತ್ತದೆ.

ಇನ್ನು ಶಂಖವನ್ನು ಶ್ವೇತ ವಸ್ತ್ರದಲ್ಲಿ ಇಟ್ಟು ಪೂಜಿಸುವುದರಿಂದ ಶುಕ್ರಗ್ರಹವನ್ನು ಸದೃಢಗೊಳಿಸುತ್ತದೆ. ವಿಶೇಷವಾಗಿ ಶಂಖದಿಂದ ಸೂರ್ಯದೇವರಿಗೆ ಜಲ ಸಮರ್ಪಿಸುವುದು ಸೂರ್ಯದೇವರನ್ನು ಸದೃಢಗೊಳಿಸುತ್ತದೆ. ಒಟ್ಟಾರೆಯಾಗಿ ಅಪಾರ ಧಾರ್ಮಿಕ ಮಾನ್ಯತೆಯನ್ನು ಹೊಂದಿರುವ ಶಂಖವು ಮನುಕುಲಕ್ಕೆ ಲಭಿಸಿರುವ ಒಂದು ವರದಾನವಾಗಿದ್ದು ಸಮಸ್ಯೆಯಿಂದ ಬಳಲುವವರು ಶಂಖವನ್ನು ನಿಯಮಾನುಸಾರ ಮನೆಯಲ್ಲಿ ಪ್ರತಿಷ್ಠಾಪಿಸುವುದು ಉತ್ತಮವಾಗಿರುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment