ಹೆಂಡತಿ ಮಂಗಳ ಸೂತ್ರವನ್ನು ಹೀಗೆ ಧರಿಸಿದರೆ ಗಂಡ 100 ವರ್ಷ ಬದುಕುತ್ತಾನೆ!

ಹೆಂಡತಿ ಮಂಗಳ ಸೂತ್ರವನ್ನು ಹೀಗೆ ಧರಿಸಿದರೆ ಗಂಡ 100 ವರ್ಷ ಬದುಕುತ್ತಾನೆ! ವಿವಾಹಿತ ಮಹಿಳೆಯ ಸೌಂದರ್ಯವು ಅವಳ ಕೊರಳಲ್ಲಿರುವ ಸಂಪತ್ತು. ಹೆಂಡತಿಯ ಕೊರಳಲ್ಲಿ ಮಂಗಳಸೂತ್ರ ಮತ್ತು ಹಣೆಯ ಮೇಲೆ ಇರುವ ಸಿಂಧೂರ ಗಂಡನ ಜೀವ ಮತ್ತು ಸಂತೋಷವನ್ನು ಕಾಪಾಡುತ್ತದೆ.

ಮಹಿಳೆಯರು ಮಂಗಳ ಸೂತ್ರದಲ್ಲಿ ಹವಳಗಳು, ಮುತ್ತುಗಳು ಮತ್ತು ಸಣ್ಣ ವಿಗ್ರಹಗಳನ್ನು ಧರಿಸಿ ನೂರು ವರ್ಷಗಳ ಸಂತೋಷವನ್ನು ಬಯಸುತ್ತಾರೆ. ಇದನ್ನು ಧರಿಸುವುದು ಫ್ಯಾಶನ್ ಎಂದು ಹಲವರು ಭಾವಿಸುತ್ತಾರೆ. ಅದು ತಪ್ಪೇ, ಹಾಗೆ ಮಾಡಬಾರದು.

ಮಂಗಳಸೂತ್ರ ಗಂಡ ಹೆಂಡತಿಯ ಅನುಬಂಧದ ಪ್ರತೀಕ. ಮಂಗಳ ಎಂದರೆ ಶುಭ ಪ್ರಥಮ್ ಶೋಭಯಮಾನಂ. ಸೂತ್ರ ಎಂದರೆ ಹಗ್ಗ. ಆಧಾರ ಎಂದು ಅರ್ಥ, ಮದುವೆ ಎಂಬ ಹೆಸರಲ್ಲಿ ವರನು ಮಹಿಳೆಯ ಕೊರಳಿಗೆ ತಾಳಿ ಅಥವಾ ಮಂಗಳಸೂತ್ರವನ್ನು ಕಟ್ಟಿ ಮೂರು ಗಂಟು ಹಾಕುತ್ತಾನೆ.

ಜೀವನಪೂರ್ತಿ ಇಬ್ಬರೂ ಒಟ್ಟಿಗೆ ಸುಖವಾಗಿ, ಸಂತೋಷವಾಗಿ ಮಕ್ಕಳು ಮರಿಯೊಂದಿಗೆ ಜೀವನ ಮಾಡಲಿ ಎಂದು ಆಶೀರ್ವಾದ ಮಾಡಿ ತಾಳಿಯನ್ನು ಕಟ್ಟಿಸುತ್ತಾರೆ ವೇದ ಪಂಡಿತರು. ಆ ಮುಕ್ಕೋಟಿ ದೇವರು ತಾಳಿ ಕಟ್ಟುವ ಸಮಯದಲ್ಲಿ ಇವರನ್ನು ಆಶೀರ್ವಾದ ಮಾಡುತ್ತಾರೆ ಎಂದು ಒಂದು ನಂಬಿಕೆ. ಅದಕ್ಕಾಗಿ ಒಳ್ಳೆಯ ಮುಹೂರ್ತ ನೋಡಿ ಒಳ್ಳೆಯ ದಿನದಂದೇ ಮದುವೆಯನ್ನು ಮಾಡುತ್ತಾರೆ.

ಆದರೆ ಈಗಿನ ಕಾಲದಲ್ಲಿ ಕೆಲವು ಮಹಿಳೆಯರು ತಾಳಿಯನ್ನು ಕೊರಳಲ್ಲಿ ಇಟ್ಟುಕೊಳ್ಳದೆ ಅಥವಾ ತಾಳಿಯನ್ನು ಕೊರಳಿನಲ್ಲಿ ಹಾಕದೆ ಪಕ್ಕಕ್ಕೆ ತೆಗೆದು ಇಡುತ್ತಾರೆ. ಇನ್ನು ಕೆಲವು ಮಹಿಳೆಯರು ಕರಿದಾರವನ್ನು ಕೊರಳಲ್ಲಿ ಕಟ್ಟಿಕೊಳ್ಳುವುದು, ಅಥವಾ ಈಗಿನ ಟ್ರೆಂಡ್ ಅನುಸರಿಸಿ ರೆಡಿಮೇಡ್ ಆಗಿ ಸಿಗುವ ಮಂಗಳಸೂತ್ರವನ್ನು ಹಾಕಿಕೊಳ್ಳುತ್ತಿದ್ದಾರೆ.

ಕಪ್ಪು ಮತ್ತೆ ಬಂಗಾರ ಬಣ್ಣದಲ್ಲಿರುವ ಮಂಗಳಸೂತ್ರದಲ್ಲಿ ಪಾರ್ವತಿ ಮತ್ತು ಪರಮೇಶ್ವರ ನೆಲೆಸಿರುತ್ತಾರಂತೆ. ಕಪ್ಪು ಬಣ್ಣದ ರೂಪದಲ್ಲಿ ಆ ಪರಮೇಶ್ವರನು, ಬಂಗಾರ ಬಣ್ಣದ ರೂಪದಲ್ಲಿ ಪಾರ್ವತಿದೇವಿಯು ಇರುತ್ತಾರಂತೆ. ಯಾವುದೇ ರೀತಿಯ ಕೇಡು ಆಗದಂತೆ ಹೆಣ್ಣು ಯಾವಾಗಲೂ ಸುಮಂಗಲಿಯಾಗಿರಲು ಆಶೀರ್ವಾದ ಮಾಡುತ್ತಾರಂತೆ. ಪಾರ್ವತಿ ಮತ್ತೆ ಪರಮೇಶ್ವರ ಮಂಗಳಸೂತ್ರದ ಜೊತೆಗೆ ಮಹಿಳೆಯರ ಹೃದಯಕ್ಕೆ ಅಂಟಿಕೊಂಡೇ ಇಡುತ್ತಾರಂತೆ.

ಅದಕ್ಕೆ ಮಂಗಳಸೂತ್ರವನ್ನು ಮಹಿಳೆಯರ ಹೃದಯದ ಹತ್ತಿರದ ಹೊರಗೆ ಮಾಡಿದ್ದಾರಂತೆ, ಮಂಗಳಸೂತ್ರ ಹೃದಯಕ್ಕೆ ಮುಟ್ಟಿಕೊಂಡು ಇರುವ ರೀತಿ ಅದಗೋಸ್ಕರ ಆ ವಧು ಯಾವಾಗಲೂ ಸುಮಂಗಲಿಯಾಗಿರುತ್ತಾಳಂತೆ. ಅಷ್ಟೇ ಅಲ್ಲದೆ ಮಂಗಳಸೂತ್ರ ಹಾಕುವುದರಿಂದ ಮಹಿಳೆಯರಿಗೆ ಎಲ್ಲಿಲ್ಲದ ಶಕ್ತಿ ಹಾಗೂ ಏನು ಬಂದರೂ ಹೋರಾಟಬಲ್ಲೆ ಎಂಬ ಧೈರ್ಯ ಬರುತ್ತದೆಯಂತೆ.

ನಮಗೆ ಆದರ್ಶ ದಂಪತಿಗಳು ಎಂದರೆ ಮೊದಲು ನೆನಪಾಗುವುದು ಸೀತೆ ಮತ್ತು ರಾಮನವರೆ. ಸೀತೆ ಎಂದರೆ ರಾಮನಿಗೆ ಎಷ್ಟು ಇಷ್ಟ ಹೇಳಬೇಕಾಗಿಲ್ಲ. ಅಂತಹ ಸೀತೆಯವರು ಮಂಗಳಸೂತ್ರವನ್ನು ಮೊದಲು ಯಾವ ರೀತಿ ಕೊರಳಿಗೆ ಕಟ್ಟಿಸಿಕೊಂಡಿದ್ದರು ಅದೇ ರೀತಿಯಲ್ಲಿ ಇಟ್ಟುಕೊಂಡಿದ್ದರು. ಅದರಲ್ಲಿ ಯಾವ ಬದಲಾವಣೆ ಮಾಡಿರಲಿಲ್ಲ. ಸೀತೆಯವರ ಹಾಗೆ ಮಂಗಳಸೂತ್ರವನ್ನು ಧರಿಸಿದರೆ ಹಾಗೆ ಮಾಡಿದರೆ ಖಂಡಿತವಾಗಿ ಸಿರಿ ಸಂಪತ್ತುಗಳು ದೊರೆಯುತ್ತವೆಯಂತೆ.

ಕೆಲವು ಜನರಿಗೆ ವೆಂಕಟೇಶ್ವರ ಸ್ವಾಮಿ ಎಂದರೆ ಇಷ್ಟ ಇನ್ನು ಕೆಲವರಿಗೆ ದುರ್ಗಾದೇವಿ ಎಂದರೆ ಇಷ್ಟ. ಇನ್ನು ಕೆಲವರಿಗೆ ಬರೇ ದೇವರೆಂದರೆ ಇಷ್ಟ. ಯಾರಿಗೆ ಇಷ್ಟವೋ ಆ ದೇವರನ್ನು ಮಂಗಳಸೂತ್ರದ ಮೇಲೆ ತಯಾರಿಸಿ ಹಾಕಿಕೊಳ್ಳುತ್ತಾರೆ. ಆ ರೀತಿ ಖಂಡಿತ ಮಂಗಳ ಸೂತ್ರದ ಮೇಲೆ ದೇವರ ಪ್ರತಿಮೆಯನ್ನು ಹಾಕಿಸಿಕೊಳ್ಳಬಾರದಂತೆ. ಮುಖ್ಯವಾಗಿ ಲಕ್ಷ್ಮಿದೇವಿಯ ಪ್ರತಿಮೆಯನ್ನು ಮಂಗಳಸೂತ್ರದ ಮೇಲೆ ಹಾಕಿಸಿಕೊಳ್ಳಲೇ ಬಾರದಂತೆ. ಆ ರೀತಿ ಮಾಡಿದರೆ ಅಕಸ್ಮಾತ್ ಆ ರೀತಿ ಮಾಡಿಸಿಕೊಂಡರೆ, ಸಿರಿ ಸಂಪತ್ತುಗಳು ಹೋಗಿ ಕಷ್ಟದ ಸಮಯ ಶುರುವಾಗುತ್ತದೆ ಎಂದು ಹೇಳುತ್ತಾರೆ.

Leave a Comment