ನಿಮಗೆ ನೋವು ಕೊಟ್ಟವರಿಗೆ ನಿಮ್ಮ ಬೆಲೆ ಗೊತ್ತಾಗುವಹಾಗೆ ಮಾಡುವುದು ಹೇಗೆ?

ನಾವು ಈ ಲೇಖನದಲ್ಲಿ ಬಹಳ ಹತ್ತಿರದವರು ನೋವು ಕೊಟ್ಟವರಿಗೆ ನಿಮ್ಮ ಬೆಲೆ ಗೊತ್ತಾಗುವ ಹಾಗೆ ಮಾಡುವುದು ಹೇಗೆ ಎಂಬ ವಿಷಯದ ಬಗ್ಗೆ ತಿಳಿಯೋಣ . ಜೀವನದಲ್ಲಿ ಪ್ರಗತಿ ಸಾಧಿಸಲು , ಸಂತೋಷದ ಜೀವನ ನಡೆಸಲು ಭಗವಾನ್ ಶ್ರೀ ಕೃಷ್ಣ ಹೇಳಿರುವ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು , ಕೃಷ್ಣನ ನುಡಿಗಳನ್ನು ಪಾಲಿಸಿ ಬದುಕು ಸಾಧಿಸಿದರೆ, ಯಾವುದೇ ತೊಂದರೆ ಆಗದ ಹಾಗೆ , ನೆಮ್ಮದಿಯಿಂದ ಜೀವನ ಸಾಗಿಸಬಹುದು . ಭಗವಾನ್ ಶ್ರೀ ಕೃಷ್ಣ ಹೇಳಿರುವ ಹಾಗೆ ,

ಜೀವನದಲ್ಲಿ ಒಂಟಿಯಾಗಿ ಇರುವುದು ಮತ್ತು ತಾಳ್ಮೆಯಿಂದ ಇರುವುದು , ಬಹಳ ಮುಖ್ಯ ಆಗುತ್ತದೆ .ನೀವು ಯಾರ ಹಿಂದೆಯೂ ಹೋಗಬೇಡಿ .ಹಿಂದೆ ಹೋದಷ್ಟು ನಿಮ್ಮನ್ನು ಕಡೆಗಣಿಸುವವರೇ ಹೆಚ್ಚಾಗಿ ಸಿಗುತ್ತಾರೆ .ನಿಮ್ಮನ್ನು ಅರ್ಥ ಮಾಡಿಕೊಂಡು , ನೀವೇ ಬೇಕು ಎನ್ನುವವರು ಏನೇ ಆದರೂ ನಿಮ್ಮೊಡನೆ ಇರುತ್ತಾರೆ . ಅದೇ ರೀತಿ ನಿಮ್ಮನ್ನು ಕಂಡರೆ ಇಷ್ಟ ಆಗದವರು, ನಿಮ್ಮನ್ನು ಬೇಡ ಎನ್ನುವವರು , ನಿಮ್ಮಿಂದ ದೂರ ಉಳಿಯುವುದೇ ಒಳ್ಳೆಯದು . ನಿಮ್ಮ ಬದುಕಿನಲ್ಲಿ ಈ ವ್ಯಕ್ತಿ ಇರಲೇಬೇಕು ಎಂದು ಅವರ ಹಿಂದೆ ಹೋಗಿ ಬೇಡಿಕೊಳ್ಳುತ್ತಲೇ ಇರಬೇಡಿ .

ಏಕೆಂದರೆ ಈ ಪ್ರಪಂಚದಲ್ಲಿ ಯಾರೂ ಕೂಡ ಶಾಶ್ವತವಲ್ಲ .ಅದೇ ರೀತಿ ಯಾವ ವಸ್ತುವು ಶಾಶ್ವತವಲ್ಲ . ಅಸಾಧ್ಯ ಎಂದುಕೊಳ್ಳುವ ಶತ್ರು , ಅಪಾಯ ಇರಬಹುದು ಎಂದುಕೊಳ್ಳುವ ಆಟ, ನನ್ನಿಂದ ಇದು ಸಾಧ್ಯ ಆಗುತ್ತದೆ ಎನ್ನುವಂತಹ ಭರವಸೆ , ಜೀವನದಲ್ಲಿ ಸರಮಾಲೆ ಆಗುವಂತಹ ಸವಾಲುಗಳು , ನಿಮಗೆ ಯಶಸ್ಸು ಸಿಗುವುದು ಇವುಗಳಿಂದ . ಮನುಷ್ಯರಷ್ಟೇ ಅಲ್ಲ , ಭಗವಾನ್ ಶ್ರೀ ಕೃಷ್ಣನಿಗೂ ನೋವುಗಳು ಇದ್ದವು . ಆದರೆ ಕರ್ತವ್ಯಗಳ ಎದುರು ಆ ನೋವುಗಳು ನೆಲೆ ಕಾಣಲಿಲ್ಲ .

ಈ ಬದುಕಿನಲ್ಲಿ ನಂಬಿಕೆಗೆ ಅರ್ಹರಾಗುವ ವ್ಯಕ್ತಿಗಳು ಸಿಗುವುದು ಬಹಳ ಕಡಿಮೆ . ಹಾಗಾಗಿ ನೀವು ಜೀವನದಲ್ಲಿ ಯಾರಾದರೂ ಒಬ್ಬ ವ್ಯಕ್ತಿಯನ್ನು ನಂಬುವುದಕ್ಕಿಂತ ಮೊದಲು ನೂರು ಬಾರಿ ಯೋಚನೆ ಮಾಡಿ . ಏಕೆಂದರೆ ನಿಮ್ಮದೇ ಆಗಿರುವ ನಿಮ್ಮ ದೇಹದಲ್ಲೇ ಇರುವ ನಿಮ್ಮ ಸ್ವಂತ ಹಲ್ಲುಗಳು ಕೂಡ ಕೆಲವೊಮ್ಮೆ ನಿಮ್ಮ ನಾಲಿಗೆಯನ್ನು ಕಚ್ಚುತ್ತದೆ .ಈ ಕಲಿಯುಗದಲ್ಲಿ ಪ್ರತಿಯೊಬ್ಬ ಮನುಷ್ಯನು ಹರಿಸುವ ಕಣ್ಣೀರಿಗೂ ಬೆಲೆ ಇದೆ . ಪ್ರತಿಯೊಬ್ಬ ಮನುಷ್ಯ ಹರಿಸುವ ಒಂದೊಂದು ಕಂಬನಿಯ ಹನಿಯ ಹಿಂದೆ ಕೂಡ ,

ಆ ವ್ಯಕ್ತಿಯ ಇಂದಿನ ಜನ್ಮದ ಕರ್ಮದ ಫಲ ಇರುತ್ತದೆ . ಆ ಕರ್ಮದ ಫಲವನ್ನು ಎಲ್ಲರೂ ಅನುಭವಿಸಲೇಬೇಕು . ಭಗವಂತನು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ . ಇದು ವಿಧಿಯ ನಿಯಮ ಆಗಿದೆ . ನೀವು ತುಂಬಾ ಪ್ರೀತಿ ಮಾಡುವ ಕಾಳಜಿ ಮಾಡುವ ವ್ಯಕ್ತಿಗಳೇ , ನಿಮ್ಮ ಮನಸ್ಸಿಗೆ ಅತಿಯಾದ ನೋವನ್ನು ತರುತ್ತಾರೆ . ಅಂತಹ ವ್ಯಕ್ತಿಗಳಿಗೆ ನಿಮ್ಮ ಬೆಲೆ ಗೊತ್ತಾಗಬೇಕು ಅಂದರೆ , ಅವರನ್ನು ನೀವು ನಿರ್ಲಕ್ಷ್ಯ ಮಾಡಬೇಕು . ಆಗಲೇ ಅವರಿಗೆ ನಿಮ್ಮ ಬೆಲೆಯ ಅರಿವಾಗುತ್ತದೆ . ಯಾವುದೇ ಕೆಲಸಕ್ಕಾಗಿ ಆದರೂ ಅವಕಾಶವೇ ನಿಮ್ಮನ್ನು ಹುಡುಕಿ ಬರುತ್ತದೆ ಎಂದು ಕಾದು ಕುಳಿತಿರಬೇಡಿ .

ನಿಮ್ಮ ಅವಕಾಶಗಳನ್ನು ನೀವೇ ಸೃಷ್ಟಿಸಿಕೊಳ್ಳಬೇಕು . ನೀವು ಒಬ್ಬ ವ್ಯಕ್ತಿಯ ಮೇಲೆ ನಂಬಿಕೆ ಇಟ್ಟಾಗ , ನಿಮ್ಮಿಬ್ಬರ ನಡುವೆ ಆ ನಂಬಿಕೆ ಒಂದು ಸೇತುವೆಯ ಹಾಗೆ ಇರುತ್ತದೆ . ಆ ಸಂಬಂಧ ನಿಲ್ಲುವುದು ನಂಬಿಕೆ ಎನ್ನುವ ಆ ಸೇತುವೆಯಿಂದ .ಆದರೆ ಆ ನಂಬಿಕೆಯ ಸೇತುವೆಯೇ ಕಳಚಿ ಬಿದ್ದಾಗ , ಎಷ್ಟು ಸಾರಿ ಕ್ಷಮೆ ಕೇಳಿದರು ಸಹ ಕಳೆದು ಹೋದ ನಂಬಿಕೆ ಮತ್ತೆ ಬರುವುದಿಲ್ಲ . ಸಾವಿರ ಬಾರಿ ಕ್ಷಮೆ ಕೇಳುವುದರಿಂದ ಯಾವುದೇ ಪ್ರಯೋಜನ ಕೂಡ ಆಗುವುದಿಲ್ಲ .

ಒಬ್ಬ ವ್ಯಕ್ತಿಗೆ ಹಾನಿ ಮಾಡಬೇಕು ಎಂದು ಯೋಚಿಸಿ , ಅವರಿಗೆ ಕೆಸರು ಹಾಕಲು ಹೋದಾಗ , ಕೆಸರು ಮೊದಲು ನಿಮ್ಮ ಕೈಗೆ ಆಗುತ್ತದೆ ಎಂಬುದನ್ನು ನೆನಪಿನಲ್ಲಿ ಇಡಿ .ಅದೇ ರೀತಿ ಒಬ್ಬ ವ್ಯಕ್ತಿಗೆ ಒಳ್ಳೆಯದನ್ನು ಮಾಡಲು ಹೊರಟು , ಅವರಿಗೆ ಗಂಧ ಹಚ್ಚಲು ಹೋದಾಗ , ನಿಮ್ಮ ಕೈಗೆ ಮೊದಲು ಗಂಧವಾಗುತ್ತದೆ .ಒಬ್ಬ ವ್ಯಕ್ತಿಗೆ ನೀವು ಏನು ಮಾಡಬೇಕು ಎಂಬುವುದನ್ನು ಯೋಚನೆ ಮಾಡಿ ಆಯ್ಕೆ ಮಾಡಿ . ಜೀವನದಲ್ಲಿ ನೀವು ಆಸೆ ಪಟ್ಟ ದೊಡ್ಡ ದೊಡ್ಡ ವಸ್ತುಗಳು ಸಿಕ್ಕಿವೆ ಎಂದು ಮೊದಲು ನಿಮ್ಮ ಜೊತೆಗಿದ್ದ ಆ ಪುಟ್ಟ ವಸ್ತುಗಳನ್ನು ಮರೆತು ಬಿಡಬೇಡಿ . ಏಕೆಂದರೆ ಪ್ರಪಂಚದಲ್ಲಿ ಎಲ್ಲಾ ವಸ್ತುಗಳಿಗೂ ಅವರದೇ ಆದ ಪ್ರಾಮುಖ್ಯತೆ ಇದೆ .

ಒಂದು ಸೂಜಿ ಮಾಡುವ ಕೆಲಸಗಳನ್ನು ಖಡ್ಗ ಮಾಡಲು ಸಾಧ್ಯವಾಗುವುದಿಲ್ಲ . ನಿಮ್ಮ ಬಳಿ ವಿದ್ಯೆ ಇಲ್ಲದೆ ಇದ್ದರೆ , ಜ್ಞಾನವು ಇರುವುದಿಲ್ಲವೇ … ನಿಮ್ಮ ಬಳಿ ಹಣ ಇಲ್ಲದೆ ಇರಬಹುದು . ನೀವು ಶ್ರಮ ಪಡುವುದಿಲ್ಲವೇ … ನಿಮ್ಮ ಬಳಿ ಹಣ ಇಲ್ಲದೆ ಇರಬಹುದು, ಆದರೆ ನಿಮ್ಮ ಬಳಿ ಧರ್ಮ ಇಲ್ಲವೇ .. ನಿಮ್ಮ ಜೊತೆಯಲ್ಲಿ ನಿಮ್ಮ ಸಂಬಂಧಿಕರು ಇಲ್ಲದೆ ಇರಬಹುದು , ಆದರೆ ಆ ಭಗವಂತ ನಿಮ್ಮ ಜೊತೆ ಇಲ್ಲವೇ …ನೀವು ಸಾಧನೆ ಮಾಡುವ ಕಾರ್ಯಕ್ಕೆ ಮನಸ್ಸನ್ನು ಸಿದ್ಧಗೊಳಿಸಲು, ಇಷ್ಟು ನಂಬಿಕೆ ಅರ್ಹತೆ ಸಾಕಾಗುವುದಿಲ್ಲವೇ… ಎಂಬ ವಿಷಯವನ್ನು ತಿಳಿಸಿದ್ದಾರೆ

Leave a Comment