ವೃಶ್ಚಿಕ ರಾಶಿ ಅಕ್ಟೋಬರ್ ಮಾಸ ಭವಿಷ್ಯ

ವೃಶ್ಚಿಕ ರಾಶಿಯ ಮಾಸ ಭವಿಷ್ಯ. ಶೈನ್ ಆಗಲು ಸಾಕಷ್ಟು ಅವಕಾಶಗಳಿವೆ ಎಂದು ಹೇಳಬಹುದು. 12ನೇ ಭಾವದಲ್ಲಿ ಚತುರು ಗ್ರಹ ಉಂಟಾಗುತ್ತದೆ. ಒಂದಷ್ಟು ವಿಶೇಷವಾದ ಮುನ್ಸೂಚನೆಗಳನ್ನು ಹೇಳಬೇಕಿದೆ. ನೀವು ಯಾವ ರೀತಿ ಇರಬೇಕು? ಯಾವ ತರದ ಪರಿಸ್ಥಿತಿಗಳನ್ನು ಎದುರಿಸಬೇಕು ಎನ್ನುವುದರ ಬಗ್ಗೆ. ಏಕೆಂದರೆ ನಾವು ಒಂದಷ್ಟು ಘಟನೆಗಳನ್ನು ಎದುರಿಸಲೇಬೇಕು.

ಆದರೆ ಮುನ್ಸೂಚನೆ ಸಿಕ್ಕಿದಾಗ, ಸ್ವಲ್ಪಮಟ್ಟಿಗೆ ಅವುಗಳಿಂದ ತಪ್ಪಿಸಿಕೊಳ್ಳಬಹುದು. ಈ ತಿಂಗಳು ಅದ್ಭುತವಾಗಿ ಶುರುವಾಗುತ್ತದೆ. ವೃಶ್ಚಿಕ ರಾಶಿಯ ಮಟ್ಟಿಗೆ ಗ್ರಹಣ ಒಳ್ಳೆಯ ಪರಿಣಾಮವನ್ನೇ ಬೀರುತ್ತದೆ. ಒಂದು ಗ್ರಹಣ ಮತ್ತೊಂದು ರಾಹು ಕೇತು ಪರಿವರ್ತನೆ. ನಿಮ್ಮ ಏಕಾದಶ ಭಾವದಲ್ಲಿ ಬುಧಾದಿತ್ಯ ಯೋಗವಾಗುತ್ತಿದೆ. ಏಕಾದಶಾಭಾವವೆಂದರೆ ಲಾಭಕ್ಕೆ ಸಂಬಂಧಿಸಿದೆ.

ಈ ಎರಡು ಗ್ರಹಗಳು ನಿಮಗೆ ಶುಭವನ್ನೇ ತರುತ್ತದೆ. ಅನಾರೋಗ್ಯಗಳು ದೂರವಾಗುತ್ತದೆ. ಬಹಳಷ್ಟು ವಿಚಾರಗಳಲ್ಲಿ ಯಶಸ್ಸು ಸಿಗುತ್ತದೆ. ಲಾಭವು ವ್ಯವಹಾರಕ್ಕೆ ಸಂಬಂಧಿಸಿದೆ. ವ್ಯವಹಾರಸ್ತರಿಗೆ ಯಶಸ್ಸು ಕೈಹಿಡಿಯುತ್ತದೆ. ದಶಮಾಧಿಪತಿಯಾದ ರವಿ ಏಕಾದಶ ಅಧಿಪತಿಯಾದ ಬುಧನ ಜೊತೆ ಇರುತ್ತಾನೆ. ಲಾಭಾಧಿಪತಿ ಮತ್ತು ಕರ್ಮಾಧಿಪತಿ ಇಬ್ಬರು ಜೊತೆಯಾಗಿ ಇರುತ್ತಾರೆ.

ಅಂದರೆ ಕೆಲಸದಿಂದ ಲಾಭ ಲಾಭದಿಂದ ಮತ್ತೆ ಕೆಲಸ. ಒಳ್ಳೊಳ್ಳೆಯ ಕೆಲಸಗಳು ಮತ್ತು ಲಾಭ ಸಿಗುತ್ತದೆ. ಬಹಳಷ್ಟು ಧನಾತ್ಮಕ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ. ಯಾವುದಾದರೂ ಕೆಲಸ ಕಾರ್ಯಗಳು ಬಾಕಿ ಇದ್ದರೆ, ಅವು ಆಗುತ್ತವೆ. ರವೀಯಿಂದ ಸರ್ಕಾರಿ ಕೆಲಸ ಕಾರ್ಯ ಮಾಡುವವರಿಗೆ ಸಾಕಷ್ಟು ಉನ್ನತಿ. ಒಳ್ಳೆಯ ಸ್ಥಾನಮಾನ ಹೊಗಳಿಕೆ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.

ರಾಜಕೀಯದಲ್ಲಿರುವವರಿಗೆ ಪ್ರಶಂಸೆ ಸಿಗುತ್ತದೆ ಬಡ್ತಿ ಸಿಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಎಂಟರ್ನ್ಸ್ ಎಕ್ಸಾಮ್ ಬರೆಯುವವರಿಗೆ ನಿರೀಕ್ಷೆಯಲ್ಲಿರುವವರಿಗೆ, ಸರ್ಕಾರದ ಲಾಭಗಳನ್ನು ಪಡೆಯುವ ನಿರೀಕ್ಷೆಯಲ್ಲಿ ಇರುವವರಿಗೆ ಜನ ಮಂಡನೆ ಪಡೆಯುವ ನಿರೀಕ್ಷೆಯಲ್ಲಿರುವವರು, ಸಿನಿಮಾ ಮಾಡಬೇಕು ಎಂದುಕೊಂಡಿರುವವರು ಜನಪ್ರಿಯತೆಯನ್ನು ಗಳಿಸುವಿರಿ.

ಸಾಕಷ್ಟು ಅವಕಾಶಗಳು ಸಿಗುತ್ತವೆ. ಒಟ್ಟಾರೆಯಾಗಿ ಎಲ್ಲಾ ವ್ಯಕ್ತಿಗಳಿಗೂ ವೃತ್ತಿಯಲ್ಲಿ ಯಶಸ್ಸು ಇದೆ. ಯಾವುದೇ ವೃತ್ತಿಯಲ್ಲಿದ್ದರೂ ಸಹ ನಿಮಗೆ ಯಶಸ್ಸಿನ ಜೊತೆಗೆ ಪ್ರಸಿದ್ಧಿಯು ದೊರೆಯುತ್ತದೆ. ಕ್ರಿಯೇಟಿವ್ ಫೀಲ್ಡ್ ನಲ್ಲಿರುವ ವ್ಯಕ್ತಿಗಳಿಗೆ ಹಿನ್ನೆಡೆ ಇದೆ. ಪತ್ರಿಕೋದ್ಯಮಿಗಳಿಗೆ ಬರಹಗಾರರಿಗೆ ಸಿನಿಮಾ ನಿರ್ದೇಶಿಸುವವರಿಗೆ ಚಿತ್ರಕಲೆ ಶಿಲ್ಪಿಗಳಿಗೆ ಹಿನ್ನಡೆ ಇದೆ. ಏಕೆಂದರೆ ಶುಕ್ರ ಅಷ್ಟೊಂದು ಚೆನ್ನಾಗಿ ಇಲ್ಲ.

ಕ್ರಿಯೇಟಿವ್ ವೆಕ್ತಿಗಳು ಸ್ವಲ್ಪ ಹುಷಾರಾಗಿರಿ ನಿಮಗೂ ಅವಕಾಶಗಳು ಬಂದಾಗ ಉಪಯೋಗಿಸಿಕೊಳ್ಳಬಹುದು. ಶುಕ್ರ ಸಿಂಹಕ್ಕೆ ಬಂದಾಗ ಜಗಳಗಳನ್ನು ತಂದುಕೊಡಬಹುದು. ವಿಶೇಷವಾಗಿ ಕುಟುಂಬ ಅಥವಾ ಹೊರಗಡೆ ಸ್ತ್ರೀಯರಿಗೆ ಸಂಬಂಧಿಸಿದ ವಿಚಾರವಾಗಿ, ನೀವು ಸ್ತ್ರೀಯರಾಗಿದ್ದರೆ ಪುರುಷರಿಗೆ ಸಂಬಂಧಿಸಿದ ವಿಚಾರವಾಗಿ ಜಗಳಗಳು ಉಂಟಾಗಬಹುದು. ಚಿಕ್ಕ ಪುಟ್ಟ ಜಗಳಗಳ ಇಲ್ಲಿ ಹೇಳಲಾಗುತ್ತಿದೆ. ಹದಿನಾರನೇ ತಾರೀಕಿಗೆ ರವಿ 18ನೇ ತಾರೀಖಿನಂದು ಬುಧ ಬದಲಾಗುತ್ತಾರೆ.

ತಿಂಗಳ ಉಳಿದ ಅರ್ಥ ನಿಮಗೆ ಶುಭವಾಗಿಲ್ಲ. ತೀರಾ ಕೆಟ್ಟದೇನಿಲ್ಲ. ಆದರೆ ಸ್ವಲ್ಪ ಕಿರಿಕಿರಿ ಇದೆ. ಏಕೆಂದರೆ ದಶಮ ಮತ್ತು ಏಕಾದಶಾಮಾಧಿಪತಿಗಳು ಇನ್ವಾಲ್ ಆಗುತ್ತಿದ್ದಾರೆ. ಇವರು ನಿಮ್ಮದು ಆದರ್ಶ ಭಾಗದಲ್ಲಿ ಕುಳಿತುಕೊಳ್ಳುತ್ತಾರೆ. ಅಂದರೆ ವ್ಯಯ ಸ್ಥಾನ. ಬರಬೇಕಾದ ಹಣ ಸ್ವಲ್ಪ ದುಡ್ಡಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ. ಸರ್ಕಾರಿ ಕೆಲಸ ಕಾರ್ಯಗಳನ್ನು ತಿಂಗಳ ಮೊದಲ ಅರ್ಧ ಭಾಗದಲ್ಲಿ ಮುಗಿಸಿಕೊಳ್ಳುವುದು ಒಳ್ಳೆಯದು. ಸಕ್ಸೆಸ್ ಬಂದ ಕ್ಷಣ ಜನರ ಕಣ್ಣು ಬೀಳುವುದು.

ಸ್ವಲ್ಪ ಖರ್ಚಿನ ಬಗೆಗೂ ಹುಷಾರಾಗಿರಿ. ಅಷ್ಟೊಂದು ದೊಡ್ಡ ಕೊರತೆಯನ್ನು ಎದುರಾಗುವುದಿಲ್ಲ. ಒಂದು ಬದಲಾವಣೆ ಎದುರಾದರೂ ಇನ್ನೊಂದು ನಿಮಗೆ ಧನಾತ್ಮಕವಾಗಿಯೇ ಇರುತ್ತದೆ. ನಾಲ್ಕು ಗ್ರಹಗಳು ವಿಯಭಾಗಕ್ಕೆ ಬಂದು ಕೋರುವುದಿಂದ ನಿಮ್ಮ ಖರ್ಚು ಹೆಚ್ಚಾಗುತ್ತದೆ. ಕುಜ ಮೂರನೇ ತಾರೀಕಿಗೆ, ರವಿ ಹದಿನಾರನೇ ತಾರೀಕಿಗೆ 18 ನೇ ತಾರೀಕಿಗೆ ಮೂರು ಗ್ರಹಗಳು ನಿಮ್ಮ ವ್ಯಯ ಭಾವದಲ್ಲಿ ಇರುವವು. ಕೇತು ಗ್ರಹ ಮೊದಲಿನಿಂದಲೂ ವ್ಯಯ ಭಾವದಲ್ಲಿ ಇದೆ.

ಇದರಿಂದಾಗಿ ಖಜಾನೆಯಲ್ಲಿ ಏರುಪೇರು ಆಗುತ್ತದೆ. ಖರ್ಚನ್ನು ಕಡಿಮೆ ಮಾಡಬೇಕು. ಅನಿವಾರ್ಯವಿರೋಧಕ್ಕೆ ಮಾತ್ರ ಖರ್ಚು ಮಾಡಿ. ಉಂಟಾಆಗುವ ಗ್ರಹಣದಿಂದ ಸಡನ್ನಾಗಿ ಸಕ್ಸಸ್ ಸಿಗಗಬಹುದು. ಗ್ರಹಣದ ಫಲಗಳು ವೃಶ್ಚಿಕ ರಾಶಿಗೆ ಅದ್ಭುತವಾಗಿವೆ. ಕೆತ್ತು ಗ್ರಹ ಏಕಾದಶ ಭಾವಕ್ಕೂ ರಾಹು ಗ್ರಹ ಪಂಚಮ ಭಾವಕ್ಕೂ ಬರುತ್ತದೆ. ಪ್ರಕೃತಿಯಲ್ಲಿ ಬ್ಯಾಲೆನ್ಸಿಂಗ್ ಯಾವಾಗಲೂ ನಡೆಯುತ್ತಿರುತ್ತದೆ. ಅಂತಹ ಬ್ಯಾಲೆನ್ಸಿಂಗ್ ನಿಮ್ಮ ಜೀವನದಲ್ಲೂ ನಡೆಯಲಿ ಎಂದು ಹಾರೈಸುತ್ತೇವೆ.

Leave a Comment