ಮಾರ್ಚ 25 ಚಂದ್ರಗ್ರಹಣ | ಬಿಳಿಎಳ್ಳನ್ನು ಈಮರದ ಕೆಳಗೆಹಾಕಿ ಕೋಟಿ ಸಾಲ ಇದ್ರೂತೀರುತ್ತೆ

ನಾವು ಈ ಲೇಖನದಲ್ಲಿ ಮಾರ್ಚ್ 25 ರಂದು ಚಂದ್ರ ಗ್ರಹಣದ ಅವಧಿಯಲ್ಲಿ ,ಯಾವ ಯಾವ ಉಪಯೋಗಗಳನ್ನು ಮಾಡಿಕೊಂಡು ನಮಗೆ ಇರುವಂತಹ ಸಾಲದಿಂದ, ಮುಕ್ತಿ ಹೊಂದಬಹುದು ಎಂಬುದನ್ನು ತಿಳಿದುಕೊಳ್ಳೋಣ . ಇದೇ ಮಾರ್ಚ್ ಮಂಗಳವಾರ 25 ನೇ ತಾರೀಖು ಹೋಳಿ ಹುಣ್ಣಿಮೆಯು ಇದೆ. ಅಂದು ಕೇತು ಗ್ರಸ್ತ ಚಾಯ ಚಂದ್ರ ಗ್ರಹಣವು ಇದೆ . ಆ ದಿನ ನೀವು ಏನು ಮಾಡಬೇಕೆಂದರೆ , ಸಾಲ ತೀರಿಸುವುದಕ್ಕೆ , ಒಂದು ಸರಳವಾದ ಉಪಾಯವನ್ನು, ಮಾಡಿಕೊಳ್ಳಬಹುದು.

ಮನೆಯಲ್ಲೆ ದೊರೆಯುವಂತಹ ಸರಳ ಸುಲಭ ವಸ್ತುಗಳನ್ನು , ಇಟ್ಟುಕೊಂಡು ಜೀವನದಲ್ಲಿ ಹೇಗೆ ಗೆಲ್ಲಬೇಕೆಂದು, ತಿಳಿದುಕೊಳ್ಳೋಣ . ಈ ಚಂದ್ರಗ್ರಹಣದ ದಿನ ವಿಶೇಷವಾಗಿ ಮೂರು ಉಪಾಯಗಳನ್ನು, ಮಾಡಬಹುದು . ಇದನ್ನು ಮನೆಯಲ್ಲೇ ಸರಳವಾಗಿ ಸುಲಭವಾಗಿ ದೊರೆಯುವಂತಹ ವಸ್ತುಗಳನ್ನು ಇಟ್ಟುಕೊಂಡು , ಮಾಡಿದರೆ ಕೇವಲ 41 ದಿನದಲ್ಲಿ ಎಷ್ಟೇ ಅಪಾರವಾದ ಸಾಲ ಇದ್ದರೂ ಅದನ್ನು ಈ ಮೂರು ಪರಿಹಾರವನ್ನು , ಅನುಸರಿಸಿ ಹೇಗೆ ಕಡಿಮೆ ಮಾಡಿಕೊಳ್ಳಬಹುದು. ಎಂಬುದನ್ನು ತಿಳಿದುಕೊಳ್ಳೋಣ.

ಮೊದಲನೇ ಪರಿಹಾರವೆಂದರೆ, ಯಾರಿಗೆ ಹರಿಯುವ ನೀರಿನ ವ್ಯವಸ್ಥೆ ಅಂದರೆ ಕೊಳಚೆ , ನೀರಿರಬಾರದು, ಚರಂಡಿ ನೀರು, ಇರಬಾರದು. ಶುದ್ಧವಾಗಿ ನದಿ ನೀರು ಅಥವಾ ಕಾಲುವೇ ನಾಳದ ನೀರು ಇರಬೇಕು. ಅಂದರೆ ಶುದ್ಧವಾದ ಹರಿಯುವ ನೀರಿನ ವ್ಯವಸ್ಥೆ ಇದ್ದವರು ಮಾತ್ರ ಈ ಮೊದಲನೆಯ ಪರಿಹಾರವನ್ನು, ಮಾಡಿಕೊಳ್ಳಿ. ಏನು ಮಾಡಬೇಕೆಂದರೆ ಸಾಲದ ಸಂಕಷ್ಟ ಜಾಸ್ತಿ ಇದೆ ಎನ್ನುವವರು, ಈ ಗ್ರಹಣದ ದಿನ ಸರಿಯಾಗಿ 10:21 ನಿಮಿಷದಿಂದ ಮಧ್ಯಾಹ್ನ 3 ಗಂಟೆ 2 ನಿಮಿಷದವರೆಗೆ ಇರುತ್ತದೆ.

ಆ ಸಮಯವನ್ನು ನೋಡಿಕೊಂಡು , ಸರಿಯಾಗಿ ಆ ಸಮಯದಲ್ಲಿ ಯಾರ ಮನೆ ಹತ್ತಿರ ಹರಿಯುವ ನೀರಿನ ವ್ಯವಸ್ಥೆ ಇದೆ, .ಅಂತಹ ಸ್ಥಳಗಳಲ್ಲಿ ನೀವು 11 ತೆಂಗಿನ ಕಾಯಿಯನ್ನು, ಹರಿಯುವ ನೀರಿನಲ್ಲಿ ನೀವು ಹರಿಬಿಟ್ಟು ಪ್ರಾರ್ಥನೆ ಮಾಡಿಕೊಂಡರೆ, ಸಾಲದ ಸುಳಿಯಿಂದ ಆದಷ್ಟು ಬೇಗ ಪಾರಾಗುತ್ತೀರಾ. ಇದು ಒಂದನೇ ಉಪಾಯ.
ಇಲ್ಲ ನಿಮ್ಮ ಮನೆ ಹತ್ತಿರ ಹರಿಯುವ ನೀರಿನ ವ್ಯವಸ್ಥೆ ಇಲ್ಲವೆಂದರೆ ,ಇನ್ನೊಂದು ಈ ಪರಿಹಾರವನ್ನು ಮಾಡಿಕೊಳ್ಳಿ. ಅರಳಿ ಮರ ಎಲ್ಲಾ ಊರಿನಲ್ಲಿ, ಇರುತ್ತದೆ, ದೇವಸ್ಥಾನದ ಹತ್ತಿರವಿರುತ್ತದೆ . ಪ್ರತಿಯೊಂದು ಊರಿನಲ್ಲಿ ಇದ್ದೇ ಇರುತ್ತದೆ. ಅರಳಿ ಮರ ಅಶ್ವತವೃಕ್ಷ ಎಂದು ಸಹ ಕರೆಯುತ್ತೇವೆ .

ಅರಳಿ ಮರದ ಕೆಳಗೆ ನೀವು ಏನು ಮಾಡಬೇಕೆಂದರೆ , ಗ್ರಹಣದ ಸಮಯದಲ್ಲಿ ಅಂದರೆ ನೀವು ಹೋಳಿ ಹುಣ್ಣಿಮೆಯ ದಿನ ಕೇತು ಗ್ರಸ್ತ ಚಂದ್ರ ಗ್ರಹಣ ಈ ತಿಂಗಳು 25 ನೇ ತಾರೀಕಿಗೆ ಗ್ರಹಣ ಇದೆ .ಆ ದಿನ ಏನು ಮಾಡಬೇಕು , ಎಂದರೆ ನೀವು ಮನೆಯಿಂದ ಸ್ವಲ್ಪ ಬಿಳಿ ಎಳ್ಳನ್ನು ತೆಗೆದುಕೊಂಡು, ಅಂದರೆ ಅಂದಾಜು ಒಂದು 100 ಗ್ರಾಂ ಬಿಳಿ ಎಳ್ಳನ್ನು ತೆಗೆದುಕೊಂಡು ,ಅದರ ಜೊತೆಗೆ ಬೆಲ್ಲವನ್ನು ಸೇರಿಸಿ , ಕುಟ್ಟಿ ಪುಡಿ ಮಾಡಿ ಆ ಬಿಳಿ ಎಳ್ಳು ಮತ್ತು ಪುಡಿ ಮಾಡಿದ ಬೆಲ್ಲವನ್ನು ಕೈಯಲ್ಲಿ ಹಿಡಿದುಕೊಂಡು , ನೀವು ಮನೆಯಿಂದ ಹೋಗಬೇಕಾಗುತ್ತೆ.

ಆ ಗ್ರಹಣದ ಸಮಯದಲ್ಲೇ, ಹೋಗಿ ಅರಳಿಮರದ ಕೆಳಗೆ ನಿಂತುಕೊಂಡು , ನಾನು ಸಾಕಷ್ಟು ಸಾಲದ ಸುಳಿಯಲ್ಲಿ ನಾನು ಸಿಕ್ಕಿ ಕೊಂಡಿದ್ದೀನಿ , ಆದ್ದರಿಂದ ಇದರಿಂದ ಬೇಗನೆ ಹೊರಗೆ ಬರಬೇಕು. ಎಂದು ಹೇಳಿ ಗಟ್ಟಿಯಾಗಿ ಭಗವಂತನಲ್ಲಿ, ಪ್ರಾರ್ಥನೆ ಮಾಡಿಕೊಂಡು ,ಕೈಯಲ್ಲಿ ಇರುವಂತಹ ಬಿಳಿ ಎಳ್ಳು , ಮತ್ತು ಬೆಲ್ಲದ ಪುಡಿಯನ್ನು ಎರಡು ಸಲ ಹಣೆಗೆ ಮುಟ್ಟಿಕೊಂಡು ,ನೀವು ಆ ಅರಳಿ ಮರದ ಸುತ್ತ ಅದನ್ನು ಚೆಲ್ಲಿ ಬಿಡಿ. ಅರಳಿ ಮರದ ಸುತ್ತ ಪ್ರಾರ್ಥನೆ ಮಾಡಿಕೊಂಡು.

11 ಬಾರಿ ” ಓಂ ನಮೋ ಭಗವತೇ ವಾಸುದೇವಾಯ ನಮಃ” ಎಂಬ ಮಂತ್ರವನ್ನು ಹೇಳಿಕೊಂಡು ಕಡಾ ಖಂಡಿತವಾಗಿ, ಅಲ್ಲಿಂದ ಮನೆಗೆ ಬಂದುಬಿಡಿ, ತದನಂತರ ನಿಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಿ . ಯಾರು ಈ ಚಂದ್ರಗ್ರಹಣದ ದಿನ ಬಿಳಿ ಎಳ್ಳು , ಮತ್ತು ಬೆಲ್ಲವನ್ನು, ಸೇರಿಸಿ ಕೆಳಗಡೆ ಹಾಕಿ ನಮಸ್ಕಾರ ಮಾಡುತ್ತಾರೋ , ಅವರು ಅತ್ಯಾಶ್ಚರ್ಯಕವಾಗಿ ,ಅದ್ಭುತವಾಗಿ ಸಾಲದ ಸುಳಿಯಿಂದ ಹೊರಗಡೆ ಬರುತ್ತಾರೆ . ನಿಮಗೆ ಆಶ್ಚರ್ಯವಾಗುತ್ತದೆ.
ಮೂರೇ ತಿಂಗಳಲ್ಲಿ ಎಷ್ಟೊಂದು ಬೆಟ್ಟದಂತಹ ಸಾಲ ಮಂಜಿನಂತೆ ಕರಗಿತು . ಎಂದು ಆಶ್ಚರ್ಯಪಡುತ್ತೀರಾ. ಇದನ್ನು ಮಾಡಿ ನೋಡಬೇಕು. ,

ಶ್ರದ್ಧೆ, ಭಕ್ತಿ ಇರಬೇಕು, ಕಷ್ಟಪಟ್ಟು ದುಡಿಯುವುದನ್ನು, ನಿಲ್ಲಿಸಬಾರದು .ಮೇಲ್ನೋಟಕ್ಕೆ ಸರಳವಾಗಿದ್ದರು, ಕೂಡ ಇಂತಹ ಪರಿಹಾರವನ್ನು ಜೀವನದಲ್ಲಿ, ಅನುಸರಿಸಿಕೊಂಡರೆ , ನಿಮಗೆ ಒಳ್ಳೆಯ ಫಲಗಳನ್ನು ಕಾಣುತ್ತೀರಾ . .ಈಗ ಕೊನೆಯ ಪರಿಹಾರವೇನೆಂದರೆ ,ನಿಮಗೆ ಜೀವನದಲ್ಲಿ, ಏಳಿಗೆ ಆಗುತ್ತಿಲ್ಲವೆಂದರೆ ಈ ಪರಿಹಾರವನ್ನು ಮಾಡಿ. ಯಾರ ಕೆಟ್ಟ ಕಣ್ಣು ಅಥವಾ ದೃಷ್ಟಿ ನಿಮ್ಮ ಮೇಲೆ ಬಿದ್ದಿದ್ದರೆ ,ಅಥವಾ ನಿಮ್ಮ ಏಳಿಗೆ ಅಂದರೆ ನೀವು ಜೀವನದಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದೀರಿ, ಮುಂದುವರೆಯುತ್ತಿದ್ದೀರಿ ,ಒಳ್ಳೆಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೀರಿ, ಒಳ್ಳೆಯ ಆಹಾರಗಳನ್ನು, ಸೇವಿಸುತ್ತಿದ್ದೀರಿ,

ಒಳ್ಳೆಯ ವಾಹನಗಳಲ್ಲಿ ಓಡಾಡುತ್ತಿದ್ದೀರಿ . ಯಾವುದಾದರೂ ಕೆಟ್ಟ ದೃಷ್ಟಿ ಬಿದ್ದಿರಬಹುದು , ನಿಮ್ಮ ಏಳಿಗೆ ತಡೆಯಾಯಿತಲ್ಲ, ಯಾರಾದರೂ ನಿಮ್ಮ ಏಳಿಗೆಗೆ ತಡ ಮಾಡಿಸಿದ್ದಾರೆ ಹೀಗೆ ನಾನಾ ಅಲೋಚನೆಗಳು , ನಿಮ್ಮ ಮನಸ್ಸಿಗೆ ಬರುತ್ತದೆ,ಹಾಗೆ ಏಳಿಗೆಗೆ ತೊಂದರೆಯಾಗಿದ್ದಲ್ಲಿ ,ಗ್ರಹಣದ ದಿನ ಒಂದು ಚಿಕ್ಕ ಪರಿಹಾರ ಮಾಡಿಕೊಳ್ಳುವುದರಿಂದ, ಅಡೆತಡೆಗಳೆಲ್ಲ ದೂರವಾಗಿ, ಮೊದಲಿನಂತೆ ಏಳಿಗೆ ಮತ್ತು ಅಭಿವೃದ್ಧಿ ಉಂಟಾಗುತ್ತದೆ . ನಿಮ್ಮ ಕೈಯಲ್ಲಿ ಹಣ ಉಳಿಸಬಹುದು, ಅದ್ಭುತವಾಗಿ ದಿನದಿಂದ

,ದಿನಕ್ಕೆ ಅಭಿವೃದ್ಧಿಯನ್ನು, ಕಾಣಬಹುದು. ಇದಕ್ಕೆ ಪರಿಹಾರವೆಂದರೆ , ಚಂದ್ರ ಗ್ರಹಣದ ದಿನ ಬಿಳಿ ದಾರವನ್ನು, ತೆಗೆದುಕೊಂಡು ಅರಿಶಿಣದ ನೀರಿನಲ್ಲಿ ಹದ್ದಿ ,ಹಳದಿ ದಾರವನ್ನು ಮಾಡಿ ಕೊಂಡು ,ಅದನ್ನು ತೆಗೆದುಕೊಂಡು ,ಹೋಗಿ ಅರಳಿ ಮರಕ್ಕೆ ಏಳು ಸುತ್ತು ಸುತ್ತಿ ಕಟ್ಟಿ, ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು , 11 ಬಾರಿ “ಓಂ ನಮೋ ಭಗವತ ವಾಸುದೇವಾಯ ನಮಃ ” ಎಂದು ಮಂತ್ರವನ್ನು ಪ್ರಾರ್ಥಿಸಿಕೊಳ್ಳಿ . ನಂತರ 24 ಗಂಟೆಯಲ್ಲಿ ನಿಮಗೆ ಒಳ್ಳೆಯ ಶುಭ ಸೂಚನೆಗಳು ಬರುತ್ತವೆ ಎಂದು ಹೇಳಲಾಗಿದೆ.

Leave a Comment