ಪತಿ ಪತ್ನಿಯರಿಗೆ ಮುಖ್ಯವಾದ ಕಿವಿ ಮಾತು

ಈ ಲೇಖನದಲ್ಲಿ ನಾವು ಪತಿ ಪತ್ನಿಯರಿಗೆ ಮುಖ್ಯವಾದ ಕಿವಿ ಮಾತುಗಳು ಯಾವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಮೊದಲನೆಯ ಕಿವಿ ಮಾತು ಪತಿ ಕಚೇರಿಯಿಂದ ಬಂದಾಗ ಮುಖವನ್ನು ಗಂಟು ಹಾಕಿಕೊಂಡು ಇರುವುದು ,ಅಥವಾ ಫೋನಿನಲ್ಲಿ ಮಾತನಾಡುವುದು, ಬಿಜಿಯಾಗಿ ಇರುವುದು , ಟಿವಿ ಮುಂದೆ ಕುಳಿತಿರುವುದು, ಹೀಗೆ ಯಾವುದಾದರೂ ಒಂದು ಕೆಲಸದಲ್ಲಿ ಬಿಜಿಯಾಗಿ ಇರಬೇಡಿ .ಅವರು ಬಂದ ತಕ್ಷಣ ಒಂದು ಗ್ಲಾಸ್ ನೀರು ಕೊಟ್ಟು ನಗುನಗುತ್ತ ಮಾತನಾಡಿಸಿ .

ಎರಡನೆಯ ಕಿವಿಮಾತು ಹಣ, ಒಡವೆ , ಆಸ್ತಿ , ಕಾರು, ಬಂಗಲೆ ಇವೆಲ್ಲ ಜೀವನಕ್ಕೆ ಬಹಳ ಮುಖ್ಯ .ಆದರೆ ಜೀವನಕ್ಕೆ ನೆಮ್ಮದಿ ಇದಕ್ಕಿಂತ ಮುಖ್ಯ. ಇದು ನಿಮ್ಮಿಬ್ಬರಿಗೂ ನೆನಪಿರಲಿ. ಪತಿಯ ಸಂಪಾದನೆಗೆ ಪತ್ನಿ ಯಾದವಳು ಬೆಲೆ ಕೊಡಬೇಕು. ಇತಿ ಮಿತಿಯಲ್ಲಿ ಹಣ ಖರ್ಚು ಮಾಡಬೇಕು. ಮೂರನೇ ಕಿವಿಮಾತು ಅಕ್ಕ ಪಕ್ಕದವರು ಹೊರಗಡೆ ಸುತ್ತಾಡಲು ಹೋಗುತ್ತಾರೆ.

ಒಡವೆ ತೆಗೆದುಕೊಂಡು ಇದ್ದಾರೆ. ಅಥವಾ ಶಾಪಿಂಗ್ ಮಾಡಿದ್ದಾರೆ, ಎಂದ ಮಾತ್ರಕ್ಕೆ ನಾವು ಕೂಡ ಅದನ್ನೇ ಮಾಡಬೇಕು . ಅದನ್ನೇ ಖರೀದಿಸಬೇಕು ,ಎಂಬುವ ಬಯಕೆ ಇಟ್ಟುಕೊಳ್ಳಬೇಡಿ .ಯಾಕೆಂದರೆ ಇದರಿಂದಲೇ ಸಂಸಾರದಲ್ಲಿ ಇಲ್ಲದ ಕಲಹಗಳು ಉಂಟಾಗುತ್ತದೆ. ನಿಮಗೆ ಅವಶ್ಯಕತೆ ಇದೆ. ಮತ್ತು ತೆಗೆದುಕೊಳ್ಳುವ ಶಕ್ತಿ ಇದೆ ಎಂದರೆ ,ಖಂಡಿತ ತೆಗೆದುಕೊಳ್ಳಿ. ಅತಿ ಆಸೆ ಮಾಡಬಾರದು .

ಮತ್ತು ಬೇರೆಯವರ ಬದುಕನ್ನು ನಿಮ್ಮ ಬದುಕಿಗೆ ಯಾವತ್ತಿಗೂ ಒಲಿಸಬಾರದು. ನಾಲ್ಕನೆಯ ಕಿವಿಮಾತು ಪತ್ನಿಯ ಮನೆಯವರ ಬಗ್ಗೆ ಪತಿ ,ಪತಿಯ ಮನೆಯವರ ಬಗ್ಗೆ ಪತ್ನಿ .ಚರ್ಚಿಸುವ ಅವಶ್ಯಕತೆ ಇಲ್ಲ .ಮಾತನಾಡಬೇಕಾದ ವಿಷಯದ ಬಗ್ಗೆ ಮಾತನಾಡಿಸುವ ಅಥವಾ ವೈಯಕ್ತಿಕ ಮಾತುಗಳು ಬೇಡ ಇಲ್ಲದ ಸಲ್ಲದ ವಿಷಯದ ಬಗ್ಗೆ ಹೆಚ್ಚು ಚರ್ಚೆ ಮಾಡಬೇಡಿ .

ಐದನೆಯ ಕಿವಿಮಾತು ಸಂಸಾರ ಎಂದ ಮೇಲೆ ಮನೆ , ಮಕ್ಕಳು ,ವ್ಯವಹಾರ ,ಮತ್ತು ಆರೋಗ್ಯದ ಮಾತುಗಳೇ ತುಂಬಾ ಇರುತ್ತವೆ .ಇದರ ಹೊರತು ಬೇರೆಯವರ ಬಗ್ಗೆ ಇಲ್ಲದ ಸಲ್ಲದ ಮಾತಿನ ಚರ್ಚೆ ಇಬ್ಬರಿಗೂ ಬೇಡ. ಅದರ ಅವಶ್ಯಕತೆಯೂ ಇಲ್ಲ .ಪತಿ-ಪತ್ನಿಯ ನಡುವೆ ಜಗಳ ಬರಲು ಇದೇ ಕಾರಣ . ಆರನೇ ಕಿವಿಮಾತು ಒಬ್ಬರಿಗೊಬ್ಬರ ಮೇಲೆ ಪ್ರೀತಿ , ವಿಶ್ವಾಸ, ಗೌರವ ಇರಲಿ ಆದರೆ ಸಂಶಯ, ಚುಚ್ಚು ಮಾತುಗಳು, ಜಗಳ ,ಮನಸ್ತಾಪ ,ಅಪಮಾನ ಅಥವಾ ಅಪಮಾನಿಸುವ ಮಾತುಗಳು ಬೇಡ ,

ಏಳನೆಯ ಕಿವಿಮಾತು, ನೀವಿಬ್ಬರೂ ಕೆಲಸ ಮಾಡುತ್ತಿದ್ದೀರಿ ಎಂದರೆ ,ಇದು ನನ್ನ ದುಡ್ಡು ,ಅದು ನಿನ್ನ ದುಡ್ಡು ,ನನ್ನದು , ನಿನ್ನದು, ಎಂಬ ಮನೋಭಾವ ಇರಬಾರದು . ಗಂಡ ಹೆಂಡತಿ ಎಂದರೆ ಒಂದೇ ಎಂದು ಅರ್ಥ .ಮತ್ತು ಅವರ ದುಡಿಮೆಗೆ ಮಾತ್ರ ನಿನ್ನದು -ನನ್ನದು ಎಂಬ ಮಾತು ಯಾಕೆ? ಇತ್ತೀಚೆಗೆ ಗಂಡ ಹೆಂಡತಿಯಲ್ಲಿ ಬಿರುಕು ಬರಲು ಇದು ಕೂಡ ಒಂದು ಮುಖ್ಯವಾದ ಕಾರಣ ಎನ್ನಬಹುದು.

ಈ ಜಗತ್ತಿನಲ್ಲಿ ಅದೃಷ್ಟವಂತ ಯಾರೆಂದರೆ ಕಷ್ಟಕಾಲದಲ್ಲಿ ಗಂಡನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಹೆಂಡತಿ . ಮತ್ತು ಸಾವಿರಾರು ಸಮಸ್ಯೆಗಳು ಇದ್ದರು ಹೆಂಡತಿಯ ಮುಖದಲ್ಲಿ ಪುಟ್ಟ ನಗು ತರುವ ಗಂಡ. ಹೀಗೆ ಈ ಕಿವಿ ಮಾತುಗಳನ್ನು ಗಂಡ ಹೆಂಡತಿ ಜೊತೆಗೆ ಅನುಸರಿಸಿಕೊಂಡು ಹೋದರೆ ಸುಖ-ಸಂಸಾರದ ಜೀವನ ನಡೆಸಬಹುದು.

Leave a Comment