ಸೋಮಾರಿತನದಿಂದ ಹೊರಗೆ ಬರಲು ಇದು ಒಂದು ದಾರಿ ಬಿಟ್ಟರೆ ಮತ್ತೊಂದಿಲ್ಲ

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ನಮ್ಮ ದೇಹದಲ್ಲಿ ಉಂಟಾಗುವ ಆಲಸ್ಯತನವನ್ನು ಹೋಗಲಾಡಿಸಲು ಕೆಲವೊಂದಿಷ್ಟು ಸರಳ ಟಿಪ್ಸ್ ಗಳನ್ನು ಕೊಡುತ್ತೇವೆ ಹಾಗೆ ಯಾವ ಆಹಾರವನ್ನು ತಿಂದರೆ ನಾವು ಇಡೀ ದಿನ ಚುರುಕಾಗಿರಬಹುದು ಇದರ ಬಗ್ಗೆ ಮಾಹಿತಿಯನ್ನು ಕೊಡುತ್ತೇವೆ ಹಾಗಾಗಿ ಈ ಸಂಚಿಕೆಯನ್ನು ಕೊನೆಯವರೆಗೂ ಓದಿ ಸಾಮಾನ್ಯವಾಗಿ ಎಲ್ಲರಿಗೂ ಕೆಲಸ ಮಾಡುವಾಗ ಅಥವಾ ಹೆಚ್ಚು ಕೆಲಸ ಮಾಡಿದಾಗ ಆಯಾಸ ಸುಸ್ತು ಅನಿಸುತ್ತದೆ

ಆಗ ಯಾವುದೇ ರೀತಿಯ ಕೆಲಸವನ್ನು ಮಾಡಲು ಆಸಕ್ತಿ ಇರುವುದಿಲ್ಲ ಇನ್ನು ಕೆಲವರಿಗೆ ಈ ಆಯಾಸದಿಂದ ಸುಸ್ತಾಗಿ ನಮ್ಮಲ್ಲಿ ಸೋಮಾರಿತನ ಉಂಟಾಗುತ್ತದೆ ಈ ಆಯಾಸ ಆಲಸ್ಯ ಸೋಮಾರಿತನವು ನಾವು ಮಾಡುವಂತಹ ಕೆಲಸದಲ್ಲಿ ಪರಿಣಾಮ ಬೀರುತ್ತದೆ ಹಾಗಾಗಿ ನಮ್ಮ ದೇಹದಲ್ಲಿ ಉಂಟಾಗುವ ಸೋಮಾರಿತನವನ್ನು ಹೋಗಲಾಡಿಸಲು ನಾವು ಏನು ಮಾಡಬೇಕು ಎನ್ನುವುದರ ಬಗ್ಗೆ

ಈ ಸಂಚಿಕೆಯಲ್ಲಿ ಮಾಹಿತಿಯನ್ನು ಕೊಡುತ್ತೇವೆ ಹಾಗಾಗಿ ಈ ಸಂಚಿಕೆಯನ್ನು ಕೊನೆಯವರೆಗೂ ಓದಿ ಮೊದಲನೆಯದಾಗಿ ನಾವು ಮಾಡುವಂತಹ ಕೆಲಸ ಊಟ ತಿಂಡಿ ಅಥವಾ ನಿದ್ದೆ ಇವೆಲ್ಲದಕ್ಕೂ ಒಂದು ಟೈಮ್ ಟೇಬಲ್ ಅಂತ ಇರಬೇಕು ಈ ಟೈಮ್ ಟೇಬಲ್ ಅನ್ನು ನಾವು ಸರಿಯಾಗಿ ಮೇಂಟೆನ್ ಮಾಡದೆ ಇದ್ದರೆ ನಮಗೆ ಸೋಮಾರಿತನ ಆಲಸ್ಯ ನಾವು ಮಾಡುವಂತಹ

ಯಾವುದೇ ಕೆಲಸ ಆಗಿರಬಹುದು ಅದರಲ್ಲಿ ಆಸಕ್ತಿ ಇರುವುದಿಲ್ಲ ನಾವು ಮಾಡುವ ಕೆಲಸ ಚೆನ್ನಾಗಿರಬೇಕು ನಮಗೆ ಯಾವುದೇ ರೀತಿಯ ಸುಸ್ತು ಆಯಾಸ ಆಲಸ್ಯ ಆಗಬಾರದು ಎಂದರೆ ನೀವು ಸರಿಯಾದ ಸಮಯಕ್ಕೆ ಪ್ರತಿನಿತ್ಯ ಅದೇ ಟೈಮಿಗೆ ಊಟ ಮಾಡುವುದು ಹಾಗೂ ನಿದ್ದೆ ಮಾಡುವುದನ್ನು ಮಾಡಬೇಕು

ಹಾಗೂ ಮಧ್ಯಾಹ್ನ ಮಲಗುವುದನ್ನು ಅವಾಯ್ಡ್ ಮಾಡಬೇಕು ರಾತ್ರಿ 7 ರಿಂದ 8 ತಾಸು ಮಲಗಬೇಕು ಬೆಳಿಗ್ಗೆ ಬೇಗ ಎದ್ದು 30 ರಿಂದ 45 ನಿಮಿಷದವರೆಗೆ ವ್ಯಾಯಾಮ ಮಾಡಬೇಕು ಆಯಾಸಕ್ಕೆ ಉತ್ತಮವಾದ ಮದ್ದು ಎಂದರೆ ಅದು ವ್ಯಾಯಾಮ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಆಲಸ್ಯ ನಿಮ್ಮ ಹತ್ತಿರ ಕೂಡ ಬರುವುದಿಲ್ಲ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಚುರುಕಾಗುತ್ತದೆ

ಹಾಗೂ ಮನಸ್ಸು ಕೂಡ ಕ್ರಿಯಾಶಾಲಿ ಆಗಿ ಇರುವಂತೆ ನೋಡಿಕೊಳ್ಳುತ್ತದೆ ಅತಿ ಹೆಚ್ಚು ಯಾವಾಗ ಸೋಮಾರಿತನ ಉಂಟಾಗುತ್ತದೆ ಅಂದರೆ ಮಧ್ಯಾಹ್ನ ಮಲಗಿದಾಗ ಅಥವಾ ಮಧ್ಯಾಹ್ನ ಊಟ ಮಾಡಿದ ನಂತರ ಸೋಮಾರಿತನ ಆಲಸ್ಯ ಉಂಟಾಗುವುದು ಸಹಜ ನೀವು ಈ ಸೋಮಾರಿತನ ಹಾಗೂ ಆಲಸ್ಯವನ್ನು ಹೋಗಲಾಡಿಸಲು ಸೋಂಪ ಕಾಳನ್ನು ನೀವು ಬಳಸಬಹುದು

ಇದರಲ್ಲಿ ಫೈಬರ್ ಅಂಶವಿದೆ ವಿಟಮಿನ್ ಸಿ ಇದೆ ಕ್ಯಾಲ್ಸಿಯಂ ಇದೆ ಐರನ್ ಮೆಗ್ನೀಷಿಯಂ ಪೊಟ್ಯಾಶಿಯಂ ಇದೆ ಇದನ್ನು ಸೇವನೆ ಮಾಡುವುದರಿಂದ ನಮ್ಮ ದೇಹ ಅಲಸ್ಯ ಹಾಗೂ ಸೋಮಾರಿತನದಿಂದ ದೂರ ಇರುತ್ತದೆ ಜೊತೆಗೆ ನಾವು ಮಾಡುವಂತಹ ಕೆಲಸದಲ್ಲಿ ಉತ್ಸಾಹದಿಂದ ಇರಲು ಇದು ಸಹಾಯ ಮಾಡುತ್ತದೆ ಜೊತೆಗೆ

ನಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾದರೂ ಸಹ ಆಲಸ್ಯ ಉಂಟಾಗುತ್ತದೆ ಹಾಗಾಗಿ ಪ್ರತಿನಿತ್ಯ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಬೇಕಾಗುತ್ತದೆ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿದರೆ ನೀವು ಕೂಡ ಆಕ್ಟಿವ್ ಆಗಿ ಇರುತ್ತೀರಾ ಆದಷ್ಟು ಜಂಕ್ ಫುಡ್ ಹಾಗೂ ಕರಿದ ಪದಾರ್ಥಗಳನ್ನು ತಿನ್ನುವುದನ್ನು ಅವಾಯ್ಡ್ ಮಾಡಿ ಯಾಕೆ ಅಂದರೆ ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗುತ್ತದೆ

ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗುವುದರಿಂದ ಸುಸ್ತು ನಿಶಕ್ತಿಯಾಗುತ್ತದೆ ಇದರಿಂದ ಆಲಸ್ಯ ಕೂಡ ಉಂಟಾಗುತ್ತದೆ ಆಲಸ್ಯದಿಂದ ಹೊರಗೆ ಬರಬೇಕು ಅಂದರೆ ಜಂಕ್ ಫುಡ್ ತಿನ್ನುವುದು ಆದಷ್ಟು ಕಡಿಮೆ ಮಾಡಬೇಕು ಯಾವುದೇ ಕೆಲಸ ಮಾಡುತ್ತಾ ಇದ್ದರೆ ಅದನ್ನು ನಾಳೆ ಮಾಡೋಣ ನಾಡಿದ್ದು ಮಾಡೋಣ ಎನ್ನುವ ವಿಚಾರ ಮಾಡಬೇಡಿ ಹೀಗೆ ಮಾಡಿದರೆ ಆ ಕೆಲಸವನ್ನು ಮಾಡಲು

ಇನ್ನೊಬ್ಬರು ಬೇಕಾಗುತ್ತದೆ ಹಾಗೆ ಸಮಯ ಕಳೆದು ಹೋದ ಮೇಲೆ ಆ ಕೆಲಸವನ್ನು ಮಾಡಿದರೆ ಅದರ ಫಲವೂ ಕೂಡ ಕಡಿಮೆಯಾಗುತ್ತದೆ ಹಾಗಾಗಿ ನೀವು ಯಾವ ಕೆಲಸವನ್ನು ಮಾಡಬೇಕು ಅಂತ ಅಂದುಕೊಳ್ಳುತ್ತೀರೋ ಅವಾಗಲೇ ಆ ಕೆಲಸವನ್ನು ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.