ತುಳಸಿಯ ಮುಖ್ಯವಾದ ಮಾಹಿತಿಗಳನ್ನು ಈ ಕೆಳಕಂಡಂತೆ ತಿಳಿಸಲಾಗಿದೆ

ನಾವು ಈ ಲೇಖನದಲ್ಲಿ ತುಳಸಿಯ ಮುಖ್ಯವಾದ ಮಾಹಿತಿಗಳನ್ನು ಈ ಕೆಳಕಂಡಂತೆ ತಿಳಿಸಲಾಗಿದೆ. ನಿಮಗೆ ಒಳ್ಳೆಯ ಸಮಯ ಆರಂಭ ಆಗುವ ಮುನ್ನ ತುಳಸಿ ಗಿಡ ಈ ಐದೂ ದೊಡ್ಡ ಸೂಚನೆಗಳನ್ನು ಕೊಡುತ್ತದೆ . ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ . ಇನ್ನೂ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡ ಇರುತ್ತದೆ . ತುಳಸಿ ಗಿಡವನ್ನು ಲಕ್ಷ್ಮಿ ದೇವಿ ಸ್ವರೂಪ ಎಂದು ಹೇಳುವುದರಿಂದ , ಸಾಕಷ್ಟು ಮಹತ್ವವನ್ನು ತುಳಸಿ ಗಿಡ ಹೊಂದಿದೆ.

ಧಾರ್ಮಿಕವಾಗಿ ಅಷ್ಟೇ ಅಲ್ಲದೆ, ಕೂಡ ವೈಜ್ಞಾನಿಕವಾಗಿಯೂ ಸಾಕಷ್ಟು ಮಹತ್ವ ಹೊಂದಿದೆ. ತುಳಸಿ ಗಿಡವನ್ನು ಆರಾಧನೆ ಮಾಡುವುದರಿಂದ , ಸಾಕಷ್ಟು ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು. ಹಾಗೂ ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ . ಜೊತೆಗೆ ಭಗವಾನ್ ಶ್ರೀ ಕೃಷ್ಣನಿಗೆ ತುಳಸಿ ಗಿಡ ಬಹಳ ಇಷ್ಟವಾದದ್ದು. ತುಳಸಿ ಇಲ್ಲದೆ ಕೃಷ್ಣ ಯಾವ ಪ್ರಸಾದವನ್ನು ಸ್ವೀಕರಿಸುವುದಿಲ್ಲ .

ಶ್ರೀ ಕೃಷ್ಣನೇ ಹೇಳಿರುವ ಹಾಗೆ ಪ್ರತಿದಿನ ತುಳಸಿಗೆ ಯಾರು ಪೂಜೆ ಮಾಡುತ್ತಾರೋ, ಅವರ ಬದುಕಿನಲ್ಲಿ ಯಾವುದೇ ಕಷ್ಟ ಬರುವುದಿಲ್ಲ . ತುಳಸಿ ದಳವನ್ನು ಸೇವನೆ ಮಾಡುವವರಿಗೆ ಜೀವನದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ತುಳಸಿಗೆ ಎಲ್ಲಾ ತರದ ರೋಗಗಳನ್ನು ಗುಣ ಮಾಡುವ ಸಾಮರ್ಥ್ಯ ಇದೆ . ತುಳಸಿ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ,

ನಿಮ್ಮ ಮನೆಗೆ ಯಾವುದೇ ನಕಾರಾತ್ಮಕ ಶಕ್ತಿ ಬರುವುದಿಲ್ಲ. ಮನೆಯ ಒಳಗೆ ಯಾವಾಗಲೂ ಧನಾತ್ಮಕ ಶಕ್ತಿ ಇರುವ ಹಾಗೆ ಮಾಡುತ್ತದೆ . ಲಕ್ಷ್ಮೀದೇವಿ ನಿಮ್ಮ ಮನೆಗೆ ಆಗಮಿಸುತ್ತಿರುವ ವೇಳೆ ಕೂಡ, ತುಳಸಿ ಗಿಡದ ಮೂಲಕ ನಿಮಗೆ ಸೂಚನೆ ಸಿಗುತ್ತದೆ . ಹಾಗಿದ್ದಲ್ಲಿ ಒಳ್ಳೆಯ ದಿನಗಳ ಆರಂಭದ ಸೂಚನೆಯನ್ನು ತುಳಸಿ ಗಿಡ ಹೇಗೆ ಕೊಡುತ್ತೆ, ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶಗಳು ಯಾವುವು ಎಂದು ನೋಡೋಣ .

ಒಂದು ವೇಳೆ ನಿಮ್ಮ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ತುಳಸಿ ಗಿಡ ಒಣಗುವುದಕ್ಕೆ ಶುರು ಮಾಡಿದರೆ ಅದು ಅಶುಭ ಅಂತ ಪರಿಗಣಿಸಬೇಕು. ನೀವು ಎಷ್ಟೇ ಕಾಳಜಿ ವಹಿಸಿದ್ದರೂ ಕೂಡ, ಗಿಡ ಒಣಗಿ ಹೋಗುತ್ತಿದೆ ಅಂದರೆ, ಅದರಿಂದ ಸಿಗುವ ಸೂಚನೆ ನಿಮಗೆ ಶೀಘ್ರದಲ್ಲೇ ಹೆಚ್ಚಿನ ಖರ್ಚು ಬೀಳುತ್ತದೆ . ಮತ್ತು ಯಾವುದೋ ಒಂದು ರೀತಿಯಲ್ಲಿ ಕಷ್ಟಗಳು ಬರುತ್ತವೆ ಎನ್ನುವುದಾಗಿದೆ .

ಹಾಗೇ ನಿಮಗೆ ಹೆಚ್ಚು ಹಣ ಖರ್ಚಾಗುತ್ತದೆ ಎನ್ನುವುದನ್ನು ಕೂಡ ಸೂಚಿಸುತ್ತದೆ . ಹೀಗಾಗಿ ಗಿಡ ಒಣಗಳು ಶುರುವಾಗುತ್ತಿದ್ದಂತೆ , ಬೇರೆ ಗಿಡವನ್ನು ತಂದು ನೀಡಬೇಕು ಇನ್ನು ತುಳಸಿ ಗಿಡದ ಎಲೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗಿ ಬೀಳುವುದಕ್ಕೆ ಶುರುವಾದರೆ , ಅದರಿಂದ ನಿಮಗೆ ಯಾವುದೇ ತೊಂದರೆ ಅಥವಾ ಸಮಸ್ಯೆ ಉಂಟಾಗುವುದಿಲ್ಲ .ಗಾಳಿಗೆ ಎಲೆ ಬಿದ್ದಿರುತ್ತದೆ . ನೀವು ಗಾಬರಿ ಪಡಬೇಡಿ. ಆದರೆ ಹಸಿರು ಎಲೆಗಳೇ ಉದುರುತ್ತಿದೆ ಅಂದರೆ ಅದು ಅಶುಭ

ಸೂಕ್ಷ್ಮವಾಗಿ ಗಮನಿಸಿ ಇವುಗಳನ್ನು ಪಾಲಿಸಿ ಅದೃಷ್ಟ ಖುಲಾಯಿಸುತ್ತದೆ. ಸಂಜೆ ಸಮಯದಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚಿರಿ. ಈ ರೀತಿ ಮಾಡುವುದರಿಂದ, ನಿಮ್ಮ ಮನೆಯಲ್ಲಿ ಯಾವುದೇ ಜಗಳ ನಡೆಯುವುದಿಲ್ಲ. ಇನ್ನು ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದ ಪಕ್ಕದಲ್ಲಿ ಬೇರೆ ಗಿಡಗಳು ಹುಟ್ಟುತ್ತಿದ್ದರೆ, ಅದರಿಂದ ಮನೆಗೆ ಶಾಂತಿ ಸಮೃದ್ಧಿಯ ಪ್ರವೇಶ ಆಗುತ್ತದೆ. ಎನ್ನುವುದರ ಸಂಕೇತ ಆಗಿದೆ . ತುಳಸಿ ಕೊಡುವ ಈ ಸೂಚನೆಯಿಂದ ನೀವು ವ್ಯವಹಾರದಲ್ಲಿ ಮತ್ತು ವ್ಯಾಪಾರದಲ್ಲಿ ಏಳಿಗೆ ಕಾಣಬಹುದು . ನಿಮಗೆ ಮುಂದೆ ಒಳ್ಳೆಯದಾಗುತ್ತೋ ಅಥವಾ ಕೆಟ್ಟದಾಗುತ್ತೋ ಎನ್ನುವುದು ಗೊತ್ತಾಗುತ್ತದೆ . ಅದರಲ್ಲೂ ತುಳಸಿ ಗಿಡದ ಪಕ್ಕ ಮತ್ತೊಂದು ತುಳಸಿ ಹುಟ್ಟಿದರೆ, ಸಾಕ್ಷಾತ್ ಲಕ್ಷ್ಮೀಯೇ ನಿಮ್ಮ ಮನೆಗೆ ಬರುತ್ತಿದ್ದಾಳೆ ಅನ್ನೋ ಸೂಚನೆ .

ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದ ಹತ್ತಿರ ನೀವು ಕ್ಲೀನ್ ಮಾಡಿದ್ದರೂ , ಕೂಡ ಜೇಡರ ಹುಳಗಳು ಬಂದಿವೆ ಎಂದರೆ, ಅದರಿಂದ ಗಿಡ ಹಾಳಾಗುತ್ತಿದೆ. ಎಂದು ಅರ್ಥ . ಇದರ ಅರ್ಥ ಹೊರಗಿನ ವ್ಯಕ್ತಿಯೊಬ್ಬರು ನಿಮ್ಮ ಬದುಕಿಗೆ ತೊಂದರೆ ಉಂಟು ಮಾಡುತ್ತಾರೆ ಎಂದು, ಒಂದು ವೇಳೆ ನಿಮ್ಮ ತುಳಸಿ ಗಿಡದ ಮೇಲೆ ಚಿಟ್ಟೆ ಅಥವಾ ಪಕ್ಷಿಗಳು ಕುಳಿತಿದ್ದು, ಆ ನೋಟ ನಿಮಗೆ ಖುಷಿ ತಂದರೆ, ನಿಮಗೆ ಹೆಚ್ಚು ಧನಲಾಭ ಆಗುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಅಥವಾ ನಿಮ್ಮ ಆಸೆಗಳು ನೆರವೇರುತ್ತದೆ. ಎನ್ನುವುದು ಅರ್ಥ . ಜೊತೆಗೆ ಇರುವೆಗಳು ಕಾಣಿಸಿದರು ಇದು ಏಳಿಗೆಯ ಸಂಕೇತ .

ಹಾಗಾಗಿ ಮನೆಯ ಮುಂದೆ ಹಾಕಿರುವ ತುಳಸಿ ಗಿಡವನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು. ತುಳಸಿ ಗಿಡ ಇರುವ ಮನೆಯಲ್ಲಿ ಮಾಂಸಹಾರ ಮಧ್ಯ ಪಾನವನ್ನು ಮಾಡಲೇಬಾರದು. ಇದು ತುಳಸಿಯ ಕೋಪಕ್ಕೆ ಕಾರಣವಾಗುತ್ತದೆ. ತುಳಸಿ ಗಿಡ ಯಾವತ್ತಿಗೂ ಶುದ್ಧವಾದ ಸ್ಥಳದಲ್ಲಿ ಇರಬೇಕು. ಅಶುದ್ಧವಾದ ಸ್ಥಳಗಳಲ್ಲಿ ತುಳಸಿಯನ್ನು ನೆಡಬಾರದು. ತುಳಸಿಯನ್ನು ನೆಟ್ಟಿರುವ ಪ್ರವೇಶವನ್ನು ಬಹಳ ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು . ಒಟ್ಟಿನಲ್ಲಿ ಮನೆಯ ಮುಂದೆ

ಇರುವಂತಹ ತುಳಸಿ ಮನೆಗೆ ಬರುವ ನಕಾರಾತ್ಮಕ ಶಕ್ತಿಗಳನ್ನು ತಡೆದು ನಿಲ್ಲಿಸುತ್ತಾಳೆ. ಅನ್ನೂ ನಂಬಿಕೆ ಆಗಿನ ಕಾಲದಿಂದಲೂ ಇದೆ. ಹೀಗಾಗಿ ಮನೆಯ ಮುಂದೆ ಸಾಕ್ಷಾತ್ ಲಕ್ಷ್ಮಿ ದೇವಿಯೇ ಇದ್ದಾಳೆ ಅನ್ನೋ ಮನೋಭಾವದಲ್ಲಿ ತುಳಸಿಯನ್ನು ಬಹಳ ನಾಜೂಕಿನಿಂದ ನೋಡಿಕೊಂಡು , ಭಕ್ತಿಯಿಂದ ಒಳ್ಳೆಯ ಮನಸ್ಸಿನಿಂದ ಪೂಜೆಯನ್ನು ಸಲ್ಲಿಸಿದ್ದೇ ಆದಲ್ಲಿ ನಿಮಗೆ ಮಾತೆ ಮಹಾಲಕ್ಷ್ಮಿಯ ಅನುಗ್ರಹ ಆಗುತ್ತದೆ.

Leave a Comment