ಕನ್ಯಾ ರಾಶಿ: 5 ವರ್ಷದ ಗುರು ಫಲ

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರ 5 ವರ್ಷದ ಗುರುವಿನ ಫಲ ಹೇಗಿರುತ್ತದೆ ಎಂಬುದನ್ನು ನಾವು ಇಲ್ಲಿ ತಿಳಿಯೋಣ . ಗುರು ಕತ್ತಲೆಯನ್ನು ಓಡಿಸುವವನಾಗಿ ಇರುತ್ತಾನೆ .ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗುತ್ತಾನೆ .ಸಂಸ್ಕೃತದಲ್ಲಿ ‘ಗು ‘ ಎಂದರೆ ಅಂಧಕಾರ ಮತ್ತು “ರು’ ‘ ಎಂದರೆ ಬೆಳಕು .ಸಾವಿರಾರು ಸೂರ್ಯ ಚಂದ್ರ ರಿಂದಲೂ ಆಗದೇ ಇರುವ ಅಜ್ಞಾನವನ್ನು ದೂರ ಮಾಡುವ ಕೆಲಸ ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ಸಾಧ್ಯ .

ಗುರು ಇಲ್ಲದೇ ಯಾವುದು ಇಲ್ಲ . ಜಾತಕದಲ್ಲಿ ಎಷ್ಟೇ ಶ್ರೇಷ್ಠವಾದ ಯೋಗವಿದ್ದರೂ ಗುರು ಇಲ್ಲದೆ ಅಪೂರ್ಣ ವೆನಿಸುತ್ತದೆ .ಅದಕ್ಕೆ ಗುರು ಹಿರಿಯರು ಹೇಳಿರುವ ಹಾಗೆ “ನಾ ಗುರು ರಾಧಿಕಂ ತತ್ವಂ ನಾ ಗುರು ರಾಧಿಕಂ ತಪಃ ತತ್ವ ಜ್ಞಾನ ಪರಂ ನಾಸ್ತಿ ತಸ್ಮೈ ಶ್ರೀ ಗುರುವೇ ನಮಃ ” ಅಂದರೆ ಗುರುವಿಗಿಂತ ಯಾವ ತತ್ವವು ಶ್ರೇಷ್ಠವಲ್ಲ . ಗುರುವಿಗಿಂತ ಕಠಿಣತೆ ಇಲ್ಲ .

ಗುರು ಕಲಿಸಿದ ಜ್ಞಾನಕ್ಕಿಂತ ಮೀರಿದ್ದು ಏನು ಇರುವುದಿಲ್ಲ .ಅಂತಹ ಗುರುವಿಗೆ ನಮಸ್ಕಾರ ಎಂದು ಹೇಳಲಾಗುತ್ತದೆ . ಗರ್ಭದಲ್ಲೇ ಸತ್ತ ಮಗು ಜೀವಂತವಾಗಿರುವ ಮಗುವಿನ ಕಥೆಯನ್ನು ಮಹಾಭಾರತದಲ್ಲಿ ಕೇಳಿರುತ್ತೇವೆ .ಅದೇ ತರ ಬೃಹಸ್ಪತಿ ಕೂಡ ಗರ್ಭದಲ್ಲೇ ಸತ್ತು ಹುಟ್ಟಿರುತ್ತಾನೆ .ಪುತ್ರ ಕಾರಕ ವಾಣಿ ಕಾರಕ ಕೋಶಾಧ್ಯಕ್ಷ ಅನ್ನುವುದು ನಿಮಗೆ ತಿಳಿದಿರುತ್ತದೆ . ಅದರ ಜೊತೆಗೆ ಆಹಾರಗಳ ಕಾರಕ ಕೂಡ ಇದೆ .ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆಗಳು ದೂರವಾಗುವುದು ಕೂಡ ಗುರುವಿನಿಂದಲೇ .

ವೇದಿಕ ಜ್ಯೋತಿಷ್ಯದಲ್ಲಿ ಗುರುವೇ ಶ್ರೇಷ್ಠ ಎಂದು ಹೇಳಲಾಗಿದೆ . ತನಗೆ ತಾನೇ ಸಾಟಿ ಎಂದು ಹೇಳುವ ಈ ಗುರುವಿನಿಂದ ಕನ್ಯಾ ರಾಶಿಯವರಿಗೆ ಐದು ವರ್ಷಗಳಲ್ಲಿ ಯಾವ ಯಾವ ಪ್ರಯೋಜನಗಳು ಇವೆ ಎಂಬುದನ್ನು ಯಾವಾಗ ಮೇಲುಗೈ ಮತ್ತು ಯಾವಾಗ ಸೋಲುವ ಭಯ ಮತ್ತು ಅದೃಷ್ಟ ಪರೀಕ್ಷೆ ಮಾಡುವುದಕ್ಕೆ ಒಳ್ಳೆಯ ಸಮಯ ಯಾವಾಗ ಎಂಬುದನ್ನು ನಾವು ಈ ಲೇಖನದಲ್ಲಿ ನೋಡಬಹುದು . ಏಪ್ರಿಲ್ 13 2022 ಕ್ಕೆ ಗುರು ಮೀನ ರಾಶಿಗೆ ಬಂದಿರುತ್ತಾನೆ . ಇಲ್ಲಿ ಏಪ್ರಿಲ್ 22 2023ರ ವರೆಗೆ ಇರುತ್ತಾನೆ .

ಗುರುವಿನ ದೃಷ್ಟಿಯಿಂದ ಹೇಳುವುದಾದರೆ ಈಗ ನಡೆಯುತ್ತಿರುವ ಸಮಯ ನಿಮಗೆ ಅತ್ಯಂತ ಶುಭ ಎಂದು ಹೇಳಲಾಗುತ್ತದೆ .ಕಂಕಣ ಭಾಗ್ಯ ಕೂಡಿ ಬರುವುದಕ್ಕೆ ಗುರುವಿನ ಪಾತ್ರ ಅತ್ಯಂತ ಮುಖ್ಯ .ಗುರುಬಲ ಇದ್ದರೆ ಮಾತುಕತೆ ಮುಂದುವರೆಯುತ್ತದೆ . ಮದುವೆಯಾಗದೆ ಇರುವವರಿಗೆ ಮದುವೆ ಕೂಡಿ ಬರುತ್ತದೆ . ನಿಂತು ಹೋಗಿರುವ ಮದುವೆಗಳಿಗೆ ಕೂಡ ಈ ಸಮಯ ತುಂಬಾ ಉಪಯುಕ್ತ .ಅಡ್ಡಿ ಆತಂಕಗಳು ಇರುವವರೆಗೂ ಕೂಡ ಗುರು ಈ ಸಮಯದಲ್ಲಿ ತೀರ್ಪು ನೀಡುತ್ತಾನೆ .

ಮನೆ ಕಟ್ಟುವವರು ಅರ್ಧಕ್ಕೆ ನಿಂತು ಹೋಗಿದ್ದರೆ ಈ ಸಮಯದಲ್ಲಿ ಮುಂದುವರೆಸಲು ತುಂಬಾ ಪ್ರಯೋಜನಕಾರಿಯಾಗಿದೆ .ಮನೆಯಲ್ಲಿ ದೇವತಾ ಕಾರ್ಯ ಗೃಹ ಪ್ರವೇಶ ಮಾಡಲು ಇದು ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ .ಶುಭ ಕಾರ್ಯಗಳಿಗೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಲಾಗುತ್ತದೆ . ಕೆಲವರು ಪಂಚಮ ಶನಿಯಿಂದ ತಾಳ್ಮೆ ಕಳೆದುಕೊಂಡಿರುತ್ತಾರೆ . ಗುರು ಇಲ್ಲಿ ತಾಳಿದವನು ಬಾಳಿಯಾನು ಎಂಬ ಪಾಠವನ್ನು ಹೇಳಿ ಕೊಡುತ್ತಾನೆ. ಶನಿ ಕಾಟದಿಂದ ಬೇಸತ್ತು ಹೋದ ನಿಮಗೆ ಗುರುವಿನಿಂದ ಭರ್ಜರಿ ಬಹುಮಾನ ಸಿಗುತ್ತದೆ. ಧನ ಸಂಪತ್ತು ಬರುವ ಸೂಚನೆ ತೋರುತ್ತಾನೆ .

ಹಣ ಬರುವ ಮೂಲಗಳು ಹೆಚ್ಚಾಗುತ್ತಾ ಹೋಗುತ್ತದೆ . ಸಾಲ ಕೊಟ್ಟಿರುವುದು ವಾಪಸ್ಸು ಬರುವ ಸಾಧ್ಯತೆ ಕೂಡ ಇದೆ. ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚಿನ ಬರುವ ಸಾಧ್ಯತೆ ಇರುತ್ತದೆ . ಉದ್ಯೋಗದಲ್ಲಿ ಸಮಸ್ಯೆಗಳು ಇದ್ದರೆ ಅದಕ್ಕೆ ಪರಿಹಾರ ಕೂಡ ಇವರಿಗೆ ಸಿಗುತ್ತದೆ. ದೊಡ್ಡ ದೊಡ್ಡ ಹುದ್ದೆಗಳು ಕೂಡ ಸಿಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಇವರು ಪ್ರಾಮಾಣಿಕತೆಯನ್ನು ತೋರುತ್ತಾರೆ. ಕೀರ್ತಿ ಯಶಸ್ಸು ಗೌರವ ನಿಮ್ಮನ್ನು ಹುಡುಕಿಕೊಂಡು ಅದಾಗಿಯೇ ಬರುತ್ತದೆ. ಅಥವಾ ಬಹುಮಾನಗಳು ಬರುವ ಸಾಧ್ಯತೆ ಇರುತ್ತದೆ .

ತಂದೆ- ತಾಯಿ ಅಣ್ಣ ತಮ್ಮ ಸ್ನೇಹಿತರ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಾರೆ. ಮನೆಯಲ್ಲಿ ಶಾಂತಿ ನೆಮ್ಮದಿ ಆರೋಗ್ಯದ ಸಮಸ್ಯೆಗಳು ಕೂಡ ಬರುವುದಿಲ್ಲ . ಇದೆಲ್ಲಾ ಇವರಿಗೆ ಖುಷಿಯ ವಿಚಾರವೇ ಆಗಿರುತ್ತದೆ. ಏಪ್ರಿಲ್ 22 2023 ಕ್ಕೆ ಗುರು ಅಷ್ಟಮ ಸ್ಥಾನವಾದ ಮೇಷ ರಾಶಿಗೆ ಹೋಗುತ್ತಾನೆ . ಅಂದರೆ ಮೇ 1 2024ರ ವರೆಗೆ ಸ್ವಲ್ಪ ಹುಷಾರಾಗಿ ಇರಬೇಕು .ಹಣಕಾಸಿನಲ್ಲಿ ಲೆಕ್ಕಾಚಾರ ಇಡಬೇಕಾಗುತ್ತದೆ . ನೀವು ಕಂಪನಿಗಳನ್ನು ನಡೆಸುತ್ತಿದ್ದರೆ ಅದರಲ್ಲಿ ಗೋಲ್ಮಾಲ್ ಆಗಿ ನಿಮ್ಮ ತಲೆಗೆ ಬರುವ ಸಾಧ್ಯತೆ ಇರುತ್ತದೆ .

ನೀವು ಸ್ನೇಹಿತರನ್ನು ನಂಬುವುದರಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ .ಈ ಸಮಯ ನಿಮಗೆ ಅದೃಷ್ಟ ದಾಯಕವಾಗಿ ಇರುವುದಿಲ್ಲ .ಬೇಡದೆ ಇರುವ ಸುತ್ತಾಟಗಳು ಉಂಟಾಗುತ್ತದೆ .ಮನಸ್ಸಿಗೆ ನೋವಾಗುವ ಘಟನೆಗಳು ಕೂಡ ನಡೆಯುತ್ತದೆ .ಇದು ಎಲ್ಲರಿಗೂ ಅನ್ವಯಿಸುವುದಿಲ್ಲ . ಸದಾ ಗುರು ಪೂಜೆ ಭಜನೆ ಮಾಡುವವರೆಗೆ ಸ್ವಲ್ಪ ನೀಚ ಸ್ಥಾನದಲ್ಲಿದ್ದರೂ ಗುರು ಒಳ್ಳೆಯದನ್ನು ಮಾಡುತ್ತದೆ . ಆದರೆ ಕೆಲವರಿಗೆ ಈ ರೀತಿ ಅನುಭವ ಹೆಚ್ಚಾಗಿ ಆಗುತ್ತದೆ .

ಇನ್ನು ಕೆಲವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಜೀವನ ನಡೆಸುತ್ತಾರೆ . ಬೇವು ಒಂದೇ ಇದ್ದರೂ ಜೀವನ ಚೆನ್ನಾಗಿರುವುದಿಲ್ಲ . ಬೆಲ್ಲ ಒಂದೇ ಇದ್ದರು ಆರೋಗ್ಯ ಚೆನ್ನಾಗಿರುವುದಿಲ್ಲ .ಎರಡು ಇದ್ದಾಗ ಮಾತ್ರ ಜೀವನ ಸಾಧ್ಯ .ಗುರು ಬೃಹಸ್ಪತಿ ಅನ್ನು ಮತ್ತು ಗುರುಗಳ ಸ್ಥಾನದಲ್ಲಿ ಇರುವವರನ್ನು ರಾಯರ ಅಥವಾ ರಾಘವೇಂದ್ರ ಸ್ವಾಮಿಯನ್ನು ಪೂಜಿಸಬೇಕು .

“ದೇವ ಮಂತ್ರಿ ವಿಶಾಲಾಕ್ಷ ಸದಾ ಲೋಕ ಹಿತೇ ರತಹ ಅನೇಕ ಶಿಷ್ಯ ಸಂಪೂರ್ಣ ಪೀಡಾಂ ಹರತು ಮೇ ಗುರು ಹು” ಈ ಮಂತ್ರವನ್ನು ಕಷ್ಟ ಕಾಲದಲ್ಲಿ 108 ಬಾರಿ ಹೇಳಬೇಕಾಗುತ್ತದೆ .ಪೂರ್ತಿಯಾಗಿ ಕಷ್ಟ ದೂರವಾಗಿದೆ ಇದ್ದರೂ ನಮ್ಮ ನೆಮ್ಮದಿ ಗೋಸ್ಕರ ಅಥವಾ ಪರಿಹಾರ ಮಾರ್ಗ ಸಿಗುತ್ತದೆ. ಮತ್ತೊಂದು ಒಳ್ಳೆಯದಾಗುವುದು ಸಮಯ ಬರುತ್ತದೆ ಎಂದು ಹೇಳಬಹುದು . ಮೇ 1. 2024 ರಿಂದ ಜನವರಿ 25. 2027ರ ವರೆಗೆ ಅಂದರೆ ಮಧ್ಯದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಮನಸ್ತಾಪಗಳು ಉಂಟಾಗಬಹುದು .

ಗುರು ಇದನ್ನು ದೊಡ್ಡದಾಗಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಬಹುದು . ಗುರು ಅಷ್ಟಮದಲ್ಲಿ ಇರುವುದರಿಂದ ಯಾವುದು ತಪ್ಪು ಯಾವುದು ಸರಿ ಏನು ಮಾಡಿದರೆ ಒಳ್ಳೆಯದು ಜೀವನದಲ್ಲಿ ಮುಂದೆ ಹೋಗುವುದಕ್ಕೆ ಗುರು ಮಾರ್ಗದರ್ಶನವನ್ನು ನೀಡುತ್ತಾನೆ . ಈ ರಾಶಿಯವರು ಏನು ಮಾಡದೇ ಇದ್ದರೂ ಪರವಾಗಿಲ್ಲ ತೊಂದರೆ ಕೊಡಬಾರದು ಎಂಬ ನಿಯಮ ಹೊಂದಿರುತ್ತಾರೆ. ಯಾವಾಗಲೂ ಇವರಿಗೆ ಧನಾತ್ಮಕ ಚಿಂತನೆಗಳು ಇರುತ್ತದೆ .

ಇವರಿಗೆ ಅಗತ್ಯಕ್ಕೆ ತಕ್ಕಂತೆ ಮಾತನಾಡುವ ಗುಣ ಗುರುವಿನಿಂದ ಬಂದಿರುತ್ತದೆ .ಆಧ್ಯಾತ್ಮಿಕತೆ ದೇವರ ಮೇಲೆ ಭಕ್ತಿ ತೋರಿಸಲು ಶುರುಮಾಡುತ್ತಾರೆ . ಗುರು ಭಕ್ತಿ ಗುರುವಿನ ಸೇವೆಯನ್ನು ಮಾಡಲು ಹೆಚ್ಚಾಗಿ ಮನಸ್ಸು ಬಯಸುತ್ತದೆ . ಶಿಕ್ಷಣದ ವಿಚಾರದಲ್ಲಿ ಧನಾತ್ಮಕ ಶಕ್ತಿಯನ್ನು ಕಾಣಬಹುದು .ಇವರು ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುವುದರಿಂದ ಆರೋಗ್ಯ ಕೆಡದೆ ಚೆನ್ನಾಗಿರುತ್ತದೆ . ಶಾಲಾ ಕಾಲೇಜುಗಳಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆಯುತ್ತಾರೆ .

ಯಾರೇ ಕಷ್ಟದಲ್ಲಿ ಇದ್ದರೂ ಬೇಸರವನ್ನು ಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ .ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಈ ರಾಶಿಯವರಿಗೆ ಇರುತ್ತದೆ . ಗಟ್ಟಿಯಾಗಿ ನಿಂತು ಛಲವನ್ನು ಎದುರಿಸುವ ಗುಣವನ್ನು ಕಾಣಬಹುದು .ವೈವಾಹಿಕ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಾರೆ . ಮಾಡುವ ಕೆಲಸದಲ್ಲಿ ಅಡಚಣೆಗಳು ಬರುವುದು ಕಡಿಮೆ ಇರುತ್ತದೆ .ಇವರಿಗೆ ಗುರುಬಲ ಹೆಚ್ಚಾಗಿರುವುದರಿಂದ ಯಾವುದೇ ಶಾಪಗಳು ಕೂಡ ಇವರಿಗೆ ತಟ್ಟುವುದಿಲ್ಲ .ಸಂತೋಷ ಧೈರ್ಯ ನಗುವಿನ ಜೊತೆಗೆ ಸಹ ಲವಲವಿಕೆ ಇಂದ ದಿನ ಕಳೆಯಲು ಬಯಸುತ್ತಾರೆ .ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಾಣಬಹುದು ಎಂದು ಹೇಳಲಾಗಿದೆ.

Leave a Comment