ಹೊಸ್ತಿಲ ನಿಯಮ

0

ನಾವು ಈ ಲೇಖನದಲ್ಲಿ ಮನೆಯವರೆಗೂ ಬರುವ ಲಕ್ಷ್ಮಿ ಮನೆಯೊಳಗೆ ಏಕೆ ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣಗಳು ಏನು ಎಂದು ತಿಳಿದುಕೊಳ್ಳೋಣ. ಮನೆಯವರೆಗೂ ಬರುವ ಲಕ್ಷ್ಮಿ ಮನೆಯೊಳಗೇ ಏಕೆ ಬರುವುದಿಲ್ಲ . ಹೊಸ್ತಿಲ ಪೂಜೆ ಬಗ್ಗೆ ತಿಳಿಯಿರಿ. ಹೊಸ್ತಿಲಪೂಜೆಯನ್ನು ಕೇವಲ ಹಬ್ಬ ಹರಿದಿನಗಳಲ್ಲಿ ಮಾಡದೇ ದಿನನಿತ್ಯ ಮಾಡುಬೇಕು. ಮುತ್ತೈದೆಯರು ಬೆಳಗ್ಗಿನ ಜಾವ ಎದ್ದು ,

ಸ್ನಾನ ನಿತ್ಯ ಕರ್ಮಗಳನ್ನು ಮುಗಿಸಿ , ದೇವರಿಗೆ ದೀಪ ಹಚ್ಚಿ ದೇವರ ಕೋಣೆಯ ಹೊಸ್ತಿಲು ಮತ್ತು ಮುಖ್ಯದ್ವಾರದ ಹೊಸ್ತಿಲನ್ನು ಚೆನ್ನಾಗಿ ತೊಳೆಯಬೇಕು. ಹೊಸ್ತಿಲ ಪೂಜೆಯು ಅತ್ಯಂತ ಪ್ರಮುಖವಾದದ್ದು. ಪ್ರತಿನಿತ್ಯ ಸಂಜೆ ತಾಯಿ ಪಾರ್ವತಿಯು ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿಂದ ಬಾಗಿಲ ಹೊಸ್ತಿಲನ್ನು ಪೂಜಿಸುವ ಪದ್ದತಿ ಇದೆ.

ಸಂಜೆ ಗೋಧೂಳಿ ಸಮಯಕ್ಕೂ ಮುನ್ನ ಹೊಸ್ತಿಲನ್ನು ಶುದ್ಧವಾದ ನೀರಿನಿಂದ ತೊಳೆದು, ಅರಿಶಿಣದಿಂದ ಸಂಪೂರ್ಣವಾಗಿ ಅಲಂಕರಿಸಿ ಕುಂಕುಮ, ಚಂದ್ರ ಹಚ್ಚಿ ವಿವಿಧ ಹೂಗಳಿಂದ ಶೃಂಗರಿಸಿ ತಳಿರು, ತೋರಣ, ಹೂ ಮಾಲೆಗಳಿಂದ ಸುಂದರ ಗೊಳಿಸಬೇಕು. ನಂತರ ಗೋಧೂಳಿ ಸಮಯದಲ್ಲಿ ಹಣ್ಣು ಕಾಯಿಗಳೊಂದಿಗೆ ಹೊಸ್ತಿಲ ಪೂಜೆಯನ್ನು ಕೈಗೊಳ್ಳುವುದು ಸಂಪ್ರದಾಯ. ಬಾಗಿಲ ಬಳಿ ಮಣ್ಣಿನ ಹಣತೆ ಹಚ್ಚಿ , ಧೂಪ ದೀಪಗಳಿಂದ ಪೂಜಿಸುವುದು ವಾಡಿಕೆ . ನಾವು ಹೊಸ್ತಿಲ ಪೂಜೆ ಬಗ್ಗೆ ತಿಳಿದುಕೊಳ್ಳೋಣ.

ರಂಗೋಲಿ ಮಹತ್ವ ಅಗಾಧವಾಗಿದೆ. ರಂಗೋಲಿಗೆ ದುಷ್ಟ ಶಕ್ತಿಗಳನ್ನು ತಡೆಯುವ ಶಕ್ತಿಯಿದೆ. ಹಾಗೂ ಪ್ರತಿಯೊಬ್ಬರು ಹೊಸ್ತಿಲ ಪೂಜೆಯನ್ನು ಮಾಡಬೇಕು. ಹೊಸ್ತಿಲು ಪೂಜೆಗೆ ಬೇಕಾಗುವ ಸಾಮಗ್ರಿಗಳೆಂದರೆ , ಹೂವು ಮತ್ತು ತಾಮ್ರದ ತಂಬಿಗೆಯಲ್ಲಿ ನೀರು ಕಡಲೆಬೇಳೆ ,ಅರಿಶಿಣ, ಕುಂಕುಮ , ಮತ್ತು ಅಕ್ಷತೆ ಮತ್ತು ಸಕ್ಕರೆ ಮತ್ತು ಚಂದನ ಹಾಗೂ ಪೂಜೆ ಮಾಡಲು ಕರ್ಪೂರ ಮತ್ತು ಊದುಬತ್ತಿ ಬೇಕಾಗುತ್ತದೆ. ಹಾಗೂ ಒಂದು ಬೌಲ್ ಗೆ ಹೊಸ್ತಿಲಿಗೆ ಬೇಕಾಗುವ ಚಂದನ , ಅರಿಶಿಣ ,ನೀರು ಹಾಕಿ ಇಡಬೇಕು . ಮೊದಲು ಹೊಸ್ತಿಲನ್ನು ನೀರು ಹಾಕಿ ತೊಳೆಯಬೇಕು.

ಹೊಸ್ತಿಲ ಪೂಜೆಯನ್ನು ವಾರಕ್ಕೆ ಎರಡು ಬಾರಿ ಮಾಡಬೇಕು. ಹಾಗೂ ಹೊಸ್ತಿಲನ್ನು ನೀರಿನಿಂದ ತೊಳೆದ ನಂತರ, ಮಡಿ ಬಟ್ಟೆಯಿಂದ ಒರೆಸಬೇಕು. ಹಾಗು ಹೊಸ್ತಿಲಿಗೆ ರಂಗೋಲಿ ಹಾಕಬೇಕು. ಐದು ಗೆರೆಯ ಹಾಗೆ ರಂಗೋಲಿ ಹಾಕಬೇಕು ಲಕ್ಷ್ಮಿ ದೇವಿ ಒಳಗೆ ಬರಲು ನಾವು ಅವಳಿಗೆ ಒಳಗೆ ಬರುವಂತ ರಂಗೋಲಿಯ ಮೂಲಕ ಬರ ಮಾಡಿಕೊಳ್ಳಬಹುದು. ಹಾಗೆ ಅರಿಶಿಣ ಮತ್ತು ಚಂದನದ ಮಿಶ್ರಣವನ್ನು ಹೊಸ್ತಿಲಿಗೆ ಹಚ್ಚಬೇಕು . ಹೀಗೆ ಹಚ್ಚುವುದರಿಂದ ಯಾವುದೇ ದುಷ್ಟ ಶಕ್ತಿಗಳು ದೂರವಾಗುತ್ತದೆ.

ಹೊಸ್ತಿಲ ಪೂಜೆ ಎನ್ನುವುದು ಮನೆಗೆ ರಕ್ಷಾ ಕವಚವಿದ್ದಂತೆ , ಹೀಗೆ ಹೊಸ್ತಿಲ ಪೂಜೆಯನ್ನು ಮಾಡುವುದರಿಂದ ವರ ಮಹಾಲಕ್ಷಿ ಒಲಿಯುತ್ತಾಳೆ . ಹಾಗೂ ಹೊಸ್ತಿಲಿಗೆ ಅರಿಶಿಣ, ಕುಂಕುಮವನ್ನು ಹಚ್ಚಬೇಕು. ಹೊಸ್ತಿಲ ಬಲಗಡೆ ಹಾಗೂ ಎಡಗಡೆ ಮತ್ತು ಮಧ್ಯದಲ್ಲಿ ಹಚ್ಚಬೇಕು ಮತ್ತು ಹೂವನ್ನು ಹಾಕಬೇಕು . ಹಾಗೂ ಹೊಸ್ತಿಲ ಮಧ್ಯದಲ್ಲಿ ತಾಮ್ರದ ತಂಬಿಗೆಯಲ್ಲಿ ನೀರನ್ನು ಇಡಬೇಕು . ತಾಯಿ ಗಂಗಮ್ಮನ ಪ್ರಾರ್ಥನೆ ಮಾಡಬೇಕು .

ಮೊದಲು ಊದುಬತ್ತಿ ಹಚ್ಚಿ ಪೂಜೆ ಮಾಡಬೇಕು . ಮೊದಲು ಕುಲ ದೇವರನ್ನು ನೆನಪಿಸಿಕೊಳ್ಳಬೇಕು. ಹಾಗೂ ಕರ್ಪೂರ ಹಚ್ಚಿ ಆರತಿ ಬೆಳಗಬೇಕು. ಹಾಗೂ ಕಡಲೆ ಮತ್ತು ಸಕ್ಕರೆಯನ್ನು ಹೊಸ್ತಿಲ ಮೂರು ಭಾಗಕ್ಕೆ ಹಾಕಿ ನೈವೇದ್ಯ ಮಾಡಬೇಕು . ಹೊಸ್ತಿಲ ಪೂಜೆ ಮಾಡುವಾಗ ಮನೆ ಮುಂದೆ ಚಪ್ಪಲಿ ಮತ್ತು ಪೊರಕೆ ಇರಬಾರದು . ಮನೆಯ ಬಾಗಿಲಿಗೆ ಭತ್ತದ ತೋರಣವನ್ನು ಹಾಕುವುದು ಉತ್ತಮ . ಈ ತೋರಣ ಒಂದು ವರ್ಷದ ಅವಧಿಗೆ ಬರುತ್ತದೆ . ಹಾಗೂ ಸಮೃದ್ಧಿಯ ಸಂಕೇತವಾಗಿದೆ .

ಶ್ರದ್ಧೆಯಿಂದ ಮಾಡುವ ಪೂಜೆಗೆ ದೇವರು ಖಂಡಿತ ಫಲ ಕೊಡುತ್ತಾನೆ, ಎಂಬ ಮಾತಿದೆ. ಹಿಂದೂ ಧರ್ಮದಲ್ಲಿ ಪೂಜೆಗೆ ಪೂಜಾ ವಿಧಾನಕ್ಕೆ ಮತ್ತು ಪೂಜಾ ಸಾಮಗ್ರಿಗಳಿಗೆ ವಿಶೇಷ ಮಹತ್ವವಿದೆ. ದೇವರ ಪೂರ್ಣ ಕೃಪೆಗೆ ಪಾತ್ರರಾಗಬೇಕು ಅಂದರೆ ಕೆಲವೊಂದು ನಿಯಮಗಳನ್ನು ನಿಷ್ಠೆಯಿಂದ ಪಾಲಿಸಬೇಕಾಗುತ್ತದೆ . ಕೆಲವೊಮ್ಮೆ ಪೂಜೆಯ ಸಮಯದಲ್ಲಿ ತಿಳಿಯದೇ ಆಗುವ ತಪ್ಪಿನಿಂದ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪೂಜೆಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಪೂಜಾ ಸಾಮಗ್ರಿಗಳಿಗೂ ಇರುತ್ತದೆ.

ಶಾಸ್ತ್ರದಲ್ಲಿ ಹೇಳಿರುವಂತೆ ಕೆಲವೊಂದು ಪೂಜಾ ಸಾಮಗ್ರಿಗಳನ್ನು ನಿಯಮ ಬದ್ಧವಾಗಿ ಉಪಯೋಗಿಸಿದಲ್ಲಿ ಮಾತ್ರ ಪೂಜೆಯ ಫಲ ಸಿಗುವುದು . ಪೂಜೆಗೆ ಅನೇಕ ಪರಿಕರಗಳನ್ನು ಬಳಸುತ್ತೇವೆ . ಅಷ್ಟೇ ಅಲ್ಲದೆ ಹಿಂದೂ ಧರ್ಮದಲ್ಲಿ ಕೆಲವನ್ನು ಪವಿತ್ರವೆಂದು ಅದನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಬೇಕೆಂಬ ನಿಯಮವಿದೆ .

ಯಾರ ಮುಖ್ಯ ದ್ವಾರದ ಬಾಗಿಲು ಸ್ವಾಗತವನ್ನು ಕೋರುವ ರೀತಿಯಲ್ಲಿ ಅಲಂಕೃತವಾಗಿ, ಧೂಪಗಳಿಂದ ಕೂಡಿರುತ್ತದೆ ಆ ಮನೆಗೆ ಮಹಾಲಕ್ಷ್ಮಿ ದೇವಿಯು ಇಷ್ಟಪಟ್ಟು ಒಳಗೆ ಬರುತ್ತಾಳೆ . ಎಂದು ಹೇಳಲಾಗುತ್ತದೆ . ಹಾಗಾಗಿ ಮನೆಯ ಸಮೃದ್ಧಿಗಾಗಿ ಮನೆಯ ಏಳಿಗೆಗಾಗಿ, ಮನೆಯ ಸದಸ್ಯರ ಒಳಿತಿಗಾಗಿ ಹೊಸ್ತಿಲ ಪೂಜೆ ಬಹಳ ಮುಖ್ಯವಾಗಿರುತ್ತದೆ. ಅಷ್ಟೇ ಅಲ್ಲದೆ ಮನೆಯ ಒಳಗಡೆ ಋಣಾತ್ಮಕ ಶಕ್ತಿಗಳು ಆಗಲಿ, ಸಕಾರಾತ್ಮಕ ಶಕ್ತಿಗಳಾಗಲಿ ಪ್ರವೇಶ ಮಾಡುವುದು

ಮನೆಯ ಮುಖ್ಯದ್ವಾರದಿಂದ ಆಗಿರುವುದರಿಂದ , ಮನೆಯ ಮುಖ್ಯದ್ವಾರವನ್ನು ಯಾವಾಗಲೂ ಸ್ವಚ್ಚತೆಯಿಂದ ಇಟ್ಟುಕೊಳ್ಳುವುದು. ಅರಿಶಿಣ ಕುಂಕುಮವನ್ನು ಇಟ್ಟು ಪೂಜೆಯನ್ನು ಮಾಡುವುದರಿಂದ , ಅಲ್ಲಿ ದೈವಿಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಮನೆಯ ಒಳಗಡೆ ಯಾವುದೇ ರೀತಿಯ ಖುಣಾತ್ಮಕ ಶಕ್ತಿಗಳ ಪ್ರವೇಶವನ್ನು ಮಾಡುವುದಿಲ್ಲ, ಅಷ್ಟೇ ಅಲ್ಲದೆ ಮನೆಯಲ್ಲಿ ಮುಖ್ಯದ್ವಾರದ ಬಾಗಿಲು ಸ್ವಚ್ಚವಾಗಿ ಇಲ್ಲ ಎಂದರೆ, ದರಿದ್ರ ಲಕ್ಷ್ಮಿಯು ಒಳಗೆ ಬರುತ್ತಾಳೆ . ಆಗ ಮಹಾಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುವುದಿಲ್ಲ.

ಹೊಸ್ತಿಲು ಬೋಳಾಗಿ ಇರಕೂಡದು. ಕಸ ಕಡ್ಡಿಗಳಿಂದ ತುಂಬಿರ ಕೂಡದು. ಗೃಹ ವಸ್ತುಗಳನ್ನು ಹೊಸ್ತಿಲಲ್ಲಿ ಇರಕೂಡದು. ಮನೆಯೊಳಗಿದ್ದೇ ಹೊಸ್ತಿಲ ಪೂಜೆಯನ್ನು ಮಾಡಬೇಕು. ಹೊರಗಿನಿಂದ ಒಳ ಮುಖವಾಗಿ ಮಾಡಬಾರದು . ಆದರೂ ಲಕ್ಷ್ಮಿ ದೇವಿಯನ್ನು ಬರ ಮಾಡಿಕೊಳ್ಳುವಾಗ, ಹೊಸ್ತಿಲ ಹೊರಗೆ ನಿಂತು ಆಕೆಯನ್ನು ಆಹ್ವಾನಿಸುವ ಮತ್ತು ಆವಾಹಿಸುವ ಸಂಪ್ರದಾಯವು ಕೆಲವೆಡೆ ಪ್ರಚಲಿತವಾಗಿರುತ್ತದೆ. ಯಾವುದೇ ಪೂಜೆಯಲ್ಲೂ ಶ್ರದ್ಧೆ, ಭಕ್ತಿ ಮತ್ತು ಅನುಸಂಧಾನಗಳು ಪ್ರಮುಖವಾಗುತ್ತವೆ . ಕ್ರಮಗಳಲ್ಲಿ ಅಲ್ಪಸ್ಟಲ್ಪ ವ್ಯತ್ಯಯಗಳಿದ್ದರೂ ಯಾವುದೇ ಲೋಪವಿರುವುದಿಲ್ಲ . ದೇವರ ಕೋಣೆಯ ಹೊಸ್ತಿಲಿಗೆ ಮಾತ್ರ ಹೊರಗಿನಿಂದ ಪೂಜಿಸಬೇಕು.

ಸಂಜೆಯ ಹೊತ್ತಿನಲ್ಲಿ ಹೊಸ್ತಿಲು ಬರೆಯುವ ವಿಧಾನ ; ಸಂಜೆಯ ಹೊತ್ತಿನ ಪೂಜೆಯ ಆರತಿಯನ್ನು ದೇವರಿಗೆ ಸಮರ್ಪಿಸಿದ ಹಾಲಿನ ತಟ್ಟೆಯ ಜೊತೆ ಹೊಸ್ತಿಲಿನಲ್ಲಿ ಇಟ್ಟು ಸ್ವಲ್ಪ ಹಾಲನ್ನು ಹೊಸ್ತಿಲಿಗೆ ಹಾಕಿ ನಮಸ್ಕರಿಸಿ . ನಂತರ ತುಳಸಿಗೆ ದೀಪವಿಡುವುದು.

ಹೊಸ್ತಿಲ ಪೂಜೆ ಮಾಡುವ ಸಂದರ್ಭದಲ್ಲಿ ಹೇಳುವ ಹಾಡು : ಹೊಸ್ತಿಲ ಹೊಸ್ತಿಲೆ ಹೊನ್ನದ ಹೊಸ್ತಿಲೆ, ಚಿನ್ನದ ತಟ್ಟೆಯಲ್ಲಿ ನೀರು ತರುವೆ , ಬೆಳ್ಳಿಯ ತಟ್ಟೆಯಲ್ಲಿ ಹೂ ಕೊಡುವೆ, ಗೌರಿ ದೇವಿಯ ಸೊಸೆಯಾಗುವೆ, ಲಕ್ಷಿ ದೇವಿಯ ಮಗಳಾಗುವೆ, ನಿನ್ನಂತ ಓಲೆ ಭಾಗ್ಯ ಕೊಡಿಸು ತಾಯೆ .

ಈ ಎಲ್ಲಾ ಕಾರಣದಿಂದಾಗಿ ನಮ್ಮ ಹಿರಿಯರು ಹಿಂದಿನ ಕಾಲದಿಂದಲೂ ಹೊಸ್ತಿಲಿನ ಪೂಜೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಿಕೊಂಡು ಬಂದಿದ್ದಾರೆ. ಮನೆಯ ಸಮೃದ್ಧಿ ಅಭಿವೃದ್ಧಿಗಾಗಿ ಮಹಾಲಕ್ಷ್ಮಿ ದೇವಿ ಅನುಗ್ರಹಕ್ಕಾಗಿ ಮನೆಯಲ್ಲಿ ಸಕಾರಾತ್ಮಕತೆಯು ಹೆಚ್ಚಾಗಬೇಕು, ಎಂದು ಹೊಸ್ತಿಲಿನ ಪೂಜೆಯನ್ನು ಮಾಡಲಾಗುತ್ತದೆ . (ಹೊಸ್ತಿಲು ಪೂಜೆ ಮುಗಿಯುವ ತನಕ ಯಾರು ಹೊಸ್ತಿಲು ದಾಟಬಾರದು,

ಏನೇ ಇರಲಿ ಹೇಗೆ ಇರಲಿ ಮುಖ್ಯವಾಗಿ ಹೊಸ್ತಿಲು ಪೂಜೆ ಮಾಡುವುದು ಎಂದರೆ ಲಕ್ಷ್ಮಿಯನ್ನು ಪೂಜಿಸುವುದು , ಪ್ರಾರ್ಥಿಸುವುದು. ಇಲ್ಲಿನ ಮುಖ್ಯ ಉದ್ದೇಶ ಹೊಸ್ತಿಲ ಪೂಜೆ ಮಾಡುವುದರಿಂದ, ಯಮ ಅಥವಾ ಮೃತ್ಯು ಹೊಸ್ತಿಲು ದಾಟಿ ಒಳ ಪ್ರವೇಶ ಮಾಡುವುದಿಲ್ಲವೆಂದು ಶಾಸ್ತ್ರದಲ್ಲಿ ತಿಳಿಸಿದೆ.

Leave A Reply

Your email address will not be published.